ETV Bharat / bharat

ರಕ್ತ ಹೆಪ್ಪುಗಟ್ಟಿಸುವ ಲಡಾಖ್​ ಗಡಿಯಲ್ಲಿ ಸೇನೆ ನಿಯೋಜನೆ: ಭಾರತ-ಚೀನಾ ಬೊಕ್ಕಸಕ್ಕೆ ಹೊರೆ - ಪರಿಹಾರ ಯಾವುದು?

author img

By

Published : Dec 24, 2020, 10:44 PM IST

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲದೇ ಎರಡೂ ಕಡೆಯ ಕಮಾಂಡರ್‌ಗಳ ಮಟ್ಟದಲ್ಲಿ ಈಗಿನ ಬದಲಾವಣೆಗೆ ಒಂದು ಅವಕಾಶವಿದೆ. ಲಡಾಖ್‌ನಲ್ಲಿ ಎಂಟು ತಿಂಗಳಿಂದ ನಡೆಯುತ್ತಿರುವ ಯುದ್ಧದ ವಾತಾವರಣವನ್ನು 'ಗೌರವಾನ್ವಿತ' ಮತ್ತು ಪರಸ್ಪರ ಮಾತುಕತೆ ಮುಖೇನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬಹುದಾಗಿದೆ.

Ladakh
ಲಡಾಖ್

ನವದೆಹಲಿ: ಭಾರತ- ಚೀನಾ ನಡುವೆ ತೀವ್ರ ವಿವಾದದ ನೆಲೆಯಾದ ಪೂರ್ವ ಲಡಾಖ್​ನ ಮೇಲ್ಭಾಗದಲ್ಲಿ ತಾಪಮಾನ ಮೈನಸ್​ 30 ಡಿಗ್ರಿಗಿಂತಲೂ ಕೆಳಗಿಳಿಯುತ್ತಿದೆ. ಮೈಕೊರೆಯುವ ಭೀಕರ ಚಳಿಯ ನಡುವೆಯೂ ಉಭಯ ರಾಷ್ಟ್ರಗಳು ಭಾರಿ ಪ್ರಮಾಣ ಸೇನಾ ಸಿಬ್ಬಂದಿ ನಿಯೋಜನೆ ಮಾಡುವುದು ಬುದ್ಧಿವಂತಿಕೆಯಾಗಿ ಕಾಣುತ್ತಿಲ್ಲ. ಇದು ಎರಡೂ ರಾಷ್ಟ್ರಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗುತ್ತಿದೆ.

ಸುಮಾರು ಎಂಟು ತಿಂಗಳ ಹಿಂದೆ ಲಡಾಖ್​ ಗಡಿಯಲ್ಲಿ ಕ್ಯಾತೆ ತೆಗೆದಿದ್ದ ಚೀನಾ, ಭಾರತ ತೀಕ್ಷ್ಣವಾಗಿ ಪ್ರತಿರೋಧ ನೀಡುತ್ತದೆ ಎಂಬುದನ್ನು ಕಮ್ಯೂನಿಸ್ಟ್​ ರಾಷ್ಟ್ರ ನಿರೀಕ್ಷಿಸಿರಲಿಲ್ಲ. ಇದರಿಂದ ಭಾರತ ಗಡಿಯಲ್ಲಿ ಸಾಲು - ಸಾಲು ಭದ್ರತಾ ಪಡೆಗಳನ್ನು ಏಪ್ರಿಲ್-ಮೇ ತಿಂಗಳಿಂದ ಸನ್ನದ್ಧು ಮಾಡಿಕೊಂಡಿತು. ಇದರ ಪರಿಣಾಮವಾಗಿ ಭಾರತ ಮತ್ತು ಚೀನಾ ಹಿಮಾವೃತ ಗಡಿ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಸೈನಿಕರು ಮತ್ತು ಮಿಲಿಟರಿ ಪರಿಕರಗಳು ನಿಯೋಜಿತವಾಗಿವೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲದೇ ಎರಡೂ ಕಡೆಯ ಕಮಾಂಡರ್‌ಗಳ ಮಟ್ಟದಲ್ಲಿ ಈಗಿನ ಬದಲಾವಣೆಗೆ ಒಂದು ಅವಕಾಶವಿದೆ. ಲಡಾಖ್‌ನಲ್ಲಿ ಎಂಟು ತಿಂಗಳಿಂದ ನಡೆಯುತ್ತಿರುವ ಯುದ್ಧದ ವಾತಾವರಣವನ್ನು 'ಗೌರವಾನ್ವಿತ' ಮತ್ತು ಪರಸ್ಪರ ಮಾತುಕತೆ ಮುಖೇನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ತಮ್ಮ ಶಕ್ತಿ ವೃದ್ಧಿಸಿಕೊಳ್ಳಲು ಕೊರೊನಾವಧಿ ಬಳಸಿಕೊಂಡ ಭಯೋತ್ಪಾದಕ ಸಂಸ್ಥೆಗಳು

ಪ್ರತಿಕೂಲ ಹವಾಮಾನ, ಶೀತ ಮತ್ತು ಹಿಮದಿಂದಾಗಿ ದೊಡ್ಡ ಪ್ರಮಾಣದ ಸೈನ್ಯದ ಚಲನವಲನ ಸಾಧ್ಯವಿಲ್ಲ ಎಂಬ ಅಂಶವನ್ನು ಅರ್ಥೈಸಿಕೊಳ್ಳಬಹುದಾಗಿದೆ. ಈವರೆಗೆ ಎಂಟು ಸುತ್ತಿನ ಮಾತುಕತೆಗಳು- ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್ 21, ಅಕ್ಟೋಬರ್ 12 ಮತ್ತು ನವೆಂಬರ್ 6 - ನಡೆದವು. ಒಂಬತ್ತನೇ ಸುತ್ತಿನ ಚರ್ಚೆ ಇನ್ನೂ ನಿಗದಿ ಆಗಿಲ್ಲ.

ಅಕ್ಟೋಬರ್ 14ರಂದು ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಲಡಾಖ್ ಮೂಲದ 14 ಕಾರ್ಪ್ಸ್ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರಿಂದ ಅಧಿಕಾರ ವಹಿಸಿಕೊಂಡರು. ನಂತರ ಡೆಹ್ರಾಡೂನ್​ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಕಮಾಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. 14 ಕಾರ್ಪ್ಸ್ ಕಮಾಂಡರ್ ಮಾತುಕತೆಯಲ್ಲಿ ಭಾರತೀಯ ನಿಯೋಗ ಮುನ್ನಡೆಸುತ್ತಾರೆ.

ನವೆಂಬರ್ 6ರಂದು ನಡೆದ ಕೊನೆಯ ಸುತ್ತಿನಲ್ಲಿ ಸರಣಿಯ ಎಂಟನೇ-ಮಾತುಕತೆಯಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸಿದವರು ಲೆಫ್ಟಿನೆಂಟ್ ಜನರಲ್ ಮೆನನ್.

ನವದೆಹಲಿ: ಭಾರತ- ಚೀನಾ ನಡುವೆ ತೀವ್ರ ವಿವಾದದ ನೆಲೆಯಾದ ಪೂರ್ವ ಲಡಾಖ್​ನ ಮೇಲ್ಭಾಗದಲ್ಲಿ ತಾಪಮಾನ ಮೈನಸ್​ 30 ಡಿಗ್ರಿಗಿಂತಲೂ ಕೆಳಗಿಳಿಯುತ್ತಿದೆ. ಮೈಕೊರೆಯುವ ಭೀಕರ ಚಳಿಯ ನಡುವೆಯೂ ಉಭಯ ರಾಷ್ಟ್ರಗಳು ಭಾರಿ ಪ್ರಮಾಣ ಸೇನಾ ಸಿಬ್ಬಂದಿ ನಿಯೋಜನೆ ಮಾಡುವುದು ಬುದ್ಧಿವಂತಿಕೆಯಾಗಿ ಕಾಣುತ್ತಿಲ್ಲ. ಇದು ಎರಡೂ ರಾಷ್ಟ್ರಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗುತ್ತಿದೆ.

ಸುಮಾರು ಎಂಟು ತಿಂಗಳ ಹಿಂದೆ ಲಡಾಖ್​ ಗಡಿಯಲ್ಲಿ ಕ್ಯಾತೆ ತೆಗೆದಿದ್ದ ಚೀನಾ, ಭಾರತ ತೀಕ್ಷ್ಣವಾಗಿ ಪ್ರತಿರೋಧ ನೀಡುತ್ತದೆ ಎಂಬುದನ್ನು ಕಮ್ಯೂನಿಸ್ಟ್​ ರಾಷ್ಟ್ರ ನಿರೀಕ್ಷಿಸಿರಲಿಲ್ಲ. ಇದರಿಂದ ಭಾರತ ಗಡಿಯಲ್ಲಿ ಸಾಲು - ಸಾಲು ಭದ್ರತಾ ಪಡೆಗಳನ್ನು ಏಪ್ರಿಲ್-ಮೇ ತಿಂಗಳಿಂದ ಸನ್ನದ್ಧು ಮಾಡಿಕೊಂಡಿತು. ಇದರ ಪರಿಣಾಮವಾಗಿ ಭಾರತ ಮತ್ತು ಚೀನಾ ಹಿಮಾವೃತ ಗಡಿ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಸೈನಿಕರು ಮತ್ತು ಮಿಲಿಟರಿ ಪರಿಕರಗಳು ನಿಯೋಜಿತವಾಗಿವೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲದೇ ಎರಡೂ ಕಡೆಯ ಕಮಾಂಡರ್‌ಗಳ ಮಟ್ಟದಲ್ಲಿ ಈಗಿನ ಬದಲಾವಣೆಗೆ ಒಂದು ಅವಕಾಶವಿದೆ. ಲಡಾಖ್‌ನಲ್ಲಿ ಎಂಟು ತಿಂಗಳಿಂದ ನಡೆಯುತ್ತಿರುವ ಯುದ್ಧದ ವಾತಾವರಣವನ್ನು 'ಗೌರವಾನ್ವಿತ' ಮತ್ತು ಪರಸ್ಪರ ಮಾತುಕತೆ ಮುಖೇನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ತಮ್ಮ ಶಕ್ತಿ ವೃದ್ಧಿಸಿಕೊಳ್ಳಲು ಕೊರೊನಾವಧಿ ಬಳಸಿಕೊಂಡ ಭಯೋತ್ಪಾದಕ ಸಂಸ್ಥೆಗಳು

ಪ್ರತಿಕೂಲ ಹವಾಮಾನ, ಶೀತ ಮತ್ತು ಹಿಮದಿಂದಾಗಿ ದೊಡ್ಡ ಪ್ರಮಾಣದ ಸೈನ್ಯದ ಚಲನವಲನ ಸಾಧ್ಯವಿಲ್ಲ ಎಂಬ ಅಂಶವನ್ನು ಅರ್ಥೈಸಿಕೊಳ್ಳಬಹುದಾಗಿದೆ. ಈವರೆಗೆ ಎಂಟು ಸುತ್ತಿನ ಮಾತುಕತೆಗಳು- ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್ 21, ಅಕ್ಟೋಬರ್ 12 ಮತ್ತು ನವೆಂಬರ್ 6 - ನಡೆದವು. ಒಂಬತ್ತನೇ ಸುತ್ತಿನ ಚರ್ಚೆ ಇನ್ನೂ ನಿಗದಿ ಆಗಿಲ್ಲ.

ಅಕ್ಟೋಬರ್ 14ರಂದು ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಲಡಾಖ್ ಮೂಲದ 14 ಕಾರ್ಪ್ಸ್ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರಿಂದ ಅಧಿಕಾರ ವಹಿಸಿಕೊಂಡರು. ನಂತರ ಡೆಹ್ರಾಡೂನ್​ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಕಮಾಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. 14 ಕಾರ್ಪ್ಸ್ ಕಮಾಂಡರ್ ಮಾತುಕತೆಯಲ್ಲಿ ಭಾರತೀಯ ನಿಯೋಗ ಮುನ್ನಡೆಸುತ್ತಾರೆ.

ನವೆಂಬರ್ 6ರಂದು ನಡೆದ ಕೊನೆಯ ಸುತ್ತಿನಲ್ಲಿ ಸರಣಿಯ ಎಂಟನೇ-ಮಾತುಕತೆಯಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸಿದವರು ಲೆಫ್ಟಿನೆಂಟ್ ಜನರಲ್ ಮೆನನ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.