ಕಾರ್ಗಿಲ್: ಹಲವು ದಶಕಗಳಿಂದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸೌಲಭ್ಯವನ್ನು ರದ್ದು ಮಾಡುವ ಮಹತ್ವದ ತೀರ್ಮಾನಕ್ಕೆ ಕೇಂದ್ರ ಬಂದಿದ್ದು, ಆಗಸ್ಟ್ 5ರಂದು ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತ್ತು. ಆಗ ಕೆಲವು ನಗರಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
370 ವಿಧಿ ರದ್ದತಿ ಬಳಿಕೆ ಜಮ್ಮ-ಕಾಶ್ಮೀರ್ ರಾಜ್ಯ ವಿಭಜನೆಗೊಂಡಿತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವಾದವು. ಅಮಿತ್ ಶಾ ಘೋಷಣೆ ಪ್ರಸ್ತಾಪ ಮಾಡಿರುವ 370 ವಿಧಿ ರದ್ಧತಿಗೆ ಸದನದಲ್ಲಿ ಭಾರೀ ಕೊಲಾಹಲ ಸೃಷ್ಠಿಸಿತ್ತು. ಅದರಂತೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿಯೂ ಗಲಭೆಯಾಗುವ ಸನ್ನಿವೇಶವಿತ್ತು. ಮುನ್ನೆಚ್ಚರಿಕೆ ಹಿನ್ನೆಲೆ ಲಡಾಖ್ನ ಕಾರ್ಗಿಲ್ ಜಿಲ್ಲೆ ಸೇರಿದಂತೆ ಅನೇಕ ನಗರಗಳಲ್ಲಿ ಮೊಬೈಲ್ ಅಂತರ್ಜಾಲ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು
ಬರೋಬ್ಬರಿ 145 ದಿನಗಳ ಬಳಿಕ ಕಾರ್ಗಿಲ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆ ಮತ್ತೆ ಆರಂಭಗೊಂಡಿದೆ. ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಹಜ ಸ್ಥಿತಿಗೆ ಕಾರ್ಗಿಲ್ ಮರಳಿರುವುದರಿಂದ ಮೊಬೈಲ್ ಅಂತರ್ಜಾಲ ವ್ಯವಸ್ಥೆ ಪುನಾರಂಭಿಸಲಾಗಿದೆ. ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಸ್ಥಳೀಯ ಧಾರ್ಮಿಕ ಮುಖಂಡರಿಗೆ ಮತ್ತು ಜನರಿಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.