ನವದೆಹಲಿ: ರೈಲ್ವೆ ಇಲಾಖೆಯಲ್ಲಿನ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್ಡಿಜೆ ವರಿಷ್ಠ ಲಾಲು ಪ್ರಸಾದ್ ಕುಟುಂಬ ಸದಸ್ಯರು ಇಂದು ಕೇಂದ್ರ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸಿದರು. ಲಾಲು ಪುತ್ರರಾದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಮುಂದೆ ಹಾಜರಾದರೆ, ಪುತ್ರಿಯಾದ ಆರ್ಜೆಡಿ ಸಂಸದೆ ಮಿಸಾ ಭಾರ್ತಿ ಕೂಡ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಎದುರಿಸಿದರು.
ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಗೆ ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ತೇಜಸ್ವಿ ಯಾದವ್ ಆಗಮಿಸಿದರು. ನಂತರ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಅವರನ್ನು ವಿಚಾರಣೆಗೆ ತನಿಖಾ ಅಧಿಕಾರಿಗಳು ಕರೆದೊಯ್ದರು. ನಂತರ ಮಧ್ಯಾಹ್ನದ ಊಟಕ್ಕೆ ಬಿಡುವು ನೀಡಲಾಯಿತು. ಅಲ್ಲಿಂದ ನೇರವಾಗಿ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಗರ್ಭಿಣಿ ಪತ್ನಿಯನ್ನು ಭೇಟಿ ಮಾಡಲು ತೇಜಸ್ವಿ ತೆರಳಿದರು. ಇದಾದ ಬಳಿಕ ತೇಜಸ್ವಿ ಮತ್ತೆ ಸಿಬಿಐ ಕಚೇರಿಗೆ ಬಂದು ವಿಚಾರಣೆ ಎದುರಿಸಿದರು.
-
दिल्ली: बिहार के उपमुख्यमंत्री तेजस्वी यादव सीबीआई दफ्तर के लिए रवाना हुए।
— ANI_HindiNews (@AHindinews) March 25, 2023 " class="align-text-top noRightClick twitterSection" data="
जमीन के बदले नौकरी घोटाला मामले में पूछताछ के लिए तेजस्वी यादव सीबीआई के सामने पेश होंगे। pic.twitter.com/qqC8hSbn9n
">दिल्ली: बिहार के उपमुख्यमंत्री तेजस्वी यादव सीबीआई दफ्तर के लिए रवाना हुए।
— ANI_HindiNews (@AHindinews) March 25, 2023
जमीन के बदले नौकरी घोटाला मामले में पूछताछ के लिए तेजस्वी यादव सीबीआई के सामने पेश होंगे। pic.twitter.com/qqC8hSbn9nदिल्ली: बिहार के उपमुख्यमंत्री तेजस्वी यादव सीबीआई दफ्तर के लिए रवाना हुए।
— ANI_HindiNews (@AHindinews) March 25, 2023
जमीन के बदले नौकरी घोटाला मामले में पूछताछ के लिए तेजस्वी यादव सीबीआई के सामने पेश होंगे। pic.twitter.com/qqC8hSbn9n
ತನಿಖಾ ಸಂಸ್ಥೆಗಳಿಗೆ ಸಹಕರಿಸುತ್ತೇವೆ - ತೇಜಸ್ವಿ: ಇದಕ್ಕೂ ಮೊದಲು ದೆಹಲಿಯ ನಿವಾಸದಿಂದ ಸಿಬಿಐ ಕಚೇರಿಗೆ ತೆರಳುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ತೇಜಸ್ವಿ, ತನಿಖಾ ತಂಡಗಳು ಪ್ರಕರಣಗಳನ್ನು ದಾಖಲಿಸಿದ ಪ್ರತಿ ಸಂದರ್ಭದಲ್ಲೂ ನಾನು ಸಹಕರಿಸುತ್ತಿದ್ದೇವೆ. ಸದ್ಯದ ದೇಶದಲ್ಲಿ ಪರಿಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಲೆ ಭಾಗಿಸುವುದು ತುಂಬಾ ಸುಲಭ. ಆದರೆ, ಹೋರಾಡುವುದು ಬಳಹ ಕಷ್ಟಕರ. ನಾವು ಇದರ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.