ETV Bharat / bharat

ಭೂಕುಸಿತದಿಂದ ಜಮ್ಮು ಕಾಶ್ಮೀರ ಹೆದ್ದಾರಿ ಬಂದ್‌; ಮಾರ್ಗಮಧ್ಯೆ ಸಿಲುಕಿದ ಸಾವಿರಾರು ವಾಹನಗಳು

author img

By

Published : Jul 21, 2022, 2:04 PM IST

ಜಮ್ಮು ಕಾಶ್ಮೀರದಲ್ಲಿ ಮಳೆಯ ಆರ್ಭಟ ನಿಂತಿಲ್ಲ. ಇದರಿಂದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಸಾವಿರಾರು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಭೂಕುಸಿತದಿಂದ ಜಮ್ಮು ಕಾಶ್ಮೀರ ಹೆದ್ದಾರಿ ಬಂದ್‌, ಸಾವಿರಾರು ವಾಹನಗಳು ಜಖಂ
ಭೂಕುಸಿತದಿಂದ ಜಮ್ಮು ಕಾಶ್ಮೀರ ಹೆದ್ದಾರಿ ಬಂದ್‌, ಸಾವಿರಾರು ವಾಹನಗಳು ಜಖಂ

ಜಮ್ಮು: ಭಾರಿ ಮಳೆಯಿಂದ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ಹಲವೆಡೆ ಭೂಕುಸಿತವಾಗಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಬೆಂಗಾವಲು ಪಡೆ ವಾಹನಗಳೂ ಸೇರಿದಂತೆ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ತೀವ್ರ ಹಾನಿಗೀಡಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಲ್ಲಿ ಸಿಲುಕಿದ ವಾಹನಗಳು
ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಲ್ಲಿ ಸಿಲುಕಿದ ವಾಹನಗಳು

ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾಗಿದೆ. ರಾಂಬನ್ ಜಿಲ್ಲೆಯಲ್ಲಿ ಈ ಹೆದ್ದಾರಿಯ ನಾಲ್ಕು ಸ್ಥಳಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಉರುಳಿಬಿದ್ದಿವೆ. ಭೂಕುಸಿತಕ್ಕೆ ರಸ್ತೆ ಹಾನಿಯಾಗಿದೆ.

ರಸ್ತೆಗೆ ಕುಸಿದು ಬಿದ್ದ ಬಂಡೆಗಲ್ಲುಗಳು
ರಸ್ತೆಗೆ ಕುಸಿದು ಬಿದ್ದ ಬಂಡೆಗಲ್ಲುಗಳು

ರಸ್ತೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಯಾತ್ರಾರ್ಥಿಗಳ ಹೊತ್ತೊಯ್ಯುವ ಬೆಂಗಾವಲು ಪಡೆಗಳನ್ನು ಸದ್ಯಕ್ಕೆ ಚಂದರ್‌ಕೂಟ್ ಮತ್ತು ನಶ್ರಿಯಲ್ಲಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಸಮಾನರು, ​ಗಾಂಧಿ ಕುಟುಂಬಕ್ಕೆ ವಿಶೇಷ ಆದ್ಯತೆಯಿಲ್ಲ: ಪ್ರಲ್ಹಾದ್​ ಜೋಶಿ

ಜಮ್ಮು: ಭಾರಿ ಮಳೆಯಿಂದ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ಹಲವೆಡೆ ಭೂಕುಸಿತವಾಗಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಬೆಂಗಾವಲು ಪಡೆ ವಾಹನಗಳೂ ಸೇರಿದಂತೆ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ತೀವ್ರ ಹಾನಿಗೀಡಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಲ್ಲಿ ಸಿಲುಕಿದ ವಾಹನಗಳು
ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಲ್ಲಿ ಸಿಲುಕಿದ ವಾಹನಗಳು

ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾಗಿದೆ. ರಾಂಬನ್ ಜಿಲ್ಲೆಯಲ್ಲಿ ಈ ಹೆದ್ದಾರಿಯ ನಾಲ್ಕು ಸ್ಥಳಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಉರುಳಿಬಿದ್ದಿವೆ. ಭೂಕುಸಿತಕ್ಕೆ ರಸ್ತೆ ಹಾನಿಯಾಗಿದೆ.

ರಸ್ತೆಗೆ ಕುಸಿದು ಬಿದ್ದ ಬಂಡೆಗಲ್ಲುಗಳು
ರಸ್ತೆಗೆ ಕುಸಿದು ಬಿದ್ದ ಬಂಡೆಗಲ್ಲುಗಳು

ರಸ್ತೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಯಾತ್ರಾರ್ಥಿಗಳ ಹೊತ್ತೊಯ್ಯುವ ಬೆಂಗಾವಲು ಪಡೆಗಳನ್ನು ಸದ್ಯಕ್ಕೆ ಚಂದರ್‌ಕೂಟ್ ಮತ್ತು ನಶ್ರಿಯಲ್ಲಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಸಮಾನರು, ​ಗಾಂಧಿ ಕುಟುಂಬಕ್ಕೆ ವಿಶೇಷ ಆದ್ಯತೆಯಿಲ್ಲ: ಪ್ರಲ್ಹಾದ್​ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.