ETV Bharat / bharat

ಭಾರತ ಮಾತ್ರವಲ್ಲ, ಪಾಕ್‌ನಲ್ಲೂ ಕೊರೊನಾ ಹೆಚ್ಚಾಗೋಕೆ ತಬ್ಲಿಘಿ ಕಾರಣ: ಮನೀಶ್‌ ತಿವಾರಿ - ಪಾಕಿಸ್ತಾನ

ದೆಹಲಿಯ ತಬ್ಲಿಘಿ ಜಮಾತ್​ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ದೇಶಾದ್ಯಂತ ಹರಡಿಕೊಂಡಿದ್ದು, ಅವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಈಗ ಪಾಕಿಸ್ತಾನದಲ್ಲಿಯೂ ಕೂಡಾ ತಬ್ಲಿಘಿ ಜಮಾತ್​ ಕಾರಣದಿಂದ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

manish tiwari
ಮನೀಷ್ ತಿವಾರಿ
author img

By

Published : Apr 9, 2020, 11:47 AM IST

ಇಸ್ಲಾಮಾಬಾದ್ ​(ಪಾಕಿಸ್ತಾನ): ಭಾರತದಲ್ಲಿ ಕೊರೊನಾ ಹರಡುವುದಕ್ಕೆ ಪ್ರಮುಖ ಕಾರಣವಾಗಿದ್ದ ತಬ್ಲಿಘಿ ಜಮಾತ್​ ಪಾಕಿಸ್ತಾನದಲ್ಲಿಯೂ ಕೂಡಾ ಕೊರೊನಾ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ತೋರುತ್ತದೆ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • Interesting :it seems the Tabalegi Jamat has created problems in Pakistan too with regard to COVID-19.
    Seems to be a sect issue. Do listen in pic.twitter.com/jfn0PXrJXD

    — Manish Tewari (@ManishTewari) April 8, 2020 " class="align-text-top noRightClick twitterSection" data=" ">

ಪಾಕಿಸ್ತಾನದ ಅರ್ಧದಷ್ಟು ಪ್ರಕರಣಗಳು ಅಲ್ಲಿನ ರಾಜ್ಯ ಪಂಜಾಬ್​ನಿಂದ ಬಂದಿದ್ದು, ಕೊರೊನಾ ಸೋಂಕಿತರು ಹೆಚ್ಚಾಗಲು ತಬ್ಲಿಘಿ ಜಮಾತ್ ಕಾರಣ ಎಂದು ಪಂಜಾಬ್​ ಪ್ರಾಂತ್ಯದ ಆರೋಗ್ಯ ಮಂತ್ರಿ ಯಾಸ್ಮೀನ್​ ರಶೀದ್​​ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋವೊಂದನ್ನು ಮನೀಶ್ ತಿವಾರಿ ಟ್ವೀಟ್​ನಲ್ಲಿ ಹರಿಬಿಟ್ಟಿದ್ದಾರೆ.

ಈ ವಿಡಿಯೋದಲ್ಲಿ ಯಾಸ್ಮೀನ್​ ರಶೀದ್​ ಪಾಕಿಸ್ತಾನದಲ್ಲಿ ಒಟ್ಟು 2004 ಪ್ರಕರಣಗಳಿದ್ದು, 547 ಪ್ರಕರಣಗಳು ತಬ್ಲಿಘಿ ಜಮಾತ್​ಗೆ ಸಂಬಂಧಪಟ್ಟವು. ಇದರಿಂದ ಪಾಕ್​ನಲ್ಲಿ ಸೋಕಿತರ ಸಂಖ್ಯೆ ದಿಢೀರ್​ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

ಇದಕ್ಕೂ ಮೊದಲು ಮನೀಷ್ ತಿವಾರಿ ತಮ್ಮ ಟ್ವೀಟ್​​ನಲ್ಲಿ '' ತಬ್ಲಿಘಿಗಳು ಈಗಾಗಲೇ ಸಾಕಷ್ಟು ಹಾನಿ ಮಾಡಿದ್ದು, ಜವಾಬ್ದಾರಿಯಿಂದ ಇರಬೇಕು'' ಎಂದು ಚಾಟಿ ಬೀಸಿದ್ದಾರೆ.

ಇಸ್ಲಾಮಾಬಾದ್ ​(ಪಾಕಿಸ್ತಾನ): ಭಾರತದಲ್ಲಿ ಕೊರೊನಾ ಹರಡುವುದಕ್ಕೆ ಪ್ರಮುಖ ಕಾರಣವಾಗಿದ್ದ ತಬ್ಲಿಘಿ ಜಮಾತ್​ ಪಾಕಿಸ್ತಾನದಲ್ಲಿಯೂ ಕೂಡಾ ಕೊರೊನಾ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ತೋರುತ್ತದೆ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • Interesting :it seems the Tabalegi Jamat has created problems in Pakistan too with regard to COVID-19.
    Seems to be a sect issue. Do listen in pic.twitter.com/jfn0PXrJXD

    — Manish Tewari (@ManishTewari) April 8, 2020 " class="align-text-top noRightClick twitterSection" data=" ">

ಪಾಕಿಸ್ತಾನದ ಅರ್ಧದಷ್ಟು ಪ್ರಕರಣಗಳು ಅಲ್ಲಿನ ರಾಜ್ಯ ಪಂಜಾಬ್​ನಿಂದ ಬಂದಿದ್ದು, ಕೊರೊನಾ ಸೋಂಕಿತರು ಹೆಚ್ಚಾಗಲು ತಬ್ಲಿಘಿ ಜಮಾತ್ ಕಾರಣ ಎಂದು ಪಂಜಾಬ್​ ಪ್ರಾಂತ್ಯದ ಆರೋಗ್ಯ ಮಂತ್ರಿ ಯಾಸ್ಮೀನ್​ ರಶೀದ್​​ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋವೊಂದನ್ನು ಮನೀಶ್ ತಿವಾರಿ ಟ್ವೀಟ್​ನಲ್ಲಿ ಹರಿಬಿಟ್ಟಿದ್ದಾರೆ.

ಈ ವಿಡಿಯೋದಲ್ಲಿ ಯಾಸ್ಮೀನ್​ ರಶೀದ್​ ಪಾಕಿಸ್ತಾನದಲ್ಲಿ ಒಟ್ಟು 2004 ಪ್ರಕರಣಗಳಿದ್ದು, 547 ಪ್ರಕರಣಗಳು ತಬ್ಲಿಘಿ ಜಮಾತ್​ಗೆ ಸಂಬಂಧಪಟ್ಟವು. ಇದರಿಂದ ಪಾಕ್​ನಲ್ಲಿ ಸೋಕಿತರ ಸಂಖ್ಯೆ ದಿಢೀರ್​ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

ಇದಕ್ಕೂ ಮೊದಲು ಮನೀಷ್ ತಿವಾರಿ ತಮ್ಮ ಟ್ವೀಟ್​​ನಲ್ಲಿ '' ತಬ್ಲಿಘಿಗಳು ಈಗಾಗಲೇ ಸಾಕಷ್ಟು ಹಾನಿ ಮಾಡಿದ್ದು, ಜವಾಬ್ದಾರಿಯಿಂದ ಇರಬೇಕು'' ಎಂದು ಚಾಟಿ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.