ETV Bharat / bharat

3000 ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಇಂದು ಗಡ್ಕರಿ ಅಡಿಗಲ್ಲು

author img

By

Published : Aug 17, 2020, 8:03 AM IST

ಇಂದು ಮಣಿಪುರದ 3000 ಕೋಟಿ ರೂಪಾಯಿಗಳ ವೆಚ್ಚದ 13 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ಅಡಿಪಾಯ ಹಾಕಲಿದ್ದಾರೆ.

Nitin Gadkari to lay foundation stone Of 13 National Highway Projects in Manipur today
3000 ಕೋಟಿ ರೂಪಾಯಿ ವೆಚ್ಚದ ಮಣಿಪುರದ ಹೆದ್ದಾರಿ ಯೋಜನೆಗಳಿಗೆ ನಿತಿನ್ ಗಡ್ಕರಿಯವರಿಂದ ಇಂದು ಅಡಿಗಲ್ಲು

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಣಿಪುರದಲ್ಲಿ ಇಂದು 3000 ಕೋಟಿ ರೂಪಾಯಿಗಳ ವೆಚ್ಚದ 13 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಈ ವರ್ಚುವಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ವಹಿಸಲಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ವಿ. ಕೆ. ಸಿಂಗ್, ಸಂಸದರು, ಶಾಸಕರು ಮತ್ತು ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

  • नए रास्तों पर बढ़ेगा नए भारत का मणिपुर

    केंद्रीय मंत्री श्री @nitin_gadkari जी और मणिपुर के मुख्यमंत्री श्री @NBirenSingh जी 17 अगस्त 2020, सोमवार, सुबह 11.30 बजे मणिपुर के राष्ट्रीय महामार्ग परियोजनाओं का शिलान्यास और रोड सेफ्टी परियोजना का लोकार्पण करेंगे। #PragatiKaHighway pic.twitter.com/AKdyV9D3GU

    — Office Of Nitin Gadkari (@OfficeOfNG) August 16, 2020 " class="align-text-top noRightClick twitterSection" data=" ">

ಈ ಯೋಜನೆಗಳು 316 ಕಿ. ಮೀ ಹೆದ್ದಾರಿಗಳ ನಿರ್ಮಾಣಕ್ಕಾಗಿ ರೂಪಿಸಲಾಗಿವೆ. " ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಅಷ್ಟೇ ಅಲ್ಲ ಸೋಮವಾರ ಬೆಳಗ್ಗೆ 11.30 ಕ್ಕೆ ರಸ್ತೆ ಸುರಕ್ಷತಾ ಯೋಜನೆಯನ್ನು ಸಹ ಉದ್ಘಾಟಿಸಲಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ, ಮಣಿಪುರ ನವ ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಪ್ರಗತಿ ಸಾಧಿಸಲಿದೆ ಎಂದಿದ್ದಾರೆ.

ಏತನ್ಮಧ್ಯೆ, ಮಣಿಪುರ ಸರ್ಕಾರ ಇದನ್ನು 'ಬೃಹತ್​ ದಿನ' ಎಂದು ಬಣ್ಣಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕ್ಟ್​​ ಈಸ್ಟ್​ ನೀತಿಗೆ ಧನ್ಯವಾದವನ್ನೂ ಸಹ ಅರ್ಪಿಸಿದೆ.

ರಸ್ತೆ ಸಾರಿಗೆ, ಹೆದ್ದಾರಿಗಳು ಮತ್ತು ಎಂಎಸ್‌ಎಂಇಗಳ ಸಚಿವ ಗಡ್ಕರಿ ಅವರು 13 ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಮಣಿಪುರದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ರಸ್ತೆ ಸಾರಿಗೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಣಿಪುರದಲ್ಲಿ ಇಂದು 3000 ಕೋಟಿ ರೂಪಾಯಿಗಳ ವೆಚ್ಚದ 13 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಈ ವರ್ಚುವಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ವಹಿಸಲಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ವಿ. ಕೆ. ಸಿಂಗ್, ಸಂಸದರು, ಶಾಸಕರು ಮತ್ತು ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

  • नए रास्तों पर बढ़ेगा नए भारत का मणिपुर

    केंद्रीय मंत्री श्री @nitin_gadkari जी और मणिपुर के मुख्यमंत्री श्री @NBirenSingh जी 17 अगस्त 2020, सोमवार, सुबह 11.30 बजे मणिपुर के राष्ट्रीय महामार्ग परियोजनाओं का शिलान्यास और रोड सेफ्टी परियोजना का लोकार्पण करेंगे। #PragatiKaHighway pic.twitter.com/AKdyV9D3GU

    — Office Of Nitin Gadkari (@OfficeOfNG) August 16, 2020 " class="align-text-top noRightClick twitterSection" data=" ">

ಈ ಯೋಜನೆಗಳು 316 ಕಿ. ಮೀ ಹೆದ್ದಾರಿಗಳ ನಿರ್ಮಾಣಕ್ಕಾಗಿ ರೂಪಿಸಲಾಗಿವೆ. " ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಅಷ್ಟೇ ಅಲ್ಲ ಸೋಮವಾರ ಬೆಳಗ್ಗೆ 11.30 ಕ್ಕೆ ರಸ್ತೆ ಸುರಕ್ಷತಾ ಯೋಜನೆಯನ್ನು ಸಹ ಉದ್ಘಾಟಿಸಲಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ, ಮಣಿಪುರ ನವ ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಪ್ರಗತಿ ಸಾಧಿಸಲಿದೆ ಎಂದಿದ್ದಾರೆ.

ಏತನ್ಮಧ್ಯೆ, ಮಣಿಪುರ ಸರ್ಕಾರ ಇದನ್ನು 'ಬೃಹತ್​ ದಿನ' ಎಂದು ಬಣ್ಣಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕ್ಟ್​​ ಈಸ್ಟ್​ ನೀತಿಗೆ ಧನ್ಯವಾದವನ್ನೂ ಸಹ ಅರ್ಪಿಸಿದೆ.

ರಸ್ತೆ ಸಾರಿಗೆ, ಹೆದ್ದಾರಿಗಳು ಮತ್ತು ಎಂಎಸ್‌ಎಂಇಗಳ ಸಚಿವ ಗಡ್ಕರಿ ಅವರು 13 ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಮಣಿಪುರದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ರಸ್ತೆ ಸಾರಿಗೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.