ಸಿಕಂದರಾಬಾದ್(ತೆಲಂಗಾಣ): ಶ್ವಾಸಕೋಶದ ಉರಿಯೂತದಿಂದ ಬಳಲುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಯಶೋದಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಸಿಎಂ ಅವರ ಖಾಸಗಿ ವೈದ್ಯ ಎಂ.ವಿ ರಾವ್.ನವನೀತ್ ಸಾಗರ್ ಹಾಗೂ ಹೃದಯರೋಗ ತಜ್ಞ ಡಾ.ಪ್ರಮೋದ್ ಕುಮಾರ್ ವೈದ್ಯಕೀಯ ತಪಾಸಣೆ ನಡೆಸಿದ್ದು, ಈ ವೇಳೆ ಶ್ವಾಸಕೋಶದಲ್ಲಿ ನೋವು ಮತ್ತು ಉರಿಯೂತದಿಂದ ಬಳಲುತ್ತಿರುವುದು ತಿಳಿದು ಬಂದಿದೆ.
ಇದೀಗ ಅವರಿಗೆ ಎಂಆರ್ಐ, ಸಿಟಿ ಸ್ಕ್ಯಾನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಮಗಳು ಕವಿತಾ ಹಾಗೂ ಸಂತೋಷ್ ಕುಮಾರ್ ಸಿಎಂ ಜೊತೆಗಿದ್ದರು. ಈ ಪರೀಕ್ಷೆಗಳ ವರದಿ ಮುಂದಿನ ಮೂರು ದಿನಗಳಲ್ಲಿ ಬರುವ ಸಾಧ್ಯತೆ ಇದೆ.