ETV Bharat / bharat

ಪ್ರಾಧಿಕಾರ ಕಣ್ಣುಮುಚ್ಚಿ ನೀರು ಬಿಡುಗಡೆಗೆ ನಿರ್ದೇಶನ ನೀಡಲ್ಲ: ತಮಿಳುನಾಡು ಸಚಿವ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದ ನೀರಿನ ಪ್ರಮಾಣ ನಮಗೆ ಸಾಕಾಗುವುದಿಲ್ಲ ಎಂದು ತಮಿಳುನಾಡು ರಾಜ್ಯ ಸಚಿವ ದುರೈಮುರುಗನ್ ಹೇಳಿದ್ದಾರೆ.

author img

By ETV Bharat Karnataka Team

Published : Sep 19, 2023, 11:56 AM IST

CWMA wont blindly direct water release  TN minister Durai Murugan  Durai Murugan on authority order  Cauvery Water Management Authority  CWMA ಕಣ್ಣುಮುಚ್ಚಿ ನೀರು ಬಿಡುಗಡೆಗೆ ನಿರ್ದೇಶನ ನೀಡಲ್ಲ  ಪ್ರಾಧಿಕಾರದ ಆದೇಶ ಬಗ್ಗೆ ತಮಿಳುನಾಡು ಸಚಿವ ಹೇಳಿದ್ದು  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ  ತಮಿಳುನಾಡು ರಾಜ್ಯ ಸಚಿವ ದುರೈಮುರುಗನ್ ಬೇಸರ  15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು  ಪ್ರಾಧಿಕಾರ ಆದೇಶಿಸಿದ ನೀರಿನ ಪ್ರಮಾಣ  ತಮಿಳುನಾಡು ಜಲಸಂಪನ್ಮೂಲ ಇಲಾಖೆ ಸಚಿವ
ಪ್ರಾಧಿಕಾರದ ಆದೇಶ ಬಗ್ಗೆ ತಮಿಳುನಾಡು ಸಚಿವ ಹೇಳಿದ್ದು ಹೀಗೆ

ನವದೆಹಲಿ: ಕಾವೇರಿ ನದಿಯಿಂದ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ನಿರ್ದೇಶನ ನೀಡಿದೆ. ಇಂತಹ ಆದೇಶಗಳನ್ನು ಪ್ರಾಧಿಕಾರ ಕಣ್ಣುಮುಚ್ಚಿ ಹೊರಡಿಸುವುದಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ತಿಳಿಸಿದರು.

ಪ್ರಾಧಿಕಾರ ಆದೇಶಿಸಿದ ನೀರಿನ ಪ್ರಮಾಣ ನಮಗೆ ಸಾಕಾಗದು ಎಂದ ಸಚಿವ, ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ, ಬಹುಶಃ ಅಕ್ಟೋಬರ್ ಅಂತ್ಯದ ಸುಮಾರಿಗೆ ಇದು ಸ್ವಲ್ಪ ಮಟ್ಟಿಗೆ ಸಹಾಯವಾಗಲಿದೆ ಎಂದರು.

ಸೋಮವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ನಮ್ಮ ನೇತೃತ್ವದ ರಾಜ್ಯದ ಸಂಸದರ ನಿಯೋಗವು ಅಂತರರಾಜ್ಯ ನದಿ ವಿವಾದದ ಕುರಿತು ಮಂಗಳವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.

ತಮಿಳುನಾಡಿನ 12,500 ಕ್ಯೂಸೆಕ್‌ಗಳ ಬೇಡಿಕೆಗೆ ವಿರುದ್ಧವಾಗಿ ಕರ್ನಾಟಕಕ್ಕೆ 5,000 ಕ್ಯೂಸೆಕ್ (ಸೆಕೆಂಡಿಗೆ ಘನ ಅಡಿ) ಬಿಡುಗಡೆ ಮಾಡಲು CWMA ನಿರ್ದೇಶನ ನೀಡಿದೆ. ಪ್ರಾಧಿಕಾರ ಅನುಮತಿಸಿದ ನೀರು ಸಾಕಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣ ಮಂಡಳಿಯಾಗಲಿ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವಾಗಲಿ ಕಣ್ಮುಚ್ಚಿ ಇಂಥ ಆದೇಶ ನೀಡುವುದಿಲ್ಲ. ಅಲ್ಲಿನ ಅಣೆಕಟ್ಟುಗಳಲ್ಲಿನ ನೀರಿನ ಲಭ್ಯತೆ ಮತ್ತು ಅವುಗಳ ಮೇಲೆ ಪರಿಣಾಮ ಬೀರದಂತೆ (ಕರ್ನಾಟಕ) ಎಷ್ಟು ನೀರು ಬಿಡುಗಡೆ ಮಾಡಬಹುದು ಎಂಬುದನ್ನು ಆಧರಿಸಿ ಅವರು (ಕ್ವಾಂಟಮ್) ಲೆಕ್ಕಾಚಾರ ಮಾಡುತ್ತಾರೆ ಎಂದು ದುರೈ ಮುರುಗನ್ ಹೇಳಿದರು.

ತಮಿಳುನಾಡು ನಿಯೋಗವು ಮಂಗಳವಾರ ಶೇಖಾವತ್ ಅವರನ್ನು ಭೇಟಿ ಮಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ CWMA ಮತ್ತು CWRC ಅನ್ನು ನೇಮಿಸಲಾಗಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ನೋಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದರು.

ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸುವಂತೆ CWMA ಸೋಮವಾರ ಕರ್ನಾಟಕಕ್ಕೆ ಹೇಳಿದೆ. ಸೋಮವಾರ ನಡೆದ ತುರ್ತು ಸಭೆಯ ನಂತರ ಎರಡೂ ರಾಜ್ಯಗಳು ತಮ್ಮ ಪ್ರಾತಿನಿಧ್ಯಗಳನ್ನು ನೀಡಿದ ನಂತರ ನಿರ್ದೇಶನ ನೀಡಲಾಗಿದೆ. ಸಭೆಯಲ್ಲಿ ಕರ್ನಾಟಕ 3,000 ಕ್ಯೂಸೆಕ್ ಬಿಡುಗಡೆ ಮಾಡಬಹುದೆಂದು ಹೇಳಿದರೆ, ತಮಿಳುನಾಡು 12,500 ಕ್ಯೂಸೆಕ್ ನೀರಿಗಾಗಿ ಬೇಡಿಕೆ ಇಟ್ಟಿತ್ತು.

ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರೀಂ ಕೋರ್ಟ್​​ಗೆ ವಾಸ್ತವಾಂಶ ತಿಳಿಸುತ್ತೇವೆ- ಡಿಸಿಎಂ ಡಿ.ಕೆ.ಶಿವಕುಮಾರ್​

ನವದೆಹಲಿ: ಕಾವೇರಿ ನದಿಯಿಂದ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ನಿರ್ದೇಶನ ನೀಡಿದೆ. ಇಂತಹ ಆದೇಶಗಳನ್ನು ಪ್ರಾಧಿಕಾರ ಕಣ್ಣುಮುಚ್ಚಿ ಹೊರಡಿಸುವುದಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ತಿಳಿಸಿದರು.

ಪ್ರಾಧಿಕಾರ ಆದೇಶಿಸಿದ ನೀರಿನ ಪ್ರಮಾಣ ನಮಗೆ ಸಾಕಾಗದು ಎಂದ ಸಚಿವ, ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ, ಬಹುಶಃ ಅಕ್ಟೋಬರ್ ಅಂತ್ಯದ ಸುಮಾರಿಗೆ ಇದು ಸ್ವಲ್ಪ ಮಟ್ಟಿಗೆ ಸಹಾಯವಾಗಲಿದೆ ಎಂದರು.

ಸೋಮವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ನಮ್ಮ ನೇತೃತ್ವದ ರಾಜ್ಯದ ಸಂಸದರ ನಿಯೋಗವು ಅಂತರರಾಜ್ಯ ನದಿ ವಿವಾದದ ಕುರಿತು ಮಂಗಳವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.

ತಮಿಳುನಾಡಿನ 12,500 ಕ್ಯೂಸೆಕ್‌ಗಳ ಬೇಡಿಕೆಗೆ ವಿರುದ್ಧವಾಗಿ ಕರ್ನಾಟಕಕ್ಕೆ 5,000 ಕ್ಯೂಸೆಕ್ (ಸೆಕೆಂಡಿಗೆ ಘನ ಅಡಿ) ಬಿಡುಗಡೆ ಮಾಡಲು CWMA ನಿರ್ದೇಶನ ನೀಡಿದೆ. ಪ್ರಾಧಿಕಾರ ಅನುಮತಿಸಿದ ನೀರು ಸಾಕಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣ ಮಂಡಳಿಯಾಗಲಿ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವಾಗಲಿ ಕಣ್ಮುಚ್ಚಿ ಇಂಥ ಆದೇಶ ನೀಡುವುದಿಲ್ಲ. ಅಲ್ಲಿನ ಅಣೆಕಟ್ಟುಗಳಲ್ಲಿನ ನೀರಿನ ಲಭ್ಯತೆ ಮತ್ತು ಅವುಗಳ ಮೇಲೆ ಪರಿಣಾಮ ಬೀರದಂತೆ (ಕರ್ನಾಟಕ) ಎಷ್ಟು ನೀರು ಬಿಡುಗಡೆ ಮಾಡಬಹುದು ಎಂಬುದನ್ನು ಆಧರಿಸಿ ಅವರು (ಕ್ವಾಂಟಮ್) ಲೆಕ್ಕಾಚಾರ ಮಾಡುತ್ತಾರೆ ಎಂದು ದುರೈ ಮುರುಗನ್ ಹೇಳಿದರು.

ತಮಿಳುನಾಡು ನಿಯೋಗವು ಮಂಗಳವಾರ ಶೇಖಾವತ್ ಅವರನ್ನು ಭೇಟಿ ಮಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ CWMA ಮತ್ತು CWRC ಅನ್ನು ನೇಮಿಸಲಾಗಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ನೋಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದರು.

ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸುವಂತೆ CWMA ಸೋಮವಾರ ಕರ್ನಾಟಕಕ್ಕೆ ಹೇಳಿದೆ. ಸೋಮವಾರ ನಡೆದ ತುರ್ತು ಸಭೆಯ ನಂತರ ಎರಡೂ ರಾಜ್ಯಗಳು ತಮ್ಮ ಪ್ರಾತಿನಿಧ್ಯಗಳನ್ನು ನೀಡಿದ ನಂತರ ನಿರ್ದೇಶನ ನೀಡಲಾಗಿದೆ. ಸಭೆಯಲ್ಲಿ ಕರ್ನಾಟಕ 3,000 ಕ್ಯೂಸೆಕ್ ಬಿಡುಗಡೆ ಮಾಡಬಹುದೆಂದು ಹೇಳಿದರೆ, ತಮಿಳುನಾಡು 12,500 ಕ್ಯೂಸೆಕ್ ನೀರಿಗಾಗಿ ಬೇಡಿಕೆ ಇಟ್ಟಿತ್ತು.

ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರೀಂ ಕೋರ್ಟ್​​ಗೆ ವಾಸ್ತವಾಂಶ ತಿಳಿಸುತ್ತೇವೆ- ಡಿಸಿಎಂ ಡಿ.ಕೆ.ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.