ETV Bharat / bharat

ಈ ನಗರಕ್ಕೆ ಏನಾಗಿದೆ..? ಪಾತಾಳಕ್ಕೆ ಕುಸಿದ ದೆಹಲಿಯ ಗಾಳಿಯ ಗುಣಮಟ್ಟ..!

author img

By

Published : Nov 4, 2019, 2:47 AM IST

Updated : Nov 4, 2019, 6:33 AM IST

ಘಾಜಿಯಾಬಾದ್,ಗ್ರೇಟರ್ ನೋಯ್ಡಾ, ಗುರುಗ್ರಾಮ,ಫರೀದಾಬಾದ್, ನೋಯ್ಡಾ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ ಕುಸಿತ ಕಂಡಿದೆ.

ದೆಹಲಿಯ ಗಾಳಿಯ ಗುಣಮಟ್ಟ

ದೆಹಲಿ: ರಾಷ್ಟ್ರ ರಾಜಧಾನಿ ಈ ಹಿಂದೆಂದಿಗಿಂತಲೂ ವಿಷಮ ಪರಿಸ್ಥಿತಿ ಎದುರಿಸುತ್ತಿದ್ದು, ನಿವಾಸಿಗಳು ವಿಷಗಾಳಿಯ ಸುಳಿಯಲ್ಲಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಘಾಜಿಯಾಬಾದ್,ಗ್ರೇಟರ್ ನೋಯ್ಡಾ, ಗುರುಗ್ರಾಮ,ಫರೀದಾಬಾದ್, ನೋಯ್ಡಾ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ ಕುಸಿತ ಕಂಡಿದೆ.

ವರದಿ ಕೇಳಿದ ಸುಪ್ರೀಂ:

ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಸುಪ್ರೀಂಕೋರ್ಟ್​ ಸೋಮವಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ(ಉತ್ತರ ಪ್ರದೇಶ, ಹರಿಯಾಣ, ಪಂಜಾಬ್) ಕಳೆಗಳಿಗೆ ಬೆಂಕಿ ನೀಡುವುದನ್ನು ನಿಲ್ಲಿಸಲು ಮಂಡಳಿ ಮನವಿ ಮಾಡಿದೆ.

ಕ್ಯಾರೆಟ್ ತಿನ್ನಿ ಎಂದ ಸಚಿವ..!

ದೆಹಲಿಯ ವಿಷಗಾಳಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​​ ರಾಷ್ಟ್ರ ರಾಜಧಾನಿ ಜನತೆಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ದೆಹಲಿ ನಿವಾಸಿಗಳು ಕ್ಯಾರೆಟ್ ತಿನ್ನುವ ಮೂಲಕ ವಾಯುಮಾಲಿನ್ಯದಿಂದ ಬರಬಹುದಾದ ತೊಂದರೆಯಿಂದ ರಕ್ಷಿಸಿಕೊಳ್ಳಬಹುದು ಎಂದಿದ್ದಾರೆ. ಕ್ಯಾರೆಟ್​ನಲ್ಲಿ ವಿಟಮಿನ್ ಎ, ಪೊಟ್ಯಾಷಿಯಂ ಅಂಶಗಳಿದ್ದು ಇವು ಆರೋಗ್ಯಕ್ಕೆ ಉತ್ತಮ ಎಂದು ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಶಾಲಾ ಕಾಲೇಜ್ ಬಂದ್, ವಿಮಾನ ಹಾರಾಟ ವ್ಯತ್ಯಯ:

ವಿಷಗಾಳಿಯ ಹಿನ್ನೆಲೆಯಲ್ಲಿ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳನ್ನು ನ.5ರ ತನಕ ಮುಚ್ಚಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಕೇಜ್ರಿವಾಲ್ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ವಿಮಾನ ಹಾರಾಟಕ್ಕೆ ಪ್ರತೀಕೂಲ ಹವಾಮಾನ ಇದ್ದ ಕಾರಣ ಬರೋಬ್ಬರಿ 37 ವಿಮಾನಗಳ ಲ್ಯಾಂಡಿಂಗ್ ಬೇರೆಡೆ ಮಾಡಲಾಗಿದೆ. ಇವುಗಳಲ್ಲಿ 12 ಏರ್ ಇಂಡಿಯಾ ವಿಮಾನ ಸೇರಿವೆ.

ದೆಹಲಿ: ರಾಷ್ಟ್ರ ರಾಜಧಾನಿ ಈ ಹಿಂದೆಂದಿಗಿಂತಲೂ ವಿಷಮ ಪರಿಸ್ಥಿತಿ ಎದುರಿಸುತ್ತಿದ್ದು, ನಿವಾಸಿಗಳು ವಿಷಗಾಳಿಯ ಸುಳಿಯಲ್ಲಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಘಾಜಿಯಾಬಾದ್,ಗ್ರೇಟರ್ ನೋಯ್ಡಾ, ಗುರುಗ್ರಾಮ,ಫರೀದಾಬಾದ್, ನೋಯ್ಡಾ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ ಕುಸಿತ ಕಂಡಿದೆ.

ವರದಿ ಕೇಳಿದ ಸುಪ್ರೀಂ:

ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಸುಪ್ರೀಂಕೋರ್ಟ್​ ಸೋಮವಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ(ಉತ್ತರ ಪ್ರದೇಶ, ಹರಿಯಾಣ, ಪಂಜಾಬ್) ಕಳೆಗಳಿಗೆ ಬೆಂಕಿ ನೀಡುವುದನ್ನು ನಿಲ್ಲಿಸಲು ಮಂಡಳಿ ಮನವಿ ಮಾಡಿದೆ.

ಕ್ಯಾರೆಟ್ ತಿನ್ನಿ ಎಂದ ಸಚಿವ..!

ದೆಹಲಿಯ ವಿಷಗಾಳಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​​ ರಾಷ್ಟ್ರ ರಾಜಧಾನಿ ಜನತೆಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ದೆಹಲಿ ನಿವಾಸಿಗಳು ಕ್ಯಾರೆಟ್ ತಿನ್ನುವ ಮೂಲಕ ವಾಯುಮಾಲಿನ್ಯದಿಂದ ಬರಬಹುದಾದ ತೊಂದರೆಯಿಂದ ರಕ್ಷಿಸಿಕೊಳ್ಳಬಹುದು ಎಂದಿದ್ದಾರೆ. ಕ್ಯಾರೆಟ್​ನಲ್ಲಿ ವಿಟಮಿನ್ ಎ, ಪೊಟ್ಯಾಷಿಯಂ ಅಂಶಗಳಿದ್ದು ಇವು ಆರೋಗ್ಯಕ್ಕೆ ಉತ್ತಮ ಎಂದು ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಶಾಲಾ ಕಾಲೇಜ್ ಬಂದ್, ವಿಮಾನ ಹಾರಾಟ ವ್ಯತ್ಯಯ:

ವಿಷಗಾಳಿಯ ಹಿನ್ನೆಲೆಯಲ್ಲಿ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳನ್ನು ನ.5ರ ತನಕ ಮುಚ್ಚಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಕೇಜ್ರಿವಾಲ್ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ವಿಮಾನ ಹಾರಾಟಕ್ಕೆ ಪ್ರತೀಕೂಲ ಹವಾಮಾನ ಇದ್ದ ಕಾರಣ ಬರೋಬ್ಬರಿ 37 ವಿಮಾನಗಳ ಲ್ಯಾಂಡಿಂಗ್ ಬೇರೆಡೆ ಮಾಡಲಾಗಿದೆ. ಇವುಗಳಲ್ಲಿ 12 ಏರ್ ಇಂಡಿಯಾ ವಿಮಾನ ಸೇರಿವೆ.

Intro:Body:

ದೆಹಲಿ: ರಾಷ್ಟ್ರ ರಾಜಧಾನಿ ಈ ಹಿಂದೆಂದಿಗಿಂತಲೂ ವಿಷಮ ಪರಿಸ್ಥಿತಿ ಎದುರಿಸುತ್ತಿದ್ದು, ನಿವಾಸಿಗಳು ವಿಷಗಾಳಿಯ ಸುಳಿಯಲ್ಲಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.



ಗಾಜಿಯಾಬಾದ್,ಗ್ರೇಟರ್ ನೋಯ್ಡಾ, ಗುರುಗ್ರಾಮ,ಫರೀದಾಬಾದ್, ನೋಯ್ಡಾ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ ಕುಸಿತ ಕಂಡಿದೆ. 



ವರದಿ ಕೇಳಿದ ಸುಪ್ರೀಂ:



ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಸುಪ್ರೀಂಕೋರ್ಟ್​ ಸೋಮವಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ(ಉತ್ತರ ಪ್ರದೇಶ, ಹರಿಯಾಣ, ಪಂಜಾಬ್) ಕಳೆಗಳಿಗೆ ಬೆಂಕಿ ನೀಡುವುದನ್ನು ನಿಲ್ಲಿಸಲು ಮಂಡಳಿ ಮನವಿ ಮಾಡಿದೆ.



ಕ್ಯಾರೆಟ್ ತಿನ್ನಿ ಎಂದ ಸಚಿವ..!



ದೆಹಲಿಯ ವಿಷಗಾಳಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​​ ರಾಷ್ಟ್ರ ರಾಜಧಾನಿ ಜನತೆಗೆ ಸಲಹೆ ನೀಡಿದ್ದಾರೆ.



ದೆಹಲಿ ನಿವಾಸಿಗಳು ಕ್ಯಾರೆಟ್ ತಿನ್ನುವ ಮೂಲಕ ವಾಯುಮಾಲಿನ್ಯದಿಂದ ಬದಬಹುದಾದ ತೊಂದರೆಯಿಂದ ರಕ್ಷಿಸಿಕೊಳ್ಳಬಹುದು ಎಂದಿದ್ದಾರೆ. ಕ್ಯಾರೆಟ್​ನಲ್ಲಿ ವಿಟಮಿನ್ ಎ, ಪೊಟ್ಯಾಷಿಯಂ ಅಂಶಗಳಿದ್ದು ಇವು ಆರೋಗ್ಯಕ್ಕೆ ಉತ್ತಮ ಎಂದು ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.



ಶಾಲಾ ಕಾಲೇಜ್ ಬಂದ್, ವಿಮಾನ ಹಾರಾಟ ವ್ಯತ್ಯಯ:



ವಿಷಗಾಳಿಯ ಹಿನ್ನೆಲೆಯಲ್ಲಿ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳನ್ನು ನ.5ರ ತನಕ ಮುಚ್ಚಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಕೇಜ್ರಿವಾಲ್ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.



ವಿಮಾನ ಹಾರಾಟಕ್ಕೆ ಪ್ರತೀಕೂಲ ಹವಾಮಾನ ಇದ್ದ ಕಾರಣ ಬರೋಬ್ಬರಿ 37 ವಿಮಾನಗಳ ಲ್ಯಾಂಡಿಂಗ್ ಬೇರೆಡೆ ಮಾಡಲಾಗಿದೆ. ಇವುಗಳಲ್ಲಿ 12 ಏರ್ ಇಂಡಿಯಾ ವಿಮಾನ ಸೇರಿವೆ.


Conclusion:
Last Updated : Nov 4, 2019, 6:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.