ಮಹಾರಾಷ್ಟ್ರ(ಮುಂಬೈ): ಮುಂಬೈ ಅಭಿವೃದ್ಧಿಯಲ್ಲಿ ದೇಶದ ಕೆಲವು ಸಮುದಾಯದವರ ಕೊಡುಗೆಯನ್ನು ಶ್ಲಾಘಿಸುವಾಗ ನಾನು ತಪ್ಪು ಮಾಡಿರಬಹುದು ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಹೇಳಿದ್ದಾರೆ. ಇತ್ತೀಚೆಗೆ, ಮುಂಬೈಯಿಂದ ಗುಜರಾತಿ ಮತ್ತು ರಾಜಸ್ಥಾನಿಗಳನ್ನು ಹೊರಹಾಕಿದರೆ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ ಉಳಿಯುವುದಿಲ್ಲ ಎಂಬ ಹೇಳಿಕೆಗೆ ಅವರೀಗ ಸ್ಪಷ್ಟನೆ ನೀಡಿದ್ದಾರೆ.
ಜುಲೈ 29 ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಂಬೈನ ಅಭಿವೃದ್ಧಿಗೆ ಕೆಲವು ಸಮುದಾಯಗಳ ಕೊಡುಗೆ ಶ್ಲಾಘಿಸುವ ಮೂಲಕ ನಾನು ತಪ್ಪು ಮಾಡಿದೆ. ಮಹಾರಾಷ್ಟ್ರ ಮಾತ್ರವಲ್ಲ, ಇಡೀ ಭಾರತದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆಯೂ ವಿಶೇಷವಾಗಿದೆ. ಇದೇ ಕಾರಣಕ್ಕೆ ದೇಶ ಇಂದು ಪ್ರಗತಿಯತ್ತ ಸಾಗುತ್ತಿದೆ ಎಂದು ಕೋಶ್ಯಾರಿ ಹೇಳಿದ್ದಾರೆ.
ಇದನ್ನೂ ಓದಿ: ಪತ್ರಾ ಚಾಲ್ ಭೂ ಹಗರಣ: ಆಗಸ್ಟ್ 4 ರವರೆಗೆ ಸಂಜಯ್ ರಾವತ್ ಇಡಿ ವಶಕ್ಕೆ