ETV Bharat / bharat

'ದಿ ಕಾಶ್ಮೀರಿ ಫೈಲ್ಸ್'​ ಚಿತ್ರದ ಬಗ್ಗೆ ವಿವಾದಿತ ಪೋಸ್ಟ್: ​​ದೇಗುಲದ ಮುಂದೆ ಮೂಗು ಉಜ್ಜಿಸಿದ ಗ್ರಾಮಸ್ಥರು!

author img

By

Published : Mar 23, 2022, 5:33 PM IST

ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತೆರೆ ಕಂಡಿರುವ ದಿ ಕಾಶ್ಮೀರಿ ಫೈಲ್ಸ್​ ಚಿತ್ರದ ಬಗ್ಗೆ ವಿವಾದಿತ ಕಾಮೆಂಟ್ ಮಾಡಿದ್ದಕ್ಕಾಗಿ ದಲಿತ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಅಮಾನವೀಯ ಶಿಕ್ಷೆ ನೀಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Dalit man in Rajasthan
Dalit man in Rajasthan

ಬೆಹ್ರೋರ್​​(ರಾಜಸ್ಥಾನ): ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುವ ಜೊತೆಗೆ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿರುವ ದಿ ಕಾಶ್ಮೀರಿ ಫೈಲ್ಸ್​​ ಚಿತ್ರದ ಬಗ್ಗೆ ದಲಿತನೋರ್ವ ವಿವಾದಿತ ಪೋಸ್ಟ್​ ಮಾಡಿದ್ದಕ್ಕಾಗಿ ಆತನಿಗೆ ಗ್ರಾಮಸ್ಥರು ಅಮಾನವೀಯ ರೀತಿಯ ಶಿಕ್ಷೆ ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಬೆಹ್ರೋರ್​​​ನ ಗೋಕುಲ್​ಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ದಿ ಕಾಶ್ಮೀರಿ ಫೈಲ್ಸ್​​ ಚಿತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್​ ಮಾಡಿದ್ದಾನೆ. ಇದರ ಬೆನ್ನಲ್ಲೇ ಆತನನ್ನು ಹಿಡಿದು ಕರೆದು ತಂದು ದೇವಸ್ಥಾನದ ಎದುರುಗಡೆ ಗ್ರಾಮಸ್ಥರೆಲ್ಲರೂ ಸೇರಿ ಮೂಗು ಉಜ್ಜಿಸಿದ್ದಾರೆ. ರಾಜಸ್ಥಾನದ ಖಾಸಗಿ ಬ್ಯಾಂಕ್​​ವೊಂದರಲ್ಲಿ ಸೀನಿಯರ್​ ಸೇಲ್ಸ್​ ಮ್ಯಾನೇಜರ್​ ಆಗಿ ರಾಜೇಶ್ ಮೇಘವಾಲ್​ ದಿ ಕಾಶ್ಮೀರಿ ಫೈಲ್ಸ್​​ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರಿಗೆ ಅನ್ಯಾಯ ಮತ್ತು ಚಿತ್ರಹಿಂಸೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ದಲಿತ ಸಮುದಾಯವೂ ತಾರತಮ್ಯ ಎದುರಿಸುತ್ತಿದೆ. ಮೋದಿ ಸರ್ಕಾರ ಜೈಭೀಮ್​, ಶೂದ್ರ ದಿ ರೈಸಿಂಗ್​ ಚಿತ್ರಗಳಿಗೆ ಏಕೆ ತೆರಿಗೆ ವಿನಾಯ್ತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: 'ಹೆಬ್ಬೆಟ್ಟು' ನೀಡುವ ಮುನ್ನ ಎಚ್ಚರ! ವೃದ್ಧೆಯ ಆಸ್ತಿ ಕಬಳಿಸಿದ ಸ್ವಯಂಸೇವಕ

ಇದರ ಜೊತೆಗೆ ಮೀಸೆ ಬಿಟ್ಟಿದ್ದಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ರಾಜಸ್ಥಾನದಲ್ಲಿ ಜಿತೇಂದ್ರ ಮೇಘವಾಲ್​ ಹತ್ಯೆ ಮಾಡಲಾಯಿತು. ಇದು ಅನ್ಯಾಯವಲ್ಲವೇ? ನಾನು ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಜೈ ಶ್ರೀ ರಾಮ್​, ಜೈ ಶ್ರೀ ಕೃಷ್ಣ ಎಂದು ಕಾಮೆಂಟ್ ಮಾಡ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ರಾಜೇಶ್ ಮೇಘವಾಲ್ ಮಾಡಿರುವ ಕಾಮೆಂಟ್​ ವೈರಲ್​ ಆಗುತ್ತಿದ್ದಂತೆ ಆತನ ಹಿಡಿದಿರುವ ಗ್ರಾಮಸ್ಥರು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಬಲವಂತವಾಗಿ ಮೂಗು ಉಜ್ಜಿಸಿ, ಅವಮಾನಿಸಿದ್ದಾರೆ. ಇದರ ಜೊತೆಗೆ ಕೊಲೆ ಬೆದರಿಕೆ ಸಹ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲು: ತನ್ನ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ರಾಜೇಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಶುನಿ ಲಾಲ್​​ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಬೆಹ್ರೋರ್​​(ರಾಜಸ್ಥಾನ): ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುವ ಜೊತೆಗೆ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿರುವ ದಿ ಕಾಶ್ಮೀರಿ ಫೈಲ್ಸ್​​ ಚಿತ್ರದ ಬಗ್ಗೆ ದಲಿತನೋರ್ವ ವಿವಾದಿತ ಪೋಸ್ಟ್​ ಮಾಡಿದ್ದಕ್ಕಾಗಿ ಆತನಿಗೆ ಗ್ರಾಮಸ್ಥರು ಅಮಾನವೀಯ ರೀತಿಯ ಶಿಕ್ಷೆ ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಬೆಹ್ರೋರ್​​​ನ ಗೋಕುಲ್​ಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ದಿ ಕಾಶ್ಮೀರಿ ಫೈಲ್ಸ್​​ ಚಿತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್​ ಮಾಡಿದ್ದಾನೆ. ಇದರ ಬೆನ್ನಲ್ಲೇ ಆತನನ್ನು ಹಿಡಿದು ಕರೆದು ತಂದು ದೇವಸ್ಥಾನದ ಎದುರುಗಡೆ ಗ್ರಾಮಸ್ಥರೆಲ್ಲರೂ ಸೇರಿ ಮೂಗು ಉಜ್ಜಿಸಿದ್ದಾರೆ. ರಾಜಸ್ಥಾನದ ಖಾಸಗಿ ಬ್ಯಾಂಕ್​​ವೊಂದರಲ್ಲಿ ಸೀನಿಯರ್​ ಸೇಲ್ಸ್​ ಮ್ಯಾನೇಜರ್​ ಆಗಿ ರಾಜೇಶ್ ಮೇಘವಾಲ್​ ದಿ ಕಾಶ್ಮೀರಿ ಫೈಲ್ಸ್​​ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರಿಗೆ ಅನ್ಯಾಯ ಮತ್ತು ಚಿತ್ರಹಿಂಸೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ದಲಿತ ಸಮುದಾಯವೂ ತಾರತಮ್ಯ ಎದುರಿಸುತ್ತಿದೆ. ಮೋದಿ ಸರ್ಕಾರ ಜೈಭೀಮ್​, ಶೂದ್ರ ದಿ ರೈಸಿಂಗ್​ ಚಿತ್ರಗಳಿಗೆ ಏಕೆ ತೆರಿಗೆ ವಿನಾಯ್ತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: 'ಹೆಬ್ಬೆಟ್ಟು' ನೀಡುವ ಮುನ್ನ ಎಚ್ಚರ! ವೃದ್ಧೆಯ ಆಸ್ತಿ ಕಬಳಿಸಿದ ಸ್ವಯಂಸೇವಕ

ಇದರ ಜೊತೆಗೆ ಮೀಸೆ ಬಿಟ್ಟಿದ್ದಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ರಾಜಸ್ಥಾನದಲ್ಲಿ ಜಿತೇಂದ್ರ ಮೇಘವಾಲ್​ ಹತ್ಯೆ ಮಾಡಲಾಯಿತು. ಇದು ಅನ್ಯಾಯವಲ್ಲವೇ? ನಾನು ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಜೈ ಶ್ರೀ ರಾಮ್​, ಜೈ ಶ್ರೀ ಕೃಷ್ಣ ಎಂದು ಕಾಮೆಂಟ್ ಮಾಡ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ರಾಜೇಶ್ ಮೇಘವಾಲ್ ಮಾಡಿರುವ ಕಾಮೆಂಟ್​ ವೈರಲ್​ ಆಗುತ್ತಿದ್ದಂತೆ ಆತನ ಹಿಡಿದಿರುವ ಗ್ರಾಮಸ್ಥರು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಬಲವಂತವಾಗಿ ಮೂಗು ಉಜ್ಜಿಸಿ, ಅವಮಾನಿಸಿದ್ದಾರೆ. ಇದರ ಜೊತೆಗೆ ಕೊಲೆ ಬೆದರಿಕೆ ಸಹ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲು: ತನ್ನ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ರಾಜೇಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಶುನಿ ಲಾಲ್​​ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.