ETV Bharat / bharat

ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕೇ ದಿನದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್​ವೇನಲ್ಲಿ ಗುಂಡಿಗಳ ಹವಾ!

author img

By

Published : Jul 21, 2022, 8:33 PM IST

ಜುಲೈ 16ರಂದು ಪ್ರಧಾನಿ ಮೋದಿ ಉದ್ಘಾಟಿಸಿದ ಉತ್ತರ ಪ್ರದೇಶದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ವೇ ನಾಲ್ಕೇ ದಿನದಲ್ಲಿ ಸುರಿದ ಮೊದಲ ಮಳೆಗೆ ಸಾಕಷ್ಟು ಹಾನಿಯಾಗಿದೆ.

bundelkhand-expressway-damaged-at-many-places
ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕೇ ದಿನದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್​ವೇನಲ್ಲಿ ಬಿದ್ದಿವೆ ಗುಂಡಿಗಳು!

ಜಲೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ನಾಲ್ಕು ದಿನಗಳ ಹಿಂದೆಯಷ್ಟೇ ಉದ್ಘಾಟಿಸಿದ ಬುಂದೇಲ್‌ಖಂಡ್ ಹೆದ್ದಾರಿ ರಸ್ತೆ ಮಳೆಗೆ ಹಾನಿಯಾಗಿದೆ. ಅಲ್ಲದೇ, ಡಾಂಬರು ಕಿತ್ತುಕೊಂಡು ಹೋಗಿ ರಸ್ತೆ ಅಪಘಾತಗಳು ಸಹ ಸಂಭವಿಸಿವೆ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ.

  • आज बुंदेलखंड के लिए ऐतिहासिक दिन है।

    PM श्री @narendramodi जी के कर-कमलों से 296 KM लम्बे एक्सप्रेस-वे का उद्घाटन हो रहा है।

    यह प्रदेश की अर्थव्यवस्था को एक नया आयाम प्रदान करेगा।

    मैं इस अवसर पर बुंदेलखंडवासियों को बधाई देता हूं: #UPCM @myogiadityanath#VikasKaExpressway pic.twitter.com/OEsXXcYc1R

    — CM Office, GoUP (@CMOfficeUP) July 16, 2022 " class="align-text-top noRightClick twitterSection" data=" ">

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್​​ವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕನಸಿನ ಯೋಜನೆಯಾಗಿದೆ. 14,800 ಕೋಟಿ ರೂ. ವೆಚ್ಚದಲ್ಲಿ ಚಿತ್ರಕೂಟದಿಂದ ಇಟಾವಾವರೆಗೆ 296 ಕಿ.ಮೀ. ಉದ್ದದ ಹೆದ್ದಾರಿಯನ್ನು ಜುಲೈ 16ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಇದಾದ ನಾಲ್ಕೇ ದಿನದಲ್ಲಿ ಸುರಿದ ಮೊದಲ ಮಳೆಗೆ ಕೊಚ್ಚಿ ಹೋಗಿದೆ.

ಬುಧವಾರ ಸುರಿದ ಮಳೆಯಿಂದಾಗಿ ಎಕ್ಸ್‌ಪ್ರೆಸ್‌ ವೇಯ ಹಲವೆಡೆ 2ರಿಂದ 3 ಅಡಿ ಆಳದ ಗುಂಡಿಗಳು ಬಿದ್ದಿವೆ. ಹದಗೆಟ್ಟ ರಸ್ತೆಯಿಂದಾಗಿ ಬುಧವಾರ ರಾತ್ರಿಯೇ ಅಪಘಾತಗಳು ಸಂಭವಿಸಿದ್ದು, ಒಂದು ಬೈಕ್​, ನಾಲ್ಕು ವಾಹನಗಳಲ್ಲಿ ಸಂಚರಿಸುತ್ತಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಮೂಲಕ ಹೆದ್ದಾರಿಯ ಗುಣಮಟ್ಟ ಬಯಲಿಗೆ ಬಂದಿದೆ.

ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕೇ ದಿನದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್​ವೇನಲ್ಲಿ ಬಿದ್ದಿವೆ ಗುಂಡಿಗಳು!

ಸರ್ಕಾರದ ವಿರುದ್ಧ ಟೀಕಾಪ್ರಹಾರ: ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ವೇ ಹಾಳಾದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಹಾನಿಗೊಳಗಾದ ಎಕ್ಸ್‌ಪ್ರೆಸ್‌ವೇಯ ವಿಡಿಯೋ ಶೇರ್ ಮಾಡಿರುವ ಅಖಿಲೇಶ್ ಯಾದವ್, 'ಇದು ಬಿಜೆಪಿಯ ಅರೆಬೆಂದ ಅಭಿವೃದ್ಧಿಯ ಗುಣಮಟ್ಟದ ಮಾದರಿಯಾಗಿದೆ' ಎಂದು ವಾಗ್ದಾಳಿ ಮಾಡಿದ್ದಾರೆ.

  • आधे-अधूरे बुंदेलखंड एक्सप्रेस-वे के उद्घाटन की हड़बड़ी बताती है कि इसका डिज़ाइन भी ऐसे ही चलताऊ बना है तभी डिफ़ेंस कॉरिडोर के पास होने के बाद भी यहाँ भाजपा सरकार, सपा काल में बने आगरा-लखनऊ एक्सप्रेस-वे जैसी हवाई पट्टी न बना पाई। इसे चित्रकूट तक विकसित न करना दूरदृष्टि की कमी है। pic.twitter.com/KjhQPcOGoP

    — Akhilesh Yadav (@yadavakhilesh) July 16, 2022 " class="align-text-top noRightClick twitterSection" data=" ">

ಅಲ್ಲದೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ಬಿಜೆಪಿಯ ದೊಡ್ಡವರು ಉದ್ಘಾಟಿಸಿದ್ದರು. ಆದರೆ, ಒಂದೇ ವಾರದಲ್ಲಿ ಭ್ರಷ್ಟಾಚಾರದ ದೊಡ್ಡ ಹೊಂಡಗಳು ಹೊರಬಂದಿವೆ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ದಿನವನ್ನು 'ಐತಿಹಾಸಿಕ' ಎಂದು ಸಿಎಂ ಯೋಗಿ ಬಣ್ಣಿಸಿದ್ದರು. ಈ ಎಕ್ಸ್‌ಪ್ರೆಸ್‌ವೇ ರಾಜ್ಯದ ಆರ್ಥಿಕತೆಗೆ ಹೊಸ ಆಯಾಮವನ್ನು ನೀಡುತ್ತದೆ ಹಾಗೂ ಚಿತ್ರಕೂಟದಿಂದ ದೆಹಲಿಗೆ 3-4 ಗಂಟೆಗಳ ಅಂತರವನ್ನು ಕಡಿಮೆ ಮಾಡಲಾಗಿದೆ ಎಂದು ಯೋಗಿ ಹೇಳಿದ್ದರು.

  • ये है भाजपा के आधे-अधूरे विकास की गुणवत्ता का नमूना… उधर बुंदेलखंड एक्सप्रेस-वे का बड़े लोगों ने उद्घाटन किया ही था कि इधर एक हफ़्ते में ही इस पर भ्रष्टाचार के बड़े-बड़े गड्ढे निकल आए।

    अच्छा हुआ इस पर रनवे नहीं बना। pic.twitter.com/Dcl22VT8zv

    — Akhilesh Yadav (@yadavakhilesh) July 21, 2022 " class="align-text-top noRightClick twitterSection" data=" ">

ಅಲ್ಲದೇ, ಹೆದ್ದಾರಿ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಈ ಎಕ್ಸ್‌ಪ್ರೆಸ್​ ವೇ ಅನ್ನು 28 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಯುಪಿ ಸರ್ಕಾರ ಇದೆ. ಈ ಮೂಲಕ ಬಿಜೆಪಿ ಸರ್ಕಾರ ತನ್ನ ಪ್ರಾಮಾಣಿಕ ಕೆಲಸವನ್ನು ಸಾಬೀತುಪಡಿಸಿದೆ ಎಂದಿದ್ದರು. ಪ್ರಧಾನಿ ಉದ್ಘಾಟಿಸಿದ ಬಳಿಕ ಈ ಹೆದ್ದಾರಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿತ್ತು.

ಇದನ್ನೂ ಓದಿ: ಬಿಲ್​ ಗೇಟ್ಸ್ ಮೀರಿಸಿದ ಗೌತಮ್ ಅದಾನಿ.. ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿ ಪಟ್ಟ

ಜಲೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ನಾಲ್ಕು ದಿನಗಳ ಹಿಂದೆಯಷ್ಟೇ ಉದ್ಘಾಟಿಸಿದ ಬುಂದೇಲ್‌ಖಂಡ್ ಹೆದ್ದಾರಿ ರಸ್ತೆ ಮಳೆಗೆ ಹಾನಿಯಾಗಿದೆ. ಅಲ್ಲದೇ, ಡಾಂಬರು ಕಿತ್ತುಕೊಂಡು ಹೋಗಿ ರಸ್ತೆ ಅಪಘಾತಗಳು ಸಹ ಸಂಭವಿಸಿವೆ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ.

  • आज बुंदेलखंड के लिए ऐतिहासिक दिन है।

    PM श्री @narendramodi जी के कर-कमलों से 296 KM लम्बे एक्सप्रेस-वे का उद्घाटन हो रहा है।

    यह प्रदेश की अर्थव्यवस्था को एक नया आयाम प्रदान करेगा।

    मैं इस अवसर पर बुंदेलखंडवासियों को बधाई देता हूं: #UPCM @myogiadityanath#VikasKaExpressway pic.twitter.com/OEsXXcYc1R

    — CM Office, GoUP (@CMOfficeUP) July 16, 2022 " class="align-text-top noRightClick twitterSection" data=" ">

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್​​ವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕನಸಿನ ಯೋಜನೆಯಾಗಿದೆ. 14,800 ಕೋಟಿ ರೂ. ವೆಚ್ಚದಲ್ಲಿ ಚಿತ್ರಕೂಟದಿಂದ ಇಟಾವಾವರೆಗೆ 296 ಕಿ.ಮೀ. ಉದ್ದದ ಹೆದ್ದಾರಿಯನ್ನು ಜುಲೈ 16ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಇದಾದ ನಾಲ್ಕೇ ದಿನದಲ್ಲಿ ಸುರಿದ ಮೊದಲ ಮಳೆಗೆ ಕೊಚ್ಚಿ ಹೋಗಿದೆ.

ಬುಧವಾರ ಸುರಿದ ಮಳೆಯಿಂದಾಗಿ ಎಕ್ಸ್‌ಪ್ರೆಸ್‌ ವೇಯ ಹಲವೆಡೆ 2ರಿಂದ 3 ಅಡಿ ಆಳದ ಗುಂಡಿಗಳು ಬಿದ್ದಿವೆ. ಹದಗೆಟ್ಟ ರಸ್ತೆಯಿಂದಾಗಿ ಬುಧವಾರ ರಾತ್ರಿಯೇ ಅಪಘಾತಗಳು ಸಂಭವಿಸಿದ್ದು, ಒಂದು ಬೈಕ್​, ನಾಲ್ಕು ವಾಹನಗಳಲ್ಲಿ ಸಂಚರಿಸುತ್ತಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಮೂಲಕ ಹೆದ್ದಾರಿಯ ಗುಣಮಟ್ಟ ಬಯಲಿಗೆ ಬಂದಿದೆ.

ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕೇ ದಿನದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್​ವೇನಲ್ಲಿ ಬಿದ್ದಿವೆ ಗುಂಡಿಗಳು!

ಸರ್ಕಾರದ ವಿರುದ್ಧ ಟೀಕಾಪ್ರಹಾರ: ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ವೇ ಹಾಳಾದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಹಾನಿಗೊಳಗಾದ ಎಕ್ಸ್‌ಪ್ರೆಸ್‌ವೇಯ ವಿಡಿಯೋ ಶೇರ್ ಮಾಡಿರುವ ಅಖಿಲೇಶ್ ಯಾದವ್, 'ಇದು ಬಿಜೆಪಿಯ ಅರೆಬೆಂದ ಅಭಿವೃದ್ಧಿಯ ಗುಣಮಟ್ಟದ ಮಾದರಿಯಾಗಿದೆ' ಎಂದು ವಾಗ್ದಾಳಿ ಮಾಡಿದ್ದಾರೆ.

  • आधे-अधूरे बुंदेलखंड एक्सप्रेस-वे के उद्घाटन की हड़बड़ी बताती है कि इसका डिज़ाइन भी ऐसे ही चलताऊ बना है तभी डिफ़ेंस कॉरिडोर के पास होने के बाद भी यहाँ भाजपा सरकार, सपा काल में बने आगरा-लखनऊ एक्सप्रेस-वे जैसी हवाई पट्टी न बना पाई। इसे चित्रकूट तक विकसित न करना दूरदृष्टि की कमी है। pic.twitter.com/KjhQPcOGoP

    — Akhilesh Yadav (@yadavakhilesh) July 16, 2022 " class="align-text-top noRightClick twitterSection" data=" ">

ಅಲ್ಲದೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ಬಿಜೆಪಿಯ ದೊಡ್ಡವರು ಉದ್ಘಾಟಿಸಿದ್ದರು. ಆದರೆ, ಒಂದೇ ವಾರದಲ್ಲಿ ಭ್ರಷ್ಟಾಚಾರದ ದೊಡ್ಡ ಹೊಂಡಗಳು ಹೊರಬಂದಿವೆ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ದಿನವನ್ನು 'ಐತಿಹಾಸಿಕ' ಎಂದು ಸಿಎಂ ಯೋಗಿ ಬಣ್ಣಿಸಿದ್ದರು. ಈ ಎಕ್ಸ್‌ಪ್ರೆಸ್‌ವೇ ರಾಜ್ಯದ ಆರ್ಥಿಕತೆಗೆ ಹೊಸ ಆಯಾಮವನ್ನು ನೀಡುತ್ತದೆ ಹಾಗೂ ಚಿತ್ರಕೂಟದಿಂದ ದೆಹಲಿಗೆ 3-4 ಗಂಟೆಗಳ ಅಂತರವನ್ನು ಕಡಿಮೆ ಮಾಡಲಾಗಿದೆ ಎಂದು ಯೋಗಿ ಹೇಳಿದ್ದರು.

  • ये है भाजपा के आधे-अधूरे विकास की गुणवत्ता का नमूना… उधर बुंदेलखंड एक्सप्रेस-वे का बड़े लोगों ने उद्घाटन किया ही था कि इधर एक हफ़्ते में ही इस पर भ्रष्टाचार के बड़े-बड़े गड्ढे निकल आए।

    अच्छा हुआ इस पर रनवे नहीं बना। pic.twitter.com/Dcl22VT8zv

    — Akhilesh Yadav (@yadavakhilesh) July 21, 2022 " class="align-text-top noRightClick twitterSection" data=" ">

ಅಲ್ಲದೇ, ಹೆದ್ದಾರಿ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಈ ಎಕ್ಸ್‌ಪ್ರೆಸ್​ ವೇ ಅನ್ನು 28 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಯುಪಿ ಸರ್ಕಾರ ಇದೆ. ಈ ಮೂಲಕ ಬಿಜೆಪಿ ಸರ್ಕಾರ ತನ್ನ ಪ್ರಾಮಾಣಿಕ ಕೆಲಸವನ್ನು ಸಾಬೀತುಪಡಿಸಿದೆ ಎಂದಿದ್ದರು. ಪ್ರಧಾನಿ ಉದ್ಘಾಟಿಸಿದ ಬಳಿಕ ಈ ಹೆದ್ದಾರಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿತ್ತು.

ಇದನ್ನೂ ಓದಿ: ಬಿಲ್​ ಗೇಟ್ಸ್ ಮೀರಿಸಿದ ಗೌತಮ್ ಅದಾನಿ.. ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿ ಪಟ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.