ETV Bharat / bharat

ಆರ್ಯನ್ ಖಾನ್​ ವಿರುದ್ಧ ಅಪರಾಧ ಸಾಬೀತುಪಡಿಸುವ ಬಲವಾದ ಸಾಕ್ಷ್ಯ ಸಿಕ್ಕಿಲ್ಲ: ಬಾಂಬೆ ಹೈಕೋರ್ಟ್​

author img

By

Published : Nov 20, 2021, 7:13 PM IST

ಡ್ರಗ್‌ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಪ್ರಕರಣದಲ್ಲಿ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ಸಿಕ್ಕಿದೆ. ಈ ಬಗ್ಗೆ ವಿವರವಾದ ಮಾಹಿತಿಯನ್ನ ಬಾಂಬೆ ಹೈಕೋರ್ಟ್​ ಇದೀಗ ಹೊರ ಹಾಕಿದೆ..

Aryan Khan
Aryan Khan

ಮುಂಬೈ(ಮಹಾರಾಷ್ಟ್ರ): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಸೇವನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಎನ್​ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್​ ನಟ ಶಾರುಖ್ ಖಾನ್​ (Bollywood actor Shah Rukh Khan) ಪುತ್ರ ಆರ್ಯನ್​​ ಖಾನ್​(Aryan Khan)ಗೆ ಈಗಾಗಲೇ ಜಾಮೀನು ಮಂಜೂರು ಮಾಡಲಾಗಿದೆ. ಇದರ ಬೆನ್ನಲ್ಲೇ ಬಾಂಬೆ ಹೈಕೋರ್ಟ್ ಜಾಮೀನಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ಹೊರ ಹಾಕಿದೆ.

ಡ್ರಗ್ಸ್​​ ಪಾರ್ಟಿ ಪ್ರಕರಣ(Aryan Khan Case)ದಲ್ಲಿ ಆರ್ಯನ್ ಖಾನ್​​, ಅರ್ಬಾಜ್​ ಖಾನ್​​ ಹಾಗೂ ಮತ್ತೋರ್ವ ವ್ಯಕ್ತಿ ಧಮೇಚಾ ಅಪರಾಧವೆಸಗಿದ್ದಾರೆಂದು ಸಾಬೀತುಪಡಿಸುವ ಯಾವುದೇ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಬಾಂಬೆ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ 14 ಪುಟಗಳ ವಿವರವಾದ ಮಾಹಿತಿ ಹಂಚಿಕೊಂಡಿರುವ ಬಾಂಬೆ ಹೈಕೋರ್ಟ್​, ಆತ ಅಪರಾಧವೆಸಗಿದ್ದಾನೆಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿರಿ: Heart stroke: ಬೈಕ್​ನಲ್ಲಿ ತೆರಳುತ್ತಿದ್ದ ಯುವಕನಿಗೆ ಹೃದಯಾಘಾತ.. ಆಸ್ಪತ್ರೆ ತಲುಪುವಷ್ಟರಲ್ಲೇ ಸಾವು

ಅಕ್ಟೋಬರ್​​ 3ರಂದು ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಶಾರೂಖ್ ಪುತ್ರ ಆರ್ಯನ್​ ಸೇರಿದಂತೆ ಕೆಲವರ ಬಂಧನ ಮಾಡಲಾಗಿತ್ತು.

ಇದರ ವಾದ-ಪ್ರತಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್(Bombay High Court ) ಅಕ್ಟೋಬರ್​​ 29ರಂದು ಆರ್ಯನ್​ ಖಾನ್​ಗೆ ಜಾಮೀನು ನೀಡಿತ್ತು. ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿ ಎನ್​.ಡಬ್ಲ್ಯೂ ಸಾಂಬ್ರೆ(Justice Nitin Sambre) ನೇತೃತ್ವದ ಏಕಸದಸ್ಯ ಪೀಠ ಇಂದು ತನ್ನ ಅಭಿಪ್ರಾಯ ಹೊರ ಹಾಕಿದೆ. ಈ ಬಗ್ಗೆ ವಿವರವಾದ ಪ್ರತಿಯನ್ನ ಕೂಡ ಪ್ರಕಟಿಸಿದೆ.

ಮೂವರು ಸ್ನೇಹಿತರ ನಡುವೆ ವ್ಯಾಟ್ಸ್​ಆ್ಯಪ್(WhatsApp conversation)​ ಚಾಟ್​ಗಳಲ್ಲಿ ಆಕ್ಷೇಪಾರ್ಹ ಅಂಶಗಳು ಲಭ್ಯವಾಗಿಲ್ಲ. ಎನ್​ಸಿಬಿ(Narcotics Control Bureau) ದಾಖಲು ಮಾಡಿಕೊಂಡಿರುವ ದೂರಿನಲ್ಲಿ ಆರ್ಯನ್ ಖಾನ್(Aryan Khan drugs bust case) ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಹೇಳಿಕೆಯನ್ನ ತನಿಖೆ ನಡೆಸುವ ಉದ್ದೇಶದಿಂದ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಜಾಮೀನು ಆದೇಶದಲ್ಲಿ ವಿವರಿಸಲಾಗಿದೆ.

ಮುಂಬೈ(ಮಹಾರಾಷ್ಟ್ರ): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಸೇವನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಎನ್​ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್​ ನಟ ಶಾರುಖ್ ಖಾನ್​ (Bollywood actor Shah Rukh Khan) ಪುತ್ರ ಆರ್ಯನ್​​ ಖಾನ್​(Aryan Khan)ಗೆ ಈಗಾಗಲೇ ಜಾಮೀನು ಮಂಜೂರು ಮಾಡಲಾಗಿದೆ. ಇದರ ಬೆನ್ನಲ್ಲೇ ಬಾಂಬೆ ಹೈಕೋರ್ಟ್ ಜಾಮೀನಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ಹೊರ ಹಾಕಿದೆ.

ಡ್ರಗ್ಸ್​​ ಪಾರ್ಟಿ ಪ್ರಕರಣ(Aryan Khan Case)ದಲ್ಲಿ ಆರ್ಯನ್ ಖಾನ್​​, ಅರ್ಬಾಜ್​ ಖಾನ್​​ ಹಾಗೂ ಮತ್ತೋರ್ವ ವ್ಯಕ್ತಿ ಧಮೇಚಾ ಅಪರಾಧವೆಸಗಿದ್ದಾರೆಂದು ಸಾಬೀತುಪಡಿಸುವ ಯಾವುದೇ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಬಾಂಬೆ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ 14 ಪುಟಗಳ ವಿವರವಾದ ಮಾಹಿತಿ ಹಂಚಿಕೊಂಡಿರುವ ಬಾಂಬೆ ಹೈಕೋರ್ಟ್​, ಆತ ಅಪರಾಧವೆಸಗಿದ್ದಾನೆಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿರಿ: Heart stroke: ಬೈಕ್​ನಲ್ಲಿ ತೆರಳುತ್ತಿದ್ದ ಯುವಕನಿಗೆ ಹೃದಯಾಘಾತ.. ಆಸ್ಪತ್ರೆ ತಲುಪುವಷ್ಟರಲ್ಲೇ ಸಾವು

ಅಕ್ಟೋಬರ್​​ 3ರಂದು ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಶಾರೂಖ್ ಪುತ್ರ ಆರ್ಯನ್​ ಸೇರಿದಂತೆ ಕೆಲವರ ಬಂಧನ ಮಾಡಲಾಗಿತ್ತು.

ಇದರ ವಾದ-ಪ್ರತಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್(Bombay High Court ) ಅಕ್ಟೋಬರ್​​ 29ರಂದು ಆರ್ಯನ್​ ಖಾನ್​ಗೆ ಜಾಮೀನು ನೀಡಿತ್ತು. ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿ ಎನ್​.ಡಬ್ಲ್ಯೂ ಸಾಂಬ್ರೆ(Justice Nitin Sambre) ನೇತೃತ್ವದ ಏಕಸದಸ್ಯ ಪೀಠ ಇಂದು ತನ್ನ ಅಭಿಪ್ರಾಯ ಹೊರ ಹಾಕಿದೆ. ಈ ಬಗ್ಗೆ ವಿವರವಾದ ಪ್ರತಿಯನ್ನ ಕೂಡ ಪ್ರಕಟಿಸಿದೆ.

ಮೂವರು ಸ್ನೇಹಿತರ ನಡುವೆ ವ್ಯಾಟ್ಸ್​ಆ್ಯಪ್(WhatsApp conversation)​ ಚಾಟ್​ಗಳಲ್ಲಿ ಆಕ್ಷೇಪಾರ್ಹ ಅಂಶಗಳು ಲಭ್ಯವಾಗಿಲ್ಲ. ಎನ್​ಸಿಬಿ(Narcotics Control Bureau) ದಾಖಲು ಮಾಡಿಕೊಂಡಿರುವ ದೂರಿನಲ್ಲಿ ಆರ್ಯನ್ ಖಾನ್(Aryan Khan drugs bust case) ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಹೇಳಿಕೆಯನ್ನ ತನಿಖೆ ನಡೆಸುವ ಉದ್ದೇಶದಿಂದ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಜಾಮೀನು ಆದೇಶದಲ್ಲಿ ವಿವರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.