ETV Bharat / bharat

ಜೆಎನ್​ಯು ಗಲಭೆಗೆ ಇವರೇ ಕಾರಣವಂತೆ... ಕುಲಪತಿ ಹೇಳೋ ಆ ಕಾರಣ ಏನು? - ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ

ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಹಿನ್ನೆಲೆ, ಉಪಕುಲಪತಿ ಜಗದೀಶ್​ ಕುಮಾರ್​ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ್ದು, ಹೊರಗಿನಿಂದ ಬಂದವರು ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

JNU VC
ಜೆಎನ್​ಯು ಉಪಕುಲಪತಿ
author img

By

Published : Jan 11, 2020, 1:10 PM IST

ನವದೆಹಲಿ: ಜೆಎನ್​​ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ, ಗುಂಪೊಂದು ಹಲ್ಲೆ ನಡೆಸಿದ್ದು, ದೇಶಾದ್ಯಂತ ಈ ಕೃತ್ಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇಂದು ಜೆಎನ್​ಯು ಉಪ ಕುಲಪತಿ ಜಗದೀಶ್​​ ಕುಮಾರ್​ ವಿದ್ಯಾರ್ಥಿಗಳೊಂದಿಗೆ ಇಂದು ಈ ಬಗ್ಗೆ ಚರ್ಚೆ ನಡೆಸಿದರು.

ಜೆಎನ್​​ಯು ವಿಶ್ವದ್ಯಾಲಯದ ಆವರಣದಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಜಗದೀಶ್​ ಕುಮಾರ್​​ ಸಮಾಲೋಚನೆ ನಡೆಸಿದ್ದು, ವಿವಿ ಆವರಣದೊಳಗಿನ ವಿದ್ಯಾರ್ಥಿಗಳ ಸಮಸ್ಯೆ, ಗಲಭೆಗೆ ಕಾರಣವಾದ ಅಂಶಗಳು ಹಾಗೂ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ವಿದ್ಯಾರ್ಥಿಗಳು ಸಹ ಉಪ ಕುಲಪತಿಗಳಿಗೆ, ವಿದ್ಯಾರ್ಥಿ ನಿಲಯ ಹಾಗೂ ವಿವಿ ಒಳಗಿನ ಭಾಗದಲ್ಲಿ ನಡೆಯುವ ಘಟನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಇನ್ನು ಈ ಸಭೆಯ ನಂತರ ಉಪಕುಲಪತಿ ಜಗದೀಶ್​​ ಕುಮಾರ್​​ ಪ್ರತಿಕ್ರಿಯಿಸಿದ್ದು, ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ಕಾನೂನು ಬಾಹಿರವಾಗಿ ಹೊರಗಿನವರು ನಮ್ಮ ವಿದ್ಯಾರ್ಥಿಗಳೊಂದಿಗೆ ತಂಗುತ್ತಿದ್ದು, ಅವರು ಸಹ ಈ ಘರ್ಷಣೆಗಳಲ್ಲಿ ಭಾಗಿಯಾಗಿ ವಿವಿಯಲ್ಲಿ ಹಿಂಸಾಚಾರ ಉಂಟಾಗಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಇಲ್ಲಿ ಏನಾದರೇನು, ಅವರಿಗೆ ಏನು ಸಮಸ್ಯೆಯಿಲ್ಲ. ಇಲ್ಲಿ ನಡೆದ ಹಲವಾರು ಕೃತ್ಯಗಳಿಗೆ ಇಂಥವರೇ ಕಾರಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಜೆಎನ್​​ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ, ಗುಂಪೊಂದು ಹಲ್ಲೆ ನಡೆಸಿದ್ದು, ದೇಶಾದ್ಯಂತ ಈ ಕೃತ್ಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇಂದು ಜೆಎನ್​ಯು ಉಪ ಕುಲಪತಿ ಜಗದೀಶ್​​ ಕುಮಾರ್​ ವಿದ್ಯಾರ್ಥಿಗಳೊಂದಿಗೆ ಇಂದು ಈ ಬಗ್ಗೆ ಚರ್ಚೆ ನಡೆಸಿದರು.

ಜೆಎನ್​​ಯು ವಿಶ್ವದ್ಯಾಲಯದ ಆವರಣದಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಜಗದೀಶ್​ ಕುಮಾರ್​​ ಸಮಾಲೋಚನೆ ನಡೆಸಿದ್ದು, ವಿವಿ ಆವರಣದೊಳಗಿನ ವಿದ್ಯಾರ್ಥಿಗಳ ಸಮಸ್ಯೆ, ಗಲಭೆಗೆ ಕಾರಣವಾದ ಅಂಶಗಳು ಹಾಗೂ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ವಿದ್ಯಾರ್ಥಿಗಳು ಸಹ ಉಪ ಕುಲಪತಿಗಳಿಗೆ, ವಿದ್ಯಾರ್ಥಿ ನಿಲಯ ಹಾಗೂ ವಿವಿ ಒಳಗಿನ ಭಾಗದಲ್ಲಿ ನಡೆಯುವ ಘಟನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಇನ್ನು ಈ ಸಭೆಯ ನಂತರ ಉಪಕುಲಪತಿ ಜಗದೀಶ್​​ ಕುಮಾರ್​​ ಪ್ರತಿಕ್ರಿಯಿಸಿದ್ದು, ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ಕಾನೂನು ಬಾಹಿರವಾಗಿ ಹೊರಗಿನವರು ನಮ್ಮ ವಿದ್ಯಾರ್ಥಿಗಳೊಂದಿಗೆ ತಂಗುತ್ತಿದ್ದು, ಅವರು ಸಹ ಈ ಘರ್ಷಣೆಗಳಲ್ಲಿ ಭಾಗಿಯಾಗಿ ವಿವಿಯಲ್ಲಿ ಹಿಂಸಾಚಾರ ಉಂಟಾಗಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಇಲ್ಲಿ ಏನಾದರೇನು, ಅವರಿಗೆ ಏನು ಸಮಸ್ಯೆಯಿಲ್ಲ. ಇಲ್ಲಿ ನಡೆದ ಹಲವಾರು ಕೃತ್ಯಗಳಿಗೆ ಇಂಥವರೇ ಕಾರಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.