ETV Bharat / bharat

ಸ್ವದೇಶಿ ನಿರ್ಮಿತ ಕ್ರ್ಯಾಶ್ ಟೆಸ್ಟಿಂಗ್ ವ್ಯವಸ್ಥೆ NCAPಗೆ ಚಾಲನೆ

author img

By ETV Bharat Karnataka Team

Published : Aug 22, 2023, 6:15 PM IST

ಕ್ರ್ಯಾಶ್ ಟೆಸ್ಟಿಂಗ್ ಸುರಕ್ಷತಾ ಯೋಜನೆ ಎನ್​ಸಿಎಪಿ ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ನವದೆಹಲಿಯಲ್ಲಿ ಚಾಲನೆ ನೀಡಿದರು.

Gadkari launches Bharat NCAP
Gadkari launches Bharat NCAP

ನವದೆಹಲಿ: ಭಾರತ ಸ್ವತಃ ತಯಾರಿಸಿದ ಕ್ರ್ಯಾಶ್ ಟೆಸ್ಟಿಂಗ್ ಸುರಕ್ಷತಾ ಯೋಜನೆಯಾದ ಭಾರತ್ ಎನ್​ಸಿಎಪಿ ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 30 ಮಾದರಿಗಳ ಕ್ರ್ಯಾಶ್ ಟೆಸ್ಟಿಂಗ್​​​ಗೆ ಅರ್ಜಿಗಳು ಬಂದಿದ್ದು, ಇದು ದೇಶಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು.

"ಇಂದು ಭಾರತೀಯ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಬಹಳ ಮುಖ್ಯವಾದ ದಿನವಾಗಿದೆ. ಅಲ್ಲದೆ ಇದು ನಮ್ಮ ಸಮಾಜಕ್ಕೂ ಮುಖ್ಯ ದಿನವಾಗಿದೆ. ಭಾರತೀಯ ಆಟೋಮೊಬೈಲ್ ಉದ್ಯಮದ ಸಹಕಾರವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಅವರ ಸಹಕಾರದಿಂದಾಗಿ ಇಂದು ಭಾರತ್ ಎನ್​ಸಿಎಪಿ ಯೋಜನೆಯನ್ನು ಪ್ರಾರಂಭಿಸುವ ಸಮಯ ಒದಗಿ ಬಂದಿದೆ" ಎಂದರು.

ಯೋಜನೆಯ ಬಗ್ಗೆ ಮಾತನಾಡಿದ ಸಚಿವರು, "ಇದು ಸರ್ಕಾರದ ಯೋಜನೆಯಾಗಿತ್ತು. ವಿದೇಶದಲ್ಲಿ ಪರೀಕ್ಷಾ ವೆಚ್ಚ 2.5 ಕೋಟಿ ರೂ ಆಗುತ್ತದೆ. ಆದರೆ ಭಾರತದಲ್ಲಿ ಭಾರತ್ ಎನ್​ಸಿಎಪಿ ಅಡಿಯಲ್ಲಿ ಇದಕ್ಕೆ ಕೇವಲ 60 ಲಕ್ಷ ರೂ. ಖರ್ಚಾಗುತ್ತದೆ. ಜಾಗತಿಕ ಮಾನದಂಡಗಳೊಂದಿಗೆ ನಿಮ್ಮ ಮಾರುಕಟ್ಟೆ ಹೆಚ್ಚಾಗಲಿದೆ. ಗ್ರಾಹಕರಿಗೂ ಇದರಿಂದ ಸಹಾಯವಾಗುವುದರಿಂದ ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಸ್ಟಾರ್ ರೇಟಿಂಗ್ ಮೂಲಕ ಜನರು ಉತ್ಪನ್ನದ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಬಹುದು" ಎಂದು ಕೇಂದ್ರ ಸಚಿವರು ತಿಳಿಸಿದರು.

"ಜನರು ಸುರಕ್ಷತೆ, ಮಾಲಿನ್ಯದ ಬಗ್ಗೆ ಜಾಗರೂಕರಾಗಿದ್ದಾರೆ. ಅವರು ವಿವಿಧ ರೀತಿಯ ಇಂಧನವನ್ನು ಬಳಸಲು ಬಯಸುತ್ತಾರೆ. ಹೊಸ ಪರ್ಯಾಯ ಲಭ್ಯವಿದ್ದರೆ ಅವರು ಬಳಸಲು ಸಿದ್ಧರಿದ್ದಾರೆ" ಎಂದು ಅವರು ಹೇಳಿದರು. "ಇಂದು ನಾವು ಹಲವಾರು ವಾಹನ ತಯಾರಕರಿಂದ 30 ಮಾದರಿಗಳನ್ನು ಪರೀಕ್ಷಿಸಲು ಮತ್ತು ಪ್ರಮಾಣೀಕರಿಸಲು ವಿನಂತಿಗಳನ್ನು ಸ್ವೀಕರಿಸಿದ್ದೇವೆ" ಎಂದು ತಿಳಿಸಿದರು.

"ದೇಶದಲ್ಲಿ ಪ್ರತಿದಿನ 1,100 ಅಪಘಾತಗಳು ಮತ್ತು 400 ಸಾವುಗಳು ಮತ್ತು ಪ್ರತಿ ಗಂಟೆಗೆ 47 ಅಪಘಾತಗಳು ಮತ್ತು 18 ಸಾವುಗಳು ಸಂಭವಿಸುತ್ತಿವೆ. ಶೇ 70ರಷ್ಟು ಸಾವು 18 ರಿಂದ 34 ವರ್ಷ ವಯಸ್ಸಿನವರಾಗಿದ್ದು, ಇದರಿಂದ ಶೇ 3.14ರಷ್ಟು ಜಿಡಿಪಿ ನಷ್ಟವಾಗಿದೆ. ಮುಖಾಮುಖಿ ಡಿಕ್ಕಿಯಿಂದ 27,000 ಜನರು ಸಾವನ್ನಪ್ಪಿದ್ದರೆ, ಸೈಡ್ ಡಿಕ್ಕಿಯಿಂದಾಗಿ 18,000 ಜನರು ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದರು.

ಅಪಘಾತದಲ್ಲಿ ಜೀವಗಳನ್ನು ಉಳಿಸುವ ಬಗ್ಗೆ ಒತ್ತಿ ಹೇಳಿದ ಗಡ್ಕರಿ, "ನಾವು ಜನರ ಜೀವವನ್ನು ಹೇಗೆ ಉಳಿಸಬಹುದು ಎಂಬುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಮಯ ಇದಾಗಿದೆ ಮತ್ತು ರಸ್ತೆ ಸುರಕ್ಷತೆ ಅದಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಆದರೆ ಆಟೋಮೊಬೈಲ್ ಉದ್ಯಮ ಮಾತ್ರ ಇದಕ್ಕೆ ಕಾರಣವಲ್ಲ, ರಸ್ತೆ ಎಂಜಿನಿಯರಿಂಗ್ ಕೂಡ ದೊಡ್ಡ ಸಮಸ್ಯೆಯಾಗಿದೆ" ಎಂದು ಅವರು ಹೇಳಿದರು.

"ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ, ಜಗತ್ತಿನಲ್ಲಿ ನಮ್ಮ ಆಟೊಮೊಬೈಲ್ ಉದ್ಯಮವು ಏಳನೇ ಸ್ಥಾನದಲ್ಲಿತ್ತು. ಈಗ ಕೇವಲ ಎರಡರಿಂದ ಮೂರು ತಿಂಗಳ ಹಿಂದೆ ನಾವು ಜಪಾನ್ ಅನ್ನು ಮೀರಿಸಿದ್ದೇವೆ ಮತ್ತು ಈಗ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಮೊದಲನೆಯದು ಚೀನಾ ಮತ್ತು ಎರಡನೆಯದು ಯುಎಸ್ ಆಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಕ್ಲರಿಕಲ್​ ನೌಕರಿಗಳಿಗೆ ಕುತ್ತು ತರಬಹುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ: ಸಂಶೋಧನಾ ವರದಿ

ನವದೆಹಲಿ: ಭಾರತ ಸ್ವತಃ ತಯಾರಿಸಿದ ಕ್ರ್ಯಾಶ್ ಟೆಸ್ಟಿಂಗ್ ಸುರಕ್ಷತಾ ಯೋಜನೆಯಾದ ಭಾರತ್ ಎನ್​ಸಿಎಪಿ ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 30 ಮಾದರಿಗಳ ಕ್ರ್ಯಾಶ್ ಟೆಸ್ಟಿಂಗ್​​​ಗೆ ಅರ್ಜಿಗಳು ಬಂದಿದ್ದು, ಇದು ದೇಶಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು.

"ಇಂದು ಭಾರತೀಯ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಬಹಳ ಮುಖ್ಯವಾದ ದಿನವಾಗಿದೆ. ಅಲ್ಲದೆ ಇದು ನಮ್ಮ ಸಮಾಜಕ್ಕೂ ಮುಖ್ಯ ದಿನವಾಗಿದೆ. ಭಾರತೀಯ ಆಟೋಮೊಬೈಲ್ ಉದ್ಯಮದ ಸಹಕಾರವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಅವರ ಸಹಕಾರದಿಂದಾಗಿ ಇಂದು ಭಾರತ್ ಎನ್​ಸಿಎಪಿ ಯೋಜನೆಯನ್ನು ಪ್ರಾರಂಭಿಸುವ ಸಮಯ ಒದಗಿ ಬಂದಿದೆ" ಎಂದರು.

ಯೋಜನೆಯ ಬಗ್ಗೆ ಮಾತನಾಡಿದ ಸಚಿವರು, "ಇದು ಸರ್ಕಾರದ ಯೋಜನೆಯಾಗಿತ್ತು. ವಿದೇಶದಲ್ಲಿ ಪರೀಕ್ಷಾ ವೆಚ್ಚ 2.5 ಕೋಟಿ ರೂ ಆಗುತ್ತದೆ. ಆದರೆ ಭಾರತದಲ್ಲಿ ಭಾರತ್ ಎನ್​ಸಿಎಪಿ ಅಡಿಯಲ್ಲಿ ಇದಕ್ಕೆ ಕೇವಲ 60 ಲಕ್ಷ ರೂ. ಖರ್ಚಾಗುತ್ತದೆ. ಜಾಗತಿಕ ಮಾನದಂಡಗಳೊಂದಿಗೆ ನಿಮ್ಮ ಮಾರುಕಟ್ಟೆ ಹೆಚ್ಚಾಗಲಿದೆ. ಗ್ರಾಹಕರಿಗೂ ಇದರಿಂದ ಸಹಾಯವಾಗುವುದರಿಂದ ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಸ್ಟಾರ್ ರೇಟಿಂಗ್ ಮೂಲಕ ಜನರು ಉತ್ಪನ್ನದ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಬಹುದು" ಎಂದು ಕೇಂದ್ರ ಸಚಿವರು ತಿಳಿಸಿದರು.

"ಜನರು ಸುರಕ್ಷತೆ, ಮಾಲಿನ್ಯದ ಬಗ್ಗೆ ಜಾಗರೂಕರಾಗಿದ್ದಾರೆ. ಅವರು ವಿವಿಧ ರೀತಿಯ ಇಂಧನವನ್ನು ಬಳಸಲು ಬಯಸುತ್ತಾರೆ. ಹೊಸ ಪರ್ಯಾಯ ಲಭ್ಯವಿದ್ದರೆ ಅವರು ಬಳಸಲು ಸಿದ್ಧರಿದ್ದಾರೆ" ಎಂದು ಅವರು ಹೇಳಿದರು. "ಇಂದು ನಾವು ಹಲವಾರು ವಾಹನ ತಯಾರಕರಿಂದ 30 ಮಾದರಿಗಳನ್ನು ಪರೀಕ್ಷಿಸಲು ಮತ್ತು ಪ್ರಮಾಣೀಕರಿಸಲು ವಿನಂತಿಗಳನ್ನು ಸ್ವೀಕರಿಸಿದ್ದೇವೆ" ಎಂದು ತಿಳಿಸಿದರು.

"ದೇಶದಲ್ಲಿ ಪ್ರತಿದಿನ 1,100 ಅಪಘಾತಗಳು ಮತ್ತು 400 ಸಾವುಗಳು ಮತ್ತು ಪ್ರತಿ ಗಂಟೆಗೆ 47 ಅಪಘಾತಗಳು ಮತ್ತು 18 ಸಾವುಗಳು ಸಂಭವಿಸುತ್ತಿವೆ. ಶೇ 70ರಷ್ಟು ಸಾವು 18 ರಿಂದ 34 ವರ್ಷ ವಯಸ್ಸಿನವರಾಗಿದ್ದು, ಇದರಿಂದ ಶೇ 3.14ರಷ್ಟು ಜಿಡಿಪಿ ನಷ್ಟವಾಗಿದೆ. ಮುಖಾಮುಖಿ ಡಿಕ್ಕಿಯಿಂದ 27,000 ಜನರು ಸಾವನ್ನಪ್ಪಿದ್ದರೆ, ಸೈಡ್ ಡಿಕ್ಕಿಯಿಂದಾಗಿ 18,000 ಜನರು ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದರು.

ಅಪಘಾತದಲ್ಲಿ ಜೀವಗಳನ್ನು ಉಳಿಸುವ ಬಗ್ಗೆ ಒತ್ತಿ ಹೇಳಿದ ಗಡ್ಕರಿ, "ನಾವು ಜನರ ಜೀವವನ್ನು ಹೇಗೆ ಉಳಿಸಬಹುದು ಎಂಬುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಮಯ ಇದಾಗಿದೆ ಮತ್ತು ರಸ್ತೆ ಸುರಕ್ಷತೆ ಅದಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಆದರೆ ಆಟೋಮೊಬೈಲ್ ಉದ್ಯಮ ಮಾತ್ರ ಇದಕ್ಕೆ ಕಾರಣವಲ್ಲ, ರಸ್ತೆ ಎಂಜಿನಿಯರಿಂಗ್ ಕೂಡ ದೊಡ್ಡ ಸಮಸ್ಯೆಯಾಗಿದೆ" ಎಂದು ಅವರು ಹೇಳಿದರು.

"ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ, ಜಗತ್ತಿನಲ್ಲಿ ನಮ್ಮ ಆಟೊಮೊಬೈಲ್ ಉದ್ಯಮವು ಏಳನೇ ಸ್ಥಾನದಲ್ಲಿತ್ತು. ಈಗ ಕೇವಲ ಎರಡರಿಂದ ಮೂರು ತಿಂಗಳ ಹಿಂದೆ ನಾವು ಜಪಾನ್ ಅನ್ನು ಮೀರಿಸಿದ್ದೇವೆ ಮತ್ತು ಈಗ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಮೊದಲನೆಯದು ಚೀನಾ ಮತ್ತು ಎರಡನೆಯದು ಯುಎಸ್ ಆಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಕ್ಲರಿಕಲ್​ ನೌಕರಿಗಳಿಗೆ ಕುತ್ತು ತರಬಹುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ: ಸಂಶೋಧನಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.