ETV Bharat / bharat

ಕೊಳವೆ ಬಾವಿಗೆ ಬಿದ್ದು ಮೃತ ಪಟ್ಟ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ - ಬಾಲಕನ ಕುಟುಂಬಕ್ಕೆ ಪರಿಹಾರ

ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ ನಿವಾರಿ ಜಿಲ್ಲೆಯ ಮೂರು ವರ್ಷದ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

shivraj singh chowhan
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್
author img

By

Published : Nov 8, 2020, 8:54 PM IST

ಭೋಪಾಲ್ (ಮಧ್ಯಪ್ರದೇಶ): ನಿವಾರಿ ಜಿಲ್ಲೆಯಲ್ಲಿ ಕೊಳವೆಬಾವಿಯೊಳಗೆ ಬಿದ್ದು ಮೃತಪಟ್ಟ ಮೂರು ವರ್ಷದ ಬಾಲಕನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪರಿಹಾರ ಘೋಷಣೆ ಮಾಡಿದ್ದು, ಜನರಿಗೆ ಪಾಳು ಬಿದ್ದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ.

  • निवाड़ी ज़िले में बोरवेल में गिरे मासूम बच्चे प्रह्लाद को लगातार प्रयास के बावजूद हम बचा नहीं सके, इसका मुझे बहुत दुःख है। मैं इस कठिन घड़ी में परिवार के साथ हूँ।

    मैं यह भी निवेदन करता हूँ कि जो लोग बोरवेल खोदें,उसे बाद में उचित रूप से ढकें,जिससे ऐसी दुर्भाग्यपूर्ण घटनाएँ न हों। pic.twitter.com/d56Wr2yj7K

    — Shivraj Singh Chouhan (@ChouhanShivraj) November 8, 2020 " class="align-text-top noRightClick twitterSection" data=" ">

ಇದರ ಜೊತೆಗೆ ಮಧ್ಯಪ್ರದೇಶ ಸಿಎಂ ಕಚೇರಿ ಟ್ವೀಟ್ ಮಾಡಿದ್ದು, ಇಡೀ ರಾಜ್ಯ ಮೃತ ಬಾಲಕನ ಕುಟುಂಬದೊಂದಿಗೆ ನಿಲ್ಲುತ್ತದೆ. ಸಿಎಂ ಶಿವರಾಜ್​ಸಿಂಗ್ ಚೌಹಾಣ್ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಯಾವುದೇ ಕೊಳವೆ ಬಾವಿಯನ್ನು ಹಾಗೆಯೇ ಬಿಡದಿರುವಂತೆ ಸಿಎಂ ಮನವಿ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರ ಗ್ರಾಮದಲ್ಲಿ ಮೂರು ವರ್ಷದ ಬಾಲಕ ಪ್ರಹ್ಲಾದ್ ಎಂಬಾತ ಕೊಳವೆ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದು, ದೇಶಾದ್ಯಂತ ಸಾಕಷ್ಟು ಸಂತಾಪ ವ್ಯಕ್ತವಾಗಿತ್ತು.

ಭೋಪಾಲ್ (ಮಧ್ಯಪ್ರದೇಶ): ನಿವಾರಿ ಜಿಲ್ಲೆಯಲ್ಲಿ ಕೊಳವೆಬಾವಿಯೊಳಗೆ ಬಿದ್ದು ಮೃತಪಟ್ಟ ಮೂರು ವರ್ಷದ ಬಾಲಕನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪರಿಹಾರ ಘೋಷಣೆ ಮಾಡಿದ್ದು, ಜನರಿಗೆ ಪಾಳು ಬಿದ್ದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ.

  • निवाड़ी ज़िले में बोरवेल में गिरे मासूम बच्चे प्रह्लाद को लगातार प्रयास के बावजूद हम बचा नहीं सके, इसका मुझे बहुत दुःख है। मैं इस कठिन घड़ी में परिवार के साथ हूँ।

    मैं यह भी निवेदन करता हूँ कि जो लोग बोरवेल खोदें,उसे बाद में उचित रूप से ढकें,जिससे ऐसी दुर्भाग्यपूर्ण घटनाएँ न हों। pic.twitter.com/d56Wr2yj7K

    — Shivraj Singh Chouhan (@ChouhanShivraj) November 8, 2020 " class="align-text-top noRightClick twitterSection" data=" ">

ಇದರ ಜೊತೆಗೆ ಮಧ್ಯಪ್ರದೇಶ ಸಿಎಂ ಕಚೇರಿ ಟ್ವೀಟ್ ಮಾಡಿದ್ದು, ಇಡೀ ರಾಜ್ಯ ಮೃತ ಬಾಲಕನ ಕುಟುಂಬದೊಂದಿಗೆ ನಿಲ್ಲುತ್ತದೆ. ಸಿಎಂ ಶಿವರಾಜ್​ಸಿಂಗ್ ಚೌಹಾಣ್ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಯಾವುದೇ ಕೊಳವೆ ಬಾವಿಯನ್ನು ಹಾಗೆಯೇ ಬಿಡದಿರುವಂತೆ ಸಿಎಂ ಮನವಿ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರ ಗ್ರಾಮದಲ್ಲಿ ಮೂರು ವರ್ಷದ ಬಾಲಕ ಪ್ರಹ್ಲಾದ್ ಎಂಬಾತ ಕೊಳವೆ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದು, ದೇಶಾದ್ಯಂತ ಸಾಕಷ್ಟು ಸಂತಾಪ ವ್ಯಕ್ತವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.