ETV Bharat / bharat

ಜೈಲಿನಲ್ಲಿದ್ದುಕೊಂಡೇ IIT-JAM ಪರೀಕ್ಷೆ ಪಾಸ್​!: ಅಚ್ಚರಿ ಮೂಡಿಸಿದ ವಿಚಾರಣಾಧೀನ ಕೈದಿ - ಜೈಲಿನಲ್ಲಿದ್ದುಕೊಂಡು ಐಐಟಿ ಪರೀಕ್ಷೆ ಪಾಸ್​

ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಯುವಕನೋರ್ವ ಕಬ್ಬಿಣದ ಕಡಲೆ ಎಂದೇ ಪರಿಗಣಿಸುವ ಐಐಟಿ-ಜೆಎಎಂ ಪರೀಕ್ಷೆ ತೇರ್ಗಡೆ ಹೊಂದಿ ಹುಬ್ಬೇರಿಸಿದ್ದಾನೆ.

Kaushlendra Kumar IIT
Kaushlendra Kumar IIT
author img

By

Published : Mar 24, 2022, 7:38 PM IST

ನವಾದಾ(ಬಿಹಾರ): ವಾಸಯೋಗ್ಯ ಮನೆ, ಕಾಲೇಜಿ​ಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಬೇತಿ ಪಡೆದರೂ ಐಐಟಿ-ಜೆಎಎಂನಂತಹ ಕಠಿಣ ಪರೀಕ್ಷೆ ಪಾಸ್ ಮಾಡಲು ಅನೇಕ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ. ಆದರೆ, ಬಿಹಾರದ ಯುವಕನೊಬ್ಬ ಜೈಲಿನಲ್ಲಿ ಇದ್ದುಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಅಚ್ಚರಿ ಮೂಡಿಸಿದ್ದಾನೆ.

ಬಿಹಾರದ ನವಾದಾನಲ್ಲಿರುವ ವಿಚಾರಣಾಧೀನ ಕೈದಿ ಕೌಶಲೇಂದ್ರ ಕುಮಾರ್​​ ಈ ಸಾಧನೆ ಮಾಡಿದವನು. ಈತ ಜೈಲಿನಲ್ಲಿದ್ದುಕೊಂಡು ಐಐಟಿ-ಜೆಎಎಂ ಪರೀಕ್ಷೆ ಪಾಸ್ ಮಾಡುವುದರ ಜೊತೆಗೆ ದೇಶಕ್ಕೆ 54ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 22 ವರ್ಷದ ಕೌಶಲೇಂದ್ರ ಕುಮಾರ್​ ಅಲಿಯಾಸ್ ಸೂರಜ್​​ ಅಪರಾಧ ಕೃತ್ಯವೊಂದರಲ್ಲಿ ಸಿಲುಕಿ ಜೈಲಿನಲ್ಲಿದ್ದು, ವಿಚಾರಣಾಧೀನ ಕೈದಿಯಾಗಿದ್ದಾನೆ.

Kaushlendra Kumar IIT
ನವಾದಾ ಜೈಲು

ಇದನ್ನೂ ಓದಿ: 'ದೇವಭೂಮಿ'​ಗೆ ಮೊದಲ ಮಹಿಳಾ ಸ್ಪೀಕರ್​​.. ರಿತು ಖಂಡೂರಿಗೆ ಬಿಜೆಪಿ ಹೈಕಮಾಂಡ್ ಮಣೆ!

ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಕಳೆದ 11 ತಿಂಗಳಿಂದಲೂ ಕೌಶಲೇಂದ್ರ ಕುಮಾರ್ ಜೈಲಿನಲ್ಲಿದ್ದಾನೆ. 2021ರ ಏಪ್ರಿಲ್ ತಿಂಗಳಲ್ಲಿ 45 ವರ್ಷದ ಸಂಜಯ್​ ಯಾದವ್ ಮೇಲೆ ಹಲ್ಲೆ ನಡೆದಿತ್ತು. ಪರಿಣಾಮ ಆತ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಶಲೇಂದ್ರ ಕುಮಾರ್​​ ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಹೀಗಾಗಿ, ಈತನನ್ನು ಜೈಲಿನಲ್ಲಿಡಲಾಗಿದೆ.

ಇತ್ತೀಚೆಗಷ್ಟೇ ಐಐಟಿ ಫಲಿತಾಂಶ ಪ್ರಕಟಗೊಂಡಿದ್ದು, ಸೂರಜ್​ 54ನೇ ಸ್ಥಾನ ಪಡೆದುಕೊಂಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಕಠಿಣ ಅಧ್ಯಯನ ನಡೆಸಿ, ಈ ಸಾಧನೆ ಮಾಡಿದ್ದು ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ. ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಆತ, 'ನನಗೆ ವಿಜ್ಞಾನಿ ಆಗಬೇಕು ಎಂಬ ಕನಸಿದೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದೇನೆ. ನನ್ನ ಯಶಸ್ಸು ಮಾಜಿ ಜೈಲು ಅಧೀಕ್ಷಕ ಅಭಿಷೇಕ್ ಕುಮಾರ್ ಪಾಂಡೆ ಅವರಿಗೆ ಸಲ್ಲಬೇಕು' ಎಂದಿದ್ದಾನೆ.

ನವಾದಾ(ಬಿಹಾರ): ವಾಸಯೋಗ್ಯ ಮನೆ, ಕಾಲೇಜಿ​ಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಬೇತಿ ಪಡೆದರೂ ಐಐಟಿ-ಜೆಎಎಂನಂತಹ ಕಠಿಣ ಪರೀಕ್ಷೆ ಪಾಸ್ ಮಾಡಲು ಅನೇಕ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ. ಆದರೆ, ಬಿಹಾರದ ಯುವಕನೊಬ್ಬ ಜೈಲಿನಲ್ಲಿ ಇದ್ದುಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಅಚ್ಚರಿ ಮೂಡಿಸಿದ್ದಾನೆ.

ಬಿಹಾರದ ನವಾದಾನಲ್ಲಿರುವ ವಿಚಾರಣಾಧೀನ ಕೈದಿ ಕೌಶಲೇಂದ್ರ ಕುಮಾರ್​​ ಈ ಸಾಧನೆ ಮಾಡಿದವನು. ಈತ ಜೈಲಿನಲ್ಲಿದ್ದುಕೊಂಡು ಐಐಟಿ-ಜೆಎಎಂ ಪರೀಕ್ಷೆ ಪಾಸ್ ಮಾಡುವುದರ ಜೊತೆಗೆ ದೇಶಕ್ಕೆ 54ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 22 ವರ್ಷದ ಕೌಶಲೇಂದ್ರ ಕುಮಾರ್​ ಅಲಿಯಾಸ್ ಸೂರಜ್​​ ಅಪರಾಧ ಕೃತ್ಯವೊಂದರಲ್ಲಿ ಸಿಲುಕಿ ಜೈಲಿನಲ್ಲಿದ್ದು, ವಿಚಾರಣಾಧೀನ ಕೈದಿಯಾಗಿದ್ದಾನೆ.

Kaushlendra Kumar IIT
ನವಾದಾ ಜೈಲು

ಇದನ್ನೂ ಓದಿ: 'ದೇವಭೂಮಿ'​ಗೆ ಮೊದಲ ಮಹಿಳಾ ಸ್ಪೀಕರ್​​.. ರಿತು ಖಂಡೂರಿಗೆ ಬಿಜೆಪಿ ಹೈಕಮಾಂಡ್ ಮಣೆ!

ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಕಳೆದ 11 ತಿಂಗಳಿಂದಲೂ ಕೌಶಲೇಂದ್ರ ಕುಮಾರ್ ಜೈಲಿನಲ್ಲಿದ್ದಾನೆ. 2021ರ ಏಪ್ರಿಲ್ ತಿಂಗಳಲ್ಲಿ 45 ವರ್ಷದ ಸಂಜಯ್​ ಯಾದವ್ ಮೇಲೆ ಹಲ್ಲೆ ನಡೆದಿತ್ತು. ಪರಿಣಾಮ ಆತ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಶಲೇಂದ್ರ ಕುಮಾರ್​​ ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಹೀಗಾಗಿ, ಈತನನ್ನು ಜೈಲಿನಲ್ಲಿಡಲಾಗಿದೆ.

ಇತ್ತೀಚೆಗಷ್ಟೇ ಐಐಟಿ ಫಲಿತಾಂಶ ಪ್ರಕಟಗೊಂಡಿದ್ದು, ಸೂರಜ್​ 54ನೇ ಸ್ಥಾನ ಪಡೆದುಕೊಂಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಕಠಿಣ ಅಧ್ಯಯನ ನಡೆಸಿ, ಈ ಸಾಧನೆ ಮಾಡಿದ್ದು ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ. ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಆತ, 'ನನಗೆ ವಿಜ್ಞಾನಿ ಆಗಬೇಕು ಎಂಬ ಕನಸಿದೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದೇನೆ. ನನ್ನ ಯಶಸ್ಸು ಮಾಜಿ ಜೈಲು ಅಧೀಕ್ಷಕ ಅಭಿಷೇಕ್ ಕುಮಾರ್ ಪಾಂಡೆ ಅವರಿಗೆ ಸಲ್ಲಬೇಕು' ಎಂದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.