ETV Bharat / bharat

ದೆಹಲಿ ಕದನಕ್ಕೆ ''ಕಾಮನ್​ಮ್ಯಾನ್''​​ ಆದ ಕೇಜ್ರಿವಾಲ್​: ವಿಡಿಯೋ ಸಂದೇಶದಲ್ಲಿ ದೆಹಲಿ ನಾಗರಿಕರಿಗೆ ಹೇಳಿದ್ದೇನು..?

ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಎಲ್ಲ ಪಕ್ಷಗಳು ಕೂಡಾ ತೀವ್ರವಾಗಿ ಮತಪ್ರಚಾರದಲ್ಲಿ ತೊಡಗಿಕೊಂಡಿವೆ. ಅಲ್ಲಿನ ಮುಖ್ಯಮಂತ್ರಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೂಡಾ ವಿಭಿನ್ನವಾಗಿ ಮತಯಾಚನೆ ಮಾಡುತ್ತಿದ್ದಾರೆ.

author img

By

Published : Jan 29, 2020, 5:59 PM IST

dehli cm aravind kejriwal video message to voters
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಡಿಯೋ ಸಂದೇಶ

ನವದೆಹಲಿ: ದೆಹಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಇದರ ಬೆನ್ನಲ್ಲೇ ದೆಹಲಿ ಸಿಎಂ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರೀವಾಲ್​ ಅಲ್ಲಿನ ನಾಗರಿಕರಿಗೆ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಸಂದೇಶದಲ್ಲಿ ಆಮ್​ ಆದ್ಮಿ ಪಕ್ಷ ತನ್ನ ನೇತೃತ್ವದ ಸರ್ಕಾರದ ವೇಳೆ ಹೇಗೆ ದೆಹಲಿ ಜನ ಜೀವನವನ್ನು ಸುಂದರವಾಗಿಸಲು ಪ್ರಯತ್ನಿಸಿದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಡಿಯೋದಲ್ಲಿ ಸಾಧಾರಣದ ಅಂಗಿ ಮೇಲೆ ಸ್ವೆಟರ್ ಧರಿಸಿ ಕಾಮನ್​ ಮ್ಯಾನ್​ ಆಗಿ ಕಾಣಿಸಿಕೊಂಡ ಅವರು ಉತ್ತಮ ಆಡಳಿತಕ್ಕಾಗಿ ಮುಂದೆಯೂ ಕೂಡಾ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ದೆಹಲಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಡಿಯೋ ಸಂದೇಶ

ಈ ವಿಡಿಯೋದಲ್ಲಿ ಹಣದುಬ್ಬರದ ಬಗ್ಗೆ ಉಲ್ಲೇಖಿಸಿರುವ ಕೇಜ್ರಿವಾಲ್​​ ''ನಮ್ಮ ಸರ್ಕಾರದ ವೇಳೆ ಹಣದುಬ್ಬರದಿಂದ ದೆಹಲಿ ತತ್ತರಿಸಿತ್ತು. ಈ ವೇಳೆ, ವಿದ್ಯುತ್​ ಹಾಗೂ ನೀರಿನ ಬಿಲ್​ಗಳನ್ನು ಕಡಿಮೆ ಮಾಡುವ ಮೂಲಕ ಜನರ ಕಷ್ಟ ದೂರ ಮಾಡಿದ್ದೇವೆ. ನಗರದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಸೇವೆ ನೀಡಿದ್ದೇವೆ'' ಎಂದು ತಮ್ಮ ಆಮ್ ಆದ್ಮಿ ಸರ್ಕಾರದ ಸಾಧನೆಯನ್ನು ಹೇಳಿಕೊಂಡರು.

ದೆಹಲಿ ನಾಗರಿಕರ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ ಕೇಜ್ರಿವಾಲ್​​ ''ದೆಹಲಿಯ ಪ್ರತಿ ರಸ್ತೆಯಲ್ಲಿ ಸಿಸಿಟಿವಿಗಳನ್ನು ಹಾಗೂ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಇದೇ ರೀತಿಯ ಕಾಳಜಿ ಮುಂದುರೆಯುತ್ತದೆ'' ಎಂದು ಭರವಸೆ ನೀಡಿದ್ದಾರೆ. ಜೊತೆಗೆ ''ನಾನು ದೆಹಲಿ ಸಿಎಂ ಆಗಿರುವ ತನಕ ವಿದ್ಯುತ್​, ನೀರು, ಶಾಲೆ ಹಾಗೂ ಆಸ್ಪತ್ರೆಗಳು ಉಚಿತವಾಗಿರುತ್ತವೆ'' ಎಂಬ ಆಶ್ವಾಸನೆ ನೀಡಿದ್ದಾರೆ.

ನವದೆಹಲಿ: ದೆಹಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಇದರ ಬೆನ್ನಲ್ಲೇ ದೆಹಲಿ ಸಿಎಂ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರೀವಾಲ್​ ಅಲ್ಲಿನ ನಾಗರಿಕರಿಗೆ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಸಂದೇಶದಲ್ಲಿ ಆಮ್​ ಆದ್ಮಿ ಪಕ್ಷ ತನ್ನ ನೇತೃತ್ವದ ಸರ್ಕಾರದ ವೇಳೆ ಹೇಗೆ ದೆಹಲಿ ಜನ ಜೀವನವನ್ನು ಸುಂದರವಾಗಿಸಲು ಪ್ರಯತ್ನಿಸಿದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಡಿಯೋದಲ್ಲಿ ಸಾಧಾರಣದ ಅಂಗಿ ಮೇಲೆ ಸ್ವೆಟರ್ ಧರಿಸಿ ಕಾಮನ್​ ಮ್ಯಾನ್​ ಆಗಿ ಕಾಣಿಸಿಕೊಂಡ ಅವರು ಉತ್ತಮ ಆಡಳಿತಕ್ಕಾಗಿ ಮುಂದೆಯೂ ಕೂಡಾ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ದೆಹಲಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಡಿಯೋ ಸಂದೇಶ

ಈ ವಿಡಿಯೋದಲ್ಲಿ ಹಣದುಬ್ಬರದ ಬಗ್ಗೆ ಉಲ್ಲೇಖಿಸಿರುವ ಕೇಜ್ರಿವಾಲ್​​ ''ನಮ್ಮ ಸರ್ಕಾರದ ವೇಳೆ ಹಣದುಬ್ಬರದಿಂದ ದೆಹಲಿ ತತ್ತರಿಸಿತ್ತು. ಈ ವೇಳೆ, ವಿದ್ಯುತ್​ ಹಾಗೂ ನೀರಿನ ಬಿಲ್​ಗಳನ್ನು ಕಡಿಮೆ ಮಾಡುವ ಮೂಲಕ ಜನರ ಕಷ್ಟ ದೂರ ಮಾಡಿದ್ದೇವೆ. ನಗರದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಸೇವೆ ನೀಡಿದ್ದೇವೆ'' ಎಂದು ತಮ್ಮ ಆಮ್ ಆದ್ಮಿ ಸರ್ಕಾರದ ಸಾಧನೆಯನ್ನು ಹೇಳಿಕೊಂಡರು.

ದೆಹಲಿ ನಾಗರಿಕರ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ ಕೇಜ್ರಿವಾಲ್​​ ''ದೆಹಲಿಯ ಪ್ರತಿ ರಸ್ತೆಯಲ್ಲಿ ಸಿಸಿಟಿವಿಗಳನ್ನು ಹಾಗೂ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಇದೇ ರೀತಿಯ ಕಾಳಜಿ ಮುಂದುರೆಯುತ್ತದೆ'' ಎಂದು ಭರವಸೆ ನೀಡಿದ್ದಾರೆ. ಜೊತೆಗೆ ''ನಾನು ದೆಹಲಿ ಸಿಎಂ ಆಗಿರುವ ತನಕ ವಿದ್ಯುತ್​, ನೀರು, ಶಾಲೆ ಹಾಗೂ ಆಸ್ಪತ್ರೆಗಳು ಉಚಿತವಾಗಿರುತ್ತವೆ'' ಎಂಬ ಆಶ್ವಾಸನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.