ETV Bharat / bharat

ಸಿಎಂ ಆಗಲು ನಾನು ಇನ್ನೂ ಹಕ್ಕು ಮಂಡಿಸಿಲ್ಲ, ನಿರ್ಧಾರ ಎನ್​ಡಿಎಗೆ ಬಿಟ್ಟಿದ್ದು: ನಿತೀಶ್ ಕುಮಾರ್

ನಾನು ಸಿಎಂ ಆಗಲು ಯಾವುದೇ ಹಕ್ಕು ಮಂಡಿಸಿಲ್ಲ. ಈ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳುತ್ತದೆ. ದೀಪಾವಳಿ ಅಥವಾ ಛತ್ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಿಲ್ಲ. ಈ ಚುನಾವಣೆಯ ಫಲಿತಾಂಶವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಎಲ್ಲಾ ನಾಲ್ಕು ಪಕ್ಷಗಳ ಸದಸ್ಯರನ್ನು ನಾಳೆ ಭೇಟಿಯಾಗಲಿದ್ದೇವೆ ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.

author img

By

Published : Nov 12, 2020, 9:24 PM IST

Nitish Kumar
ನಿತೀಶ್ ಕುಮಾರ್

ಪಾಟ್ನಾ: ನವೆಂಬರ್ 16ರಂದು ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಜೆಡಿಯು ನಾಯಕ ನಿತೀಶ್​ ಕುಮಾರ್​, ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಯಾವುದೇ ಹಕ್ಕು ಮಂಡಿಸಿಲ್ಲ. ಆ ನಿರ್ಧಾರವನ್ನು ಎನ್​ಡಿಎ ತೆಗೆದುಕೊಳ್ಳುತ್ತದೆ. ನಾಳೆ (ಶುಕ್ರವಾರ) ಎನ್​ಡಿಎ ಒಕ್ಕೂಟದ ಎಲ್ಲಾ ನಾಲ್ಕು ಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.

ನಾನು ಸಿಎಂ ಆಗಲು ಯಾವುದೇ ಹಕ್ಕು ಮಂಡಿಸಿಲ್ಲ. ಈ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳುತ್ತದೆ. ದೀಪಾವಳಿ ಅಥವಾ ಛತ್ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಿಲ್ಲ. ಈ ಚುನಾವಣೆಯ ಫಲಿತಾಂಶವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಎಲ್ಲಾ ನಾಲ್ಕು ಪಕ್ಷಗಳ ಸದಸ್ಯರನ್ನು ನಾಳೆ ಭೇಟಿಯಾಗಲಿದ್ದೇವೆ ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.

ಆರ್​ಜೆಡಿ ನಾಯಕ ತೇಜಶ್ವಿ ಯಾದವ್ ಕೂಡ ನಿತೀಶ್ ಅವರ ಮೇಲೆ ವಾಗ್ದಾಳಿ ನಡೆಸಿ, ಜೆಡಿಯು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಆರ್​ಜೆಡಿ ಮತ್ತು ಬಿಜೆಪಿಯ ಹಿಂದಿದೆ. ಅವರಿಗೆ ಆತ್ಮಸಾಕ್ಷಿಯಿದ್ದರೆ, ನಿತೀಶ್ ಅವರು ಬೇರೆಯವರಿಗೆ ಕುರ್ಚಿ ಬಿಟ್ಟುಕೊಡಬೇಕು ಎಂದಿದ್ದಾರೆ.

ಪಾಟ್ನಾ: ನವೆಂಬರ್ 16ರಂದು ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಜೆಡಿಯು ನಾಯಕ ನಿತೀಶ್​ ಕುಮಾರ್​, ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಯಾವುದೇ ಹಕ್ಕು ಮಂಡಿಸಿಲ್ಲ. ಆ ನಿರ್ಧಾರವನ್ನು ಎನ್​ಡಿಎ ತೆಗೆದುಕೊಳ್ಳುತ್ತದೆ. ನಾಳೆ (ಶುಕ್ರವಾರ) ಎನ್​ಡಿಎ ಒಕ್ಕೂಟದ ಎಲ್ಲಾ ನಾಲ್ಕು ಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.

ನಾನು ಸಿಎಂ ಆಗಲು ಯಾವುದೇ ಹಕ್ಕು ಮಂಡಿಸಿಲ್ಲ. ಈ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳುತ್ತದೆ. ದೀಪಾವಳಿ ಅಥವಾ ಛತ್ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಿಲ್ಲ. ಈ ಚುನಾವಣೆಯ ಫಲಿತಾಂಶವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಎಲ್ಲಾ ನಾಲ್ಕು ಪಕ್ಷಗಳ ಸದಸ್ಯರನ್ನು ನಾಳೆ ಭೇಟಿಯಾಗಲಿದ್ದೇವೆ ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.

ಆರ್​ಜೆಡಿ ನಾಯಕ ತೇಜಶ್ವಿ ಯಾದವ್ ಕೂಡ ನಿತೀಶ್ ಅವರ ಮೇಲೆ ವಾಗ್ದಾಳಿ ನಡೆಸಿ, ಜೆಡಿಯು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಆರ್​ಜೆಡಿ ಮತ್ತು ಬಿಜೆಪಿಯ ಹಿಂದಿದೆ. ಅವರಿಗೆ ಆತ್ಮಸಾಕ್ಷಿಯಿದ್ದರೆ, ನಿತೀಶ್ ಅವರು ಬೇರೆಯವರಿಗೆ ಕುರ್ಚಿ ಬಿಟ್ಟುಕೊಡಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.