ETV Bharat / bharat

ಹಿಂದೂ ದೇವತೆಗೆ ಅವಮಾನ ಆರೋಪ: ಟ್ವಿಟರ್ ಇಂಡಿಯಾ ಮತ್ತು ರಿಪಬ್ಲಿಕ್ ಏಥಿಸ್ಟ್ ವಿರುದ್ಧ ದೂರು

author img

By

Published : Jul 4, 2021, 5:12 AM IST

2011ರಿಂದ ಏಥಿಸ್ಟ್ ರಿಪಬ್ಲಿಕ್ ಈ ರೀತಿಯ ನಿಂದನಾತ್ಮಕ ಪೋಸ್ಟ್​ಗಳನ್ನು ಹಾಕುತ್ತಿದೆ. ಈ ಪೋಸ್ಟ್​ಗಳಲ್ಲಿ ಹಿಂದೂ ಧರ್ಮ ಮತ್ತು ಇತರ ಧರ್ಮಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Complaint filed against Twitter India, MD Manish Maheshwari for 'spreading communal hatred'
ಹಿಂದೂ ದೇವತೆಗೆ ಅವಮಾನ ಆರೋಪ: ಟ್ವಿಟರ್ ಇಂಡಿಯಾ ಮತ್ತು ರಿಪಬ್ಲಿಕ್ ಏಥಿಸ್ಟ್ ವಿರುದ್ಧ ದೂರು

ನವದೆಹಲಿ: ಕೋಮು ದ್ವೇಷವನ್ನು ಹರಡುತ್ತಿರುವ ಆರೋಪದ ಮೇಲೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತು ಸರ್ಕಾರೇತರ ಸಂಘಟನೆಯೊಂದರ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್​ನಲ್ಲಿ ದೂರು ದಾಖಲಾಗಿದೆ.

ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ದೆಹಲಿಯ ಸೈಬರ್ ಸೆಲ್​ಗೆ ದೂರು ನೀಡಿದ್ದು ಟ್ವಿಟರ್ ಇಂಡಿಯಾದ ಎಂಡಿ ಮನೀಶ್ ಮಹೇಶ್ವರಿ, ಟ್ವಿಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಮ್ಯಾನೇಜರ್ ಶಗುಫ್ತಾ ಕಮ್ರಾನ್ ಮತ್ತು ರಿಪಬ್ಲಿಕ್ ಏಥಿಸ್ಟ್​ನ ಸ್ಥಾಪಕರಾದ ಅರ್ಮಿನ್ ನವಾಬಿ, ಸಿಇಓ ಆದ ಸುಸನ್ನಾ ಮ್ಯಾಕಿಂಟೈರ್ ವಿರುದ್ಧ ದೂರು ದಾಖಲಿಸಿದ್ದಾರೆ.

ರಿಪಬ್ಲಿಕ್ ಏಥಿಸ್ಟ್​ ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಳಿ ದೇವಿಯ ಚಿತ್ರ ಆಕ್ಷೇಪಾರ್ಹವಾಗಿರುವುದು ಮಾತ್ರವಲ್ಲದೇ, ಸಮಾಜದಲ್ಲಿ ನಿಂದನೀಯ, ಅಸಹನೀಯ, ದ್ವೇಷಮಯ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಈ ರೀತಿಯ ಕೋಮು ಭಾವನೆ ಪ್ರಚೋದಿಸುವ ಸಲುವಾಗಿ ಆಕ್ಷೇಪಾರ್ಹ ಚಿತ್ರವೊಂದನ್ನು ಪೋಸ್ಟ್​ ಮಾಡಲಾಗಿದೆ ಎಂದು ದೂರುದಾರರು ತಾವು ನೀಡಿರುವ ದೂರಿನಲ್ಲಿ ಆಕ್ಷೇಪಿಸಿದ್ದಾರೆ.

2011ರಿಂದ ಏಥಿಸ್ಟ್ ರಿಪಬ್ಲಿಕ್ ಈ ರೀತಿಯ ನಿಂದನಾತ್ಮಕ ಪೋಸ್ಟ್​ಗಳನ್ನು ಹಾಕುತ್ತಿದೆ. ಈ ಪೋಸ್ಟ್​ಗಳಲ್ಲಿ ಹಿಂದೂ ಧರ್ಮ ಮತ್ತು ಇತರ ಧರ್ಮಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಆದರೂ ಟ್ವಿಟರ್ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಭಾರತೀಯ ಕಾನೂನುಗಳನ್ನು ಟ್ವಿಟರ್ ಉಲ್ಲಂಘಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚಾಕುವಿನಿಂದ ಬೆದರಿಸಿ, ಹೆಂಡತಿಗಾಗಿ ಸೀರೆ ಕದ್ದವನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ದಾಖಲು

ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 79ರ ಮತ್ತು 1860ರ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ಆರೋಪಿಸಿದ್ದಾರೆ.

ನವದೆಹಲಿ: ಕೋಮು ದ್ವೇಷವನ್ನು ಹರಡುತ್ತಿರುವ ಆರೋಪದ ಮೇಲೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತು ಸರ್ಕಾರೇತರ ಸಂಘಟನೆಯೊಂದರ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್​ನಲ್ಲಿ ದೂರು ದಾಖಲಾಗಿದೆ.

ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ದೆಹಲಿಯ ಸೈಬರ್ ಸೆಲ್​ಗೆ ದೂರು ನೀಡಿದ್ದು ಟ್ವಿಟರ್ ಇಂಡಿಯಾದ ಎಂಡಿ ಮನೀಶ್ ಮಹೇಶ್ವರಿ, ಟ್ವಿಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಮ್ಯಾನೇಜರ್ ಶಗುಫ್ತಾ ಕಮ್ರಾನ್ ಮತ್ತು ರಿಪಬ್ಲಿಕ್ ಏಥಿಸ್ಟ್​ನ ಸ್ಥಾಪಕರಾದ ಅರ್ಮಿನ್ ನವಾಬಿ, ಸಿಇಓ ಆದ ಸುಸನ್ನಾ ಮ್ಯಾಕಿಂಟೈರ್ ವಿರುದ್ಧ ದೂರು ದಾಖಲಿಸಿದ್ದಾರೆ.

ರಿಪಬ್ಲಿಕ್ ಏಥಿಸ್ಟ್​ ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಳಿ ದೇವಿಯ ಚಿತ್ರ ಆಕ್ಷೇಪಾರ್ಹವಾಗಿರುವುದು ಮಾತ್ರವಲ್ಲದೇ, ಸಮಾಜದಲ್ಲಿ ನಿಂದನೀಯ, ಅಸಹನೀಯ, ದ್ವೇಷಮಯ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಈ ರೀತಿಯ ಕೋಮು ಭಾವನೆ ಪ್ರಚೋದಿಸುವ ಸಲುವಾಗಿ ಆಕ್ಷೇಪಾರ್ಹ ಚಿತ್ರವೊಂದನ್ನು ಪೋಸ್ಟ್​ ಮಾಡಲಾಗಿದೆ ಎಂದು ದೂರುದಾರರು ತಾವು ನೀಡಿರುವ ದೂರಿನಲ್ಲಿ ಆಕ್ಷೇಪಿಸಿದ್ದಾರೆ.

2011ರಿಂದ ಏಥಿಸ್ಟ್ ರಿಪಬ್ಲಿಕ್ ಈ ರೀತಿಯ ನಿಂದನಾತ್ಮಕ ಪೋಸ್ಟ್​ಗಳನ್ನು ಹಾಕುತ್ತಿದೆ. ಈ ಪೋಸ್ಟ್​ಗಳಲ್ಲಿ ಹಿಂದೂ ಧರ್ಮ ಮತ್ತು ಇತರ ಧರ್ಮಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಆದರೂ ಟ್ವಿಟರ್ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಭಾರತೀಯ ಕಾನೂನುಗಳನ್ನು ಟ್ವಿಟರ್ ಉಲ್ಲಂಘಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚಾಕುವಿನಿಂದ ಬೆದರಿಸಿ, ಹೆಂಡತಿಗಾಗಿ ಸೀರೆ ಕದ್ದವನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ದಾಖಲು

ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 79ರ ಮತ್ತು 1860ರ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.