ETV Bharat / bharat

ದಾರಿ ತಪ್ಪಿಸಿದ ಗೂಗಲ್​ ಮ್ಯಾಪ್​: ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಲಾರಿ!!

author img

By ETV Bharat Karnataka Team

Published : Sep 7, 2023, 3:18 PM IST

ಗೂಗಲ್​ ಮ್ಯಾಪ್​ ಸಹಾಯ ಪಡೆದು ರಾತ್ರಿಯಲ್ಲಿ ನೀವು ಸಂಚರಿಸುತ್ತಿದ್ದರೆ ಎಚ್ಚರ ಅಗತ್ಯ. ತೆಲಂಗಾಣದಲ್ಲಿ ಮ್ಯಾಪ್​ನ ತಪ್ಪಿನಿಂದಾಗಿ ಲಾರಿ ಜಲಾಶಯದ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.

ದಾರಿ ತಪ್ಪಿಸಿದ ಗೂಗಲ್​ ಮ್ಯಾಪ್
ದಾರಿ ತಪ್ಪಿಸಿದ ಗೂಗಲ್​ ಮ್ಯಾಪ್

ಹುಸ್ನಾಬಾದ್ (ತೆಲಂಗಾಣ) : ನಾವು ಯಾವುದೋ ಗೊತ್ತಿರದ ಊರು, ದಾರಿಯಲ್ಲಿ ಸಾಗುವಾಗ ಗೂಗಲ್​ಮ್ಯಾಪ್​ ಸಹಾಯ ಪಡೆಯುತ್ತೇವೆ. ಅದು ತೋರಿಸಿದ ದಿಕ್ಕಿನೆಡೆಗೆ ಸಾಗುತ್ತೇವೆ. ಕೆಲವೊಮ್ಮೆ ದಾರಿ ತಪ್ಪಿ ಪೇಚಿಗೆ ಬಿದ್ದ ಘಟನೆಗಳೂ ಇವೆ. ಇಂಥದ್ದೇ ಸಂಗತಿಯೊಂದು ತೆಲಂಗಾಣದಲ್ಲಿ ನಡೆದಿದೆ. ಗೂಗಲ್​ಮ್ಯಾಪ್​ ನೆಚ್ಚಿಕೊಂಡು ಹೋದ ಲಾರಿಯೊಂದು ನೀರಿನಲ್ಲಿ ಮುಳುಗಿದೆ. ಬಳಿಕ ಗ್ರಾಮಸ್ಥರ ಸಹಾಯ ಪಡೆದು ಅದನ್ನು ಮೇಲೆತ್ತಲಾಗಿದೆ.

ಘಟನೆಯ ವಿವರ: ತಮಿಳುನಾಡಿನ ಲಾರಿಯೊಂದು ಮಂಗಳವಾರ ರಾತ್ರಿ ತೆಲಂಗಾಣದ ಸಿದ್ದಿಪೇಟೆ ಕಡೆಗೆ ಸಾಗುತ್ತಿತ್ತು. ಈ ವೇಳೆ, ಲಾರಿ ಚಾಲಕ ಮತ್ತು ಕ್ಲೀನರ್​ಗೆ ದಾರಿ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಇಬ್ಬರೂ ಗೂಗಲ್​ ಮ್ಯಾಪ್​ ಹಾಕಿಕೊಂಡಿದ್ದಾರೆ. ಲಾರಿ ಜೆರ್ಯಾಲ ಮಾರ್ಗವಾಗಿ ಹುಸ್ನಾಬಾದ್​ಗೆ ಹೋಗುತ್ತಿದ್ದಾಗ, ಗೌರವೆಲ್ಲಿ ಜಲಾಶಯದ ಬಳಿ ದಾರಿ ತಪ್ಪಿದೆ.

ನೀರಿನಲ್ಲಿ ಮುಳುಗಿದ್ದ ಲಾರಿಯನ್ನು ಹೊರತಂದ ಜನರು
ನೀರಿನಲ್ಲಿ ಮುಳುಗಿದ್ದ ಲಾರಿಯನ್ನು ಹೊರತಂದ ಜನರು

ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಚಾಲಕ ಶಿವ ಮತ್ತು ಕ್ಲೀನರ್ ಮೊಂಡಯ್ಯ ಅವರು ಗೂಗಲ್​ಮ್ಯಾಪ್​ ನಂಬಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ನೀರು ಬಂದಿದೆ. ಕತ್ತಲಲ್ಲಿ ಕಾಣಿಸದೇ ಮಳೆ ನೀರು ಎಂದುಕೊಂಡು ಮುಂದೆ ಸಾಗಿದ್ದಾರೆ. ಬಳಿಕ ನೀರು ಹೆಚ್ಚಾಗುತ್ತಾ ಸಾಗಿದೆ. ಲಾರಿ ಸಾಗಿದಂತೆ ಆಳ ಹೆಚ್ಚಾಗಿದೆ. ನೀರು ಕ್ಯಾಬಿನ್​ ಒಳಗೆ ನುಗ್ಗಿದೆ. ತಕ್ಷಣವೇ ಚಾಲಕ ವಾಹನ ನಿಲ್ಲಿಸಿದ್ದಾನೆ. ನೀರು ಲಾರಿಯನ್ನು ಮುಳುಗಿಸಿದೆ. ಇದರಿಂದ ಎಂಜಿನ್​ ಆಫ್​ ಆಗಿದೆ.

ಇಬ್ಬರೂ ಹೊರಬಂದು ನೋಡಿದಾಗ ಅದು ಜಲಾಶಯದ ಹಿನ್ನೀರು ಆಗಿತ್ತು. ಅಚ್ಚರಿಗೊಂಡ ಚಾಲಕ, ಅಲ್ಲಿಂದ ಈಜಿಕೊಂಡು ಬಂದು ಪಕ್ಕದ ಗ್ರಾಮವಾದ ರಾಮಾವರಂಗೆ ಬಂದಿದ್ದಾರೆ. ಅಲ್ಲಿದ್ದ ಜನರನ್ನು ವಿಚಾರಿಸಿದಾಗ, ಆ ರಸ್ತೆಯನ್ನು ಮುಚ್ಚಲಾಗಿದೆ. ಅಲ್ಲಿ ಜಲಾಶಯದ ಹಿನ್ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅವರು ಗೂಗಲ್​ಮ್ಯಾಪ್​ ಮಾಡಿದ ಅನಾಹುತದಿಂದಾಗಿ ಲಾರಿ ಮತ್ತು ಅವರು ನೀರುಪಾಲಾಗುವುದು ತಪ್ಪಿದೆ.

ಹಗ್ಗ ಕಟ್ಟಿ ಲಾರಿ ಹೊರಕ್ಕೆ: ನಡೆದ ಘಟನೆಯನ್ನು ಗ್ರಾಮಸ್ಥರಿಗೆ ತಿಳಿಸಿದ ಚಾಲಕ ಶಿವ ಸಹಾಯ ಕೋರಿದ್ದಾರೆ. ಬೆಳಗಾದ ಬಳಿಕ ಗ್ರಾಮಸ್ಥರು ಲಾರಿ ಸಿಲುಕಿಕೊಂಡ ಸ್ಥಳಕ್ಕೆ ಆಗಮಿಸಿದ್ದಾರೆ. ಲಾರಿಗೆ ಹಗ್ಗಗಳನ್ನು ಬಿಗಿದು ಕಷ್ಟಪಟ್ಟು ಹಿಂದಕ್ಕೆ ಎಳೆದಿದ್ದಾರೆ. ಹರಸಾಹಸಪಟ್ಟು ಲಾರಿಯನ್ನು ದಡಕ್ಕೆ ಎಳೆಯಲಾಗಿದೆ. ಬಳಿಕ ನಂದಾರಾಮ್ ಸ್ಟೇಜ್​ನ ಬೈಪಾಸ್ ರಸ್ತೆಯ ಮೂಲಕ ವಾಹನವನ್ನು ಕಳುಹಿಸಲಾಗಿದೆ.

ತಪ್ಪಾಗಿದ್ದೇನು?: ಸಿದ್ದಿಪೇಟೆ ಜಿಲ್ಲೆಯ ಅಕ್ಕಣ್ಣಪೇಟೆ ಮಂಡಲದ ಗುಡತಿಪಲ್ಲಿಯಲ್ಲಿ ಗೌರವಳ್ಳಿ ಯೋಜನೆಯ ಭಾಗವಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಹಿನ್ನೀರಿನಿಂದಾಗಿ ಹಳೆಯ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಗೂಗಲ್​ಮ್ಯಾಪ್​ನಲ್ಲಿ ಮೊದಲ ರಸ್ತೆಗಳೇ ಇನ್ನು ತೋರಿಸುತ್ತಿದೆ. ಹೀಗಾಗಿ ವಾಹನಗಳು ತಪ್ಪಿ ಇದೇ ಮಾರ್ಗವಾಗಿ ಬಂದು ಸಿಲುಕೊಳ್ಳುತ್ತಿವೆ. ತಕ್ಷಣವೇ ಮ್ಯಾಪ್​ನಲ್ಲಿ ಮಾರ್ಪಾಡು ಮಾಡಬೇಕಿದೆ ಎಂಬುದು ಪಕ್ಕದ ಗ್ರಾಮಸ್ಥರ ಆಗ್ರಹವಾಗಿದೆ.

ಇದನ್ನೂ ಓದಿ: ದಾವಣಗೆರೆ: ರೈಲ್ವೆ ಬ್ರಿಡ್ಜ್​ಗೆ ಗುದ್ದಿ ಕೆಳಗೆ ಬಿದ್ದ ಕೇರಳದ ಯುವಕರಿಬ್ಬರು ಸಾವು

ಹುಸ್ನಾಬಾದ್ (ತೆಲಂಗಾಣ) : ನಾವು ಯಾವುದೋ ಗೊತ್ತಿರದ ಊರು, ದಾರಿಯಲ್ಲಿ ಸಾಗುವಾಗ ಗೂಗಲ್​ಮ್ಯಾಪ್​ ಸಹಾಯ ಪಡೆಯುತ್ತೇವೆ. ಅದು ತೋರಿಸಿದ ದಿಕ್ಕಿನೆಡೆಗೆ ಸಾಗುತ್ತೇವೆ. ಕೆಲವೊಮ್ಮೆ ದಾರಿ ತಪ್ಪಿ ಪೇಚಿಗೆ ಬಿದ್ದ ಘಟನೆಗಳೂ ಇವೆ. ಇಂಥದ್ದೇ ಸಂಗತಿಯೊಂದು ತೆಲಂಗಾಣದಲ್ಲಿ ನಡೆದಿದೆ. ಗೂಗಲ್​ಮ್ಯಾಪ್​ ನೆಚ್ಚಿಕೊಂಡು ಹೋದ ಲಾರಿಯೊಂದು ನೀರಿನಲ್ಲಿ ಮುಳುಗಿದೆ. ಬಳಿಕ ಗ್ರಾಮಸ್ಥರ ಸಹಾಯ ಪಡೆದು ಅದನ್ನು ಮೇಲೆತ್ತಲಾಗಿದೆ.

ಘಟನೆಯ ವಿವರ: ತಮಿಳುನಾಡಿನ ಲಾರಿಯೊಂದು ಮಂಗಳವಾರ ರಾತ್ರಿ ತೆಲಂಗಾಣದ ಸಿದ್ದಿಪೇಟೆ ಕಡೆಗೆ ಸಾಗುತ್ತಿತ್ತು. ಈ ವೇಳೆ, ಲಾರಿ ಚಾಲಕ ಮತ್ತು ಕ್ಲೀನರ್​ಗೆ ದಾರಿ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಇಬ್ಬರೂ ಗೂಗಲ್​ ಮ್ಯಾಪ್​ ಹಾಕಿಕೊಂಡಿದ್ದಾರೆ. ಲಾರಿ ಜೆರ್ಯಾಲ ಮಾರ್ಗವಾಗಿ ಹುಸ್ನಾಬಾದ್​ಗೆ ಹೋಗುತ್ತಿದ್ದಾಗ, ಗೌರವೆಲ್ಲಿ ಜಲಾಶಯದ ಬಳಿ ದಾರಿ ತಪ್ಪಿದೆ.

ನೀರಿನಲ್ಲಿ ಮುಳುಗಿದ್ದ ಲಾರಿಯನ್ನು ಹೊರತಂದ ಜನರು
ನೀರಿನಲ್ಲಿ ಮುಳುಗಿದ್ದ ಲಾರಿಯನ್ನು ಹೊರತಂದ ಜನರು

ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಚಾಲಕ ಶಿವ ಮತ್ತು ಕ್ಲೀನರ್ ಮೊಂಡಯ್ಯ ಅವರು ಗೂಗಲ್​ಮ್ಯಾಪ್​ ನಂಬಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ನೀರು ಬಂದಿದೆ. ಕತ್ತಲಲ್ಲಿ ಕಾಣಿಸದೇ ಮಳೆ ನೀರು ಎಂದುಕೊಂಡು ಮುಂದೆ ಸಾಗಿದ್ದಾರೆ. ಬಳಿಕ ನೀರು ಹೆಚ್ಚಾಗುತ್ತಾ ಸಾಗಿದೆ. ಲಾರಿ ಸಾಗಿದಂತೆ ಆಳ ಹೆಚ್ಚಾಗಿದೆ. ನೀರು ಕ್ಯಾಬಿನ್​ ಒಳಗೆ ನುಗ್ಗಿದೆ. ತಕ್ಷಣವೇ ಚಾಲಕ ವಾಹನ ನಿಲ್ಲಿಸಿದ್ದಾನೆ. ನೀರು ಲಾರಿಯನ್ನು ಮುಳುಗಿಸಿದೆ. ಇದರಿಂದ ಎಂಜಿನ್​ ಆಫ್​ ಆಗಿದೆ.

ಇಬ್ಬರೂ ಹೊರಬಂದು ನೋಡಿದಾಗ ಅದು ಜಲಾಶಯದ ಹಿನ್ನೀರು ಆಗಿತ್ತು. ಅಚ್ಚರಿಗೊಂಡ ಚಾಲಕ, ಅಲ್ಲಿಂದ ಈಜಿಕೊಂಡು ಬಂದು ಪಕ್ಕದ ಗ್ರಾಮವಾದ ರಾಮಾವರಂಗೆ ಬಂದಿದ್ದಾರೆ. ಅಲ್ಲಿದ್ದ ಜನರನ್ನು ವಿಚಾರಿಸಿದಾಗ, ಆ ರಸ್ತೆಯನ್ನು ಮುಚ್ಚಲಾಗಿದೆ. ಅಲ್ಲಿ ಜಲಾಶಯದ ಹಿನ್ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅವರು ಗೂಗಲ್​ಮ್ಯಾಪ್​ ಮಾಡಿದ ಅನಾಹುತದಿಂದಾಗಿ ಲಾರಿ ಮತ್ತು ಅವರು ನೀರುಪಾಲಾಗುವುದು ತಪ್ಪಿದೆ.

ಹಗ್ಗ ಕಟ್ಟಿ ಲಾರಿ ಹೊರಕ್ಕೆ: ನಡೆದ ಘಟನೆಯನ್ನು ಗ್ರಾಮಸ್ಥರಿಗೆ ತಿಳಿಸಿದ ಚಾಲಕ ಶಿವ ಸಹಾಯ ಕೋರಿದ್ದಾರೆ. ಬೆಳಗಾದ ಬಳಿಕ ಗ್ರಾಮಸ್ಥರು ಲಾರಿ ಸಿಲುಕಿಕೊಂಡ ಸ್ಥಳಕ್ಕೆ ಆಗಮಿಸಿದ್ದಾರೆ. ಲಾರಿಗೆ ಹಗ್ಗಗಳನ್ನು ಬಿಗಿದು ಕಷ್ಟಪಟ್ಟು ಹಿಂದಕ್ಕೆ ಎಳೆದಿದ್ದಾರೆ. ಹರಸಾಹಸಪಟ್ಟು ಲಾರಿಯನ್ನು ದಡಕ್ಕೆ ಎಳೆಯಲಾಗಿದೆ. ಬಳಿಕ ನಂದಾರಾಮ್ ಸ್ಟೇಜ್​ನ ಬೈಪಾಸ್ ರಸ್ತೆಯ ಮೂಲಕ ವಾಹನವನ್ನು ಕಳುಹಿಸಲಾಗಿದೆ.

ತಪ್ಪಾಗಿದ್ದೇನು?: ಸಿದ್ದಿಪೇಟೆ ಜಿಲ್ಲೆಯ ಅಕ್ಕಣ್ಣಪೇಟೆ ಮಂಡಲದ ಗುಡತಿಪಲ್ಲಿಯಲ್ಲಿ ಗೌರವಳ್ಳಿ ಯೋಜನೆಯ ಭಾಗವಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಹಿನ್ನೀರಿನಿಂದಾಗಿ ಹಳೆಯ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಗೂಗಲ್​ಮ್ಯಾಪ್​ನಲ್ಲಿ ಮೊದಲ ರಸ್ತೆಗಳೇ ಇನ್ನು ತೋರಿಸುತ್ತಿದೆ. ಹೀಗಾಗಿ ವಾಹನಗಳು ತಪ್ಪಿ ಇದೇ ಮಾರ್ಗವಾಗಿ ಬಂದು ಸಿಲುಕೊಳ್ಳುತ್ತಿವೆ. ತಕ್ಷಣವೇ ಮ್ಯಾಪ್​ನಲ್ಲಿ ಮಾರ್ಪಾಡು ಮಾಡಬೇಕಿದೆ ಎಂಬುದು ಪಕ್ಕದ ಗ್ರಾಮಸ್ಥರ ಆಗ್ರಹವಾಗಿದೆ.

ಇದನ್ನೂ ಓದಿ: ದಾವಣಗೆರೆ: ರೈಲ್ವೆ ಬ್ರಿಡ್ಜ್​ಗೆ ಗುದ್ದಿ ಕೆಳಗೆ ಬಿದ್ದ ಕೇರಳದ ಯುವಕರಿಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.