ETV Bharat / bharat

ಕವಿತೆ ಮೂಲಕ ಕೋಮು ಸಂಘರ್ಷಕ್ಕೆ ಪ್ರಚೋದನೆ ಆರೋಪ: 10 ಮಂದಿ ವಿರುದ್ಧ ಎಫ್​ಐಆರ್​

author img

By

Published : Jul 13, 2019, 9:42 AM IST

ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿ ಬಿಡುಗಡೆಗೂ ಮುನ್ನವೆ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಕವನಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆ 10 ಮಂದಿ ವಿರುದ್ಧ ಅಸ್ಸೋಂನಲ್ಲಿ ಎಫ್​ಐಆರ್ ದಾಖಲಾಗಿದೆ.

FIR

ಗುಹಾವಟಿ: ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿ ಬಿಡುಗಡೆಗೂ ಮುನ್ನವೆ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಕವನಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆ 10 ಮಂದಿ ವಿರುದ್ಧ ಅಸ್ಸೋಂನಲ್ಲಿ ಎಫ್​ಐಆರ್ ದಾಖಲಾಗಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯು ಅಸ್ಸೋಂನಲ್ಲಿನ ಅಕ್ರಮ ವಲಸಿಗರನ್ನು ಹೊರಗಿಡಲಿದೆ. ಈ ಮೂಲಕ ಮುಸ್ಲಿಂ ಸಮುದಾಯದವರನ್ನು ಟಾರ್ಗೆಟ್​ ಮಾಡಲಾಗ್ತಿದೆ ಎಂಬ ಕವನಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಗುವಾಹಟಿಯ ಪತ್ರಕರ್ತರೊಬ್ಬರು ಕವಿಗಳು, ಸಾಮಾಜಿಕ ಹೋರಾಟಗಾರರು ಸೇರಿ 10 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. 10 ಮಂದಿ ವಿರುದ್ಧ ಎಫ್​​ಐಆರ್​ ದಾಖಲಿಸಿರುವ ಪೊಲೀಸರು, ಕವನಗಳ ನಿಖರತೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಲಾಡುತ್ತಿದ್ದಾರೆ.

ಹಫೀಜ್​ ಅಹ್ಮದ್​, ರೆಹ್ನಾ ಸುಲ್ತಾನಾ, ಅಬ್ದೂರ್​ ರಹೀಂ, ಅರ್ಷಫುಲ್ಲ ಹಸ್ಸೀನ್​, ಅಬ್ದುಲ್ ಕಲಾಂ ಆಜಾದ್​, ಕರೀಷ್ಮ ಹಝಾರಿಕಾ, ಕಾಝಿ ಶರೋವರ್​ ಹಸ್ಸೀನ್​, ಕಾಝಿ ನೀಲ್, ಬನಾಮಲ್ಲಿಕ್ ಚೌಧರಿ ಹಾಗೂ ಫರ್ಹಾದ್​ ಭುಯಾನ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಜುಲೈ 10ರಂದು ಎಫ್ಐಆರ್​ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಯಾರನ್ನೂ ಬಂಧಿಸಲಾಗಿಲ್ಲ. ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಗುವಾಹಟಿಯ ಪೊಲೀಸ್​ ಮುಖ್ಯಸ್ಥ ದೀಪಕ್ ಕುಮಾರ್​ ಹೇಳಿದ್ದಾರೆ. ಎಫ್​ಐಆರ್​ನಲ್ಲಿ ನಮೂದಿಸಲಾದ ಇಬ್ಬರು ವ್ಯಕ್ತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕವಿರುವುದಾಗಿ ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ.

ಗುಹಾವಟಿ: ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿ ಬಿಡುಗಡೆಗೂ ಮುನ್ನವೆ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಕವನಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆ 10 ಮಂದಿ ವಿರುದ್ಧ ಅಸ್ಸೋಂನಲ್ಲಿ ಎಫ್​ಐಆರ್ ದಾಖಲಾಗಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯು ಅಸ್ಸೋಂನಲ್ಲಿನ ಅಕ್ರಮ ವಲಸಿಗರನ್ನು ಹೊರಗಿಡಲಿದೆ. ಈ ಮೂಲಕ ಮುಸ್ಲಿಂ ಸಮುದಾಯದವರನ್ನು ಟಾರ್ಗೆಟ್​ ಮಾಡಲಾಗ್ತಿದೆ ಎಂಬ ಕವನಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಗುವಾಹಟಿಯ ಪತ್ರಕರ್ತರೊಬ್ಬರು ಕವಿಗಳು, ಸಾಮಾಜಿಕ ಹೋರಾಟಗಾರರು ಸೇರಿ 10 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. 10 ಮಂದಿ ವಿರುದ್ಧ ಎಫ್​​ಐಆರ್​ ದಾಖಲಿಸಿರುವ ಪೊಲೀಸರು, ಕವನಗಳ ನಿಖರತೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಲಾಡುತ್ತಿದ್ದಾರೆ.

ಹಫೀಜ್​ ಅಹ್ಮದ್​, ರೆಹ್ನಾ ಸುಲ್ತಾನಾ, ಅಬ್ದೂರ್​ ರಹೀಂ, ಅರ್ಷಫುಲ್ಲ ಹಸ್ಸೀನ್​, ಅಬ್ದುಲ್ ಕಲಾಂ ಆಜಾದ್​, ಕರೀಷ್ಮ ಹಝಾರಿಕಾ, ಕಾಝಿ ಶರೋವರ್​ ಹಸ್ಸೀನ್​, ಕಾಝಿ ನೀಲ್, ಬನಾಮಲ್ಲಿಕ್ ಚೌಧರಿ ಹಾಗೂ ಫರ್ಹಾದ್​ ಭುಯಾನ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಜುಲೈ 10ರಂದು ಎಫ್ಐಆರ್​ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಯಾರನ್ನೂ ಬಂಧಿಸಲಾಗಿಲ್ಲ. ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಗುವಾಹಟಿಯ ಪೊಲೀಸ್​ ಮುಖ್ಯಸ್ಥ ದೀಪಕ್ ಕುಮಾರ್​ ಹೇಳಿದ್ದಾರೆ. ಎಫ್​ಐಆರ್​ನಲ್ಲಿ ನಮೂದಿಸಲಾದ ಇಬ್ಬರು ವ್ಯಕ್ತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕವಿರುವುದಾಗಿ ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.