ETV Bharat / bharat

ಬಿಹಾರ: ಗೂಡ್ಸ್ ರೈಲು - ಮಗಧ ಎಕ್ಸ್‌ಪ್ರೆಸ್ ನಡುವೆ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

author img

By ETV Bharat Karnataka Team

Published : Oct 21, 2023, 8:07 PM IST

ಲೊಕೊ ಪೈಲಟ್​ ಸಮಯಪ್ರಜ್ಞೆಯಿಂದ ಬಿಹಾರದ ಹಿಲ್ಸಾ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಮತ್ತು ಮಗಧ ಎಕ್ಸ್‌ಪ್ರೆಸ್ ನಡುವೆ ಸಂಭವಿಸಬೇಕಿದ್ದ ಡಿಕ್ಕಿ ತಪ್ಪಿದೆ. ಈ ಮೂಲಕ ಭಾರಿ ದುರಂತವೊಂದು ತಪ್ಪಿ ನಿಟ್ಟುಸಿರು ಬಿಡುವಂತಾಗಿದೆ.

ಬಿಹಾರದ ಹಿಲ್ಸಾ ರೈಲು ನಿಲ್ದಾಣ
ಬಿಹಾರದ ಹಿಲ್ಸಾ ರೈಲು ನಿಲ್ದಾಣ

ನಳಂದಾ (ಬಿಹಾರ) : ಬಿಹಾರದ ನಳಂದಾ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಮಗಧ ಎಕ್ಸ್​ಪ್ರೆಸ್​ ಮತ್ತು ಗೂಡ್ಸ್​ ರೈಲಿನ ಮಧ್ಯೆ ಇನ್ನೇನು ಡಿಕ್ಕಿಯಾಗಬೇಕು ಎನ್ನುವಷ್ಟರಲ್ಲಿ ಹಠಾತ್​ ಬ್ರೇಕ್​ ಹಾಕಲಾಗಿದೆ. ಇದರಿಂದ ನೂರಾರು ಜನರಿದ್ದ ರೈಲು ಸಂಭವನೀಯ ಅಪಘಾತದಿಂದ ಪಾರಾಗಿದೆ.

ನವದೆಹಲಿಯಿಂದ ಹೊರಟಿದ್ದ ಮಗಧ ಎಕ್ಸ್‌ಪ್ರೆಸ್ ರೈಲು ಪಾಟ್ನಾ ಮೂಲಕ ಇಸ್ಲಾಂಪುರಕ್ಕೆ ತೆರಳುತ್ತಿತ್ತು. ಹಾದಿ ಮಧ್ಯೆ ಬಿಹಾರದ ನಳಂದಾ ಜಿಲ್ಲೆಯ ಹಿಲ್ಸಾ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ, ಅದೇ ಮಾರ್ಗವಾಗಿ ಗೂಡ್ಸ್ ರೈಲೊಂದು ಇಸ್ಲಾಂಪುರದಿಂದ ದಹಿಯಾವಾನ್ ಕಡೆಗೆ ಬರುತ್ತಿತ್ತು. ಸರಕನ್ನು ಸಾಗಿಸುತ್ತಿದ್ದ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಮಗಧ ಎಕ್ಸ್​ಪ್ರೆಸ್​ ರೈಲಿನ ಪಕ್ಕದಲ್ಲೇ ದಿಢೀರ್​ ಬ್ರೇಕ್​ ಹಾಕಿ ನಿಂತಿದೆ.

ಎರಡೂ ರೈಲುಗಳಿಗೆ ಒಂದೇ ಮಾರ್ಗ: ವಿಚಿತ್ರ ಎಂದರೆ, ಎರಡೂ ರೈಲುಗಳಿಗೆ ಹಿಲ್ಸಾ ಸ್ಟೇಷನ್​ನಲ್ಲಿ ಒಂದೇ ಮಾರ್ಗದ ಸೂಚನೆ ನೀಡಲಾಗಿದೆ. ಇದರಿಂದಾಗಿ ಮಗಧ ರೈಲು ಬಂದು ನಿಂತಿದೆ. ಹಾಗಿದ್ದಾಗ್ಯೂ ಗೂಡ್ಸ್ ರೈಲಿಗೂ ಅದೇ ಹಳಿಯನ್ನು ಸ್ಟೇಷನ್​ ಮಾಸ್ಟರ್​ ಸೂಚಿಸಿದ್ದಾರೆ. ಹೀಗಾಗಿ ಎರಡೂ ರೈಲುಗಳು ಒಂದೇ ಹಳಿಗೆ ಬಂದಿದ್ದರಿಂದ ಚಾಲಕನ ಬುದ್ಧಿವಂತಿಕೆಯಿಂದಾಗಿ ಅಪಘಾತವಾಗುವ ಮುನ್ನ ತಪ್ಪಿಸಿಕೊಂಡಿವೆ.

ರೈಲ್ವೇ ಸ್ಟೇಷನ್​ ಮಾಸ್ಟರ್​ ಕಾರಣ: ಗೂಡ್ಸ್​ ರೈಲು ದಿಢೀರ್​ ಮಗಧ ಎಕ್ಸ್​ಪ್ರೆಸ್​ ಹಿಂದೆಯೇ ಬಂದು ನಿಂತಾಗ ಭಯಗೊಂಡ ಪ್ರಯಾಣಿಕರು ಓಡಿ ಹೋಗಿದ್ದಾರೆ. ಬಳಿಕ ಆಘಾತಗೊಂಡ ಪ್ರಯಾಣಿಕರು ಹಳಿಯ ಮೇಲೆ ಬಂದು ಗಲಾಟೆ ಮಾಡಿದ್ದಾರೆ. ರೈಲ್ವೆ ಸ್ಟೇಷನ್​ ಮಾಸ್ಟರ್​ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಲಿತ್ತು. ಆದರೆ, ಚಾಲಕನ ಮುನ್ನೆಚ್ಚರಿಕೆಯಿಂದ ಅನಾಹುತ ತಪ್ಪಿದೆ. ಇಲ್ಲವಾದಲ್ಲಿ ಛತ್​ ಪೂಜೆಗೆ ಹೊರಟಿದ್ದ ನೂರಾರು ಪ್ರಯಾಣಿಕರಿದ್ದ ರೈಲು ದುರಂತಕ್ಕೀಡಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಲ್ಸಾ ಮತ್ತು ಜೂನಿಯರ್ ರೈಲ್ವೇ ಹಾಲ್ಟ್ ನಡುವಿನ ಹಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಗೂಡ್ಸ್ ರೈಲು ನಿಧಾನವಾಗಿ ಚಲಿಸುತ್ತಿದ್ದು, ಹೀಗಾಗಿ ಎದುರುಗಡೆ ಮಗಧ ಎಕ್ಸ್​ಪ್ರೆಸ್​ ಕಂಡ ತಕ್ಷಣವೇ ಗೂಡ್ಸ್ ರೈಲಿನ ಚಾಲಕ ಬ್ರೇಕ್ ಹಾಕಿದ್ದಾನೆ. ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸಲಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಪ್ಪು ಮಾಡಿದ ರೈಲ್ವೆ ಸ್ಟೇಷನ್​ ಮಾಸ್ಟರ್​ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಚೆಗೆ ರಾಜಸ್ಥಾನದ ಚಿತ್ತೋರ್​ಗಢ ಜಿಲ್ಲೆಯಲ್ಲಿ ರೈಲ್ವೆ ಅಧಿಕಾರಿಗಳು ಹಳಿಯ ಮೇಲೆ ಕಲ್ಲು, ಬಂಡೆ ಮತ್ತು ರಾಡ್​ಗಳನ್ನು ಪತ್ತೆ ಹಚ್ಚಿ ಉದಯಪುರದಿಂದ ಜೈಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ಅಪಘಾತವನ್ನು ತಪ್ಪಿಸಿದ್ದರು.

ಇದನ್ನೂ ಓದಿ: ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು

ನಳಂದಾ (ಬಿಹಾರ) : ಬಿಹಾರದ ನಳಂದಾ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಮಗಧ ಎಕ್ಸ್​ಪ್ರೆಸ್​ ಮತ್ತು ಗೂಡ್ಸ್​ ರೈಲಿನ ಮಧ್ಯೆ ಇನ್ನೇನು ಡಿಕ್ಕಿಯಾಗಬೇಕು ಎನ್ನುವಷ್ಟರಲ್ಲಿ ಹಠಾತ್​ ಬ್ರೇಕ್​ ಹಾಕಲಾಗಿದೆ. ಇದರಿಂದ ನೂರಾರು ಜನರಿದ್ದ ರೈಲು ಸಂಭವನೀಯ ಅಪಘಾತದಿಂದ ಪಾರಾಗಿದೆ.

ನವದೆಹಲಿಯಿಂದ ಹೊರಟಿದ್ದ ಮಗಧ ಎಕ್ಸ್‌ಪ್ರೆಸ್ ರೈಲು ಪಾಟ್ನಾ ಮೂಲಕ ಇಸ್ಲಾಂಪುರಕ್ಕೆ ತೆರಳುತ್ತಿತ್ತು. ಹಾದಿ ಮಧ್ಯೆ ಬಿಹಾರದ ನಳಂದಾ ಜಿಲ್ಲೆಯ ಹಿಲ್ಸಾ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ, ಅದೇ ಮಾರ್ಗವಾಗಿ ಗೂಡ್ಸ್ ರೈಲೊಂದು ಇಸ್ಲಾಂಪುರದಿಂದ ದಹಿಯಾವಾನ್ ಕಡೆಗೆ ಬರುತ್ತಿತ್ತು. ಸರಕನ್ನು ಸಾಗಿಸುತ್ತಿದ್ದ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಮಗಧ ಎಕ್ಸ್​ಪ್ರೆಸ್​ ರೈಲಿನ ಪಕ್ಕದಲ್ಲೇ ದಿಢೀರ್​ ಬ್ರೇಕ್​ ಹಾಕಿ ನಿಂತಿದೆ.

ಎರಡೂ ರೈಲುಗಳಿಗೆ ಒಂದೇ ಮಾರ್ಗ: ವಿಚಿತ್ರ ಎಂದರೆ, ಎರಡೂ ರೈಲುಗಳಿಗೆ ಹಿಲ್ಸಾ ಸ್ಟೇಷನ್​ನಲ್ಲಿ ಒಂದೇ ಮಾರ್ಗದ ಸೂಚನೆ ನೀಡಲಾಗಿದೆ. ಇದರಿಂದಾಗಿ ಮಗಧ ರೈಲು ಬಂದು ನಿಂತಿದೆ. ಹಾಗಿದ್ದಾಗ್ಯೂ ಗೂಡ್ಸ್ ರೈಲಿಗೂ ಅದೇ ಹಳಿಯನ್ನು ಸ್ಟೇಷನ್​ ಮಾಸ್ಟರ್​ ಸೂಚಿಸಿದ್ದಾರೆ. ಹೀಗಾಗಿ ಎರಡೂ ರೈಲುಗಳು ಒಂದೇ ಹಳಿಗೆ ಬಂದಿದ್ದರಿಂದ ಚಾಲಕನ ಬುದ್ಧಿವಂತಿಕೆಯಿಂದಾಗಿ ಅಪಘಾತವಾಗುವ ಮುನ್ನ ತಪ್ಪಿಸಿಕೊಂಡಿವೆ.

ರೈಲ್ವೇ ಸ್ಟೇಷನ್​ ಮಾಸ್ಟರ್​ ಕಾರಣ: ಗೂಡ್ಸ್​ ರೈಲು ದಿಢೀರ್​ ಮಗಧ ಎಕ್ಸ್​ಪ್ರೆಸ್​ ಹಿಂದೆಯೇ ಬಂದು ನಿಂತಾಗ ಭಯಗೊಂಡ ಪ್ರಯಾಣಿಕರು ಓಡಿ ಹೋಗಿದ್ದಾರೆ. ಬಳಿಕ ಆಘಾತಗೊಂಡ ಪ್ರಯಾಣಿಕರು ಹಳಿಯ ಮೇಲೆ ಬಂದು ಗಲಾಟೆ ಮಾಡಿದ್ದಾರೆ. ರೈಲ್ವೆ ಸ್ಟೇಷನ್​ ಮಾಸ್ಟರ್​ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಲಿತ್ತು. ಆದರೆ, ಚಾಲಕನ ಮುನ್ನೆಚ್ಚರಿಕೆಯಿಂದ ಅನಾಹುತ ತಪ್ಪಿದೆ. ಇಲ್ಲವಾದಲ್ಲಿ ಛತ್​ ಪೂಜೆಗೆ ಹೊರಟಿದ್ದ ನೂರಾರು ಪ್ರಯಾಣಿಕರಿದ್ದ ರೈಲು ದುರಂತಕ್ಕೀಡಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಲ್ಸಾ ಮತ್ತು ಜೂನಿಯರ್ ರೈಲ್ವೇ ಹಾಲ್ಟ್ ನಡುವಿನ ಹಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಗೂಡ್ಸ್ ರೈಲು ನಿಧಾನವಾಗಿ ಚಲಿಸುತ್ತಿದ್ದು, ಹೀಗಾಗಿ ಎದುರುಗಡೆ ಮಗಧ ಎಕ್ಸ್​ಪ್ರೆಸ್​ ಕಂಡ ತಕ್ಷಣವೇ ಗೂಡ್ಸ್ ರೈಲಿನ ಚಾಲಕ ಬ್ರೇಕ್ ಹಾಕಿದ್ದಾನೆ. ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸಲಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಪ್ಪು ಮಾಡಿದ ರೈಲ್ವೆ ಸ್ಟೇಷನ್​ ಮಾಸ್ಟರ್​ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಚೆಗೆ ರಾಜಸ್ಥಾನದ ಚಿತ್ತೋರ್​ಗಢ ಜಿಲ್ಲೆಯಲ್ಲಿ ರೈಲ್ವೆ ಅಧಿಕಾರಿಗಳು ಹಳಿಯ ಮೇಲೆ ಕಲ್ಲು, ಬಂಡೆ ಮತ್ತು ರಾಡ್​ಗಳನ್ನು ಪತ್ತೆ ಹಚ್ಚಿ ಉದಯಪುರದಿಂದ ಜೈಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ಅಪಘಾತವನ್ನು ತಪ್ಪಿಸಿದ್ದರು.

ಇದನ್ನೂ ಓದಿ: ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.