ETV Bharat / bharat

ಬಿಜೆಪಿ ಎಂಎಲ್​​ಎ ನಿವಾಸಕ್ಕೆ ರೈತರ ಮುತ್ತಿಗೆ: ಪ್ರತಿಭಟನೆ

author img

By

Published : Mar 12, 2021, 7:28 AM IST

ವಿಧಾನಸಭಾ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಕುರಿತಂತೆ ಬಿಜೆಪಿ ಎಂಎಲ್​ಎ ಅಸೀಮ್​ ಗೋಯಲ್​​ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇವರ ಹೇಳಿಕೆಯನ್ನು ಖಂಡಿಸಿ ಅನ್ನದಾತರು ಗೋಯಲ್ ನಿವಾಸಕ್ಕೆ ಮುತ್ತಿಗೆ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿ ಎಂಎಲ್​​ಎ ನಿವಾಸಕ್ಕೆ ರೈತರ ಮುತ್ತಿಗೆ
Farmers In Haryana Protest Outside BJP MLA's Residence

ಅಂಬಾಲಾ( ಹರಿಯಾಣ): ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಕುರಿತು ನೀಡಿದ್ದ ಹೇಳಿಕೆ ಖಂಡಿಸಿ ಅನ್ನದಾತರು ಬಿಜೆಪಿ ಎಂಎಲ್​ಎ ಅಸೀಮ್​ ಗೋಯಲ್​​ ನಿವಾಸಕ್ಕೆ ಮುತ್ತಿಗೆ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಧಾನಸಭೆಯಲ್ಲಿ ಅಸೀಮ್​ ಗೋಯಲ್​, ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಗೋಯಲ್​ ಹೇಳಿಕೆ ಖಂಡಿಸಿರುವ ರೈತರ ಗುಂಪು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಅವರ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.

Farmers In Haryana Protest Outside BJP MLA's Residence
ಗೋಯಲ್​​ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು

ಈ ನಡುವೆ ಮನೋಹರ್​ ಲಾಲ್​ ಖಟ್ಟರ್​ ಸರ್ಕಾರದ ವಿರುದ್ಧ ಕಾಂಗ್ರೆಸ್​​​ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಮಂಡನೆಗೆ ಸೋಲುಂಟಾಗಿದೆ. ಅವಿಶ್ವಾಸ ಮಂಡನೆ ಮಾಡಿ ಮಾತನಾಡಿದ ಮಾಜಿ ಸಿಎಂ ಭೂಪಿಂದರ್ ಸಿಂಗ್​ ಹೂಡಾ ರೈತರ ಪ್ರತಿಭಟನೆಯಲ್ಲಿ ಸುಮಾರು 250 ಅನ್ನದಾತರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಗೋಯಲ್​ ರೈತರ ಹೋರಾಟದ ವಿರುದ್ಧ ಹೇಳಿಕೆ ನೀಡಿದ್ದರು.

ಓದಿ: ಇಂದು ಉತ್ತರಾಖಂಡ ಸಂಪುಟ​ ವಿಸ್ತರಣೆ ಸಾಧ್ಯತೆ!

ಹೀಗಾಗಿ ರೈತರು ಶಾಸಕರ ನಿವಾಸ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಹೆಚ್ಚಿನ ಪೊಲೀಸ್​ ಪಡೆಯನ್ನು ನಿಯೋಜಿಸಲಾಗಿದೆ.

ಅಂಬಾಲಾ( ಹರಿಯಾಣ): ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಕುರಿತು ನೀಡಿದ್ದ ಹೇಳಿಕೆ ಖಂಡಿಸಿ ಅನ್ನದಾತರು ಬಿಜೆಪಿ ಎಂಎಲ್​ಎ ಅಸೀಮ್​ ಗೋಯಲ್​​ ನಿವಾಸಕ್ಕೆ ಮುತ್ತಿಗೆ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಧಾನಸಭೆಯಲ್ಲಿ ಅಸೀಮ್​ ಗೋಯಲ್​, ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಗೋಯಲ್​ ಹೇಳಿಕೆ ಖಂಡಿಸಿರುವ ರೈತರ ಗುಂಪು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಅವರ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.

Farmers In Haryana Protest Outside BJP MLA's Residence
ಗೋಯಲ್​​ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು

ಈ ನಡುವೆ ಮನೋಹರ್​ ಲಾಲ್​ ಖಟ್ಟರ್​ ಸರ್ಕಾರದ ವಿರುದ್ಧ ಕಾಂಗ್ರೆಸ್​​​ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಮಂಡನೆಗೆ ಸೋಲುಂಟಾಗಿದೆ. ಅವಿಶ್ವಾಸ ಮಂಡನೆ ಮಾಡಿ ಮಾತನಾಡಿದ ಮಾಜಿ ಸಿಎಂ ಭೂಪಿಂದರ್ ಸಿಂಗ್​ ಹೂಡಾ ರೈತರ ಪ್ರತಿಭಟನೆಯಲ್ಲಿ ಸುಮಾರು 250 ಅನ್ನದಾತರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಗೋಯಲ್​ ರೈತರ ಹೋರಾಟದ ವಿರುದ್ಧ ಹೇಳಿಕೆ ನೀಡಿದ್ದರು.

ಓದಿ: ಇಂದು ಉತ್ತರಾಖಂಡ ಸಂಪುಟ​ ವಿಸ್ತರಣೆ ಸಾಧ್ಯತೆ!

ಹೀಗಾಗಿ ರೈತರು ಶಾಸಕರ ನಿವಾಸ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಹೆಚ್ಚಿನ ಪೊಲೀಸ್​ ಪಡೆಯನ್ನು ನಿಯೋಜಿಸಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.