ETV Bharat / bharat

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಯುವಕ; ನೆರವಿಗಾಗಿ ಪ್ರಧಾನಿ ಮೋದಿ, ಯುಪಿ ಸಿಎಂಗೆ ಮನವಿ

ಸೌದಿ ಅರೇಬಿಯಾಗೆ ಉದ್ಯೋಗಕ್ಕಾಗಿ ಹೋಗಿದ್ದ ಉತ್ತರ ಪ್ರದೇಶ ಮೂಲದ ರುಖ್ಸಾನ್‌ ಖಾನ್‌ ಎಂಬುವವರು ಸಂಕಷ್ಟಕ್ಕೆ ಸಿಲುಕಿದ್ದು, ತಾಯ್ನಾಡಿಗೆ ವಾಪಸ್‌ ಆಗಲು ನೆರವಾಗುವಂತೆ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ ಮಾಡಿದ್ದಾರೆ. ಸೌದಿಯಿಂದಲೇ ವಿಡಿಯೋ ಮಾಡಿರುವ ರುಖ್ಸಾನ್‌ ತಾನು ಪಟ್ಟಪಾಡುಗಳನ್ನು ವಿವರಿಸಿದ್ದಾನೆ.

author img

By

Published : Jun 18, 2021, 3:53 PM IST

Man trapped in Saudi Arabia seeks help for repatriation in viral video
ಸೌಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಯುವಕ; ತಾಯ್ನಾಡಿಗೆ ಮರಳು ನೆರವಾಗುವಂತೆ ಪ್ರಧಾನಿ ಮೋದಿ, ಯುಪಿ ಸಿಎಂಗೆ ಮನವಿ

ಬರೇಲಿ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದ ಭಾರತ ಮೂಲದ ಚಾಲಕನೋರ್ವ ತನ್ನ ತಾಯ್ನಾಡಿಗೆ ಮರಳಲು ಪಾಸ್‌ಪೋರ್ಟ್‌ ಹಾಗೂ ಹಣವಿಲ್ಲದೆ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋ ಮಾಡಿರುವ ಉತ್ತರ ಪ್ರದೇಶದ ಪಾದಾರ್ಥ್‌ಪುರ್‌ ಗ್ರಾಮದ ರುಖ್ಸಾನ್ ಖಾನ್, ಕೆಲಸಕ್ಕೆ ಕರೆತಂದಿದ್ದ ವ್ಯಕ್ತಿ ವೇತನ ನೀಡದೆ ಪಾಸ್‌ಪೋರ್ಟ್‌ ಹಾಗೂ ವೀಸಾ ಕಸಿದುಕೊಂಡಿದ್ದಾನೆ. ಹಲವು ದಿನಗಳಿಂದ ಊಟ, ನೀರಿಲ್ಲದೆ, ಪಾರ್ಕ್‌ ಹಾಗೂ ಪುಟ್‌ಪಾತ್‌ಗಳಲ್ಲಿ ದಿನ ಕಳೆಯುತ್ತಿರುವುದಾಗಿ ತನ್ನ ಸಂಕಷ್ಟವನ್ನು ವಿವರಿಸಿದ್ದಾನೆ.

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಯುವಕ; ತಾಯ್ನಾಡಿಗೆ ಮರಳಲು ನೆರವಾಗುವಂತೆ ಪ್ರಧಾನಿ ಮೋದಿ, ಯುಪಿ ಸಿಎಂಗೆ ಮನವಿ

ಭಾರತಕ್ಕೆ ವಾಪಸ್‌ ಆಗಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾನೆ. ಫ್ಯಾಮಿಲಿ ಡ್ರೈವರ್‌ ಕೆಲಸಕ್ಕಾಗಿ 4 ವರ್ಷಗಳ ಹಿಂದೆ ಮಗ ಸೌದಿ ಅರೇಬಿಯಾಗೆ ಹೋಗಿದ್ದಾರೆ ಎಂದು ರುಖ್ಸಾನ್‌ ಖಾನ್‌ ಅವರ ತಾಯಿ ಅಕಿಲಾ ಬೇಗಂ ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತಿನ ಚುನಾಯಿತ ನಾಯಕರ ಒಪ್ಪಿತ ನಾಯಕತ್ವ ಸೂಚ್ಯಂಕದಲ್ಲಿ ಮೋದಿ ಟಾಪರ್

ಆರಂಭದಲ್ಲಿ ನಾಸಿರ್ ಎಂಬ ವ್ಯಕ್ತಿ ಬಳಿ ಕೆಲಸ ಮಾಡಿದ್ದಾರೆ. ಅವರು ತಿಂಗಳಿಗೆ 1,500 ರಿಯಾಲ್‌ ಪಾವತಿಸಿದರು. ನಂತರ, ನಾಸಿರ್ ಮತ್ತೊಬ್ಬ ವ್ಯಕ್ತಿ ಬಳಿ ಚಾಲಕನಾಗಿ ಕೆಲಸ ಮಾಡುವಂತೆ ರುಖ್ಸಾನ್‌ಗೆ ಸೂಚಿಸಿದ್ದಾನೆ. ಆ ಮೂರನೇ ವ್ಯಕ್ತಿ ಈತನ ದಾಖಲೆಗಳನ್ನು ವಶಪಡಿಸಿಕೊಂಡು, ವೇತನ ನೀಡದೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಬರೇಲಿ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದ ಭಾರತ ಮೂಲದ ಚಾಲಕನೋರ್ವ ತನ್ನ ತಾಯ್ನಾಡಿಗೆ ಮರಳಲು ಪಾಸ್‌ಪೋರ್ಟ್‌ ಹಾಗೂ ಹಣವಿಲ್ಲದೆ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋ ಮಾಡಿರುವ ಉತ್ತರ ಪ್ರದೇಶದ ಪಾದಾರ್ಥ್‌ಪುರ್‌ ಗ್ರಾಮದ ರುಖ್ಸಾನ್ ಖಾನ್, ಕೆಲಸಕ್ಕೆ ಕರೆತಂದಿದ್ದ ವ್ಯಕ್ತಿ ವೇತನ ನೀಡದೆ ಪಾಸ್‌ಪೋರ್ಟ್‌ ಹಾಗೂ ವೀಸಾ ಕಸಿದುಕೊಂಡಿದ್ದಾನೆ. ಹಲವು ದಿನಗಳಿಂದ ಊಟ, ನೀರಿಲ್ಲದೆ, ಪಾರ್ಕ್‌ ಹಾಗೂ ಪುಟ್‌ಪಾತ್‌ಗಳಲ್ಲಿ ದಿನ ಕಳೆಯುತ್ತಿರುವುದಾಗಿ ತನ್ನ ಸಂಕಷ್ಟವನ್ನು ವಿವರಿಸಿದ್ದಾನೆ.

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಯುವಕ; ತಾಯ್ನಾಡಿಗೆ ಮರಳಲು ನೆರವಾಗುವಂತೆ ಪ್ರಧಾನಿ ಮೋದಿ, ಯುಪಿ ಸಿಎಂಗೆ ಮನವಿ

ಭಾರತಕ್ಕೆ ವಾಪಸ್‌ ಆಗಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾನೆ. ಫ್ಯಾಮಿಲಿ ಡ್ರೈವರ್‌ ಕೆಲಸಕ್ಕಾಗಿ 4 ವರ್ಷಗಳ ಹಿಂದೆ ಮಗ ಸೌದಿ ಅರೇಬಿಯಾಗೆ ಹೋಗಿದ್ದಾರೆ ಎಂದು ರುಖ್ಸಾನ್‌ ಖಾನ್‌ ಅವರ ತಾಯಿ ಅಕಿಲಾ ಬೇಗಂ ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತಿನ ಚುನಾಯಿತ ನಾಯಕರ ಒಪ್ಪಿತ ನಾಯಕತ್ವ ಸೂಚ್ಯಂಕದಲ್ಲಿ ಮೋದಿ ಟಾಪರ್

ಆರಂಭದಲ್ಲಿ ನಾಸಿರ್ ಎಂಬ ವ್ಯಕ್ತಿ ಬಳಿ ಕೆಲಸ ಮಾಡಿದ್ದಾರೆ. ಅವರು ತಿಂಗಳಿಗೆ 1,500 ರಿಯಾಲ್‌ ಪಾವತಿಸಿದರು. ನಂತರ, ನಾಸಿರ್ ಮತ್ತೊಬ್ಬ ವ್ಯಕ್ತಿ ಬಳಿ ಚಾಲಕನಾಗಿ ಕೆಲಸ ಮಾಡುವಂತೆ ರುಖ್ಸಾನ್‌ಗೆ ಸೂಚಿಸಿದ್ದಾನೆ. ಆ ಮೂರನೇ ವ್ಯಕ್ತಿ ಈತನ ದಾಖಲೆಗಳನ್ನು ವಶಪಡಿಸಿಕೊಂಡು, ವೇತನ ನೀಡದೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.