ETV Bharat / bharat

ವಿಶೇಷ ಅಂಕಣ: ವರ್ಚುವಲ್ ಕೋರ್ಟ್ ವಿಚಾರಣೆಗಳು ಹೇಗೆ ನಡೆಯುತ್ತವೆ ಗೊತ್ತಾ?

author img

By

Published : May 30, 2020, 11:09 AM IST

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ಬಾಕಿ ಇರುವ ಅನೇಕ ಪ್ರಮುಖ ಪ್ರಕರಣಗಳನ್ನು ವರ್ಚುವಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅರ್ಜಿದಾರರು ಮತ್ತು ಪ್ರತಿವಾದಿಗಳು ಭಾಗವಹಿಸುವಿಕೆಯೊಂದಿಗೆ ಕಲಾಪ ನಡೆಸಲಾಗುತ್ತಿದೆ.

Virtual court proceedings
ವರ್ಚುವಲ್ ಕೋರ್ಟ್ ವಿಚಾರಣೆಗಳು

ಶ್ರೀನಗರ: ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಬಹುತೇಕ ಸ್ಥಗಿತಗೊಳಿಸಿದೆ. ಭಾರತೀಯ ನ್ಯಾಯಾಲಯದ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೂ ಸಹ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇದೀಗ ಅದಕ್ಕೊಂದು ಪರಿಹಾರ ಕಂಡುಹಿಡಿದಿದ್ದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ಬಾಕಿ ಇರುವ ಅನೇಕ ಪ್ರಮುಖ ಪ್ರಕರಣಗಳನ್ನು ವರ್ಚುವಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅರ್ಜಿದಾರರು ಮತ್ತು ಪ್ರತಿವಾದಿಗಳು ಭಾಗವಹಿಸುವಿಕೆಯೊಂದಿಗೆ ಕಲಾಪ ನಡೆಸಲಾಗುತ್ತಿದೆ.

ನಿನ್ನೆ ನಡೆದ ವಿಚಾರಣೆಯಲ್ಲಿ, ಕಾಶ್ಮೀರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್, ಆರೋಗ್ಯ ಕಾರಣ ನೀಡಿ ತನ್ನ ಬಿಡುಗಡೆಗಾಗಿ ಅರ್ಜಿಯನ್ನು ಸಲ್ಲಿಸಿದ ಪ್ರಕರಣದ ಪ್ರಮುಖ ನ್ಯಾಯಾಲಯದ ವಿಚಾರಣೆಗೆ ಸಾಕ್ಷಿಯಾಗುವ ಅಭೂತಪೂರ್ವ ಅವಕಾಶ ಈಟಿವಿ ಭಾರತ್‌ನ ಈ ವರದಿಗಾರನಿಗೆ ಸಿಕ್ಕಿತ್ತು. ಆರ್ಟಿಕಲ್ 370 ಮತ್ತು 35 ಎ ರದ್ದುಪಡಿಸಿದ ನಂತರದ ಬೆಳೆವಣಿಗೆಯಲ್ಲಿ ಕಳೆದ ವರ್ಷ ಅವರನ್ನ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಲಾಗಿತ್ತು. ಈ ವರದಿಗಾರ ಈ ಹಿಂದೆ ಕೋರ್ಟ್ ಹಾಲ್ ನಲ್ಲಿ ಹಲವು ಪ್ರಕರಣಗಳ ವಿಚಾರಣೆಗೆ ಸಾಕ್ಷಿಯಾಗಿದ್ದಾರೇ. ಆದರೆ, ನಿನ್ನೆ ನಡೆದ ವರ್ಚುವಲ್ ಕೋರ್ಟ್ ಕಲಾಪದ ಅನುಭವವು ವಿಭಿನ್ನ ಮತ್ತು ಆಸಕ್ತಿದಾಯಕವಾಗಿತ್ತು ಎನ್ನುತ್ತಾರೆ.

ನನ್ನ ವರ್ಚುವಲ್ ಕೋರ್ಟ್ ಕಲಾಪದ ಸಂಪೂರ್ಣ ಅನುಭವವನ್ನು ಹಂಚಿಕೊಳ್ಳುವ ಮೊದಲು, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಬಳಸುತ್ತಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೀಡಿಯೊ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಮಾಹಿತಿಯನ್ನ ನಾನು ನಿಮಗೆ ಕೊಡಲು ಇಚ್ಚಿಸುತ್ತೇನೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳಲು ಅಪ್ಲಿಕೇಶನ್ ಅನುಮತಿಸುತ್ತದೆ. ಹೀಗಾಗಿ, ಅರ್ಜಿದಾರರು ಮುಂಚಿತವಾಗಿ ವರ್ಚುವಲ್ ಕೋರ್ಟ್ ರೂಂಗೆ ನೋಂದಾಯಿಸಿಕೊಳ್ಳಬೇಕು.

ನಗರದಲ್ಲಿ ಎಲ್ಲೆಡೆ ಲಾಕ್ ಡೌನ್ ಇದೆ. ಹೀಗಾಗಿ, ಸದ್ಯ ನ್ಯಾಯಾಲಯದ ಕೊಠಡಿಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ, ವರ್ಚುಬವ್ಲ ಕೋರ್ಟ್ ರಾಮ್ ನಲ್ಲಿ ನಡೆಸಲಾಗುತ್ತಿದೆ. ಪ್ರಕರಣ ಕುರಿತಂತೆ ಅರ್ಜಿದಾರ ಅಥವಾ ಅವನ / ಅವಳ ಪರ ವಕೀಲರು ಜಮ್ಮು ಮತ್ತು ಕಾಶ್ಮೀರದ ರಿಜಿಸ್ಟ್ರಾರ್‌ಗೆ ವಿಚಾರಣೆಗೆ ಮುಂಚಿತವಾಗಿ ತಿಳಿಸಬೇಕು. ನಾವು ಪ್ರಕರಣಕ್ಕೆ ಸಂಬಂಧಪಟ್ಟ ನ್ಯಾಯಾಧೀಶರನ್ನ ಸಹ ಸಂಪರ್ಕಿಸಬಹುದು, ರೋಸ್ಟರ್ ಪ್ರಕಾರ, ವಿಚಾರಣೆಗೆ ಅನುಮತಿ ನೀಡಿದರೆ, ಪ್ರಕರಣದ ವಿಚಾರಣೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುತ್ತೆ "ಎಂದು ಮಿಯಾನ್ ಕಯೂಮ್ ಅವರ ಲೀಗಲ್ ಟೀಮ್ ನಲ್ಲಿರುವ ವಕೀಲ ಮಿಯಾನ್ ತುಫೈಲ್ ಅಹ್ಮದ್ ವಿವರಿಸಿದರು.

"ವಿಚಾರಣೆಯನ್ನ ವಿಡಿಯೋ ಅಥವಾ ಕಾಲ್ ಕಾನ್ಫರೆನ್ಸಿಂಗ್ ಮೂಲಕ ನಡೆಸಬೇಕೇ ಎಂಬುದು ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಕಯೂಮ್ ಸರ್ ಪ್ರಕರಣದಲ್ಲಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಅವಕಾಶ ನೀಡಲಾಗಿದೆ. ಕೆಲವೊಮ್ಮೆ ನೆಟ್ವರ್ಕ್ ಕಳಪೆ ಆಗಿ ಇರುವುದರಿಂದ ವಿಚಾರಣೆಯ ಸಮಯ ಮರು ನಿಗದಿಯಾಗುತ್ತದೆ. ಹಿಂದಿನ ವಿಚಾರಣೆಗಳಲ್ಲೂ ನಾವು ಅಂತಹ ಸಂದರ್ಭಗಳನ್ನು ಎದುರಿಸಿದ್ದೇವೆ." ಎನ್ನುತ್ತಾರೆ ವಕೀಲ ಮಿಯಾಮ್.

ನ್ಯಾಯಾಲಯದ ಕಲಾಪದ ವೇಳೆ ಸಾಕ್ಷಿಯಾಗಲು ಪತ್ರಕರ್ತರು ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, "ಹೈಕೋರ್ಟ್ ಇತ್ತೀಚಿಗೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಪತ್ರಕರ್ತರು" ವರದಿ ಮಾಡಬಹುದಾದ "ಪ್ರಕರಣದಲ್ಲಿ ಮಾತ್ರ ವಿಚಾರಣೆಯ ಭಾಗವಾಗಬಹುದು. ಆದರೆ, ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಕೋರ್ಟ್ ಕಲಾಪ ರೆಕಾರ್ಡ್ ಮಾಡಲು ಅವಕಾಶ ನೀಡುವುದಿಲ್ಲ. ಬದಲಿಗೆ, ಆಡಿಯೋ ಮತ್ತು ಇನ್ನಿತರೇ ಮಾಹಿತಿಯನ್ನ ರೆಕಾರ್ಡ್ ಮಾಡಬಹುದು. ಇದರ ಜೊತೆಗೆ, ಕೋವಿಡ್-೧೯ ಕೊರೋನಾ ವಿರುಸ ತಡೆಗೆ ವಿಧಿಸಲಾಗಿರುವ ಸಾಮಾಜಿಕ, ದೈಹಿಕ ಅಂತರ ಸೇರಿದಂತೆ ಎಲ್ಲ ನಿಯಮಾವಳಿ, ಮಾನದಂಡಗಳು ಅನ್ವಯವಾಗುತ್ತವೆ. ಭೌತಿಕ ನ್ಯಾಯಾಲಯದ ಎಲ್ಲಾ ನಿಯಮಗಳು ಅನ್ವಯವಾಗುತ್ತವೆ. ಆದರೆ, ವರ್ಚುವಲ್ ಮೋಡ್‌ನಲ್ಲಿ ಕೋರ್ಟ್ ಕಲಾಪ ನಡೆಯುತ್ತದೆ. "

ನ್ಯಾಯಾಲಯದ ಪ್ರಕ್ರಿಯೆಗಳು

ಮಿಯಾನ್ ಅಬ್ದುಲ್ ಕಯೂಮ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆಯನ್ನು ನ್ಯಾಯಮೂರ್ತಿ ಅಲಿ ಮುಹಮ್ಮದ್ ಮ್ಯಾಗ್ರೇ ಮತ್ತು ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ಹಿಂದೆ ಮೇ 18 ರಂಡೆ ವಿಚಾರಣೆ ಪೂರ್ಣಗೊಳಿಸಿತ್ತು. ನಿನ್ನೆ ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಲು ಸಮಯ ನಿಗದಿ ಮಾಡಲಾಗಿತ್ತು.

ಕಣಿವೆ ರಾಜ್ಯದ ಇಬ್ಬರು ಪತ್ರಕರ್ತರ ಜೊತೆಗೆ ಈಟಿವಿ ಭಾರತ್ ವರದಿಗಾನನ್ನ ತೀರ್ಪು ಪ್ರಕಟಣೆಯ ಕಲಾಪ ವರದಿಗಾರಿಕೆಗೆ ಮಿಯಾನ್ ಕಯೂಮ್ ಕಾನೂನು ತಂಡದ ವಕೀಲರೊಬ್ಬರು ಆಹ್ವಾನ ನೀಡಿದ್ದರು. ವಕೀಲರ ನಿವಾಸದ ವಾತಾವರಣ ಮತ್ತು ಅಲ್ಲಿನ ಅನುಭವ ನಿಜಕ್ಕೂ ವರದಿಗಾರಿಕೆಯ ಅತ್ಯುತ್ತಮ ಕ್ಷಣವಾಗಿತ್ತು, ಮನೆಯೆಲ್ಲ ವರ್ಚುವಲ್ ಕೋರ್ಟ್ ರೂಂ ಆಗಿ ಮಾರ್ಪಟ್ಟಿದೆ. ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಕೋಟುಗಳು ಮತ್ತು ಗೌನ್ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ರೀತಿಯೇ ಹಾಜರಿದ್ದರು. ಒಂದೇ ವ್ಯತ್ಯಾಸವೆಂದರೆ ಹಾರ್ಡ್ ಡಿಸ್ಕ್ ಗಳು ​​ಮತ್ತು ದಾಖಲೆಗಳ ದೊಡ್ಡ ಹಾರ್ಡ್‌ಕಾಪಿಗಳ ಬದಲಿಗೆ ಪೆನ್ ಡ್ರೈವ್‌ಗಳು ಇಲ್ಲಿ ಬಳಸಲಾಗಿತ್ತು.

ಇನ್ನೇನು ವೀಡಿಯೊ ಅಪ್ಲಿಕೇಶನ್ ಆನ್ ಮಾಡಿದ ಕ್ಷಣ ಹತ್ತಿರವಾಗುತ್ತಿದ್ದಂತೆ ಇಂಟರ್ನೆಟ್ ವೇಗದ ಬಗ್ಗೆ ಹಿರಿಯ ವಕೀಲರು ಆತಂಕಗೊಂಡಿದ್ದರು, ಏಕೆಂದರೆ, ಕಳೆದ ಬಾರಿ ಹಲವಾರು ಬಾರಿ ಪ್ರಯತ್ನಗಳ ಹೊರತಾಗಿಯೂ ಅಪ್ಲಿಕೇಶನ್ ಅನ್ನು ಲೋಡ್ ಮಾಡಲು ಸಾಧ್ಯವಾಗದ ಕಾರಣ ವಿಚಾರಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಆದರೆ, ಈ ಬಾರಿಯೂ ಸಹ ಮೂರರಿಂದ ನಾಲ್ಕು ಭಾರೀ ಪ್ರಯತ್ನಗಳ ನಂತರವೇ ವಿಡಿಯೋ ಅಪ್ಲಿಕೇಶನ್ ವಿಚಾರಣೆಗೆ ಸಿದ್ದವಾಗಿತ್ತು. ಫೋನ್‌ಗಳನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸಲು ಮತ್ತು ತೀರ್ಪು ಉಚ್ಚರಿಸುವಾಗ ಅಗತ್ಯವಾದ ಅಂತರ ಮತ್ತು ಮೌನವನ್ನು ಕಾಪಾಡಿಕೊಳ್ಳಲು ನಮಗೆ ತಿಳಿಸಲಾಯಿತು.

'ಒನ್ ಸ್ಕ್ರೀನ್, 10 ವಿಂಡೋಗಳು'

ವಿಡಿಯೋ ಆಪ್ ಲೋಡ್ ಮಾಡಿದ ತಕ್ಷಣ, ನಾವು ನ್ಯಾಯಮೂರ್ತಿ ಮ್ಯಾಗ್ರೇ, ನ್ಯಾಯಮೂರ್ತಿ ಕೌಲ್, ಹಿರಿಯ ವಕೀಲ ಜಾಫರ್ ಷಾ, ವಕೀಲ ಮಿಯಾನ್ ತುಫೈಲ್ ಅಹ್ಮದ್, ವಕೀಲ ಎನ್.ಎ.ರೋಂಗಾ, ಅಡ್ವೊಕೇಟ್ ಜನರಲ್ ಡಿಸಿ ರೈನಾ, ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ಎ.ದಾರ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಾ ಅಮೀರ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಸೀಮ್ ಸಾಹ್ನಿ, ಭಾರತದ ಸಹಾಯಕ ಸಾಲಿಸಿಟರ್ ಜನರಲ್ ತಾಹಿರ್ ಮಜೀದ್ ಶಮ್ಸಿ ಎಲ್ಲರು ನಮ್ಮ ಕಣ್ಣಮುಂದೆ ಬಂದರು. ಆದರೆ, ಜೈಲಿನಲ್ಲಿದ್ದ ಕಾಶ್ಮೀರ ಬಾರ್ ಕೌನ್ಸಿಲ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್ ಎಲ್ಲಿಯೂ ಕಾಣಿಸಲಿಲ್ಲ.

"ನ್ಯಾಯಾಧೀಶರು ಸೂಚಿಸಿದರೆ ಅವಾಗ ಮಾತ್ರ ಅರ್ಜಿದಾರರನ್ನ ಕರೆಸಲಾಗುತ್ತದೆ, ಇವತ್ತು ಕೇವಲ ತೀರ್ಪು ಪ್ರಕಟಣೆ ಮಾತ್ರ ಇರುವುದರಿಂದ ಅರ್ಜಿದಾರ ಕಾಶ್ಮೀರ ಬಾರ್ ಕೌನ್ಸಿಲ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್ ಅವರನ್ನ ಕರೆಸಿಲ್ಲ" ಎಂದು ಆ ಬಳಿಕ ಹಿರಿಯ ಅಡ್ವೊಕೇಟ್ ಒಬ್ಬರು ನಮಗೆ ತಿಳಿಸಿದರು. ಎಂದಿನಂತೆ ಔಪಚಾರಿಕ ಪರಿಚಯ ಮತ್ತು ಇಂಟರ್ನೆಟ್ ವೇಗ ಸೇರಿದಂತೆ ಎಲ್ಲ ಸಂಪರ್ಕಗಳ ಪರಿಶೀಲನೆ ಬಳಿಕ ಜಸ್ಟೀಸ್ ಮ್ಯಾಗ್ರೆ ತೀರ್ಪು ಓದಲು ಆರಂಭಿಸಿದರು. ಅವರ ೧೦ ನಿಮಿಷಗಳ ಸಮಯದ ತೀರ್ಪು ಪ್ರಕಟಣೆಯಲ್ಲಿ ಜಸ್ಟೀಸ್ ಮ್ಯಾಗ್ರೆ ಅರ್ಜಿಯನ್ನ ವಜಾ ಮಾಡಿ ಈ ರೀತಿ ಹೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಬಂಧನದ ಕಾನೂನು ಅಮಾನ್ಯವಲ್ಲ ಏಕೆಂದರೆ ಅದು ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೆ ಆದೇಶಿಸಲು ಯಾವುದೇ ವಸ್ತುನಿಷ್ಠ ಮಾನದಂಡವನ್ನು ಸೂಚಿಸಿಲ್ಲ, ಮತ್ತು ಈ ವಿಷಯವನ್ನು ಕಾರ್ಯಗತಗೊಳಿಸುವ ಆಡಳಿತ ವ್ಯವಸ್ಥೆಯ ವ್ಯಕ್ತಿನಿಷ್ಠ ತೃಪ್ತಿಗೆ ಬಿಡುತ್ತದೆ.ಈ ದೃಷ್ಟಿಕೋನಕ್ಕೆ ಕಾರಣವೆಂದರೆ ತಡೆಗಟ್ಟುವ ಬಂಧನವು ಶಿಕ್ಷಾರ್ಹವಲ್ಲ ಆದರೆ ತಡೆಗಟ್ಟುವಂತದ್ದು ಮತ್ತು ಪೂರ್ವಾಗ್ರಹಪೀಡಿತವೆಂದು ಪರಿಗಣಿಸಲಾದ ಚಟುವಟಿಕೆಗಳನ್ನು ವ್ಯಕ್ತಿಯನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಬಂಧನದ ಕಾನೂನು ಆಶ್ರಯಿಸಲಾಗುತ್ತದೆ. "

"ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಬಂಧನವು ಅನುಮಾನ ಅಥವಾ ನಿರೀಕ್ಷೆಯ ಆಧಾರದ ಮೇಲೆ ಮತ್ತು ಪುರಾವೆಯ ಮೇಲೆ ನಡೆಯುವುದಲ್ಲ. ರಾಜ್ಯದ ಸುರಕ್ಷತೆಯ ಜವಾಬ್ದಾರಿ, ಅಥವಾ ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಗತ್ಯ ಸೇವೆಗಳು ಮತ್ತು ಸರಬರಾಜುಗಳ ನಿರ್ವಹಣೆ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಇರುತ್ತದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಬಂಧನವನ್ನು ಆದೇಶಿಸುವ ಅಧಿಕಾರ ಅವರಿಗೆ ಇರುತ್ತದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲು ಅಥವಾ ಇಲ್ಲದಿರಲು ಬಂಧನಕ್ಕೊಳಪಡಿಸುವ ಅಧಿಕಾರ ಹೊಂದಿರುವ ಅಧಿಕಾರಿಯ ವ್ಯಕ್ತಿನಿಷ್ಠ ತೃಪ್ತಿಯು ನ್ಯಾಯಾಲಯ ಮೌಲ್ಯಮಾಪನ ಮಾಡಲು ಬರುವುದಿಲ್ಲ.

ಒಬ್ಬ ವ್ಯಕ್ತಿಯನ್ನು ಬಂಧಿಸಲು ಆಡಳಿತಾತ್ಮಕ ನಿರ್ಧಾರಗಳ ಅಂಶಗಳನ್ನು ಪರಿಶೀಲಿಸಲು ನ್ಯಾಯಾಲಯವು ಸರಿಯಾದ ವೇದಿಕೆಯಲ್ಲ. ಈ ವಿಷಯವು ಸಲಹಾ ಮಂಡಳಿಯ ವ್ಯಾಪ್ತಿಯಲ್ಲಿ ಬರುತ್ತದೆ. ಬಂಧಿಸುವ ಅಧಿಕಾರದ ಮೇಲಿನ ಮೇಲ್ಮನವಿಯನ್ನ ವಿಚಾರಣೆ ನಡೆಸುವುದು ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇಲ್ಲ ಮತ್ತು ಬಂಧಿಸುವ ವೇಳೆ ಬಂಧನದ ಆಧಾರಗಳು ನಿಖರತೆ, ಸಂಬಂಧಪಟ್ಟ ವಿಷಯ, ಸಾಮೀಪ್ಯ ಮತ್ತು ಮುಂತಾದ ವಿಷಯಗಳ ಮೇಲೆ ಕೈಗೊಂಡ ತನ್ನದೇ ನಿರ್ಧಾರ, ಅಭಿಪ್ರಾಯವನ್ನು ಬದಲಿಸಲಾಗುವುದಿಲ್ಲ. "

"ಬಂಧನ ಮಾಡಿರುವ ಅಧಿಕಾರಿಗಳು ತಾವು ಆ ನಿರ್ಧಾರಕ್ಕೆ ಬರಲು ಕಾರಣವಾದ ನಾವು 2010 ರ ನಂತರ ಬಂಧಿತ ವ್ಯಕ್ತಿಯ ಪೂವಾಪರಃ ಚಟುವಟಿಕೆಗಳ ಬಗ್ಗೆ ಗುಪ್ತಚರ ವರದಿಗಳನ್ನ ಪರಿಶೀಲಿಸಿದ್ದೇವೆ. ಬಂಧನದ ಪ್ರಾಧಿಕಾರವು ಈ ಆಧಾರದಲ್ಲೇ ಬಂಧನ ಆದೇಶದಲಕ್ಕೆ ಬಂದಿರುವುದನ್ನು ತೋರಿಸಿದೆ. ಈ ವರದಿಗಳು ಹೊಸ ಸತ್ಯಗಳನ್ನ ಹೊರಚೆಲ್ಲುತ್ತವೆ ಎಂದು ಹೇಳಬಹುದು, "ಎಫ್ ಐಆರ್ ನಲ್ಲಿ (ಕಯೂಮ್) ವಿರುದ್ಧ ಆರೋಪಿಸಲಾಗಿರುವ ಒಂದು ಸಿದ್ದಾಂತದ ಪ್ರಕೃತಿಯು ಜೀವಂತ ಜ್ವಾಲಾಮುಖಿಯಂತಿದೆ.

2008 ಮತ್ತು 2010 ರಲ್ಲಿ ಬಂಧಿತನ ಮೇಲೆ ದಾಖಲಾಗಿರುವ ನಾಲ್ಕು ಎಫ್‌ಐಆರ್ ಮತ್ತು ಎಫ್‌ಐಆರ್ ಅನ್ನು ನೋಂದಾಯಿಸಿದ ನಂತರ ಆಪಾದಿತ ನಡೆಸಿದ್ದ್ದಾನೆನ್ನಲಾದ ಚಟುವಟಿಕೆಗಳನ್ನು ನ್ಯಾಯಾಲಯದ ಮುಂದೆ ತರಲಾಗಿದೆ, ಇದು ಅವರ ಹಿಂದಿನ ಚಟುವಟಿಕೆಗಳು ಮತ್ತು ಇತ್ತೀಚಿನ ಚಟುವಟಿಕೆಗಳ ನಡುವೆ ನೇರ ಸಂಪರ್ಕವಿದೆ ಮತ್ತು ಅವರು ತಮ್ಮ ಆ ಸಿದ್ದಾನಂತದಿಂದ ದೂರವಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಎಂದು ಹೇಳಿದರು.

ತೀರ್ಪಿನ ಅಂತಿಮ ಹಂತವನ್ನ ಓದಿದ ಜ್ಯೂಸ್ಟ್ರಿಸ್ ಕೌಲ್, "ಅಡ್ವೊಕೇಟ್ ಜನರಲ್ ತೆಗೆದುಕೊಂಡ ಮೇಲಿನ ಕಾನೂನುಬದ್ಧ ಮತ್ತು ಸರಿಯಾದ ವಾದದ ಬೆಳಕಿನಲ್ಲಿ, ಅಡ್ವೊಕೆಟ್ ಜನರಲ್ ಅವರ ನಿಲುವಿನ ಉಪಯೋಗ ಪಡೆದು ಅದಕ್ಕೆ ಬದ್ಧವಾಗಿರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಣಯವನ್ನು ಬಂಧಿತ ವ್ಯಕ್ತಿಗೆ ಬಿಡುತ್ತೇವೆ. ಬಂಧಿತನಿಂದ ಅಂತಹ ಯಾವುದೇ ಪ್ರಾತಿನಿಧ್ಯದ ಅರ್ಜಿ ಬಂದರೆ ಅದರ ಬಗ್ಗೆ JK PSAಯ ಸಂಬಂಧಿತ ನಿಬಂಧನೆ (ಗಳ) ಪ್ರಕಾರ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರ ಮತ್ತು ಸಂಬಂಧಪಟ್ಟ / ಸಮರ್ಥ ಪ್ರಾಧಿಕಾರದ (ಐಇಎಸ್) ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಅಂತಹ ಯಾವುದೇ ಅರ್ಜಿಯ ಮೇಲೆ ವ್ಯತಿರಿಕ್ತ ಆದೇಶವನ್ನು ಮಾಡಿದರೆ, ಯಾವುದೇ ಕಾನೂನು ಕ್ರಮಗಳನ್ನು ಒಳಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ತೀರ್ಪಿನ ಘೋಷಣೆಯ ಸಮಯದಲ್ಲಿ, ಜಾಫರ್ ಶಾ ಮತ್ತು ಇತರ ವಕೀಲರು ಎಎಜಿ ಬಿ.ಎ ಅವರಿಗೆ ಕೌಂಟರ್ ಕೊಡಲು ಯತ್ನಿಸಿದರು. ಆದರೆ, ತೀರ್ಪಿನಲ್ಲಿ ದಾರ್ ಅವರ ವಾದವನ್ನು ಮಾತ್ರ ಉಲ್ಲೇಖಿಸಲಾಗಿದೆ. ಮಿಯಾನ್ ಕಯೂಮ್ ಅವರ ಕಾನೂನು ತಂಡವು ಎತ್ತಿದ ಯಾವುದೇ ಅಂಶಗಳನ್ನು ನ್ಯಾಯಪೀಠ ಪರಿಗಣಿಸಲಿಲ್ಲ.

ತೀರ್ಪಿನ ಘೋಷಣೆಯ ನಂತರ, ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ವಕೀಲರು, "ನಾವು ಈ ಪ್ರಕರಣದಲ್ಲಿ ಸೋತಿದ್ದೇವೆ. ಅಷ್ಟೆ. ನಾವು ಇನ್ನೂ ಇತರ ಆಯ್ಕೆಗಳನ್ನು ಹುಡುಕುತ್ತೇವೆ. ನಮ್ಮ ಮುಂದಿನ ದಾರಿ ಯಾವುದು ಎಂಬುದನ್ನ ಘೋಷಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

- ಜುಲ್ಕರ್ನೈನ್ ಜುಲ್ಫಿ

ಶ್ರೀನಗರ: ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಬಹುತೇಕ ಸ್ಥಗಿತಗೊಳಿಸಿದೆ. ಭಾರತೀಯ ನ್ಯಾಯಾಲಯದ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೂ ಸಹ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇದೀಗ ಅದಕ್ಕೊಂದು ಪರಿಹಾರ ಕಂಡುಹಿಡಿದಿದ್ದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ಬಾಕಿ ಇರುವ ಅನೇಕ ಪ್ರಮುಖ ಪ್ರಕರಣಗಳನ್ನು ವರ್ಚುವಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅರ್ಜಿದಾರರು ಮತ್ತು ಪ್ರತಿವಾದಿಗಳು ಭಾಗವಹಿಸುವಿಕೆಯೊಂದಿಗೆ ಕಲಾಪ ನಡೆಸಲಾಗುತ್ತಿದೆ.

ನಿನ್ನೆ ನಡೆದ ವಿಚಾರಣೆಯಲ್ಲಿ, ಕಾಶ್ಮೀರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್, ಆರೋಗ್ಯ ಕಾರಣ ನೀಡಿ ತನ್ನ ಬಿಡುಗಡೆಗಾಗಿ ಅರ್ಜಿಯನ್ನು ಸಲ್ಲಿಸಿದ ಪ್ರಕರಣದ ಪ್ರಮುಖ ನ್ಯಾಯಾಲಯದ ವಿಚಾರಣೆಗೆ ಸಾಕ್ಷಿಯಾಗುವ ಅಭೂತಪೂರ್ವ ಅವಕಾಶ ಈಟಿವಿ ಭಾರತ್‌ನ ಈ ವರದಿಗಾರನಿಗೆ ಸಿಕ್ಕಿತ್ತು. ಆರ್ಟಿಕಲ್ 370 ಮತ್ತು 35 ಎ ರದ್ದುಪಡಿಸಿದ ನಂತರದ ಬೆಳೆವಣಿಗೆಯಲ್ಲಿ ಕಳೆದ ವರ್ಷ ಅವರನ್ನ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಲಾಗಿತ್ತು. ಈ ವರದಿಗಾರ ಈ ಹಿಂದೆ ಕೋರ್ಟ್ ಹಾಲ್ ನಲ್ಲಿ ಹಲವು ಪ್ರಕರಣಗಳ ವಿಚಾರಣೆಗೆ ಸಾಕ್ಷಿಯಾಗಿದ್ದಾರೇ. ಆದರೆ, ನಿನ್ನೆ ನಡೆದ ವರ್ಚುವಲ್ ಕೋರ್ಟ್ ಕಲಾಪದ ಅನುಭವವು ವಿಭಿನ್ನ ಮತ್ತು ಆಸಕ್ತಿದಾಯಕವಾಗಿತ್ತು ಎನ್ನುತ್ತಾರೆ.

ನನ್ನ ವರ್ಚುವಲ್ ಕೋರ್ಟ್ ಕಲಾಪದ ಸಂಪೂರ್ಣ ಅನುಭವವನ್ನು ಹಂಚಿಕೊಳ್ಳುವ ಮೊದಲು, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಬಳಸುತ್ತಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೀಡಿಯೊ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಮಾಹಿತಿಯನ್ನ ನಾನು ನಿಮಗೆ ಕೊಡಲು ಇಚ್ಚಿಸುತ್ತೇನೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳಲು ಅಪ್ಲಿಕೇಶನ್ ಅನುಮತಿಸುತ್ತದೆ. ಹೀಗಾಗಿ, ಅರ್ಜಿದಾರರು ಮುಂಚಿತವಾಗಿ ವರ್ಚುವಲ್ ಕೋರ್ಟ್ ರೂಂಗೆ ನೋಂದಾಯಿಸಿಕೊಳ್ಳಬೇಕು.

ನಗರದಲ್ಲಿ ಎಲ್ಲೆಡೆ ಲಾಕ್ ಡೌನ್ ಇದೆ. ಹೀಗಾಗಿ, ಸದ್ಯ ನ್ಯಾಯಾಲಯದ ಕೊಠಡಿಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ, ವರ್ಚುಬವ್ಲ ಕೋರ್ಟ್ ರಾಮ್ ನಲ್ಲಿ ನಡೆಸಲಾಗುತ್ತಿದೆ. ಪ್ರಕರಣ ಕುರಿತಂತೆ ಅರ್ಜಿದಾರ ಅಥವಾ ಅವನ / ಅವಳ ಪರ ವಕೀಲರು ಜಮ್ಮು ಮತ್ತು ಕಾಶ್ಮೀರದ ರಿಜಿಸ್ಟ್ರಾರ್‌ಗೆ ವಿಚಾರಣೆಗೆ ಮುಂಚಿತವಾಗಿ ತಿಳಿಸಬೇಕು. ನಾವು ಪ್ರಕರಣಕ್ಕೆ ಸಂಬಂಧಪಟ್ಟ ನ್ಯಾಯಾಧೀಶರನ್ನ ಸಹ ಸಂಪರ್ಕಿಸಬಹುದು, ರೋಸ್ಟರ್ ಪ್ರಕಾರ, ವಿಚಾರಣೆಗೆ ಅನುಮತಿ ನೀಡಿದರೆ, ಪ್ರಕರಣದ ವಿಚಾರಣೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುತ್ತೆ "ಎಂದು ಮಿಯಾನ್ ಕಯೂಮ್ ಅವರ ಲೀಗಲ್ ಟೀಮ್ ನಲ್ಲಿರುವ ವಕೀಲ ಮಿಯಾನ್ ತುಫೈಲ್ ಅಹ್ಮದ್ ವಿವರಿಸಿದರು.

"ವಿಚಾರಣೆಯನ್ನ ವಿಡಿಯೋ ಅಥವಾ ಕಾಲ್ ಕಾನ್ಫರೆನ್ಸಿಂಗ್ ಮೂಲಕ ನಡೆಸಬೇಕೇ ಎಂಬುದು ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಕಯೂಮ್ ಸರ್ ಪ್ರಕರಣದಲ್ಲಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಅವಕಾಶ ನೀಡಲಾಗಿದೆ. ಕೆಲವೊಮ್ಮೆ ನೆಟ್ವರ್ಕ್ ಕಳಪೆ ಆಗಿ ಇರುವುದರಿಂದ ವಿಚಾರಣೆಯ ಸಮಯ ಮರು ನಿಗದಿಯಾಗುತ್ತದೆ. ಹಿಂದಿನ ವಿಚಾರಣೆಗಳಲ್ಲೂ ನಾವು ಅಂತಹ ಸಂದರ್ಭಗಳನ್ನು ಎದುರಿಸಿದ್ದೇವೆ." ಎನ್ನುತ್ತಾರೆ ವಕೀಲ ಮಿಯಾಮ್.

ನ್ಯಾಯಾಲಯದ ಕಲಾಪದ ವೇಳೆ ಸಾಕ್ಷಿಯಾಗಲು ಪತ್ರಕರ್ತರು ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, "ಹೈಕೋರ್ಟ್ ಇತ್ತೀಚಿಗೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಪತ್ರಕರ್ತರು" ವರದಿ ಮಾಡಬಹುದಾದ "ಪ್ರಕರಣದಲ್ಲಿ ಮಾತ್ರ ವಿಚಾರಣೆಯ ಭಾಗವಾಗಬಹುದು. ಆದರೆ, ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಕೋರ್ಟ್ ಕಲಾಪ ರೆಕಾರ್ಡ್ ಮಾಡಲು ಅವಕಾಶ ನೀಡುವುದಿಲ್ಲ. ಬದಲಿಗೆ, ಆಡಿಯೋ ಮತ್ತು ಇನ್ನಿತರೇ ಮಾಹಿತಿಯನ್ನ ರೆಕಾರ್ಡ್ ಮಾಡಬಹುದು. ಇದರ ಜೊತೆಗೆ, ಕೋವಿಡ್-೧೯ ಕೊರೋನಾ ವಿರುಸ ತಡೆಗೆ ವಿಧಿಸಲಾಗಿರುವ ಸಾಮಾಜಿಕ, ದೈಹಿಕ ಅಂತರ ಸೇರಿದಂತೆ ಎಲ್ಲ ನಿಯಮಾವಳಿ, ಮಾನದಂಡಗಳು ಅನ್ವಯವಾಗುತ್ತವೆ. ಭೌತಿಕ ನ್ಯಾಯಾಲಯದ ಎಲ್ಲಾ ನಿಯಮಗಳು ಅನ್ವಯವಾಗುತ್ತವೆ. ಆದರೆ, ವರ್ಚುವಲ್ ಮೋಡ್‌ನಲ್ಲಿ ಕೋರ್ಟ್ ಕಲಾಪ ನಡೆಯುತ್ತದೆ. "

ನ್ಯಾಯಾಲಯದ ಪ್ರಕ್ರಿಯೆಗಳು

ಮಿಯಾನ್ ಅಬ್ದುಲ್ ಕಯೂಮ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆಯನ್ನು ನ್ಯಾಯಮೂರ್ತಿ ಅಲಿ ಮುಹಮ್ಮದ್ ಮ್ಯಾಗ್ರೇ ಮತ್ತು ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ಹಿಂದೆ ಮೇ 18 ರಂಡೆ ವಿಚಾರಣೆ ಪೂರ್ಣಗೊಳಿಸಿತ್ತು. ನಿನ್ನೆ ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಲು ಸಮಯ ನಿಗದಿ ಮಾಡಲಾಗಿತ್ತು.

ಕಣಿವೆ ರಾಜ್ಯದ ಇಬ್ಬರು ಪತ್ರಕರ್ತರ ಜೊತೆಗೆ ಈಟಿವಿ ಭಾರತ್ ವರದಿಗಾನನ್ನ ತೀರ್ಪು ಪ್ರಕಟಣೆಯ ಕಲಾಪ ವರದಿಗಾರಿಕೆಗೆ ಮಿಯಾನ್ ಕಯೂಮ್ ಕಾನೂನು ತಂಡದ ವಕೀಲರೊಬ್ಬರು ಆಹ್ವಾನ ನೀಡಿದ್ದರು. ವಕೀಲರ ನಿವಾಸದ ವಾತಾವರಣ ಮತ್ತು ಅಲ್ಲಿನ ಅನುಭವ ನಿಜಕ್ಕೂ ವರದಿಗಾರಿಕೆಯ ಅತ್ಯುತ್ತಮ ಕ್ಷಣವಾಗಿತ್ತು, ಮನೆಯೆಲ್ಲ ವರ್ಚುವಲ್ ಕೋರ್ಟ್ ರೂಂ ಆಗಿ ಮಾರ್ಪಟ್ಟಿದೆ. ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಕೋಟುಗಳು ಮತ್ತು ಗೌನ್ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ರೀತಿಯೇ ಹಾಜರಿದ್ದರು. ಒಂದೇ ವ್ಯತ್ಯಾಸವೆಂದರೆ ಹಾರ್ಡ್ ಡಿಸ್ಕ್ ಗಳು ​​ಮತ್ತು ದಾಖಲೆಗಳ ದೊಡ್ಡ ಹಾರ್ಡ್‌ಕಾಪಿಗಳ ಬದಲಿಗೆ ಪೆನ್ ಡ್ರೈವ್‌ಗಳು ಇಲ್ಲಿ ಬಳಸಲಾಗಿತ್ತು.

ಇನ್ನೇನು ವೀಡಿಯೊ ಅಪ್ಲಿಕೇಶನ್ ಆನ್ ಮಾಡಿದ ಕ್ಷಣ ಹತ್ತಿರವಾಗುತ್ತಿದ್ದಂತೆ ಇಂಟರ್ನೆಟ್ ವೇಗದ ಬಗ್ಗೆ ಹಿರಿಯ ವಕೀಲರು ಆತಂಕಗೊಂಡಿದ್ದರು, ಏಕೆಂದರೆ, ಕಳೆದ ಬಾರಿ ಹಲವಾರು ಬಾರಿ ಪ್ರಯತ್ನಗಳ ಹೊರತಾಗಿಯೂ ಅಪ್ಲಿಕೇಶನ್ ಅನ್ನು ಲೋಡ್ ಮಾಡಲು ಸಾಧ್ಯವಾಗದ ಕಾರಣ ವಿಚಾರಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಆದರೆ, ಈ ಬಾರಿಯೂ ಸಹ ಮೂರರಿಂದ ನಾಲ್ಕು ಭಾರೀ ಪ್ರಯತ್ನಗಳ ನಂತರವೇ ವಿಡಿಯೋ ಅಪ್ಲಿಕೇಶನ್ ವಿಚಾರಣೆಗೆ ಸಿದ್ದವಾಗಿತ್ತು. ಫೋನ್‌ಗಳನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸಲು ಮತ್ತು ತೀರ್ಪು ಉಚ್ಚರಿಸುವಾಗ ಅಗತ್ಯವಾದ ಅಂತರ ಮತ್ತು ಮೌನವನ್ನು ಕಾಪಾಡಿಕೊಳ್ಳಲು ನಮಗೆ ತಿಳಿಸಲಾಯಿತು.

'ಒನ್ ಸ್ಕ್ರೀನ್, 10 ವಿಂಡೋಗಳು'

ವಿಡಿಯೋ ಆಪ್ ಲೋಡ್ ಮಾಡಿದ ತಕ್ಷಣ, ನಾವು ನ್ಯಾಯಮೂರ್ತಿ ಮ್ಯಾಗ್ರೇ, ನ್ಯಾಯಮೂರ್ತಿ ಕೌಲ್, ಹಿರಿಯ ವಕೀಲ ಜಾಫರ್ ಷಾ, ವಕೀಲ ಮಿಯಾನ್ ತುಫೈಲ್ ಅಹ್ಮದ್, ವಕೀಲ ಎನ್.ಎ.ರೋಂಗಾ, ಅಡ್ವೊಕೇಟ್ ಜನರಲ್ ಡಿಸಿ ರೈನಾ, ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ಎ.ದಾರ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಾ ಅಮೀರ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಸೀಮ್ ಸಾಹ್ನಿ, ಭಾರತದ ಸಹಾಯಕ ಸಾಲಿಸಿಟರ್ ಜನರಲ್ ತಾಹಿರ್ ಮಜೀದ್ ಶಮ್ಸಿ ಎಲ್ಲರು ನಮ್ಮ ಕಣ್ಣಮುಂದೆ ಬಂದರು. ಆದರೆ, ಜೈಲಿನಲ್ಲಿದ್ದ ಕಾಶ್ಮೀರ ಬಾರ್ ಕೌನ್ಸಿಲ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್ ಎಲ್ಲಿಯೂ ಕಾಣಿಸಲಿಲ್ಲ.

"ನ್ಯಾಯಾಧೀಶರು ಸೂಚಿಸಿದರೆ ಅವಾಗ ಮಾತ್ರ ಅರ್ಜಿದಾರರನ್ನ ಕರೆಸಲಾಗುತ್ತದೆ, ಇವತ್ತು ಕೇವಲ ತೀರ್ಪು ಪ್ರಕಟಣೆ ಮಾತ್ರ ಇರುವುದರಿಂದ ಅರ್ಜಿದಾರ ಕಾಶ್ಮೀರ ಬಾರ್ ಕೌನ್ಸಿಲ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್ ಅವರನ್ನ ಕರೆಸಿಲ್ಲ" ಎಂದು ಆ ಬಳಿಕ ಹಿರಿಯ ಅಡ್ವೊಕೇಟ್ ಒಬ್ಬರು ನಮಗೆ ತಿಳಿಸಿದರು. ಎಂದಿನಂತೆ ಔಪಚಾರಿಕ ಪರಿಚಯ ಮತ್ತು ಇಂಟರ್ನೆಟ್ ವೇಗ ಸೇರಿದಂತೆ ಎಲ್ಲ ಸಂಪರ್ಕಗಳ ಪರಿಶೀಲನೆ ಬಳಿಕ ಜಸ್ಟೀಸ್ ಮ್ಯಾಗ್ರೆ ತೀರ್ಪು ಓದಲು ಆರಂಭಿಸಿದರು. ಅವರ ೧೦ ನಿಮಿಷಗಳ ಸಮಯದ ತೀರ್ಪು ಪ್ರಕಟಣೆಯಲ್ಲಿ ಜಸ್ಟೀಸ್ ಮ್ಯಾಗ್ರೆ ಅರ್ಜಿಯನ್ನ ವಜಾ ಮಾಡಿ ಈ ರೀತಿ ಹೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಬಂಧನದ ಕಾನೂನು ಅಮಾನ್ಯವಲ್ಲ ಏಕೆಂದರೆ ಅದು ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೆ ಆದೇಶಿಸಲು ಯಾವುದೇ ವಸ್ತುನಿಷ್ಠ ಮಾನದಂಡವನ್ನು ಸೂಚಿಸಿಲ್ಲ, ಮತ್ತು ಈ ವಿಷಯವನ್ನು ಕಾರ್ಯಗತಗೊಳಿಸುವ ಆಡಳಿತ ವ್ಯವಸ್ಥೆಯ ವ್ಯಕ್ತಿನಿಷ್ಠ ತೃಪ್ತಿಗೆ ಬಿಡುತ್ತದೆ.ಈ ದೃಷ್ಟಿಕೋನಕ್ಕೆ ಕಾರಣವೆಂದರೆ ತಡೆಗಟ್ಟುವ ಬಂಧನವು ಶಿಕ್ಷಾರ್ಹವಲ್ಲ ಆದರೆ ತಡೆಗಟ್ಟುವಂತದ್ದು ಮತ್ತು ಪೂರ್ವಾಗ್ರಹಪೀಡಿತವೆಂದು ಪರಿಗಣಿಸಲಾದ ಚಟುವಟಿಕೆಗಳನ್ನು ವ್ಯಕ್ತಿಯನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಬಂಧನದ ಕಾನೂನು ಆಶ್ರಯಿಸಲಾಗುತ್ತದೆ. "

"ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಬಂಧನವು ಅನುಮಾನ ಅಥವಾ ನಿರೀಕ್ಷೆಯ ಆಧಾರದ ಮೇಲೆ ಮತ್ತು ಪುರಾವೆಯ ಮೇಲೆ ನಡೆಯುವುದಲ್ಲ. ರಾಜ್ಯದ ಸುರಕ್ಷತೆಯ ಜವಾಬ್ದಾರಿ, ಅಥವಾ ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಗತ್ಯ ಸೇವೆಗಳು ಮತ್ತು ಸರಬರಾಜುಗಳ ನಿರ್ವಹಣೆ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಇರುತ್ತದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಬಂಧನವನ್ನು ಆದೇಶಿಸುವ ಅಧಿಕಾರ ಅವರಿಗೆ ಇರುತ್ತದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲು ಅಥವಾ ಇಲ್ಲದಿರಲು ಬಂಧನಕ್ಕೊಳಪಡಿಸುವ ಅಧಿಕಾರ ಹೊಂದಿರುವ ಅಧಿಕಾರಿಯ ವ್ಯಕ್ತಿನಿಷ್ಠ ತೃಪ್ತಿಯು ನ್ಯಾಯಾಲಯ ಮೌಲ್ಯಮಾಪನ ಮಾಡಲು ಬರುವುದಿಲ್ಲ.

ಒಬ್ಬ ವ್ಯಕ್ತಿಯನ್ನು ಬಂಧಿಸಲು ಆಡಳಿತಾತ್ಮಕ ನಿರ್ಧಾರಗಳ ಅಂಶಗಳನ್ನು ಪರಿಶೀಲಿಸಲು ನ್ಯಾಯಾಲಯವು ಸರಿಯಾದ ವೇದಿಕೆಯಲ್ಲ. ಈ ವಿಷಯವು ಸಲಹಾ ಮಂಡಳಿಯ ವ್ಯಾಪ್ತಿಯಲ್ಲಿ ಬರುತ್ತದೆ. ಬಂಧಿಸುವ ಅಧಿಕಾರದ ಮೇಲಿನ ಮೇಲ್ಮನವಿಯನ್ನ ವಿಚಾರಣೆ ನಡೆಸುವುದು ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇಲ್ಲ ಮತ್ತು ಬಂಧಿಸುವ ವೇಳೆ ಬಂಧನದ ಆಧಾರಗಳು ನಿಖರತೆ, ಸಂಬಂಧಪಟ್ಟ ವಿಷಯ, ಸಾಮೀಪ್ಯ ಮತ್ತು ಮುಂತಾದ ವಿಷಯಗಳ ಮೇಲೆ ಕೈಗೊಂಡ ತನ್ನದೇ ನಿರ್ಧಾರ, ಅಭಿಪ್ರಾಯವನ್ನು ಬದಲಿಸಲಾಗುವುದಿಲ್ಲ. "

"ಬಂಧನ ಮಾಡಿರುವ ಅಧಿಕಾರಿಗಳು ತಾವು ಆ ನಿರ್ಧಾರಕ್ಕೆ ಬರಲು ಕಾರಣವಾದ ನಾವು 2010 ರ ನಂತರ ಬಂಧಿತ ವ್ಯಕ್ತಿಯ ಪೂವಾಪರಃ ಚಟುವಟಿಕೆಗಳ ಬಗ್ಗೆ ಗುಪ್ತಚರ ವರದಿಗಳನ್ನ ಪರಿಶೀಲಿಸಿದ್ದೇವೆ. ಬಂಧನದ ಪ್ರಾಧಿಕಾರವು ಈ ಆಧಾರದಲ್ಲೇ ಬಂಧನ ಆದೇಶದಲಕ್ಕೆ ಬಂದಿರುವುದನ್ನು ತೋರಿಸಿದೆ. ಈ ವರದಿಗಳು ಹೊಸ ಸತ್ಯಗಳನ್ನ ಹೊರಚೆಲ್ಲುತ್ತವೆ ಎಂದು ಹೇಳಬಹುದು, "ಎಫ್ ಐಆರ್ ನಲ್ಲಿ (ಕಯೂಮ್) ವಿರುದ್ಧ ಆರೋಪಿಸಲಾಗಿರುವ ಒಂದು ಸಿದ್ದಾಂತದ ಪ್ರಕೃತಿಯು ಜೀವಂತ ಜ್ವಾಲಾಮುಖಿಯಂತಿದೆ.

2008 ಮತ್ತು 2010 ರಲ್ಲಿ ಬಂಧಿತನ ಮೇಲೆ ದಾಖಲಾಗಿರುವ ನಾಲ್ಕು ಎಫ್‌ಐಆರ್ ಮತ್ತು ಎಫ್‌ಐಆರ್ ಅನ್ನು ನೋಂದಾಯಿಸಿದ ನಂತರ ಆಪಾದಿತ ನಡೆಸಿದ್ದ್ದಾನೆನ್ನಲಾದ ಚಟುವಟಿಕೆಗಳನ್ನು ನ್ಯಾಯಾಲಯದ ಮುಂದೆ ತರಲಾಗಿದೆ, ಇದು ಅವರ ಹಿಂದಿನ ಚಟುವಟಿಕೆಗಳು ಮತ್ತು ಇತ್ತೀಚಿನ ಚಟುವಟಿಕೆಗಳ ನಡುವೆ ನೇರ ಸಂಪರ್ಕವಿದೆ ಮತ್ತು ಅವರು ತಮ್ಮ ಆ ಸಿದ್ದಾನಂತದಿಂದ ದೂರವಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಎಂದು ಹೇಳಿದರು.

ತೀರ್ಪಿನ ಅಂತಿಮ ಹಂತವನ್ನ ಓದಿದ ಜ್ಯೂಸ್ಟ್ರಿಸ್ ಕೌಲ್, "ಅಡ್ವೊಕೇಟ್ ಜನರಲ್ ತೆಗೆದುಕೊಂಡ ಮೇಲಿನ ಕಾನೂನುಬದ್ಧ ಮತ್ತು ಸರಿಯಾದ ವಾದದ ಬೆಳಕಿನಲ್ಲಿ, ಅಡ್ವೊಕೆಟ್ ಜನರಲ್ ಅವರ ನಿಲುವಿನ ಉಪಯೋಗ ಪಡೆದು ಅದಕ್ಕೆ ಬದ್ಧವಾಗಿರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಣಯವನ್ನು ಬಂಧಿತ ವ್ಯಕ್ತಿಗೆ ಬಿಡುತ್ತೇವೆ. ಬಂಧಿತನಿಂದ ಅಂತಹ ಯಾವುದೇ ಪ್ರಾತಿನಿಧ್ಯದ ಅರ್ಜಿ ಬಂದರೆ ಅದರ ಬಗ್ಗೆ JK PSAಯ ಸಂಬಂಧಿತ ನಿಬಂಧನೆ (ಗಳ) ಪ್ರಕಾರ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರ ಮತ್ತು ಸಂಬಂಧಪಟ್ಟ / ಸಮರ್ಥ ಪ್ರಾಧಿಕಾರದ (ಐಇಎಸ್) ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಅಂತಹ ಯಾವುದೇ ಅರ್ಜಿಯ ಮೇಲೆ ವ್ಯತಿರಿಕ್ತ ಆದೇಶವನ್ನು ಮಾಡಿದರೆ, ಯಾವುದೇ ಕಾನೂನು ಕ್ರಮಗಳನ್ನು ಒಳಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ತೀರ್ಪಿನ ಘೋಷಣೆಯ ಸಮಯದಲ್ಲಿ, ಜಾಫರ್ ಶಾ ಮತ್ತು ಇತರ ವಕೀಲರು ಎಎಜಿ ಬಿ.ಎ ಅವರಿಗೆ ಕೌಂಟರ್ ಕೊಡಲು ಯತ್ನಿಸಿದರು. ಆದರೆ, ತೀರ್ಪಿನಲ್ಲಿ ದಾರ್ ಅವರ ವಾದವನ್ನು ಮಾತ್ರ ಉಲ್ಲೇಖಿಸಲಾಗಿದೆ. ಮಿಯಾನ್ ಕಯೂಮ್ ಅವರ ಕಾನೂನು ತಂಡವು ಎತ್ತಿದ ಯಾವುದೇ ಅಂಶಗಳನ್ನು ನ್ಯಾಯಪೀಠ ಪರಿಗಣಿಸಲಿಲ್ಲ.

ತೀರ್ಪಿನ ಘೋಷಣೆಯ ನಂತರ, ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ವಕೀಲರು, "ನಾವು ಈ ಪ್ರಕರಣದಲ್ಲಿ ಸೋತಿದ್ದೇವೆ. ಅಷ್ಟೆ. ನಾವು ಇನ್ನೂ ಇತರ ಆಯ್ಕೆಗಳನ್ನು ಹುಡುಕುತ್ತೇವೆ. ನಮ್ಮ ಮುಂದಿನ ದಾರಿ ಯಾವುದು ಎಂಬುದನ್ನ ಘೋಷಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

- ಜುಲ್ಕರ್ನೈನ್ ಜುಲ್ಫಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.