ETV Bharat / bharat

ಉಕ್ರೇನ್​ನಲ್ಲಿ ರಷ್ಯಾ ದಾಳಿಗೆ ಕರುನಾಡ ವಿದ್ಯಾರ್ಥಿ ಬಲಿ.. ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ

author img

By

Published : Mar 1, 2022, 4:16 PM IST

Updated : Mar 1, 2022, 4:51 PM IST

ರಷ್ಯಾ ಆಕ್ರಮಣಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲೆಯ ಜನರು, ಕೇಂದ್ರ ಸರ್ಕಾರ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ವಿಫಲವಾಗಿದೆ. ನಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಅವರು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಈಗ ನಮ್ಮ ಮಗ ಸತ್ತೋದ, ಇದಕ್ಕೆ ಯಾರು ಹೊಣೆ ಎಂದು ನೋವನ್ನು ತೋಡಿಕೊಂಡಿದ್ದಾರೆ.

NAVIN HOME SITUATION
ನವೀನ್ ಶೇಖರಪ್ಪ ಗ್ಯಾನಗೌಡರ್‌

ಹಾವೇರಿ: ಉಕ್ರೇನ್​ನ ಖಾರ್ಕೀವ್​ನಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್​ ಅಸುನೀಗಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಸಂಬಂಧ ಮೃತ ನವೀನ್ ಮನೆಗೆ ದೌಡಾಯಿಸಿದ ನೂರಾರು ಜನರು ಹಾಗೂ ಸಂಬಂಧಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ನವೀನ್ ಶೇಖರಪ್ಪ ಗ್ಯಾನಗೌಡರ್‌ ಮನೆಯಲ್ಲಿ ನೀರವ ಮೌನ

ರಷ್ಯಾ ಆಕ್ರಮಣಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಜನರು, ವಿದೇಶಾಂಗ ಇಲಾಖೆ ವಿಫಲವಾಗಿದೆ. ನಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಅವರು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಈಗ ನಮ್ಮ ಮಗ ಬಾರದಲೋಕಕ್ಕೆ ತೆರಳಿದ, ಇದಕ್ಕೆ ಯಾರು ಹೊಣೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನಮ್ಮ ಮಕ್ಕಳಿಗೆ ಭದ್ರತೆಯೇ ಇಲ್ಲ. ನಾವು ಯಾರಿಗೇ ಸಂಪರ್ಕ ಮಾಡಿದರೂ ಯಾರೂ ಸಿಕ್ತಾ ಇಲ್ಲಾ. ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಊಟ-ನೀರು ಸಹ ದೊರೆಯುತ್ತಿಲ್ಲ. ಬಹಳ ಸಂದಿಗ್ಧತೆಯಲ್ಲಿ ನಮ್ಮ ಮಕ್ಕಳು ಇದ್ದಾರೆ. ರಷ್ಯಾ ಬಾರ್ಡರ್ ಓಪನ್ ಆದ್ರೆ ನಮ್ಮ ಮಕ್ಕಳು ಬದುಕುತ್ತಾರೆ. ಇಲ್ಲ ಅಂದ್ರೆ ಎಲ್ಲಾ ಮಕ್ಕಳು ಸಾಯುತ್ತಾರೆ ಎಂದು ವಿದ್ಯಾರ್ಥಿಗಳ ಪಾಲಕರು ಗೋಗರೆಯುತ್ತಿದ್ದಾರೆ.

ಕುಟುಂಬದ ಹಿನ್ನೆಲೆ:

ಶೇಕರಪ್ಪ ಗ್ಯಾನಗೌಡರ್​ಗೆ ಹರೀಶ ಮತ್ತು ನವೀನ ಗ್ಯಾನಗೌಡರ ಎಂಬ ಇಬ್ಬರು ಮಕ್ಕಳಿದ್ದು, ಎರಡು ಎಕರೆಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು. ಮೊದಲು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶೇಕರಪ್ಪ ನಂತರದಲ್ಲಿ ಜಮೀನಿನ ಕಡೆ ವಾಲಿದ್ದರು. ಕಡುಬಡತನದಲ್ಲಿದ್ದರೂ ಸಹ ಮಗನನ್ನು ಡಾಕ್ಟರ್ ಮಾಡುವ ಆಸೆಯನ್ನು ಈ ದಂಪತಿ ಹೊಂದಿದ್ದರು. ಸ್ಥಳಕ್ಕೆ ರಾಣೆಬೆನ್ನೂರು ತಹಶೀಲ್ದಾರ್​ ಕಚೇರಿಯಿಂದ ಸಿಬ್ಬಂದಿ ದೌಡಾಯಿಸಿದ್ದು, ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಖಾರ್ಕಿವ್​​ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್ ಸಾವು

ಹಾವೇರಿ: ಉಕ್ರೇನ್​ನ ಖಾರ್ಕೀವ್​ನಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್​ ಅಸುನೀಗಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಸಂಬಂಧ ಮೃತ ನವೀನ್ ಮನೆಗೆ ದೌಡಾಯಿಸಿದ ನೂರಾರು ಜನರು ಹಾಗೂ ಸಂಬಂಧಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ನವೀನ್ ಶೇಖರಪ್ಪ ಗ್ಯಾನಗೌಡರ್‌ ಮನೆಯಲ್ಲಿ ನೀರವ ಮೌನ

ರಷ್ಯಾ ಆಕ್ರಮಣಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಜನರು, ವಿದೇಶಾಂಗ ಇಲಾಖೆ ವಿಫಲವಾಗಿದೆ. ನಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಅವರು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಈಗ ನಮ್ಮ ಮಗ ಬಾರದಲೋಕಕ್ಕೆ ತೆರಳಿದ, ಇದಕ್ಕೆ ಯಾರು ಹೊಣೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನಮ್ಮ ಮಕ್ಕಳಿಗೆ ಭದ್ರತೆಯೇ ಇಲ್ಲ. ನಾವು ಯಾರಿಗೇ ಸಂಪರ್ಕ ಮಾಡಿದರೂ ಯಾರೂ ಸಿಕ್ತಾ ಇಲ್ಲಾ. ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಊಟ-ನೀರು ಸಹ ದೊರೆಯುತ್ತಿಲ್ಲ. ಬಹಳ ಸಂದಿಗ್ಧತೆಯಲ್ಲಿ ನಮ್ಮ ಮಕ್ಕಳು ಇದ್ದಾರೆ. ರಷ್ಯಾ ಬಾರ್ಡರ್ ಓಪನ್ ಆದ್ರೆ ನಮ್ಮ ಮಕ್ಕಳು ಬದುಕುತ್ತಾರೆ. ಇಲ್ಲ ಅಂದ್ರೆ ಎಲ್ಲಾ ಮಕ್ಕಳು ಸಾಯುತ್ತಾರೆ ಎಂದು ವಿದ್ಯಾರ್ಥಿಗಳ ಪಾಲಕರು ಗೋಗರೆಯುತ್ತಿದ್ದಾರೆ.

ಕುಟುಂಬದ ಹಿನ್ನೆಲೆ:

ಶೇಕರಪ್ಪ ಗ್ಯಾನಗೌಡರ್​ಗೆ ಹರೀಶ ಮತ್ತು ನವೀನ ಗ್ಯಾನಗೌಡರ ಎಂಬ ಇಬ್ಬರು ಮಕ್ಕಳಿದ್ದು, ಎರಡು ಎಕರೆಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು. ಮೊದಲು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶೇಕರಪ್ಪ ನಂತರದಲ್ಲಿ ಜಮೀನಿನ ಕಡೆ ವಾಲಿದ್ದರು. ಕಡುಬಡತನದಲ್ಲಿದ್ದರೂ ಸಹ ಮಗನನ್ನು ಡಾಕ್ಟರ್ ಮಾಡುವ ಆಸೆಯನ್ನು ಈ ದಂಪತಿ ಹೊಂದಿದ್ದರು. ಸ್ಥಳಕ್ಕೆ ರಾಣೆಬೆನ್ನೂರು ತಹಶೀಲ್ದಾರ್​ ಕಚೇರಿಯಿಂದ ಸಿಬ್ಬಂದಿ ದೌಡಾಯಿಸಿದ್ದು, ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಖಾರ್ಕಿವ್​​ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್ ಸಾವು

Last Updated : Mar 1, 2022, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.