ETV Bharat / bharat

'ಜಗತ್ತಿನಾದ್ಯಂತ ಅಪಹಾಸ್ಯಕ್ಕೆ ಒಳಗಾಗಿರುವ ಪಕ್ಷ ನಮ್ಮದಲ್ಲ': ರಾಹುಲ್‌ಗೆ ಮಾಯಾವತಿ ತಿರುಗೇಟು

author img

By

Published : Apr 10, 2022, 4:00 PM IST

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಎಸ್​ಪಿ ನಾಯಕಿ ಮಾಯಾವತಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಭರವಸೆ​​ ಕೊಟ್ಟಿತ್ತು ಎಂದು ರಾಹುಲ್​ ಗಾಂಧಿ ಶನಿವಾರ ಹೇಳಿದ್ದರು. ಇದಕ್ಕೆ ರವಿವಾರ ಪ್ರತಿಕ್ರಿಯೆ ನೀಡಿರುವ ಮಾಯಾವತಿ, ಅದು ರಾಹುಲ್​ ಗಾಂಧಿಯವರ ಭ್ರಮೆಯಷ್ಟೇ ಎಂದು ತಿರುಗೇಟು ನೀಡಿದ್ದಾರೆ.

ರಾಹುಲ್​ ಗಾಂಧಿ ವಿರುದ್ಧ ಬಿಎಸ್​​ಪಿ ಮುಖ್ಯಸ್ಥೆ ಮಾಯವತಿ ವಾಗ್ದಾಳಿ
ರಾಹುಲ್​ ಗಾಂಧಿ ವಿರುದ್ಧ ಬಿಎಸ್​​ಪಿ ಮುಖ್ಯಸ್ಥೆ ಮಾಯವತಿ ವಾಗ್ದಾಳಿ

ನವದೆಹಲಿ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​-ಬಿಎಸ್​​ಪಿ ಮೈತ್ರಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಮಾಯಾವತಿ ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೂರು ಬಾರಿ ಯೋಚಿಸಬೇಕೆಂದು ವಾಗ್ದಾಳಿ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಬಿಎಸ್​ಪಿ ಭಯಪಟ್ಟಿದೆ. ಹೀಗಾಗಿ ಚುನಾವಣಾ ಮೈತ್ರಿ ಮತ್ತು ಮುಖ್ಯಮಂತ್ರಿ ಪದವಿಯ ಆಹ್ವಾನ ನೀಡಿದ್ದರೂ ಒಪ್ಪಲಿಲ್ಲ ಎಂಬ ರಾಹುಲ್​ ಗಾಂಧಿ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಅವರು ಆಕ್ರೋಶ ಹೊರಹಾಕಿದರು.

ಸಂಸತ್ತಿನಲ್ಲಿ ಒತ್ತಾಯ ಪೂರ್ವಕವಾಗಿ ಪ್ರಧಾನಿಯನ್ನು ಅಪ್ಪಿಕೊಳ್ಳುವ ರಾಹುಲ್​ ಗಾಂಧಿ ನಾಯಕರಂತಹ ಪಕ್ಷ ನಮ್ಮದಲ್ಲ. ಜಗತ್ತಿನಾದ್ಯಂತ ಅಪಹಾಸ್ಯಕ್ಕೆ ಒಳಗಾಗಿರುವ ಪಕ್ಷವೂ ನಮ್ಮದಲ್ಲ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಮತ್ತು ಅಧಿಕಾರದಲ್ಲಿ ಇಲ್ಲದೇ ಇದ್ದಾಗಲೂ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ಆರ್​ಎಸ್​ಎಸ್​​ ಕೇವಲ 'ಕಾಂಗ್ರೆಸ್​ ಮುಕ್ತ ಭಾರತ' ಮಾಡುವ ಪ್ರಯತ್ನದಲ್ಲಿಲ್ಲ. ಅವರು ತಮ್ಮ 'ವಿರೋಧ ಮುಕ್ತ' ಭಾರತ ಮಾಡಲು ಹೊರಟಿದ್ದಾರೆ. ಚೀನಾದ ರಾಜಕೀಯ ವ್ಯವಸ್ಥೆಯಂತೆ ಗ್ರಾಮದಿಂದ ರಾಷ್ಟ್ರ ಮಟ್ಟದವರೆಗೆ ಒಂದೇ ಪ್ರಬಲ ಪಕ್ಷ ಸ್ಥಾಪಿಸುವ ಗುರಿ ಹೊಂದಿದ್ದಾರೆ. ಕಾಂಗ್ರೆಸ್​​ ತನ್ನ ದಾರಿಯನ್ನಷ್ಟೇ ಯೋಚಿಸಬಾರದು ಮತ್ತು ತನ್ನ ಮನೆಯಲ್ಲೇ ಕುಳಿತು ನಮ್ಮ ವಿಷಯಗಳ ಬಗ್ಗೆ ಆದೇಶಿಸಬಾರದು. ರಾಹುಲ್​ ಗಾಂಧಿ ಹೇಳಿಕೆಯು ದುರುದ್ದೇಶದಿಂದ ಕೂಡಿದೆ ಮತ್ತು ದಲಿತರು ಮತ್ತು ಬಿಎಸ್​ಪಿಯನ್ನು ಕೀಳುಮಟ್ಟದಿಂದ ನೋಡುವುದಾಗಿದೆ ಎಂದು ಅವರು ಟೀಕಾ ಪ್ರಹಾರ ಮಾಡಿದ್ದಾರೆ.

ಇದನ್ನೂ ಓದಿ: ಮಾಯಾವತಿಗೆ ಯುಪಿ ಸಿಎಂ ಹುದ್ದೆ ಆಫರ್ ನೀಡ್ಲಾಗಿತ್ತು.. ಆದರೆ, ಸಿಐಬಿ,ಇಡಿ ಭಯದಿಂದ ಅವರು ಸ್ಪಂದಿಸಲಿಲ್ಲ : ರಾಹುಲ್ ಗಾಂಧಿ

ಖರ್ಗೆ ಪ್ರತಿಕ್ರಿಯೆ: ಬಿಜೆಪಿ ಹಾಗೂ ಆರ್​ಎಸ್​ಎಸ್​ ದೇಶದಲ್ಲಿ​ ಒಂದೇ ಪಕ್ಷ ಉಳಿಯಬೇಕೆಂದು ಬಯಸುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಳ್ಳುವರು ಬೇರೆ ಪಕ್ಷದ ಸದಸ್ಯರನ್ನು ಕಳ್ಳದಾರಿ ಮೂಲಕ ಸೆಳೆಯುವುದಿಲ್ಲ. ಆದರೆ, ಬಿಜೆಪಿ ತನಗೆ ಎಲ್ಲ ಗೆಲ್ಲಲು ಸಾಧ್ಯವಾಗಿಲ್ಲವೋ ಅಲ್ಲಿ ಬೇರೆ ಪಕ್ಷದವರನ್ನೇ ಸೆಳೆಯುವ ಕೆಲಸ ಮಾಡಿದೆ. ಮಾಯಾವತಿ ಹೇಳಿರುವುದನ್ನೇ ರಾಹುಲ್​ ಗಾಂಧಿ ಕೂಡ ಹೇಳಿದ್ದಾರೆ. ಒಟ್ಟಿಗೆ ಹೋರಾಡುವುದು ಮತ್ತು ಶಕ್ತಿಯುತವಾಗಿರುವುದಕ್ಕೆ ನಾವು ಮಹತ್ವ ಕೊಡಬೇಕೆಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಕಾಂಗ್ರೆಸ್​ ಏನೂ ಮಾಡಿಲ್ಲ ಎಂಬ ಮಾಯಾವತಿ ಹೇಳಿಕೆ ಸರಿಯಲ್ಲ. ಕಾಂಗ್ರೆಸ್​ ಪಕ್ಷ ಸದಾ ಜನತೆಯ ಜೊತೆಗಿದೆ. ಎಲ್ಲ ಸಮಸ್ಯೆಗಳ ವಿರುದ್ಧ ಸಂಸತ್ತಿನ ಹೊರಗೆ ಮತ್ತು ಒಳಗೂ ಹೋರಾಟ ಮಾಡುತ್ತಿವೆ ಎಂದು ಖರ್ಗೆ ಹೇಳಿದ್ದಾರೆ. ಇದೇ ವೇಳೆ ಬಿಎಸ್​ಪಿ ಜೊತೆ ಮೈತ್ರಿಗೆ ಈಗಲೂ ಬಾಗಿಲು ತೆರೆದಿದೆಯೇ? ಎಂಬ ಪ್ರಶ್ನೆಗೆ, ಈಗ ಮಾತನಾಡಿ ಪ್ರಯೋಜನವಿಲ್ಲ. ಸಮಯ ಬಂದಾಗಲೇ ನಿರ್ಧಾರ ಮಾಡಬೇಕು ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ- ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್​​

ನವದೆಹಲಿ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​-ಬಿಎಸ್​​ಪಿ ಮೈತ್ರಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಮಾಯಾವತಿ ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೂರು ಬಾರಿ ಯೋಚಿಸಬೇಕೆಂದು ವಾಗ್ದಾಳಿ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಬಿಎಸ್​ಪಿ ಭಯಪಟ್ಟಿದೆ. ಹೀಗಾಗಿ ಚುನಾವಣಾ ಮೈತ್ರಿ ಮತ್ತು ಮುಖ್ಯಮಂತ್ರಿ ಪದವಿಯ ಆಹ್ವಾನ ನೀಡಿದ್ದರೂ ಒಪ್ಪಲಿಲ್ಲ ಎಂಬ ರಾಹುಲ್​ ಗಾಂಧಿ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಅವರು ಆಕ್ರೋಶ ಹೊರಹಾಕಿದರು.

ಸಂಸತ್ತಿನಲ್ಲಿ ಒತ್ತಾಯ ಪೂರ್ವಕವಾಗಿ ಪ್ರಧಾನಿಯನ್ನು ಅಪ್ಪಿಕೊಳ್ಳುವ ರಾಹುಲ್​ ಗಾಂಧಿ ನಾಯಕರಂತಹ ಪಕ್ಷ ನಮ್ಮದಲ್ಲ. ಜಗತ್ತಿನಾದ್ಯಂತ ಅಪಹಾಸ್ಯಕ್ಕೆ ಒಳಗಾಗಿರುವ ಪಕ್ಷವೂ ನಮ್ಮದಲ್ಲ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಮತ್ತು ಅಧಿಕಾರದಲ್ಲಿ ಇಲ್ಲದೇ ಇದ್ದಾಗಲೂ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ಆರ್​ಎಸ್​ಎಸ್​​ ಕೇವಲ 'ಕಾಂಗ್ರೆಸ್​ ಮುಕ್ತ ಭಾರತ' ಮಾಡುವ ಪ್ರಯತ್ನದಲ್ಲಿಲ್ಲ. ಅವರು ತಮ್ಮ 'ವಿರೋಧ ಮುಕ್ತ' ಭಾರತ ಮಾಡಲು ಹೊರಟಿದ್ದಾರೆ. ಚೀನಾದ ರಾಜಕೀಯ ವ್ಯವಸ್ಥೆಯಂತೆ ಗ್ರಾಮದಿಂದ ರಾಷ್ಟ್ರ ಮಟ್ಟದವರೆಗೆ ಒಂದೇ ಪ್ರಬಲ ಪಕ್ಷ ಸ್ಥಾಪಿಸುವ ಗುರಿ ಹೊಂದಿದ್ದಾರೆ. ಕಾಂಗ್ರೆಸ್​​ ತನ್ನ ದಾರಿಯನ್ನಷ್ಟೇ ಯೋಚಿಸಬಾರದು ಮತ್ತು ತನ್ನ ಮನೆಯಲ್ಲೇ ಕುಳಿತು ನಮ್ಮ ವಿಷಯಗಳ ಬಗ್ಗೆ ಆದೇಶಿಸಬಾರದು. ರಾಹುಲ್​ ಗಾಂಧಿ ಹೇಳಿಕೆಯು ದುರುದ್ದೇಶದಿಂದ ಕೂಡಿದೆ ಮತ್ತು ದಲಿತರು ಮತ್ತು ಬಿಎಸ್​ಪಿಯನ್ನು ಕೀಳುಮಟ್ಟದಿಂದ ನೋಡುವುದಾಗಿದೆ ಎಂದು ಅವರು ಟೀಕಾ ಪ್ರಹಾರ ಮಾಡಿದ್ದಾರೆ.

ಇದನ್ನೂ ಓದಿ: ಮಾಯಾವತಿಗೆ ಯುಪಿ ಸಿಎಂ ಹುದ್ದೆ ಆಫರ್ ನೀಡ್ಲಾಗಿತ್ತು.. ಆದರೆ, ಸಿಐಬಿ,ಇಡಿ ಭಯದಿಂದ ಅವರು ಸ್ಪಂದಿಸಲಿಲ್ಲ : ರಾಹುಲ್ ಗಾಂಧಿ

ಖರ್ಗೆ ಪ್ರತಿಕ್ರಿಯೆ: ಬಿಜೆಪಿ ಹಾಗೂ ಆರ್​ಎಸ್​ಎಸ್​ ದೇಶದಲ್ಲಿ​ ಒಂದೇ ಪಕ್ಷ ಉಳಿಯಬೇಕೆಂದು ಬಯಸುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಳ್ಳುವರು ಬೇರೆ ಪಕ್ಷದ ಸದಸ್ಯರನ್ನು ಕಳ್ಳದಾರಿ ಮೂಲಕ ಸೆಳೆಯುವುದಿಲ್ಲ. ಆದರೆ, ಬಿಜೆಪಿ ತನಗೆ ಎಲ್ಲ ಗೆಲ್ಲಲು ಸಾಧ್ಯವಾಗಿಲ್ಲವೋ ಅಲ್ಲಿ ಬೇರೆ ಪಕ್ಷದವರನ್ನೇ ಸೆಳೆಯುವ ಕೆಲಸ ಮಾಡಿದೆ. ಮಾಯಾವತಿ ಹೇಳಿರುವುದನ್ನೇ ರಾಹುಲ್​ ಗಾಂಧಿ ಕೂಡ ಹೇಳಿದ್ದಾರೆ. ಒಟ್ಟಿಗೆ ಹೋರಾಡುವುದು ಮತ್ತು ಶಕ್ತಿಯುತವಾಗಿರುವುದಕ್ಕೆ ನಾವು ಮಹತ್ವ ಕೊಡಬೇಕೆಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಕಾಂಗ್ರೆಸ್​ ಏನೂ ಮಾಡಿಲ್ಲ ಎಂಬ ಮಾಯಾವತಿ ಹೇಳಿಕೆ ಸರಿಯಲ್ಲ. ಕಾಂಗ್ರೆಸ್​ ಪಕ್ಷ ಸದಾ ಜನತೆಯ ಜೊತೆಗಿದೆ. ಎಲ್ಲ ಸಮಸ್ಯೆಗಳ ವಿರುದ್ಧ ಸಂಸತ್ತಿನ ಹೊರಗೆ ಮತ್ತು ಒಳಗೂ ಹೋರಾಟ ಮಾಡುತ್ತಿವೆ ಎಂದು ಖರ್ಗೆ ಹೇಳಿದ್ದಾರೆ. ಇದೇ ವೇಳೆ ಬಿಎಸ್​ಪಿ ಜೊತೆ ಮೈತ್ರಿಗೆ ಈಗಲೂ ಬಾಗಿಲು ತೆರೆದಿದೆಯೇ? ಎಂಬ ಪ್ರಶ್ನೆಗೆ, ಈಗ ಮಾತನಾಡಿ ಪ್ರಯೋಜನವಿಲ್ಲ. ಸಮಯ ಬಂದಾಗಲೇ ನಿರ್ಧಾರ ಮಾಡಬೇಕು ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ- ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.