ETV Bharat / bharat

ಒಂದೇ ಆಂಬ್ಯುಲೆನ್ಸ್‌ನಲ್ಲಿ 22 ಕೋವಿಡ್​ ಸೋಂಕಿತರ ಶವಗಳು

author img

By

Published : Apr 27, 2021, 1:05 PM IST

ಮಹಾರಾಷ್ಟ್ರದಲ್ಲಿ 22 ಕೋವಿಡ್​ ಸೋಂಕಿತರ ಶವಗಳನ್ನು ಒಂದೇ ಆಂಬ್ಯುಲೆನ್ಸ್‌ನಲ್ಲಿ ತುಂಬಿಸಲಾಗಿದೆ. ಆಸ್ಪತ್ರೆಯ ಆಡಳಿತವು ಸಾಕಷ್ಟು ಆಂಬ್ಯುಲೆನ್ಸ್‌ಗಳನ್ನು ಹೊಂದಿರದ ಕಾರಣ ಈ ಘಟನೆ ನಡೆದಿದೆ ಎಂಬ ಮಾಹಿತಿ ದೊರೆತಿದೆ.

ಒಂದೇ ಆಂಬ್ಯುಲೆನ್ಸ್‌ನಲ್ಲಿ 22 ಕೋವಿಡ್​ ಸೋಂಕಿತರ ಶವಗಳುಒಂದೇ ಆಂಬ್ಯುಲೆನ್ಸ್‌ನಲ್ಲಿ 22 ಕೋವಿಡ್​ ಸೋಂಕಿತರ ಶವಗಳು
ಒಂದೇ ಆಂಬ್ಯುಲೆನ್ಸ್‌ನಲ್ಲಿ 22 ಕೋವಿಡ್​ ಸೋಂಕಿತರ ಶವಗಳು

ಬೀಡ್​(ಮಹಾರಾಷ್ಟ್ರ): ಮಹಾರಾಷ್ಟ್ರದ ಬೀಡ್‌ನಲ್ಲಿರುವ ಶವಾಗಾರಕ್ಕೆ ಕರೆದೊಯ್ಯುವಾಗ 22 ಕೋವಿಡ್​ ಸೋಂಕಿತರ ಶವಗಳನ್ನು ಒಂದೇ ಆಂಬ್ಯುಲೆನ್ಸ್‌ನಲ್ಲಿ ತುಂಬಿಸಲಾಗಿದ್ದು, ವೈದ್ಯಕೀಯ ಸಾರಿಗೆ ವಾಹನಗಳ ಕೊರತೆಯೇ ಇದಕ್ಕೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್​ ಸೋಂಕಿತರ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

ಭಾನುವಾರ ಬೀಡ್‌ನ ಅಂಬಜೋಗೈನಲ್ಲಿರುವ ಸ್ವಾಮಿ ರಾಮಾನಂದ್ ತೀರ್ಥ್ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿರುವ ಶವಗಳನ್ನು ಕೊನೆಯ ವಿಧಿಗಳಿಗಾಗಿ ಸಾಗಿಸಲಾಗಿದೆ.

"ಆಸ್ಪತ್ರೆಯ ಆಡಳಿತವು ಸಾಕಷ್ಟು ಆಂಬ್ಯುಲೆನ್ಸ್‌ಗಳನ್ನು ಹೊಂದಿರದ ಕಾರಣ ಇದು ಸಂಭವಿಸಿದೆ" ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಾಜಿ ಸುಕ್ರೆ ತಿಳಿಸಿದ್ದಾರೆ.

ಕಳೆದ ವರ್ಷ ಕೋವಿಡ್​-19 ಮೊದಲ ಅಲೆಯ ವೇಳೆ ಐದು ಆಂಬುಲೆನ್ಸ್‌ಗಳನ್ನು ಹೊಂದಿದ್ದೆವು. ಅವುಗಳಲ್ಲಿ, ಮೂರನ್ನು ನಂತರ ಹಿಂತೆಗೆದುಕೊಳ್ಳಲಾಯಿತು. ಆಸ್ಪತ್ರೆಯು ಈಗ ಎರಡು ಆಂಬ್ಯುಲೆನ್ಸ್‌ಗಳಲ್ಲಿ ಕೊರೊನಾ ರೋಗಿಗಳ ಸಾಗಣೆಯನ್ನು ನಿರ್ವಹಿಸುತ್ತಿದೆ. ಕೆಲವೊಮ್ಮೆ, ಸತ್ತ ರೋಗಿಯ ಸಂಬಂಧಿಕರನ್ನು ಪತ್ತೆಹಚ್ಚಲು ಸಮಯ ತೆಗೆದುಕೊಳ್ಳುತ್ತದೆ. ಲೋಖಂಡಿ ಸಾವರ್‌ಗಾಂವ್ ಗ್ರಾಮದಲ್ಲಿರುವ ಕೋವಿಡ್​-19 ಕೇಂದ್ರದ ಶವಗಳನ್ನು ಸಹ ಕೋಲ್ಡ್ ಸ್ಟೋರೇಜ್ ಇಲ್ಲದ ಕಾರಣ ನಮ್ಮ ಸೌಲಭ್ಯಕ್ಕೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಮೂರು ಆಂಬ್ಯುಲೆನ್ಸ್‌ಗಳನ್ನು ಒದಗಿಸುವಂತೆ ಮಾರ್ಚ್ 17 ರಂದು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಅವ್ಯವಸ್ಥೆಯನ್ನು ತಪ್ಪಿಸಲು, ಬಲಿಪಶುಗಳ ಅಂತಿಮ ವಿಧಿಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ನಡೆಸಲು ನಾವು ಅಂಬಜೋಗೈ ಮುನ್ಸಿಪಲ್ ಕೌನ್ಸಿಲ್​ಗೆ ಪತ್ರ ಬರೆದಿದ್ದೇವೆ. ಶವಗಳನ್ನು ಆಸ್ಪತ್ರೆಯ ವಾರ್ಡ್‌ನಿಂದಲೇ ಶವಾಗಾರಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಆಸ್ಪತ್ರೆ ಮತ್ತು ಸ್ಥಳೀಯ ನಾಗರಿಕ ಸಂಸ್ಥೆ ಪರಸ್ಪರ ಆರೋಪ ಹೊರಿಸುತ್ತಿದೆ ಎಂದು ಬಿಜೆಪಿ ಎಂಎಲ್​ಸಿ ಸುರೇಶ್ ದಾಸ್ ಆರೋಪಿಸಿದ್ದಾರೆ.

ಬೀಡ್​(ಮಹಾರಾಷ್ಟ್ರ): ಮಹಾರಾಷ್ಟ್ರದ ಬೀಡ್‌ನಲ್ಲಿರುವ ಶವಾಗಾರಕ್ಕೆ ಕರೆದೊಯ್ಯುವಾಗ 22 ಕೋವಿಡ್​ ಸೋಂಕಿತರ ಶವಗಳನ್ನು ಒಂದೇ ಆಂಬ್ಯುಲೆನ್ಸ್‌ನಲ್ಲಿ ತುಂಬಿಸಲಾಗಿದ್ದು, ವೈದ್ಯಕೀಯ ಸಾರಿಗೆ ವಾಹನಗಳ ಕೊರತೆಯೇ ಇದಕ್ಕೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್​ ಸೋಂಕಿತರ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

ಭಾನುವಾರ ಬೀಡ್‌ನ ಅಂಬಜೋಗೈನಲ್ಲಿರುವ ಸ್ವಾಮಿ ರಾಮಾನಂದ್ ತೀರ್ಥ್ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿರುವ ಶವಗಳನ್ನು ಕೊನೆಯ ವಿಧಿಗಳಿಗಾಗಿ ಸಾಗಿಸಲಾಗಿದೆ.

"ಆಸ್ಪತ್ರೆಯ ಆಡಳಿತವು ಸಾಕಷ್ಟು ಆಂಬ್ಯುಲೆನ್ಸ್‌ಗಳನ್ನು ಹೊಂದಿರದ ಕಾರಣ ಇದು ಸಂಭವಿಸಿದೆ" ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಾಜಿ ಸುಕ್ರೆ ತಿಳಿಸಿದ್ದಾರೆ.

ಕಳೆದ ವರ್ಷ ಕೋವಿಡ್​-19 ಮೊದಲ ಅಲೆಯ ವೇಳೆ ಐದು ಆಂಬುಲೆನ್ಸ್‌ಗಳನ್ನು ಹೊಂದಿದ್ದೆವು. ಅವುಗಳಲ್ಲಿ, ಮೂರನ್ನು ನಂತರ ಹಿಂತೆಗೆದುಕೊಳ್ಳಲಾಯಿತು. ಆಸ್ಪತ್ರೆಯು ಈಗ ಎರಡು ಆಂಬ್ಯುಲೆನ್ಸ್‌ಗಳಲ್ಲಿ ಕೊರೊನಾ ರೋಗಿಗಳ ಸಾಗಣೆಯನ್ನು ನಿರ್ವಹಿಸುತ್ತಿದೆ. ಕೆಲವೊಮ್ಮೆ, ಸತ್ತ ರೋಗಿಯ ಸಂಬಂಧಿಕರನ್ನು ಪತ್ತೆಹಚ್ಚಲು ಸಮಯ ತೆಗೆದುಕೊಳ್ಳುತ್ತದೆ. ಲೋಖಂಡಿ ಸಾವರ್‌ಗಾಂವ್ ಗ್ರಾಮದಲ್ಲಿರುವ ಕೋವಿಡ್​-19 ಕೇಂದ್ರದ ಶವಗಳನ್ನು ಸಹ ಕೋಲ್ಡ್ ಸ್ಟೋರೇಜ್ ಇಲ್ಲದ ಕಾರಣ ನಮ್ಮ ಸೌಲಭ್ಯಕ್ಕೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಮೂರು ಆಂಬ್ಯುಲೆನ್ಸ್‌ಗಳನ್ನು ಒದಗಿಸುವಂತೆ ಮಾರ್ಚ್ 17 ರಂದು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಅವ್ಯವಸ್ಥೆಯನ್ನು ತಪ್ಪಿಸಲು, ಬಲಿಪಶುಗಳ ಅಂತಿಮ ವಿಧಿಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ನಡೆಸಲು ನಾವು ಅಂಬಜೋಗೈ ಮುನ್ಸಿಪಲ್ ಕೌನ್ಸಿಲ್​ಗೆ ಪತ್ರ ಬರೆದಿದ್ದೇವೆ. ಶವಗಳನ್ನು ಆಸ್ಪತ್ರೆಯ ವಾರ್ಡ್‌ನಿಂದಲೇ ಶವಾಗಾರಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಆಸ್ಪತ್ರೆ ಮತ್ತು ಸ್ಥಳೀಯ ನಾಗರಿಕ ಸಂಸ್ಥೆ ಪರಸ್ಪರ ಆರೋಪ ಹೊರಿಸುತ್ತಿದೆ ಎಂದು ಬಿಜೆಪಿ ಎಂಎಲ್​ಸಿ ಸುರೇಶ್ ದಾಸ್ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.