ETV Bharat / bharat

ಕೇವಲ ಬಿಜೆಪಿ ಹೇಳಿದ್ದು ಕೇಳಬೇಡಿ: ಚುನಾವಣಾ ಆಯೋಗಕ್ಕೆ 'ಕೈ' ಮುಗಿಯುತ್ತೇನೆಂದ ಮಮತಾ! - ಮಮತಾ ಬ್ಯಾನರ್ಜಿ ಚುನಾವಣೆ

ಪಶ್ಚಿಮ ಬಂಗಾಳ ಚುನಾವಣೆ ವೇಳೆ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಹೇಳುತ್ತಿರುವುದನ್ನ ಮಾತ್ರ ಕೇಳ್ತಿದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mamata Banerjee
Mamata Banerjee
author img

By

Published : Apr 12, 2021, 5:00 PM IST

ಡಮ್​ಡಮ್(ಪಶ್ಚಿಮ ಬಂಗಾಳ): ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ. ಕೇವಲ ಬಿಜೆಪಿ ಹೇಳೋದನ್ನ ಕೇಳಬೇಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

5ನೇ ಹಂತದ ಚುನಾವಣೆಗೋಸ್ಕರ ಪಶ್ಚಿಮ ಬಂಗಾಳದ ಡಮ್​ಡಮ್​ನಲ್ಲಿ ಪ್ರಚಾರ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಯಾವುದೇ ಕಾರಣಕ್ಕೂ ಪಕ್ಷಪಾತ ಮಾಡಬೇಡಿ. ಎಲ್ಲರೂ ಹೇಳಿದ್ದು ಕೇಳಿ ಎಂದು ವಿನಂತಿ ಮಾಡಿಕೊಂಡರು.

ಚುನಾವಣಾ ಆಯೋಗದ ವಿರುದ್ಧ ಮಮತಾ ವಾಗ್ದಾಳಿ

ಮತಗಳಿಗಾಗಿ ನೀವು ಬಾಂಗ್ಲಾದೇಶಕ್ಕೆ ಹೋಗಿದ್ದೀರಿ. ಇದೀಗ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದರೂ ಕೇಂದ್ರ ಚುನಾವಣಾ ಆಯೋಗ ಸುಮೋಟೋ ಜಾರಿಗೊಳಿಸುತ್ತಿಲ್ಲ. ಮೋದಿ, ನೀವು ಟ್ರಂಪ್ ಕಾರ್ಡ್​ ಆಡಲು ಈ ಹಿಂದೆ ಯುಎಸ್​ಗೆ ಹೋಗಿದ್ದೀರಿ, ಇದೀಗ ಬಂಗಾಳಕ್ಕೆ ಬಂಗಾಳ ಕಾರ್ಡ್​ ಆಡಲು ಹೋಗಿದ್ದೀರಿ ಎಂದು ನಮೋ ವಿರುದ್ಧ ಮಮತಾ ವಾಗ್ದಾಳಿ ನಡೆಸಿದರು. ಮೋದಿ ನೋಡಿದ್ರೆ ನನಗೆ ನಾಚಿಕೆ ಆಗುತ್ತದೆ. ನಾನು ಈ ರೀತಿಯ ಪ್ರಧಾನಿ ನೋಡಿಲ್ಲ. ಎಲ್ಲ ಸಮುದಾಯದವರಿಗಾಗಿ ನಾನು ಕೆಲಸ ಮಾಡ್ತಿದ್ದೇನೆ. ಇದೀಗ ಬಿಜೆಪಿ ಹಟಾವೋ ದೇಶ ಬಚಾವೋ ಎಂಬ ವಾಕ್ಯ ಮಾತ್ರ ಉಳಿದುಕೊಂಡಿದೆ ಎಂದರು.

ಇದನ್ನೂ ಓದಿ: ಬಂಗಾಳದ ಜನ ಕೇಳಿದ್ರೆ ರಾಜೀನಾಮೆ ನೀಡುವೆ - ನೀವು ಮೇ. 2ಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿ: ದೀದಿ ವಿರುದ್ಧ ಶಾ ವಾಗ್ದಾಳಿ

ಕೇಂದ್ರ ರೈಲ್ವೆ ಇಲಾಖೆ, ಬಿಎಸ್​​​ಎನ್​ಎಲ್​, ಬ್ಯಾಂಕ್​​ ಎಲ್ಲವನ್ನೂ ಮಾರಿದೆ. ಇದೀಗ ಅಲ್ಲಿ ಕೆಲಸ ಮಾಡುವವರನ್ನ ತೆಗೆದುಹಾಕಲು ಯೋಜನೆ ರೂಪಿಸಲಾಗುತ್ತಿದೆ ಎಂಬ ಮಾಹಿತಿ ಸಹ ಇದೆ. ಇದು ಉತ್ತರ ರಾಜಕೀಯ ಅಲ್ಲ ಎಂದು ಮಮತಾ ಹೇಳಿದ್ರು.

ಚು. ಆಯೋಗಕ್ಕೆ ಪತ್ರ ಬರೆದ ಟಿಎಂಸಿ

4ನೇ ಹಂತದ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಕೊಚ್​ ಬೆಹಾರ್​ದಲ್ಲಿ ನಾಲ್ವರು ಮೃತರಾಗಿದ್ದು, ಘಟನೆ ನಂತರ ಬಿಜೆಪಿ ದಿಲೀಪ್​ ಘೋಷ್​ ಸಿಟಾಲಿಕುಚಿಯಲ್ಲಿ ಇಂತಹ ಘಟನೆ ಸಂಭವಿಸಬಹುದು ಎಂದು ಹೇಳಿದ್ದಾರೆ. ಇದೀಗ ಅವರ ಚುನಾವಣಾ ಪ್ರಚಾರ ನಿಷೇಧಿಸುವಂತೆ ಒತ್ತಾಯಿಸಿ, ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ ಬರೆದಿದೆ.

ಡಮ್​ಡಮ್(ಪಶ್ಚಿಮ ಬಂಗಾಳ): ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ. ಕೇವಲ ಬಿಜೆಪಿ ಹೇಳೋದನ್ನ ಕೇಳಬೇಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

5ನೇ ಹಂತದ ಚುನಾವಣೆಗೋಸ್ಕರ ಪಶ್ಚಿಮ ಬಂಗಾಳದ ಡಮ್​ಡಮ್​ನಲ್ಲಿ ಪ್ರಚಾರ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಯಾವುದೇ ಕಾರಣಕ್ಕೂ ಪಕ್ಷಪಾತ ಮಾಡಬೇಡಿ. ಎಲ್ಲರೂ ಹೇಳಿದ್ದು ಕೇಳಿ ಎಂದು ವಿನಂತಿ ಮಾಡಿಕೊಂಡರು.

ಚುನಾವಣಾ ಆಯೋಗದ ವಿರುದ್ಧ ಮಮತಾ ವಾಗ್ದಾಳಿ

ಮತಗಳಿಗಾಗಿ ನೀವು ಬಾಂಗ್ಲಾದೇಶಕ್ಕೆ ಹೋಗಿದ್ದೀರಿ. ಇದೀಗ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದರೂ ಕೇಂದ್ರ ಚುನಾವಣಾ ಆಯೋಗ ಸುಮೋಟೋ ಜಾರಿಗೊಳಿಸುತ್ತಿಲ್ಲ. ಮೋದಿ, ನೀವು ಟ್ರಂಪ್ ಕಾರ್ಡ್​ ಆಡಲು ಈ ಹಿಂದೆ ಯುಎಸ್​ಗೆ ಹೋಗಿದ್ದೀರಿ, ಇದೀಗ ಬಂಗಾಳಕ್ಕೆ ಬಂಗಾಳ ಕಾರ್ಡ್​ ಆಡಲು ಹೋಗಿದ್ದೀರಿ ಎಂದು ನಮೋ ವಿರುದ್ಧ ಮಮತಾ ವಾಗ್ದಾಳಿ ನಡೆಸಿದರು. ಮೋದಿ ನೋಡಿದ್ರೆ ನನಗೆ ನಾಚಿಕೆ ಆಗುತ್ತದೆ. ನಾನು ಈ ರೀತಿಯ ಪ್ರಧಾನಿ ನೋಡಿಲ್ಲ. ಎಲ್ಲ ಸಮುದಾಯದವರಿಗಾಗಿ ನಾನು ಕೆಲಸ ಮಾಡ್ತಿದ್ದೇನೆ. ಇದೀಗ ಬಿಜೆಪಿ ಹಟಾವೋ ದೇಶ ಬಚಾವೋ ಎಂಬ ವಾಕ್ಯ ಮಾತ್ರ ಉಳಿದುಕೊಂಡಿದೆ ಎಂದರು.

ಇದನ್ನೂ ಓದಿ: ಬಂಗಾಳದ ಜನ ಕೇಳಿದ್ರೆ ರಾಜೀನಾಮೆ ನೀಡುವೆ - ನೀವು ಮೇ. 2ಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿ: ದೀದಿ ವಿರುದ್ಧ ಶಾ ವಾಗ್ದಾಳಿ

ಕೇಂದ್ರ ರೈಲ್ವೆ ಇಲಾಖೆ, ಬಿಎಸ್​​​ಎನ್​ಎಲ್​, ಬ್ಯಾಂಕ್​​ ಎಲ್ಲವನ್ನೂ ಮಾರಿದೆ. ಇದೀಗ ಅಲ್ಲಿ ಕೆಲಸ ಮಾಡುವವರನ್ನ ತೆಗೆದುಹಾಕಲು ಯೋಜನೆ ರೂಪಿಸಲಾಗುತ್ತಿದೆ ಎಂಬ ಮಾಹಿತಿ ಸಹ ಇದೆ. ಇದು ಉತ್ತರ ರಾಜಕೀಯ ಅಲ್ಲ ಎಂದು ಮಮತಾ ಹೇಳಿದ್ರು.

ಚು. ಆಯೋಗಕ್ಕೆ ಪತ್ರ ಬರೆದ ಟಿಎಂಸಿ

4ನೇ ಹಂತದ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಕೊಚ್​ ಬೆಹಾರ್​ದಲ್ಲಿ ನಾಲ್ವರು ಮೃತರಾಗಿದ್ದು, ಘಟನೆ ನಂತರ ಬಿಜೆಪಿ ದಿಲೀಪ್​ ಘೋಷ್​ ಸಿಟಾಲಿಕುಚಿಯಲ್ಲಿ ಇಂತಹ ಘಟನೆ ಸಂಭವಿಸಬಹುದು ಎಂದು ಹೇಳಿದ್ದಾರೆ. ಇದೀಗ ಅವರ ಚುನಾವಣಾ ಪ್ರಚಾರ ನಿಷೇಧಿಸುವಂತೆ ಒತ್ತಾಯಿಸಿ, ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ ಬರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.