ETV Bharat / bharat

ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಮಹಾ ಸರ್ಕಾರದ ನಿರ್ಧಾರದ ಬಗ್ಗೆ ಶಿಕ್ಷಣ ತಜ್ಞರು ಹೇಳಿದ್ದೇನು?

author img

By ETV Bharat Karnataka Team

Published : Dec 6, 2023, 12:27 PM IST

Transgenders free education: ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ವಿದ್ಯಾರ್ಥಿಗಳ ಶುಲ್ಕವನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರವು ಭರಿಸಲು ನಿರ್ಧರಿಸಿದೆ.

maharashtra
ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಮುಂಬೈ (ಮಹಾರಾಷ್ಟ್ರ) : ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ತೃತೀಯ ಲಿಂಗಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸಲು ನಿರ್ಧರಿಸಿದೆ ಎಂದು ರಾಜ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಮಾಹಿತಿ ನೀಡಿದ್ದಾರೆ.

ನೂತನ ಶಿಕ್ಷಣ ನೀತಿ ಜಾರಿಗೆ ಅಗತ್ಯ ಶೈಕ್ಷಣಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನುಷ್ಠಾನಕ್ಕೆ ವೇಗ ನೀಡಬೇಕು. ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ತೃತೀಯ ಲಿಂಗಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು (ಶೈಕ್ಷಣಿಕ ಶುಲ್ಕ) ವಿಶ್ವವಿದ್ಯಾನಿಲಯವು ತನ್ನ ಸ್ವಂತ ನಿಧಿಯಿಂದ ಪಾವತಿಸಬೇಕು. ಈ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ನೀಡಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದು ಸಚಿವರಾದ ಚಂದ್ರಕತ್ ಪಾಟೀಲ್ ಒತ್ತಾಯಿಸಿದರು. ಈ ಮನವಿಗೆ ಸ್ಪಂದಿಸಿದ ಎಲ್ಲ ಉಪಕುಲಪತಿಗಳು ಬಹುಮತದಿಂದ ಈ ನಿರ್ಧಾರವನ್ನು ಅಂಗೀಕರಿಸಿದರು. ಆದ್ದರಿಂದ, ಇನ್ನು ಮುಂದೆ ತೃತೀಯ ಲಿಂಗಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಉಚಿತ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಮುಂಬೈನ ಡಾ. ಹೋಮಿ ಬಾಬಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ಚಂದ್ರಕಾಂತ, ಹದಿನೆಂಟು ವರ್ಷ ಪೂರೈಸಿದ ಪ್ರತಿಯೊಬ್ಬ ಹೊಸ ಮತದಾರರ ನೋಂದಣಿಯಾಗಬೇಕು. ಇದಕ್ಕಾಗಿ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಚುನಾವಣಾ ವಿಭಾಗದ ವತಿಯಿಂದ ಹೊಸ ಮತದಾರರ ನೋಂದಣಿ ಅಭಿಯಾನವನ್ನು ಜಾರಿಗೊಳಿಸಬೇಕು. ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಮತದಾರರಾಗಿ ನೋಂದಾಯಿಸಲಾಗುವುದು. ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ತಂಡ ಈ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಬಳಿಕ ಸಭೆಯಲ್ಲಿ ಎನ್‌ಎಎನ್‌ಸಿ ಮೌಲ್ಯಮಾಪನ, ಕೌಶಲ್ಯ ಆಧಾರಿತ ಕೋರ್ಸ್‌ಗಳು, ಉದ್ಯಮಿಗಳ ಭಾಗವಹಿಸುವಿಕೆ, ಕ್ಲಸ್ಟರ್ ಕಾಲೇಜುಗಳು, ಮಾತೃಭಾಷೆ ಮೂಲಕ ಶಿಕ್ಷಣ, ಸಿಬಿಸಿಎಸ್ ವಿಧಾನ, ಎಬಿಸಿ ಅಧ್ಯಾಪಕರ ನೇಮಕಾತಿ, ತರಬೇತಿ, ಸೈಬರ್ ಅಪರಾಧ, ಶೈಕ್ಷಣಿಕ ವೇಳಾಪಟ್ಟಿ ಮತ್ತು ಗ್ರೇಡಿಂಗ್ ಕಾರ್ಯವಿಧಾನದ ಬಗ್ಗೆ ಸೂಚನೆಗಳನ್ನು ನೀಡಿದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ : ಕೆಲವು ವಿದ್ಯಾರ್ಥಿಗಳು ಉನ್ನತ ಮತ್ತು ತಾಂತ್ರಿಕ ಶಿಕ್ಷಣದಿಂದ ದೂರ ಉಳಿಯುತ್ತಾರೆ. ಆ ವಿದ್ಯಾರ್ಥಿಗಳು ವ್ಯಾಪಾರದಲ್ಲಿ ಉದ್ಯೋಗಿಗಳಾಗಿದ್ದಾರೆ. ಇಂತಹ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಾರೋ ಇಲ್ಲವೋ ಎಂದು ಪರೀಕ್ಷೆಗೆ ಹೆದರುತ್ತಾರೆ. ಪರೀಕ್ಷೆಯನ್ನು ತೆಗೆದುಕೊಳ್ಳದೆಯೇ ಈ ವಿದ್ಯಾರ್ಥಿಗಳಿಗೆ ದೃಶ್ಯ - ಶ್ರಾವ್ಯ ಉದ್ಯಮದ ಸಹಾಯದಿಂದ ಪ್ರಮಾಣಪತ್ರ ಕೋರ್ಸ್ ಪಠ್ಯಕ್ರಮ ಸಿದ್ಧಪಡಿಸಬಹುದೇ? ಎಂಬುದನ್ನು ವಿಶ್ವವಿದ್ಯಾಲಯ ಪರಿಗಣಿಸಬೇಕು. ಅಲ್ಲದೇ, ಹೊಸ ಶೈಕ್ಷಣಿಕ ನೀತಿಯ ಬಗ್ಗೆ ಕಾಲಮಿತಿಯೊಳಗೆ ಯೋಜಿಸಿ ಅನುಷ್ಠಾನಗೊಳಿಸಬೇಕು. ವಿಳಂಬದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಷ್ಟವಾಗದಂತೆ ವಿಶ್ವವಿದ್ಯಾನಿಲಯ ನಿಗಾ ವಹಿಸಬೇಕು ಎಂದು ಪಾಟೀಲ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಕಾಸ್ ಚಂದ್ರ ರಸ್ತೋಗಿ, ಉನ್ನತ ಶಿಕ್ಷಣ ನಿರ್ದೇಶಕ ಶೈಲೇಂದ್ರ ದೇವಳಂಕರ್, ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ. ಸರ್ವ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ವಿನೋದ ಮೋಹಿತ್ಕರ್, ಸಹ ನಿರ್ದೇಶಕ ಪ್ರಕಾಶ್ ಬಚಾವೋ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಹಾಜಬ್ಬಗೆ ಅಭಿನಂದನೆ : ಭಾವುಕರಾದ ಅಕ್ಷರ ಸಂತ - ವಿಡಿಯೋ

ಶಿಕ್ಷಣ ತಜ್ಞರು ಹೇಳಿದ್ದೇನು?: ಹಿರಿಯ ಶಿಕ್ಷಣ ತಜ್ಞ ಅರವಿಂದ ವೈದ್ಯ ಮಾತನಾಡಿ, ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿರುವುದು ಸಂತಸದ ಸಂಗತಿ. ಸಮಾಜದ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಕ್ಕೆ ಸಂಬಂಧಿಸಿದಂತೆ ಈ ನಿರ್ಧಾರವನ್ನು ಎಲ್ಲ ಉಪಕುಲಪತಿಗಳು ಒಪ್ಪಿದ್ದಾರೆ. ಆದರೆ, ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ವಿಷಯವೂ ಬಾಕಿ ಉಳಿದಿದೆ. ಅವರ ಬಗ್ಗೆ ಏಕೆ ನಿರ್ಧಾರ ತೆಗೆದುಕೊಳ್ಳಲಿಲ್ಲ?, ಇತರ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರವು ವಿಶ್ವವಿದ್ಯಾಲಯಗಳಿಗೆ ಸಾಕಷ್ಟು ಹಣವನ್ನು ಒದಗಿಸಬೇಕು. ಮಹಾತ್ಮ ಫುಲೆಯವರು 1882 ರಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಬೇಡಿಕೆ ಮುಂದಿಟ್ಟಿದ್ದರು. ಆದರೆ, ಈ ಬೇಡಿಕೆ ಇನ್ನೂ ಈಡೇರಿಲ್ಲ ಎಂದರು.

ಮುಂಬೈ (ಮಹಾರಾಷ್ಟ್ರ) : ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ತೃತೀಯ ಲಿಂಗಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸಲು ನಿರ್ಧರಿಸಿದೆ ಎಂದು ರಾಜ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಮಾಹಿತಿ ನೀಡಿದ್ದಾರೆ.

ನೂತನ ಶಿಕ್ಷಣ ನೀತಿ ಜಾರಿಗೆ ಅಗತ್ಯ ಶೈಕ್ಷಣಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನುಷ್ಠಾನಕ್ಕೆ ವೇಗ ನೀಡಬೇಕು. ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ತೃತೀಯ ಲಿಂಗಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು (ಶೈಕ್ಷಣಿಕ ಶುಲ್ಕ) ವಿಶ್ವವಿದ್ಯಾನಿಲಯವು ತನ್ನ ಸ್ವಂತ ನಿಧಿಯಿಂದ ಪಾವತಿಸಬೇಕು. ಈ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ನೀಡಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದು ಸಚಿವರಾದ ಚಂದ್ರಕತ್ ಪಾಟೀಲ್ ಒತ್ತಾಯಿಸಿದರು. ಈ ಮನವಿಗೆ ಸ್ಪಂದಿಸಿದ ಎಲ್ಲ ಉಪಕುಲಪತಿಗಳು ಬಹುಮತದಿಂದ ಈ ನಿರ್ಧಾರವನ್ನು ಅಂಗೀಕರಿಸಿದರು. ಆದ್ದರಿಂದ, ಇನ್ನು ಮುಂದೆ ತೃತೀಯ ಲಿಂಗಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಉಚಿತ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಮುಂಬೈನ ಡಾ. ಹೋಮಿ ಬಾಬಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ಚಂದ್ರಕಾಂತ, ಹದಿನೆಂಟು ವರ್ಷ ಪೂರೈಸಿದ ಪ್ರತಿಯೊಬ್ಬ ಹೊಸ ಮತದಾರರ ನೋಂದಣಿಯಾಗಬೇಕು. ಇದಕ್ಕಾಗಿ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಚುನಾವಣಾ ವಿಭಾಗದ ವತಿಯಿಂದ ಹೊಸ ಮತದಾರರ ನೋಂದಣಿ ಅಭಿಯಾನವನ್ನು ಜಾರಿಗೊಳಿಸಬೇಕು. ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಮತದಾರರಾಗಿ ನೋಂದಾಯಿಸಲಾಗುವುದು. ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ತಂಡ ಈ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಬಳಿಕ ಸಭೆಯಲ್ಲಿ ಎನ್‌ಎಎನ್‌ಸಿ ಮೌಲ್ಯಮಾಪನ, ಕೌಶಲ್ಯ ಆಧಾರಿತ ಕೋರ್ಸ್‌ಗಳು, ಉದ್ಯಮಿಗಳ ಭಾಗವಹಿಸುವಿಕೆ, ಕ್ಲಸ್ಟರ್ ಕಾಲೇಜುಗಳು, ಮಾತೃಭಾಷೆ ಮೂಲಕ ಶಿಕ್ಷಣ, ಸಿಬಿಸಿಎಸ್ ವಿಧಾನ, ಎಬಿಸಿ ಅಧ್ಯಾಪಕರ ನೇಮಕಾತಿ, ತರಬೇತಿ, ಸೈಬರ್ ಅಪರಾಧ, ಶೈಕ್ಷಣಿಕ ವೇಳಾಪಟ್ಟಿ ಮತ್ತು ಗ್ರೇಡಿಂಗ್ ಕಾರ್ಯವಿಧಾನದ ಬಗ್ಗೆ ಸೂಚನೆಗಳನ್ನು ನೀಡಿದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ : ಕೆಲವು ವಿದ್ಯಾರ್ಥಿಗಳು ಉನ್ನತ ಮತ್ತು ತಾಂತ್ರಿಕ ಶಿಕ್ಷಣದಿಂದ ದೂರ ಉಳಿಯುತ್ತಾರೆ. ಆ ವಿದ್ಯಾರ್ಥಿಗಳು ವ್ಯಾಪಾರದಲ್ಲಿ ಉದ್ಯೋಗಿಗಳಾಗಿದ್ದಾರೆ. ಇಂತಹ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಾರೋ ಇಲ್ಲವೋ ಎಂದು ಪರೀಕ್ಷೆಗೆ ಹೆದರುತ್ತಾರೆ. ಪರೀಕ್ಷೆಯನ್ನು ತೆಗೆದುಕೊಳ್ಳದೆಯೇ ಈ ವಿದ್ಯಾರ್ಥಿಗಳಿಗೆ ದೃಶ್ಯ - ಶ್ರಾವ್ಯ ಉದ್ಯಮದ ಸಹಾಯದಿಂದ ಪ್ರಮಾಣಪತ್ರ ಕೋರ್ಸ್ ಪಠ್ಯಕ್ರಮ ಸಿದ್ಧಪಡಿಸಬಹುದೇ? ಎಂಬುದನ್ನು ವಿಶ್ವವಿದ್ಯಾಲಯ ಪರಿಗಣಿಸಬೇಕು. ಅಲ್ಲದೇ, ಹೊಸ ಶೈಕ್ಷಣಿಕ ನೀತಿಯ ಬಗ್ಗೆ ಕಾಲಮಿತಿಯೊಳಗೆ ಯೋಜಿಸಿ ಅನುಷ್ಠಾನಗೊಳಿಸಬೇಕು. ವಿಳಂಬದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಷ್ಟವಾಗದಂತೆ ವಿಶ್ವವಿದ್ಯಾನಿಲಯ ನಿಗಾ ವಹಿಸಬೇಕು ಎಂದು ಪಾಟೀಲ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಕಾಸ್ ಚಂದ್ರ ರಸ್ತೋಗಿ, ಉನ್ನತ ಶಿಕ್ಷಣ ನಿರ್ದೇಶಕ ಶೈಲೇಂದ್ರ ದೇವಳಂಕರ್, ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ. ಸರ್ವ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ವಿನೋದ ಮೋಹಿತ್ಕರ್, ಸಹ ನಿರ್ದೇಶಕ ಪ್ರಕಾಶ್ ಬಚಾವೋ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಹಾಜಬ್ಬಗೆ ಅಭಿನಂದನೆ : ಭಾವುಕರಾದ ಅಕ್ಷರ ಸಂತ - ವಿಡಿಯೋ

ಶಿಕ್ಷಣ ತಜ್ಞರು ಹೇಳಿದ್ದೇನು?: ಹಿರಿಯ ಶಿಕ್ಷಣ ತಜ್ಞ ಅರವಿಂದ ವೈದ್ಯ ಮಾತನಾಡಿ, ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿರುವುದು ಸಂತಸದ ಸಂಗತಿ. ಸಮಾಜದ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಕ್ಕೆ ಸಂಬಂಧಿಸಿದಂತೆ ಈ ನಿರ್ಧಾರವನ್ನು ಎಲ್ಲ ಉಪಕುಲಪತಿಗಳು ಒಪ್ಪಿದ್ದಾರೆ. ಆದರೆ, ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ವಿಷಯವೂ ಬಾಕಿ ಉಳಿದಿದೆ. ಅವರ ಬಗ್ಗೆ ಏಕೆ ನಿರ್ಧಾರ ತೆಗೆದುಕೊಳ್ಳಲಿಲ್ಲ?, ಇತರ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರವು ವಿಶ್ವವಿದ್ಯಾಲಯಗಳಿಗೆ ಸಾಕಷ್ಟು ಹಣವನ್ನು ಒದಗಿಸಬೇಕು. ಮಹಾತ್ಮ ಫುಲೆಯವರು 1882 ರಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಬೇಡಿಕೆ ಮುಂದಿಟ್ಟಿದ್ದರು. ಆದರೆ, ಈ ಬೇಡಿಕೆ ಇನ್ನೂ ಈಡೇರಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.