ETV Bharat / bharat

ಗಡಿಯಲ್ಲಿ ನಕ್ಸಲರು-ಪೊಲೀಸರ ಮಧ್ಯೆ ಗುಂಡಿನ ಚಕಮಕಿ - ಜಯಶಂಕರ್​ ಭೂಪಾಲ್​ಪಲ್ಲಿ ಎನ್​ಕೌಂಟರ್

ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿರುವ ಘಟನೆ ತೆಲಂಗಾಣದ ಗಡಿಪ್ರದೇಶದಲ್ಲಿ ನಡೆದಿದೆ. ಈ ವೇಳೆ ಗುಂಡಿನ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Exchange of fire in Jayashankar Bhupalpalli, Exchange of fire in Jayashankar Bhupalpalli between police and Naxals, Exchange of fire between police and Naxals, Mulugu encounter, Jayashankar Bhupalpalli encounter news,  ಜಯಶಂಕರ್​ ಭೂಪಾಲ್​ಪಲ್ಲಿಯಲ್ಲಿ ಗುಂಡಿನ ಚಕಮಕಿ, ಜಯಶಂಕರ್​ ಭೂಪಾಲ್​ಪಲ್ಲಿಯಲ್ಲಿ ಪೊಲೀಸ್ ಮತ್ತು ನಕ್ಸಲರ ನಡುವೆ  ಗುಂಡಿನ ಚಕಮಕಿ, ಪೊಲೀಸ್ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ, ಜಯಶಂಕರ್​ ಭೂಪಾಲ್​ಪಲ್ಲಿ ಎನ್​ಕೌಂಟರ್, ಜಯಶಂಕರ್​ ಭೂಪಾಲ್​ಪಲ್ಲಿ ಎನ್​ಕೌಂಟರ್ ಸುದ್ದಿ,
ಗಡಿಯಲ್ಲಿ ನಕ್ಸಲರು-ಪೊಲೀಸರ ಮಧ್ಯೆ ಗುಂಡಿನ ಚಕಮಕಿ
author img

By

Published : Nov 11, 2020, 10:37 AM IST

ಜಯಶಂಕರ್​ ಭೂಪಾಲ್​ಪಲ್ಲಿ(ತೆಲಂಗಾಣ): ಮಹಾದೇವ್​ಪೂರ್​ ತಾಲೂಕಿನ ಪೆದ್ದಂಪೇಟ್ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ.

ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿರುವುದಿಂದ ಕಳೆದ ಒಂದು ವಾರದಿಂದ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ನಿನ್ನೆ ನಕ್ಸಲರು ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. 20 ರಿಂದ 25 ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು, ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ದಾಳಿ ಬಳಿಕ ಪೊಲೀಸರು ಒಂದು ರೈಫಲ್, 8 ಕಿಟ್ ಬ್ಯಾಗ್ ಮತ್ತು ವೈದ್ಯಕೀಯ ಕಿಟ್, ಅಡುಗೆ ಪಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.

ನಕ್ಸಲರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದೆವು. ಮಂಗಳವಾರ ಅವರ ಗುರುತು ಪತ್ತೆಯಾಗಿದ್ದು, ದಾಳಿ ಮಾಡಲಾಗಿತ್ತು. ಆದ್ರೆ ಈ ವೇಳೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್​ ಅಧೀಕ್ಷಕ ಸಂಗ್ರಾಮ್​ ಸಿಂಗ್​ ಜಿ. ಪಾಟೀಲ್ ತಿಳಿಸಿದರು.

ಶಾಂತಿ ಹಾಳುಮಾಡುವ ಉದ್ದೇಶ ಮತ್ತು ಉದ್ಯಮಿ, ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸುವ ಯೋಜನೆಯನ್ನು ನಕ್ಸಲರು ಹಾಕಿದ್ದರು. ಪರಾರಿಯಾದ ನಕ್ಸಲರ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು.

ಜಯಶಂಕರ್​ ಭೂಪಾಲ್​ಪಲ್ಲಿ(ತೆಲಂಗಾಣ): ಮಹಾದೇವ್​ಪೂರ್​ ತಾಲೂಕಿನ ಪೆದ್ದಂಪೇಟ್ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ.

ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿರುವುದಿಂದ ಕಳೆದ ಒಂದು ವಾರದಿಂದ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ನಿನ್ನೆ ನಕ್ಸಲರು ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. 20 ರಿಂದ 25 ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು, ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ದಾಳಿ ಬಳಿಕ ಪೊಲೀಸರು ಒಂದು ರೈಫಲ್, 8 ಕಿಟ್ ಬ್ಯಾಗ್ ಮತ್ತು ವೈದ್ಯಕೀಯ ಕಿಟ್, ಅಡುಗೆ ಪಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.

ನಕ್ಸಲರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದೆವು. ಮಂಗಳವಾರ ಅವರ ಗುರುತು ಪತ್ತೆಯಾಗಿದ್ದು, ದಾಳಿ ಮಾಡಲಾಗಿತ್ತು. ಆದ್ರೆ ಈ ವೇಳೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್​ ಅಧೀಕ್ಷಕ ಸಂಗ್ರಾಮ್​ ಸಿಂಗ್​ ಜಿ. ಪಾಟೀಲ್ ತಿಳಿಸಿದರು.

ಶಾಂತಿ ಹಾಳುಮಾಡುವ ಉದ್ದೇಶ ಮತ್ತು ಉದ್ಯಮಿ, ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸುವ ಯೋಜನೆಯನ್ನು ನಕ್ಸಲರು ಹಾಕಿದ್ದರು. ಪರಾರಿಯಾದ ನಕ್ಸಲರ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.