ETV Bharat / bharat

ಇಸ್ರೋ ಪ್ರತಿದಿನ 100ಕ್ಕೂ ಹೆಚ್ಚು ಸೈಬರ್ ದಾಳಿ ಎದುರಿಸುತ್ತಿದೆ: ಎಸ್.ಸೋಮನಾಥ್

author img

By ANI

Published : Oct 8, 2023, 10:26 AM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಫ್ಟ್‌ವೇರ್‌ಗಳ ಮೇಲೆ ಪ್ರತಿದಿನ 100 ಕ್ಕೂ ಹೆಚ್ಚು ಸೈಬರ್ ದಾಳಿಗಳು ಸಂಭವಿಸುತ್ತಿವೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದರು.

somanath
ಎಸ್ ಸೋಮನಾಥ್

ಕೊಚ್ಚಿ (ಕೇರಳ) : ದೇಶದ ಪ್ರತಿಷ್ಟಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿದಿನ 100 ಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ಎದುರಿಸುತ್ತಿದೆ. ಅಲ್ಟ್ರಾ- ಆಧುನಿಕ ಸಾಫ್ಟ್‌ವೇರ್ ಮತ್ತು ಚಿಪ್ ಬಳಸುವ ರಾಕೆಟ್ ತಂತ್ರಜ್ಞಾನದಲ್ಲಿ ಸೈಬರ್ ದಾಳಿಯ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ, ಇಂತಹ ದಾಳಿಗಳನ್ನು ಎದುರಿಸಲು ನಮ್ಮ ಸಂಸ್ಥೆಯು ದೃಢವಾದ ಸೈಬರ್ ಸೆಕ್ಯುರಿಟಿ ನೆಟ್‌ವರ್ಕ್ ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.

ಕೊಚ್ಚಿಯಲ್ಲಿ ಶನಿವಾರ ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಸೈಬರ್ ಸಮ್ಮೇಳನದ 16 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವೂ ಕೂಡ ಅಪ್‌ಡೇಟ್ ಆಗಬೇಕು. ಸಾಫ್ಟ್‌ವೇರ್ ಹೊರತುಪಡಿಸಿ ರಾಕೆಟ್‌ನೊಳಗಿನ ಹಾರ್ಡ್‌ವೇರ್ ಚಿಪ್‌ಗಳ ಸುರಕ್ಷತೆಯ ಬಗ್ಗೆಯೂ ಸಂಸ್ಥೆ ಗಮನಹರಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ" ಎಂದರು.

"ಈ ಹಿಂದೆ ನಾವು ಉಪಗ್ರಹವನ್ನು ಮೇಲ್ವಿಚಾರಣೆ ಮಾಡಲು ಸಾಫ್ಟ್‌ವೇರ್ ಸಿದ್ಧಪಡಿಸುತ್ತಿದ್ದೆವು. ಈಗ ಅದೇ ಕೆಲಸವನ್ನು ಅನೇಕ ಉಪಗ್ರಹಗಳಿಗೆ ಮಾಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವು ಅದಕ್ಕೆ ತಕ್ಕಂತೆ ನವೀಕರಿಸಬೇಕಾಗುತ್ತದೆ. ಸಾಮಾನ್ಯ ಜನರ ದೈನಂದಿನ ದಿನಚರಿಗೆ ಸಹಾಯ ಮಾಡುವ ಅನೇಕ ಉಪಗ್ರಹಗಳಿವೆ. ಇವೆಲ್ಲವನ್ನು ವಿವಿಧ ರೀತಿಯ ಸಾಫ್ಟ್‌ವೇರ್‌ಗಳು ನಿಯಂತ್ರಿಸುತ್ತವೆ. ಇದನ್ನೆಲ್ಲಾ ರಕ್ಷಿಸಲು ಸೈಬರ್ ಭದ್ರತೆ ಬಹಳ ಮುಖ್ಯ" ಎಂದು ತಿಳಿಸಿದರು.

ಇದನ್ನೂ ಓದಿ : ವಿಜ್ಞಾನ - ನಂಬಿಕೆ ಎರಡೂ ವಿಭಿನ್ನ ವಿಷಯಗಳು ; ಇಸ್ರೊ ಅಧ್ಯಕ್ಷ ಸೋಮನಾಥ್

"ಸುಧಾರಿತ ತಂತ್ರಜ್ಞಾನವು ನಮಗೆ ವರದಾನ ಮತ್ತು ಬೆದರಿಕೆಯಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಸೈಬರ್ ಅಪರಾಧದ ಸವಾಲುಗಳನ್ನು ಎದುರಿಸಬಹುದು. ಇದಕ್ಕಾಗಿ ಉತ್ತಮ ಸಂಶೋಧನೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಇಸ್ರೋ ಚಂದ್ರೋದಯ ! ' ನಾಲ್ಕು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ' - ಇಸ್ರೋ ಅಧ್ಯಕ್ಷ ಸೋಮನಾಥ್​

ಇದೇ ವೇಳೆ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿದ ಕೇರಳ ಕಂದಾಯ ಸಚಿವ ಪಿ.ರಾಜೀವ್ ಮಾತನಾಡಿ, "ರಾಜ್ಯ ಸರ್ಕಾರವು ಸೈಬರ್ ಕ್ಷೇತ್ರಕ್ಕೆ ಸಾಕಷ್ಟು ಭದ್ರತೆ ಒದಗಿಸಲು ಸಮರ್ಥವಾಗಿದೆ. ಈ ಕ್ಷೇತ್ರಕ್ಕೆ ಅಗತ್ಯ ಬೆಂಬಲವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಡಿಜಿಟಲ್ ವಿಶ್ವವಿದ್ಯಾನಿಲಯ, ಹಾಗೆಯೇ ಕೆ-ಫೋನ್ ಮೂಲಕ ಕೇರಳದ ಪ್ರತಿ ಮನೆಯಲ್ಲೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ" ಎಂದರು.

ಇದನ್ನೂ ಓದಿ : ಇಸ್ರೋ ಅಧ್ಯಕ್ಷ ಸೋಮನಾಥ್ , ಮಾಜಿ ಪಿಎಂ ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ನಟಿ ಮಮತಾ ಮೋಹನ್‌ದಾಸ್, ಗುಪ್ತಚರ ವಿಭಾಗದ ಎಡಿಜಿಪಿ ಮನೋಜ್ ಅಬ್ರಹಾಂ, ಐಪಿಎಸ್ ಮತ್ತು ಇಎಸ್‌ಆರ್‌ಎ ಅಧ್ಯಕ್ಷ ಮನು ಜಕಾರಿಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ' ಶುಕ್ರಯಾನ ' ಯೋಜನೆಗೆ ಸಿದ್ಧತೆ, ಪೇಲೋಡ್‌ಗಳ ಅಭಿವೃದ್ಧಿ : ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್

ಕೊಚ್ಚಿ (ಕೇರಳ) : ದೇಶದ ಪ್ರತಿಷ್ಟಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿದಿನ 100 ಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ಎದುರಿಸುತ್ತಿದೆ. ಅಲ್ಟ್ರಾ- ಆಧುನಿಕ ಸಾಫ್ಟ್‌ವೇರ್ ಮತ್ತು ಚಿಪ್ ಬಳಸುವ ರಾಕೆಟ್ ತಂತ್ರಜ್ಞಾನದಲ್ಲಿ ಸೈಬರ್ ದಾಳಿಯ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ, ಇಂತಹ ದಾಳಿಗಳನ್ನು ಎದುರಿಸಲು ನಮ್ಮ ಸಂಸ್ಥೆಯು ದೃಢವಾದ ಸೈಬರ್ ಸೆಕ್ಯುರಿಟಿ ನೆಟ್‌ವರ್ಕ್ ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.

ಕೊಚ್ಚಿಯಲ್ಲಿ ಶನಿವಾರ ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಸೈಬರ್ ಸಮ್ಮೇಳನದ 16 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವೂ ಕೂಡ ಅಪ್‌ಡೇಟ್ ಆಗಬೇಕು. ಸಾಫ್ಟ್‌ವೇರ್ ಹೊರತುಪಡಿಸಿ ರಾಕೆಟ್‌ನೊಳಗಿನ ಹಾರ್ಡ್‌ವೇರ್ ಚಿಪ್‌ಗಳ ಸುರಕ್ಷತೆಯ ಬಗ್ಗೆಯೂ ಸಂಸ್ಥೆ ಗಮನಹರಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ" ಎಂದರು.

"ಈ ಹಿಂದೆ ನಾವು ಉಪಗ್ರಹವನ್ನು ಮೇಲ್ವಿಚಾರಣೆ ಮಾಡಲು ಸಾಫ್ಟ್‌ವೇರ್ ಸಿದ್ಧಪಡಿಸುತ್ತಿದ್ದೆವು. ಈಗ ಅದೇ ಕೆಲಸವನ್ನು ಅನೇಕ ಉಪಗ್ರಹಗಳಿಗೆ ಮಾಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವು ಅದಕ್ಕೆ ತಕ್ಕಂತೆ ನವೀಕರಿಸಬೇಕಾಗುತ್ತದೆ. ಸಾಮಾನ್ಯ ಜನರ ದೈನಂದಿನ ದಿನಚರಿಗೆ ಸಹಾಯ ಮಾಡುವ ಅನೇಕ ಉಪಗ್ರಹಗಳಿವೆ. ಇವೆಲ್ಲವನ್ನು ವಿವಿಧ ರೀತಿಯ ಸಾಫ್ಟ್‌ವೇರ್‌ಗಳು ನಿಯಂತ್ರಿಸುತ್ತವೆ. ಇದನ್ನೆಲ್ಲಾ ರಕ್ಷಿಸಲು ಸೈಬರ್ ಭದ್ರತೆ ಬಹಳ ಮುಖ್ಯ" ಎಂದು ತಿಳಿಸಿದರು.

ಇದನ್ನೂ ಓದಿ : ವಿಜ್ಞಾನ - ನಂಬಿಕೆ ಎರಡೂ ವಿಭಿನ್ನ ವಿಷಯಗಳು ; ಇಸ್ರೊ ಅಧ್ಯಕ್ಷ ಸೋಮನಾಥ್

"ಸುಧಾರಿತ ತಂತ್ರಜ್ಞಾನವು ನಮಗೆ ವರದಾನ ಮತ್ತು ಬೆದರಿಕೆಯಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಸೈಬರ್ ಅಪರಾಧದ ಸವಾಲುಗಳನ್ನು ಎದುರಿಸಬಹುದು. ಇದಕ್ಕಾಗಿ ಉತ್ತಮ ಸಂಶೋಧನೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಇಸ್ರೋ ಚಂದ್ರೋದಯ ! ' ನಾಲ್ಕು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ' - ಇಸ್ರೋ ಅಧ್ಯಕ್ಷ ಸೋಮನಾಥ್​

ಇದೇ ವೇಳೆ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿದ ಕೇರಳ ಕಂದಾಯ ಸಚಿವ ಪಿ.ರಾಜೀವ್ ಮಾತನಾಡಿ, "ರಾಜ್ಯ ಸರ್ಕಾರವು ಸೈಬರ್ ಕ್ಷೇತ್ರಕ್ಕೆ ಸಾಕಷ್ಟು ಭದ್ರತೆ ಒದಗಿಸಲು ಸಮರ್ಥವಾಗಿದೆ. ಈ ಕ್ಷೇತ್ರಕ್ಕೆ ಅಗತ್ಯ ಬೆಂಬಲವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಡಿಜಿಟಲ್ ವಿಶ್ವವಿದ್ಯಾನಿಲಯ, ಹಾಗೆಯೇ ಕೆ-ಫೋನ್ ಮೂಲಕ ಕೇರಳದ ಪ್ರತಿ ಮನೆಯಲ್ಲೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ" ಎಂದರು.

ಇದನ್ನೂ ಓದಿ : ಇಸ್ರೋ ಅಧ್ಯಕ್ಷ ಸೋಮನಾಥ್ , ಮಾಜಿ ಪಿಎಂ ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ನಟಿ ಮಮತಾ ಮೋಹನ್‌ದಾಸ್, ಗುಪ್ತಚರ ವಿಭಾಗದ ಎಡಿಜಿಪಿ ಮನೋಜ್ ಅಬ್ರಹಾಂ, ಐಪಿಎಸ್ ಮತ್ತು ಇಎಸ್‌ಆರ್‌ಎ ಅಧ್ಯಕ್ಷ ಮನು ಜಕಾರಿಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ' ಶುಕ್ರಯಾನ ' ಯೋಜನೆಗೆ ಸಿದ್ಧತೆ, ಪೇಲೋಡ್‌ಗಳ ಅಭಿವೃದ್ಧಿ : ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.