ETV Bharat / bharat

ಗಡಿ ಗ್ರಾಮಗಳ ಮೇಲೆ ಪಾಕ್ ಸೇನೆ ಗುಂಡು: ಬಿಎಸ್ಎಫ್​ನಿಂದ ತಕ್ಕ ಪ್ರತ್ಯುತ್ತರ

ಸದಾ ಕದನವಿರಾಮ ಉಲ್ಲಂಘನೆ ಹಾಗೂ ಉಗ್ರರಿಗೆ ಒಳನುಸುಳಲು ಅವಕಾಶ ಕಲ್ಪಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಪಾಕ್​ ಸೇನೆ ಗಡಿ ಭಾಗದ ಗ್ರಾಮಗಳ ಮೇಲೆ ಗುಂಡಿನ ಮಳೆಗರೆದಿದೆ.

author img

By

Published : Dec 13, 2020, 3:57 PM IST

Representational image
ಪ್ರಾತಿನಿಧಿಕ ಚಿತ್ರ

ಶ್ರೀನಗರ (ಜಮ್ಮು ಕಾಶ್ಮೀರ): ಪಾಕಿಸ್ತಾನ ಸೈನಿಕರು ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಮ್ಮೆ ಕ್ಯಾತೆ ತೆಗೆಯುತ್ತಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೈನಿಕರ ಪೋಸ್ಟ್​ ಮತ್ತು ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಮೂಲಗಳು ಭಾನುವಾರ ಮಾಹಿತಿ ನೀಡಿವೆ.

ಶನಿವಾರ ರಾತ್ರಿ ಹಿರಾನಗರ ಸೆಕ್ಟರ್‌ನ ಪನ್ಸಾರ್ ಗಡಿ ಪ್ರದೇಶದ ಉದ್ದಕ್ಕೂ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಡಿನ ದಾಳಿ ಪ್ರಾರಂಭಿಸಲಾಗಿದ್ದು, ಪಾಕ್ ಸೇನೆಯ ಕ್ರಮಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಲವಾದ ಪ್ರತೀಕಾರ ತೋರಿದೆ.

ಓದಿ: ಅಪ್ರಚೋದಿತ ಗುಂಡಿನ ದಾಳಿ: ಐವರು ಪಾಕ್​ ಸೈನಿಕರನ್ನು ಬೇಟೆಯಾಡಿದ ಯೋಧರು

ಭಾನುವಾರ ಮುಂಜಾನೆ 3.45ರವರೆಗೆ ಎರಡೂ ಕಡೆಯಿಂದಲೂ ಚಕಮಕಿ ಮುಂದುವರೆದಿದ್ದು, ಗಡಿ ನಿವಾಸಿಗಳನ್ನು ಬಂಕರ್​​​ಗಳಲ್ಲಿ ಕಳೆಯಲು ಸೇನಾಪಡೆಗಳು ಒತ್ತಾಯಿಸಿವೆ ಎಂದು ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ದಾಳಿಯಲ್ಲಿ ಯಾವುದೇ ರೀತಿಯ ಹಾನಿ ನಡೆದಿಲ್ಲ. ಈಗಲೂ ಕೂಡಾ ಭಾರತೀಯ ಸೇನೆ ಪಾಕ್​ ಸೈನಿಕರ ಅಪ್ರಚೋದಿತ ದಾಳಿ ತಡೆಯಲು ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀನಗರ (ಜಮ್ಮು ಕಾಶ್ಮೀರ): ಪಾಕಿಸ್ತಾನ ಸೈನಿಕರು ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಮ್ಮೆ ಕ್ಯಾತೆ ತೆಗೆಯುತ್ತಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೈನಿಕರ ಪೋಸ್ಟ್​ ಮತ್ತು ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಮೂಲಗಳು ಭಾನುವಾರ ಮಾಹಿತಿ ನೀಡಿವೆ.

ಶನಿವಾರ ರಾತ್ರಿ ಹಿರಾನಗರ ಸೆಕ್ಟರ್‌ನ ಪನ್ಸಾರ್ ಗಡಿ ಪ್ರದೇಶದ ಉದ್ದಕ್ಕೂ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಡಿನ ದಾಳಿ ಪ್ರಾರಂಭಿಸಲಾಗಿದ್ದು, ಪಾಕ್ ಸೇನೆಯ ಕ್ರಮಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಲವಾದ ಪ್ರತೀಕಾರ ತೋರಿದೆ.

ಓದಿ: ಅಪ್ರಚೋದಿತ ಗುಂಡಿನ ದಾಳಿ: ಐವರು ಪಾಕ್​ ಸೈನಿಕರನ್ನು ಬೇಟೆಯಾಡಿದ ಯೋಧರು

ಭಾನುವಾರ ಮುಂಜಾನೆ 3.45ರವರೆಗೆ ಎರಡೂ ಕಡೆಯಿಂದಲೂ ಚಕಮಕಿ ಮುಂದುವರೆದಿದ್ದು, ಗಡಿ ನಿವಾಸಿಗಳನ್ನು ಬಂಕರ್​​​ಗಳಲ್ಲಿ ಕಳೆಯಲು ಸೇನಾಪಡೆಗಳು ಒತ್ತಾಯಿಸಿವೆ ಎಂದು ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ದಾಳಿಯಲ್ಲಿ ಯಾವುದೇ ರೀತಿಯ ಹಾನಿ ನಡೆದಿಲ್ಲ. ಈಗಲೂ ಕೂಡಾ ಭಾರತೀಯ ಸೇನೆ ಪಾಕ್​ ಸೈನಿಕರ ಅಪ್ರಚೋದಿತ ದಾಳಿ ತಡೆಯಲು ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.