ETV Bharat / bharat

ಸ್ವಾತಂತ್ರ್ಯ ದಿನದಂದು ದಾಳಿಗೆ ಸಂಚು: ನಾಲ್ವರು ಭಯೋತ್ಪಾದಕರ ಬಂಧಿಸಿದ ಕಾಶ್ಮೀರ ಪೊಲೀಸರು

ಸ್ವಾತಂತ್ರ್ಯೋತ್ಸವ ದಿನ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ ನಾಲ್ವರು ಉಗ್ರರನ್ನು ಬಂಧನ ಮಾಡುವಲ್ಲಿ ಜಮ್ಮು - ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.

author img

By

Published : Aug 14, 2021, 3:56 PM IST

Four militants arrested in Jammu
Four militants arrested in Jammu

ಶ್ರೀನಗರ(ಜಮ್ಮು-ಕಾಶ್ಮೀರ): ನಾಳೆ ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುವುದು. ಇದರ ಬೆನ್ನಲ್ಲೇ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಜೈಷ್ - ಇ - ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಭಯೋತ್ಪಾದಕರ ಬಂಧನ ಮಾಡಲಾಗಿದೆ. ಜಮ್ಮು - ಕಾಶ್ಮೀರದ ಪೊಲೀಸರು ಇವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಶ್ಮೀರದ ವಿವಿಧ ಅಡಗುತಾಣಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಉಗ್ರರ ಬಂಧನ ಮಾಡಿದ್ದು, ಈ ಮೂಲಕ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ತಪ್ಪಿಸಿದ್ದಾರೆ. ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ ಇವರೆಲ್ಲರೂ ಸ್ವಾತಂತ್ರ್ಯ ದಿನದಂದು ದೊಡ್ಡ ಪ್ರಮಾಣದ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿರಿ: ಸ್ವಾತಂತ್ರ್ಯೋತ್ಸವ: ಶೌರ್ಯ ಮೆರೆದ ಯೋಧರಿಗೆ ಅಶೋಕ್​, ಕೀರ್ತಿ, ಶೌರ್ಯ ಚಕ್ರ ಘೋಷಣೆ

ಬಂಧಿತರನ್ನ ಪುಲ್ವಾಮಾ ನಿವಾಸಿ ಮಂಜೂರ್​ ಅಹ್ಮದ್ ಭಟ್​ ಅವರ ಪುತ್ರ ಮುಂಟಾಜೀರ್​ ಮಂಜೂರ್​, ಇರ್ಹಾನ್​ ಖಾನ್​, ಮೊಹಲ್ಲಾ ಶಾಮ್ಲಿ, ಅಹ್ಮದ್​​ ಶಾ ಬಂಧಿತ ಭಯೋತ್ಪಾದಕರಾಗಿದ್ದಾರೆ. ಇವರಿಂದ ಪಿಸ್ತೂಲ್​, ಜೀವಂತ​ ಗುಂಡು ಹಾಗೂ ಕೆಲವೊಂದು ಗ್ರೆನೇಡ್​ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಸಾಗಿಸಲು ಬಳಸುತ್ತಿದ್ದ ಟ್ರಕ್​ ಕೂಡ ವಶಪಡಿಸಿಕೊಳ್ಳಲಾಗಿದೆ.

ಜಮ್ಮು - ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ನಾಳೆ ದೊಡ್ಡ ಪ್ರಮಾಣದ ಸ್ಫೋಟ ಮಾಡಲು ಇವರು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಜೈಷ್​ - ಇ - ಮೊಹಮ್ಮದ್​​ ಉಗ್ರ ಸಂಘಟನೆಗೆ ಸೇರಿದವರು ಎಂದು ತಿಳಿದು ಬಂದಿದೆ.

ಶ್ರೀನಗರ(ಜಮ್ಮು-ಕಾಶ್ಮೀರ): ನಾಳೆ ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುವುದು. ಇದರ ಬೆನ್ನಲ್ಲೇ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಜೈಷ್ - ಇ - ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಭಯೋತ್ಪಾದಕರ ಬಂಧನ ಮಾಡಲಾಗಿದೆ. ಜಮ್ಮು - ಕಾಶ್ಮೀರದ ಪೊಲೀಸರು ಇವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಶ್ಮೀರದ ವಿವಿಧ ಅಡಗುತಾಣಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಉಗ್ರರ ಬಂಧನ ಮಾಡಿದ್ದು, ಈ ಮೂಲಕ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ತಪ್ಪಿಸಿದ್ದಾರೆ. ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ ಇವರೆಲ್ಲರೂ ಸ್ವಾತಂತ್ರ್ಯ ದಿನದಂದು ದೊಡ್ಡ ಪ್ರಮಾಣದ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿರಿ: ಸ್ವಾತಂತ್ರ್ಯೋತ್ಸವ: ಶೌರ್ಯ ಮೆರೆದ ಯೋಧರಿಗೆ ಅಶೋಕ್​, ಕೀರ್ತಿ, ಶೌರ್ಯ ಚಕ್ರ ಘೋಷಣೆ

ಬಂಧಿತರನ್ನ ಪುಲ್ವಾಮಾ ನಿವಾಸಿ ಮಂಜೂರ್​ ಅಹ್ಮದ್ ಭಟ್​ ಅವರ ಪುತ್ರ ಮುಂಟಾಜೀರ್​ ಮಂಜೂರ್​, ಇರ್ಹಾನ್​ ಖಾನ್​, ಮೊಹಲ್ಲಾ ಶಾಮ್ಲಿ, ಅಹ್ಮದ್​​ ಶಾ ಬಂಧಿತ ಭಯೋತ್ಪಾದಕರಾಗಿದ್ದಾರೆ. ಇವರಿಂದ ಪಿಸ್ತೂಲ್​, ಜೀವಂತ​ ಗುಂಡು ಹಾಗೂ ಕೆಲವೊಂದು ಗ್ರೆನೇಡ್​ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಸಾಗಿಸಲು ಬಳಸುತ್ತಿದ್ದ ಟ್ರಕ್​ ಕೂಡ ವಶಪಡಿಸಿಕೊಳ್ಳಲಾಗಿದೆ.

ಜಮ್ಮು - ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ನಾಳೆ ದೊಡ್ಡ ಪ್ರಮಾಣದ ಸ್ಫೋಟ ಮಾಡಲು ಇವರು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಜೈಷ್​ - ಇ - ಮೊಹಮ್ಮದ್​​ ಉಗ್ರ ಸಂಘಟನೆಗೆ ಸೇರಿದವರು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.