ETV Bharat / bharat

ಕೂಲ್​ಡ್ರಿಂಕ್ಸ್​ ಬಾಟಲಿ​ ಮುಚ್ಚಳ ಗಂಟಲಲ್ಲಿ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು

ಹಲ್ಲಿಂದ ಕಚ್ಚಿ ತಂಪು ಪಾನೀಯದ ಮುಚ್ಚಳವನ್ನು ತೆಗೆಯಲು ಯತ್ನಿಸಿದ ಬಾಲಕನೊಬ್ಬನ ಗಂಟಲಲ್ಲಿ ಮುಚ್ಚಳ ಸಿಕ್ಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಪಂಜಾಬ್​ನಲ್ಲಿ ನಡೆದಿದೆ..

author img

By

Published : May 21, 2022, 4:45 PM IST

boy-chokes-to-death
ಬಾಲಕ ಉಸಿರುಗಟ್ಟಿ ಸಾವು

ಅಂಬಾಲಾ(ಪಂಜಾಬ್​) : ಕೂಲ್​ಡ್ರಿಂಕ್ಸ್‌​ ಬಾಟಲ್​ನ ಮುಚ್ಚಳ ತೆಗೆಯಲು ಹೋದಾಗ ಅದು ಗಂಟಲಲ್ಲಿ ಸಿಲುಕಿ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟ ಘಟನೆ ಪಂಜಾಬ್​ನ ಅಂಬಾಲಾದಲ್ಲಿ ನಡೆದಿದೆ.

ಅಂಬಾಲಾ ನಿವಾಸಿಯಾದ 11ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಯಶ್​​ ಮೃತಪಟ್ಟ ಬಾಲಕ. ನಿನ್ನೆ (ಶುಕ್ರವಾರ) ಅಂಗಡಿಯಿಂದ ಖರೀದಿಸಿ ತಂದಿದ್ದ ಕೂಲ್​ ಡ್ರಿಂಕ್ಸ್​ ಬಾಟಲಿ ಮುಚ್ಚಳವನ್ನು ತೆರೆಯಲೆಂದು ಬಾಲಕ ಯಶ್​ ಅದನ್ನು ಹಲ್ಲಿನಿಂದ ಕಚ್ಚಿ ತೆಗೆದಿದ್ದಾನೆ. ಈ ವೇಳೆ ಅದು ಅಚಾನಕ್ಕಾಗಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ.

ಇದರಿಂದ ಉಸಿರಾಡಲಾಗದೇ ಒದ್ದಾಡುತ್ತಿದ್ದ ಯಶ್​ನನ್ನು ಉಳಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದರೆ, ಗಂಟಲಿನ ಒಳಗೆ ಸಿಲುಕಿದ್ದ ಮುಚ್ಚಳ ಹೊರಬರದೇ, ಒಳ ಹೋಗದ ಕಾರಣ ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಯಶ್​ ಉಸಿರಾಡಲಾಗದೇ ಮೃತಪಟ್ಟಿದ್ದಾನೆ.

ಓದಿ: ಗುಜರಾತ್​ನಲ್ಲಿ ಕಾರು - ಟ್ರಕ್ ಅಪಘಾತ: 6 ಮಂದಿ ಸ್ಥಳದಲ್ಲೇ ದುರ್ಮರಣ

ಅಂಬಾಲಾ(ಪಂಜಾಬ್​) : ಕೂಲ್​ಡ್ರಿಂಕ್ಸ್‌​ ಬಾಟಲ್​ನ ಮುಚ್ಚಳ ತೆಗೆಯಲು ಹೋದಾಗ ಅದು ಗಂಟಲಲ್ಲಿ ಸಿಲುಕಿ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟ ಘಟನೆ ಪಂಜಾಬ್​ನ ಅಂಬಾಲಾದಲ್ಲಿ ನಡೆದಿದೆ.

ಅಂಬಾಲಾ ನಿವಾಸಿಯಾದ 11ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಯಶ್​​ ಮೃತಪಟ್ಟ ಬಾಲಕ. ನಿನ್ನೆ (ಶುಕ್ರವಾರ) ಅಂಗಡಿಯಿಂದ ಖರೀದಿಸಿ ತಂದಿದ್ದ ಕೂಲ್​ ಡ್ರಿಂಕ್ಸ್​ ಬಾಟಲಿ ಮುಚ್ಚಳವನ್ನು ತೆರೆಯಲೆಂದು ಬಾಲಕ ಯಶ್​ ಅದನ್ನು ಹಲ್ಲಿನಿಂದ ಕಚ್ಚಿ ತೆಗೆದಿದ್ದಾನೆ. ಈ ವೇಳೆ ಅದು ಅಚಾನಕ್ಕಾಗಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ.

ಇದರಿಂದ ಉಸಿರಾಡಲಾಗದೇ ಒದ್ದಾಡುತ್ತಿದ್ದ ಯಶ್​ನನ್ನು ಉಳಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದರೆ, ಗಂಟಲಿನ ಒಳಗೆ ಸಿಲುಕಿದ್ದ ಮುಚ್ಚಳ ಹೊರಬರದೇ, ಒಳ ಹೋಗದ ಕಾರಣ ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಯಶ್​ ಉಸಿರಾಡಲಾಗದೇ ಮೃತಪಟ್ಟಿದ್ದಾನೆ.

ಓದಿ: ಗುಜರಾತ್​ನಲ್ಲಿ ಕಾರು - ಟ್ರಕ್ ಅಪಘಾತ: 6 ಮಂದಿ ಸ್ಥಳದಲ್ಲೇ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.