ETV Bharat / bharat

ರಾಜಧಾನಿಯಲ್ಲಿ ಕಾಂಗ್ರೆಸ್‌ಗೆ 'ಆಪ್‌'ದ್ಬಾಂಧವ ಕೇಜ್ರಿ; ಹಗ್ಗಜಗ್ಗಾಟದ ಬಳಿಕ ಮೈತ್ರಿ

ನವದೆಹಲಿಯಲ್ಲಿ ಕಾಂಗ್ರೆಸ್​ ಸಮೀಕ್ಷೆ ಬಳಿಕ ಆಪ್​ ಜತೆ ಮತ್ತೆ ಮೈತ್ರಿಗೆ ಕೈ ನಾಯಕರು ಮುಂದಾಗಿದ್ದಾರೆ

author img

By

Published : Mar 17, 2019, 1:41 PM IST

ಆಪ್​ ಜತೆ ಮತ್ತೆ ಮೈತ್ರಿ ನಿರ್ಧಾರ ಮಾಡಿದ ದೆಹಲಿ ಕಾಂಗ್ರೆಸ್​ ನಾಯಕರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ದೂರವಿಟ್ಟು ಏಕಾಂಗಿ ಹೋರಾಡಲು ನಿರ್ಧರಿಸಿದ್ದ ಕಾಂಗ್ರೆಸ್​ ಈಗ ತನ್ನ ನಿಲುವು ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.

ಕಾಂಗ್ರೆಸ್​ ನಡೆಸಿದ ಚುನಾವಣೋತ್ತರ ಸಮೀಕ್ಷೆ ಅಚ್ಚರಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಿವೆ ಮೂಲಗಳು. ಸಮೀಕ್ಷೆಯಲ್ಲಿ ಆಪ್​ ಹಾಗೂ ಕಾಂಗ್ರೆಸ್​ಗಿಂತ ಬಿಜೆಪಿ ಮತ ಬ್ಯಾಂಕ್​ ಹೆಚ್ಚಿದೆಯಂತೆ. ಅದಕ್ಕಾಗಿ ಎರಡೂ ಪಕ್ಷ ಮತ್ತೆ ಮೈತ್ರಿ ಮಾಡಿಕೊಂಡರೆ, ಬಿಜೆಪಿ ಬೇಸ್‌ನ ಅಲುಗಾಡಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ದೆಹಲಿಯಲ್ಲಿ ಕಾಂಗ್ರೆಸ್​ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಆಪ್​ಗೆ ಶೇ.28 ಹಾಗೂ ಕಾಂಗ್ರೆಸ್​ ಶೇ. 22ರಷ್ಟು ಮತಬ್ಯಾಂಕ್​ ಹೊಂದಿವೆ. ಆದರೆ, ಬಿಜೆಪಿಗೆ ಶೇ. 35ರಷ್ಟು ವೋಟ್‌ಬ್ಯಾಂಕ್ ಇದೆಯಂತೆ. ಆಪ್​ ಹಾಗೂ ಕಾಂಗ್ರೆಸ್​ ಒಟ್ಟುಗೂಡಿದರೆ, ದೆಹಲಿಯ 7 ಲೋಕಸಭೆ ಕ್ಷೇತ್ರಗಳನ್ನು ಸುಲಭವಾಗಿ ತೆಕ್ಕೆಗೆ ಹಾಕಿಕೊಳ್ಳಬಹುದು ಎಂದು ಕೈ ನಾಯಕರು ತಂತ್ರ ಹೆಣೆದಿದ್ದಾರೆ​.

ಈ ಬಗ್ಗೆ ಆಪ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮತ್ತೊಮ್ಮೆ ಪರಿಗಣಿಸಬೇಕು ಅಂತ ದೆಹಲಿಯ ಕಾಂಗ್ರೆಸ್​ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್​ರಿಗೆ ಮನವಿ ಮಾಡಿದ್ದಾರೆ. ಆಪ್​ನೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ದೆಹಲಿ ಕಾಂಗ್ರೆಸ್​ ಅಧ್ಯಕ್ಷೆ ಶೀಲಾ ದೀಕ್ಷಿತ್​ ಕೂಡಾ ಪಕ್ಷದ ನಾಯಕರ ನಿರ್ಧಾರಕ್ಕೆ ತಾನೂ ಬದ್ಧ ಎಂದಿದ್ದಾರೆ.

ರಾಹುಲ್​ ಕೂಡ ಶಕ್ತಿ ಆ್ಯಪ್ ಮೂಲಕ ಮೈತ್ರಿ ಬಗ್ಗೆ ಕಾಂಗ್ರೆಸ್​ ಕಾರ್ಯಕರ್ತರ ಅಭಿಪ್ರಾಯವೇನು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ದೆಹಲಿಯ ಕಾಂಗ್ರೆಸ್​ ಉಸ್ತುವಾರಿ ಪಿಸಿ ಚಾಕೋ ಎಲ್ಲ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಹಿರಿಯ ನಾಯಕರಾದ ಅಹ್ಮದ್​ ಪಟೇಲ್​ ಹಾಗೂ ಗುಲಾಂ ನಬಿ ಆಜಾದ್​ ಅವರು, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ರ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿದುಬಂದಿದೆ.

ಎಲ್ಲವೂ ಅಂದುಕೊಂಡಂತಾದರೆ ದೆಹಲಿ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್​ ಮತ್ತು ಆಪ್ ಮೈತ್ರಿ ಆಗೋದು ಪಕ್ಕಾ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ದೂರವಿಟ್ಟು ಏಕಾಂಗಿ ಹೋರಾಡಲು ನಿರ್ಧರಿಸಿದ್ದ ಕಾಂಗ್ರೆಸ್​ ಈಗ ತನ್ನ ನಿಲುವು ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.

ಕಾಂಗ್ರೆಸ್​ ನಡೆಸಿದ ಚುನಾವಣೋತ್ತರ ಸಮೀಕ್ಷೆ ಅಚ್ಚರಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಿವೆ ಮೂಲಗಳು. ಸಮೀಕ್ಷೆಯಲ್ಲಿ ಆಪ್​ ಹಾಗೂ ಕಾಂಗ್ರೆಸ್​ಗಿಂತ ಬಿಜೆಪಿ ಮತ ಬ್ಯಾಂಕ್​ ಹೆಚ್ಚಿದೆಯಂತೆ. ಅದಕ್ಕಾಗಿ ಎರಡೂ ಪಕ್ಷ ಮತ್ತೆ ಮೈತ್ರಿ ಮಾಡಿಕೊಂಡರೆ, ಬಿಜೆಪಿ ಬೇಸ್‌ನ ಅಲುಗಾಡಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ದೆಹಲಿಯಲ್ಲಿ ಕಾಂಗ್ರೆಸ್​ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಆಪ್​ಗೆ ಶೇ.28 ಹಾಗೂ ಕಾಂಗ್ರೆಸ್​ ಶೇ. 22ರಷ್ಟು ಮತಬ್ಯಾಂಕ್​ ಹೊಂದಿವೆ. ಆದರೆ, ಬಿಜೆಪಿಗೆ ಶೇ. 35ರಷ್ಟು ವೋಟ್‌ಬ್ಯಾಂಕ್ ಇದೆಯಂತೆ. ಆಪ್​ ಹಾಗೂ ಕಾಂಗ್ರೆಸ್​ ಒಟ್ಟುಗೂಡಿದರೆ, ದೆಹಲಿಯ 7 ಲೋಕಸಭೆ ಕ್ಷೇತ್ರಗಳನ್ನು ಸುಲಭವಾಗಿ ತೆಕ್ಕೆಗೆ ಹಾಕಿಕೊಳ್ಳಬಹುದು ಎಂದು ಕೈ ನಾಯಕರು ತಂತ್ರ ಹೆಣೆದಿದ್ದಾರೆ​.

ಈ ಬಗ್ಗೆ ಆಪ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮತ್ತೊಮ್ಮೆ ಪರಿಗಣಿಸಬೇಕು ಅಂತ ದೆಹಲಿಯ ಕಾಂಗ್ರೆಸ್​ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್​ರಿಗೆ ಮನವಿ ಮಾಡಿದ್ದಾರೆ. ಆಪ್​ನೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ದೆಹಲಿ ಕಾಂಗ್ರೆಸ್​ ಅಧ್ಯಕ್ಷೆ ಶೀಲಾ ದೀಕ್ಷಿತ್​ ಕೂಡಾ ಪಕ್ಷದ ನಾಯಕರ ನಿರ್ಧಾರಕ್ಕೆ ತಾನೂ ಬದ್ಧ ಎಂದಿದ್ದಾರೆ.

ರಾಹುಲ್​ ಕೂಡ ಶಕ್ತಿ ಆ್ಯಪ್ ಮೂಲಕ ಮೈತ್ರಿ ಬಗ್ಗೆ ಕಾಂಗ್ರೆಸ್​ ಕಾರ್ಯಕರ್ತರ ಅಭಿಪ್ರಾಯವೇನು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ದೆಹಲಿಯ ಕಾಂಗ್ರೆಸ್​ ಉಸ್ತುವಾರಿ ಪಿಸಿ ಚಾಕೋ ಎಲ್ಲ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಹಿರಿಯ ನಾಯಕರಾದ ಅಹ್ಮದ್​ ಪಟೇಲ್​ ಹಾಗೂ ಗುಲಾಂ ನಬಿ ಆಜಾದ್​ ಅವರು, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ರ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿದುಬಂದಿದೆ.

ಎಲ್ಲವೂ ಅಂದುಕೊಂಡಂತಾದರೆ ದೆಹಲಿ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್​ ಮತ್ತು ಆಪ್ ಮೈತ್ರಿ ಆಗೋದು ಪಕ್ಕಾ.

Intro:Body:

ರಾಜಧಾನಿಯಲ್ಲಿ ಕಾಂಗ್ರೆಸ್‌ಗೆ 'ಆಪ್‌'ದ್ಬಾಂಧವ ಕೇಜ್ರಿ; ಹಗ್ಗಜಗ್ಗಾಟದ ಬಳಿಕ ಮೈತ್ರಿ



In AAP-Congress Alliance Talks, A Vote Share Survey And An Opinion Poll





ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ದೂರವಿಟ್ಟು ಏಕಾಂಗಿ ಹೋರಾಡಲು ನಿರ್ಧರಿಸಿದ್ದ ಕಾಂಗ್ರೆಸ್​ ಈಗ ತನ್ನ ನಿಲುವು ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.



ಕಾಂಗ್ರೆಸ್​ ನಡೆಸಿದ ಚುನಾವಣೋತ್ತರ ಸಮೀಕ್ಷೆ ಅಚ್ಚರಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಿವೆ ಮೂಲಗಳು. ಸಮೀಕ್ಷೆಯಲ್ಲಿ ಆಪ್​ ಹಾಗೂ ಕಾಂಗ್ರೆಸ್​ಗಿಂತ ಬಿಜೆಪಿ ಮತ ಬ್ಯಾಂಕ್​ ಹೆಚ್ಚಿದೆಯಂತೆ. ಅದಕ್ಕಾಗಿ ಎರಡೂ ಪಕ್ಷ ಮತ್ತೆ ಮೈತ್ರಿ ಮಾಡಿಕೊಂಡರೆ, ಬಿಜೆಪಿ ಬೇಸ್‌ನ ಅಲುಗಾಡಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. 



ದೆಹಲಿಯಲ್ಲಿ ಕಾಂಗ್ರೆಸ್​ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಆಪ್​ಗೆ ಶೇ.28 ಹಾಗೂ ಕಾಂಗ್ರೆಸ್​ ಶೇ. 22ರಷ್ಟು ಮತಬ್ಯಾಂಕ್​ ಹೊಂದಿವೆ. ಆದರೆ, ಬಿಜೆಪಿಗೆ ಶೇ. 35ರಷ್ಟು ವೋಟ್‌ಬ್ಯಾಂಕ್ ಇದೆಯಂತೆ. ಆಪ್​ ಹಾಗೂ ಕಾಂಗ್ರೆಸ್​ ಒಟ್ಟುಗೂಡಿದರೆ, ದೆಹಲಿಯ 7 ಲೋಕಸಭೆ ಕ್ಷೇತ್ರಗಳನ್ನು ಸುಲಭವಾಗಿ ತೆಕ್ಕೆಗೆ ಹಾಕಿಕೊಳ್ಳಬಹುದು ಎಂದು ಕೈ ನಾಯಕರು ತಂತ್ರ ಹೆಣೆದಿದ್ದಾರೆ​.



ಈ ಬಗ್ಗೆ ಆಪ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮತ್ತೊಮ್ಮೆ ಪರಿಗಣಿಸಬೇಕು ಅಂತ ದೆಹಲಿಯ ಕಾಂಗ್ರೆಸ್​ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್​ರಿಗೆ ಮನವಿ ಮಾಡಿದ್ದಾರೆ. ಆಪ್​ನೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ದೆಹಲಿ ಕಾಂಗ್ರೆಸ್​ ಅಧ್ಯಕ್ಷೆ ಶೀಲಾ ದೀಕ್ಷಿತ್​ ಕೂಡಾ ಪಕ್ಷದ ನಾಯಕರ ನಿರ್ಧಾರಕ್ಕೆ ತಾನೂ ಬದ್ಧ ಎಂದಿದ್ದಾರೆ. 



ರಾಹುಲ್​ ಕೂಡ ಶಕ್ತಿ ಆ್ಯಪ್ ಮೂಲಕ ಮೈತ್ರಿ ಬಗ್ಗೆ ಕಾಂಗ್ರೆಸ್​ ಕಾರ್ಯಕರ್ತರ ಅಭಿಪ್ರಾಯವೇನು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ದೆಹಲಿಯ ಕಾಂಗ್ರೆಸ್​ ಉಸ್ತುವಾರಿ ಪಿಸಿ ಚಾಕೋ ಎಲ್ಲ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಹಿರಿಯ ನಾಯಕರಾದ ಅಹ್ಮದ್​ ಪಟೇಲ್​ ಹಾಗೂ ಗುಲಾಂ ನಬಿ ಆಜಾದ್​ ಅವರು, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ರ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿದುಬಂದಿದೆ. 



ಎಲ್ಲವೂ ಅಂದುಕೊಂಡಂತಾದರೆ ದೆಹಲಿ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್​ ಮತ್ತು ಆಪ್ ಮೈತ್ರಿ ಆಗೋದು ಪಕ್ಕಾ. 

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.