ETV Bharat / bharat

ಕೋವಿಡ್​-19 ಕರಿನೆರಳು: ಪೂರ್ಣಕಾಲಕ್ಕೆ ಸುಪ್ರೀಂ ಕೋರ್ಟ್​ ಬಾಗಿಲು ಮುಚ್ಚಲು ಸಾಧ್ಯವಿಲ್ಲವೆಂದ್ರು ಸಿಜೆಐ

author img

By

Published : Mar 16, 2020, 9:27 AM IST

Updated : Mar 16, 2020, 10:37 AM IST

ಕೊರೊನಾ ವೈರಸ್​ ಭೀತಿಯ ಇದ್ದರೂ ಸುಪ್ರೀಂ ಕೋರ್ಟನ್ನು ಸಂಪೂರ್ಣವಾಗಿ ಬಂದ್​ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಸ್ಪಷ್ಟಪಡಿಸಿದ್ದಾರೆ.

Supreme court
ಸುಪ್ರೀಂ ಕೋರ್ಟ್

ನವದೆಹಲಿ: ವಿಶ್ವದಾದ್ಯಂತ ಹಬ್ಬಿರುವ ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಸರ್ವೋಚ್ಛ ನ್ಯಾಯಾಲಯವನ್ನು ಸಂಪೂರ್ಣವಾಗಿ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು, ನವದೆಹಲಿಯ ಏಮ್ಸ್‌ನ ರಂದೀಪ್ ಗುಲೇರಿಯಾ ಸೇರಿದಂತೆ ಖ್ಯಾತ ವೈದ್ಯರೊಂದಿಗೆ ಸಿಜೆಐ ಎಸ್ ಎ ಬೊಬ್ಡೆ ಸಭೆ ನಡೆಸಿದರು. ದೇಶದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಬೊಬ್ಡೆ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಮಾರಕ ಕಾಯಿಲೆಯ ಹರಡುವಿಕೆ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಿದರು.

ವೈರಸ್​ ಭೀತಿಯಿಂದಾಗಿ ದೇಶದ ಉನ್ನತ ನ್ಯಾಯಾಲಯವನ್ನು ಸಂಪೂರ್ಣ ಬಂದ್​ ಮಾಡುವ ವಿಚಾರವನ್ನು ಬಾಬ್ಡೆ ತಳ್ಳಿಹಾಕಿದ್ದಾರೆ.

ನವದೆಹಲಿ: ವಿಶ್ವದಾದ್ಯಂತ ಹಬ್ಬಿರುವ ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಸರ್ವೋಚ್ಛ ನ್ಯಾಯಾಲಯವನ್ನು ಸಂಪೂರ್ಣವಾಗಿ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು, ನವದೆಹಲಿಯ ಏಮ್ಸ್‌ನ ರಂದೀಪ್ ಗುಲೇರಿಯಾ ಸೇರಿದಂತೆ ಖ್ಯಾತ ವೈದ್ಯರೊಂದಿಗೆ ಸಿಜೆಐ ಎಸ್ ಎ ಬೊಬ್ಡೆ ಸಭೆ ನಡೆಸಿದರು. ದೇಶದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಬೊಬ್ಡೆ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಮಾರಕ ಕಾಯಿಲೆಯ ಹರಡುವಿಕೆ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಿದರು.

ವೈರಸ್​ ಭೀತಿಯಿಂದಾಗಿ ದೇಶದ ಉನ್ನತ ನ್ಯಾಯಾಲಯವನ್ನು ಸಂಪೂರ್ಣ ಬಂದ್​ ಮಾಡುವ ವಿಚಾರವನ್ನು ಬಾಬ್ಡೆ ತಳ್ಳಿಹಾಕಿದ್ದಾರೆ.

Last Updated : Mar 16, 2020, 10:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.