ETV Bharat / bharat

ಎಲೆಮರೆ ಕಾಯಿಯನ್ನು ಕಣಕ್ಕಿಳಿಸಿದ ಬಿಜೆಪಿ: ಕೇಜ್ರಿವಾಲ್​ ವಿರುದ್ಧ ನಿಲ್ಲುವ ಅಭ್ಯರ್ಥಿ ಯಾರು ಗೊತ್ತೇ?

ನವದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಕಾವು ಬಲು ಜೋರಾಗಿದ್ದು, ನವದೆಹಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಸಿಎಂ ಅರವಿಂದ​ ಕೇಜ್ರಿವಾಲ್​ ವಿರುದ್ಧ ಬಿಜೆಪಿ ಹೊಸಮುಖವನ್ನು ಕಣಕ್ಕಿಳಿಸಲಿದೆ.

author img

By

Published : Jan 21, 2020, 1:52 PM IST

sunil yadav against Arvind Kejriwal, sunil yadav against Arvind Kejriwal for Delhi assembly election, Delhi assembly election news, Delhi assembly election latest news,  ಅರವಿಂದ್​ ಕೇಜ್ರಿವಾಲ್​ ವಿರುದ್ಧ ಸುನೀಲ್​ ಯಾದವ್​ ಕಣಕ್ಕೆ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಸುನೀಲ್​ ಯಾದವ್ ಕಣಕ್ಕೆ, ದೆಹಲಿ ವಿಧಾನಸಭಾ ಚುನಾವಣೆ, ದೆಹಲಿ ವಿಧಾನಸಭಾ ಚುನಾವಣೆ ಸುದ್ದಿ,
ಕೃಪೆ: Twitter

ನವದೆಹಲಿ: ಈಗ ಎಲ್ಲರ ಚಿತ್ತ ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭಾ ಚುನಾವಣೆಯತ್ತ ಸಾಗಿದೆ. ಆಮ್​ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ನವದೆಹಲಿ ಸಿಎಂ ಅರವಿಂದ​ ಕೇಜ್ರಿವಾಲ್​ ವಿರುದ್ಧ ಬಿಜಿಪಿ ಹೊಸ ತಂತ್ರ ರಚಿಸಿದೆ.

ಹೌದು, ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧ ಭಾರತೀಯ ಜನತಾ ಪಕ್ಷ ಒಂದು ಹಂತದ ನಿರ್ಣಯಕ್ಕೆ ಬಂದಿದ್ದು, ಅರವಿಂದ​ ಕೇಜ್ರಿವಾಲ್​ ವಿರುದ್ಧ ಹೊಸಮುಖ ಸುನೀಲ್​ ಯಾದವ್​ ಅವರನ್ನು ಕಣಕ್ಕಿಳಿಸಲಿದೆ.

2015ರಲ್ಲಿ ನಡೆದ ವಿಧಾನಸಭಾ ಚುನವಾಣೆಯಲ್ಲಿ ಕೇಜ್ರಿವಾಲ್​ ವಿರುದ್ಧ ಬಿಜೆಪಿ ನೂಪುರ್​ ಶರ್ಮಾರನ್ನು ಕಣಕ್ಕಿಳಿಸಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೇಜ್ರಿವಾಲ್​ ಶೇ.64 ಮತಗಳಿಂದ ಗೆಲುವು ಸಾಧಿಸಿದ್ದರು.

ಸುನೀಲ್​ ಯಾದವ್​ ಬಗ್ಗೆ ಒಂದಿಷ್ಟು..
ಸುನೀಲ್​ ಯಾದವ್​ ವೃತ್ತಿಯಲ್ಲಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು. ಇವರು 2014ರಲ್ಲಿ ಬಿಜೆಪಿ ಯುವ ಮೊರ್ಚಾ ‘ಮಂಡಲ ಅಧ್ಯಕ್ಷ’ರಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಬಳಿಕ ಜಿಲ್ಲಾ ಅಧ್ಯಕ್ಷರಾದರು. ಅದಾದ ಬಳಿಕ ದೆಹಲಿಯ ಯುವ ಮೋರ್ಚಾದ ಜನರಲ್​ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯಾದರು. ಈಗ ಯಾದವ್​ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಸುನೀಲ್​ ಯಾದವ್​ಗೆ ಟ್ವಿಟ್ಟರ್​ನಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಫಾಲೋ ಮಾಡ್ತಿದ್ದಾರೆ. ಅದರಂತೆ ಇವು ಫೇಸ್ಬುಕ್​ ಪೇಜ್‌ನಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಜನ ಲೈಕ್​ (ಸಬ್​ಸ್ಕ್ರೈಬ್​) ಮಾಡಿದ್ದಾರೆ. ಎಲೆಮರೆ ಕಾಯಿಯಾಗಿರುವ ಸುನೀಲ್​ ಯಾದವ್​ ಮೇಲೆ ಬಿಜೆಪಿ ಇಟ್ಟಿರುವ ನಂಬಿಕೆ ನಿಜವಾಗುತ್ತಾ ಎಂಬುದು ಚುನಾವಣೆ ಬಳಿಕವೇ ಗೊತ್ತಾಗಲಿದೆ.

ನವದೆಹಲಿ: ಈಗ ಎಲ್ಲರ ಚಿತ್ತ ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭಾ ಚುನಾವಣೆಯತ್ತ ಸಾಗಿದೆ. ಆಮ್​ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ನವದೆಹಲಿ ಸಿಎಂ ಅರವಿಂದ​ ಕೇಜ್ರಿವಾಲ್​ ವಿರುದ್ಧ ಬಿಜಿಪಿ ಹೊಸ ತಂತ್ರ ರಚಿಸಿದೆ.

ಹೌದು, ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧ ಭಾರತೀಯ ಜನತಾ ಪಕ್ಷ ಒಂದು ಹಂತದ ನಿರ್ಣಯಕ್ಕೆ ಬಂದಿದ್ದು, ಅರವಿಂದ​ ಕೇಜ್ರಿವಾಲ್​ ವಿರುದ್ಧ ಹೊಸಮುಖ ಸುನೀಲ್​ ಯಾದವ್​ ಅವರನ್ನು ಕಣಕ್ಕಿಳಿಸಲಿದೆ.

2015ರಲ್ಲಿ ನಡೆದ ವಿಧಾನಸಭಾ ಚುನವಾಣೆಯಲ್ಲಿ ಕೇಜ್ರಿವಾಲ್​ ವಿರುದ್ಧ ಬಿಜೆಪಿ ನೂಪುರ್​ ಶರ್ಮಾರನ್ನು ಕಣಕ್ಕಿಳಿಸಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೇಜ್ರಿವಾಲ್​ ಶೇ.64 ಮತಗಳಿಂದ ಗೆಲುವು ಸಾಧಿಸಿದ್ದರು.

ಸುನೀಲ್​ ಯಾದವ್​ ಬಗ್ಗೆ ಒಂದಿಷ್ಟು..
ಸುನೀಲ್​ ಯಾದವ್​ ವೃತ್ತಿಯಲ್ಲಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು. ಇವರು 2014ರಲ್ಲಿ ಬಿಜೆಪಿ ಯುವ ಮೊರ್ಚಾ ‘ಮಂಡಲ ಅಧ್ಯಕ್ಷ’ರಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಬಳಿಕ ಜಿಲ್ಲಾ ಅಧ್ಯಕ್ಷರಾದರು. ಅದಾದ ಬಳಿಕ ದೆಹಲಿಯ ಯುವ ಮೋರ್ಚಾದ ಜನರಲ್​ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯಾದರು. ಈಗ ಯಾದವ್​ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಸುನೀಲ್​ ಯಾದವ್​ಗೆ ಟ್ವಿಟ್ಟರ್​ನಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಫಾಲೋ ಮಾಡ್ತಿದ್ದಾರೆ. ಅದರಂತೆ ಇವು ಫೇಸ್ಬುಕ್​ ಪೇಜ್‌ನಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಜನ ಲೈಕ್​ (ಸಬ್​ಸ್ಕ್ರೈಬ್​) ಮಾಡಿದ್ದಾರೆ. ಎಲೆಮರೆ ಕಾಯಿಯಾಗಿರುವ ಸುನೀಲ್​ ಯಾದವ್​ ಮೇಲೆ ಬಿಜೆಪಿ ಇಟ್ಟಿರುವ ನಂಬಿಕೆ ನಿಜವಾಗುತ್ತಾ ಎಂಬುದು ಚುನಾವಣೆ ಬಳಿಕವೇ ಗೊತ್ತಾಗಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.