ETV Bharat / bharat

ಜಲಾಲಾಬಾದ್​​ Bike Blast: ‘ಭಯೋತ್ಪಾದನಾ ಕೃತ್ಯ’ ಎಂದ ಪೊಲೀಸ್

author img

By

Published : Sep 19, 2021, 8:00 AM IST

ಸೆಪ್ಟೆಂಬರ್ 15 ರಂದು ಪಂಜಾಬ್​ನ ಜಲಾಲಾಬಾದ್​ನಲ್ಲಿ ನಡೆದ ಬೈಕ್ ಬ್ಲಾಸ್ಟ್​ಅನ್ನು ಪೊಲೀಸರು ಭಯೋತ್ಪಾದನಾ ಕೃತ್ಯ ಎಂದು ಹೇಳಿದ್ದಾರೆ.

Bike Blast
Bike Blast

ಚಂಡೀಗಡ: ಪಂಜಾಬ್​ನ ಜಲಾಲಾಬಾದ್​ನಲ್ಲಿ ನಡೆದ ಬೈಕ್​​ ಸ್ಫೋಟವನ್ನು ಪೊಲೀಸರು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದಾರೆ. ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿ ಪರ್ವಿನ್ ಕುಮಾರ್​​, ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಮೂರು ಕಿಲೋ ಮೀಟರ್ ದೂರದಲ್ಲಿರುವ ಫಜಿಲ್ಕಾ ಜಿಲ್ಲೆಯವನು ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 15 ರಂದು ಫಜಿಲ್ಕಾದ ಜಲಾಲಾಬಾದ್​ನಲ್ಲಿ ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಬ್ಲಾಸ್ಟ್ ಆಗಿ 22 ವರ್ಷದ ಬಲವಿಂದರ್​ ಸಿಂಗ್ ಎಂಬಾತ ಮೃತಪಟ್ಟಿದ್ದ. ಜನನಿಬಿಡ ಪ್ರದೇಶದಲ್ಲಿ ಬೈಕ್ ಸ್ಫೋಟಿಸಲು ಪರ್ವಿನ್ ಕುಮಾರ್​ ಸಂಚು ರೂಪಿಸಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಘಟನೆಯಲ್ಲಿ ಆತನ ಪಾತ್ರ ಇರುವುದು ತಿಳಿಯುತ್ತಿದ್ದಂತೆ, ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಬಲವಿಂದರ್ ಸಿಂಗ್ ಓಡಿಸುತ್ತಿದ್ದ ಬೈಕ್​ಅನ್ನು ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಬೇಕೆಂದು ನಾನೇ ಸೂಚಿಸಿದ್ದೆ ಎಂದು ಪರ್ವಿನ್​ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಸೆಪ್ಟೆಂಬರ್​ 14 ರಂದು ಫಿರೋಜ್​ಪುರದ ಚಂಡಿವಾಲಾ ಗ್ರಾಮದ ನಿವಾಸಿ ಸುಖ್ವಿಂದರ್ ಸಿಂಗ್​​ ಮನೆಯಲ್ಲಿ ಈ ಕೃತ್ಯದ ಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ ಅಂತಾ ಐಜಿಪಿ ತಿಳಿಸಿದ್ದಾರೆ.

ಮಾಮ್‌ಡೋಟ್‌ನ ಲಖ್ಮಿರ್ ಕೆ ಹಿತ್ತರ್ ಗ್ರಾಮದ ನಿವಾಸಿ ಗುರ್‌ಪ್ರೀತ್ ಸಿಂಗ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಪರ್ವಿನ್​​​ನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಮೃತ ಬಲ್ವಿಂದರ್ ಸಿಂಗ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಹಿಲೋರಿ ಹೇಳಿದರು.

ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ ಇಲ್ಲವೆಂದಿದ್ದಕ್ಕೆ ಗುಡಿಸಲಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

ರೈತರೊಬ್ಬರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಹೊಲದಲ್ಲಿ ಬಚ್ಚಿಟ್ಟಿದ ಟಿಫಿನ್ ಬಾಂಬ್(Tiffin Bomb)​ಅನ್ನು ವಶಪಡಿಸಿಕೊಂಡಿದ್ದಾರೆ.

ಚಂಡೀಗಡ: ಪಂಜಾಬ್​ನ ಜಲಾಲಾಬಾದ್​ನಲ್ಲಿ ನಡೆದ ಬೈಕ್​​ ಸ್ಫೋಟವನ್ನು ಪೊಲೀಸರು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದಾರೆ. ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿ ಪರ್ವಿನ್ ಕುಮಾರ್​​, ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಮೂರು ಕಿಲೋ ಮೀಟರ್ ದೂರದಲ್ಲಿರುವ ಫಜಿಲ್ಕಾ ಜಿಲ್ಲೆಯವನು ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 15 ರಂದು ಫಜಿಲ್ಕಾದ ಜಲಾಲಾಬಾದ್​ನಲ್ಲಿ ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಬ್ಲಾಸ್ಟ್ ಆಗಿ 22 ವರ್ಷದ ಬಲವಿಂದರ್​ ಸಿಂಗ್ ಎಂಬಾತ ಮೃತಪಟ್ಟಿದ್ದ. ಜನನಿಬಿಡ ಪ್ರದೇಶದಲ್ಲಿ ಬೈಕ್ ಸ್ಫೋಟಿಸಲು ಪರ್ವಿನ್ ಕುಮಾರ್​ ಸಂಚು ರೂಪಿಸಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಘಟನೆಯಲ್ಲಿ ಆತನ ಪಾತ್ರ ಇರುವುದು ತಿಳಿಯುತ್ತಿದ್ದಂತೆ, ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಬಲವಿಂದರ್ ಸಿಂಗ್ ಓಡಿಸುತ್ತಿದ್ದ ಬೈಕ್​ಅನ್ನು ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಬೇಕೆಂದು ನಾನೇ ಸೂಚಿಸಿದ್ದೆ ಎಂದು ಪರ್ವಿನ್​ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಸೆಪ್ಟೆಂಬರ್​ 14 ರಂದು ಫಿರೋಜ್​ಪುರದ ಚಂಡಿವಾಲಾ ಗ್ರಾಮದ ನಿವಾಸಿ ಸುಖ್ವಿಂದರ್ ಸಿಂಗ್​​ ಮನೆಯಲ್ಲಿ ಈ ಕೃತ್ಯದ ಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ ಅಂತಾ ಐಜಿಪಿ ತಿಳಿಸಿದ್ದಾರೆ.

ಮಾಮ್‌ಡೋಟ್‌ನ ಲಖ್ಮಿರ್ ಕೆ ಹಿತ್ತರ್ ಗ್ರಾಮದ ನಿವಾಸಿ ಗುರ್‌ಪ್ರೀತ್ ಸಿಂಗ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಪರ್ವಿನ್​​​ನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಮೃತ ಬಲ್ವಿಂದರ್ ಸಿಂಗ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಹಿಲೋರಿ ಹೇಳಿದರು.

ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ ಇಲ್ಲವೆಂದಿದ್ದಕ್ಕೆ ಗುಡಿಸಲಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

ರೈತರೊಬ್ಬರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಹೊಲದಲ್ಲಿ ಬಚ್ಚಿಟ್ಟಿದ ಟಿಫಿನ್ ಬಾಂಬ್(Tiffin Bomb)​ಅನ್ನು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.