ETV Bharat / bharat

7 ರಾಜ್ಯಗಳಲ್ಲಿ ದೃಢವಾಯ್ತು ಹಕ್ಕಿಜ್ವರ: ಕರ್ನಾಟಕದಲ್ಲಿಲ್ಲ ವೈರಸ್​ ಭೀತಿ!

ದೇಶಾದ್ಯಂತ ಹಕ್ಕಿ ಜ್ವರ ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು, ಈಗಾಗಲೇ ಸುಮಾರು 7 ರಾಜ್ಯಗಳಲ್ಲಿ ವೈರಸ್ ದೃಢಪಟ್ಟಿದೆ.ಈ ನಡುವೆ ರಾಜ್ಯದಲ್ಲಿ ಹಕ್ಕಿಜ್ವರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ತಿಳಿಸಿದ್ದಾರೆ.

author img

By

Published : Jan 10, 2021, 8:57 PM IST

Updated : Jan 10, 2021, 9:51 PM IST

bird-flu-confirmed-in-7-states-test-results-of-delhi-maharashtra-samples-awaited
ಹಕ್ಕಿಜ್ವರ

ನವದೆಹಲಿ: ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಆವರಿಸಿದ್ದು, ಇದಕ್ಕೆ ಸೂಕ್ತ ಉದಾಹರಣೆಯಂತೆ ಈಗಾಗಲೇ ( ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ)ಗಳಲ್ಲಿ ಕಾಯಿಲೆ ಹರಡುತ್ತಿರುವುದು ದೃಢವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮೃತಪಟ್ಟ ಹಕ್ಕಿಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ.

ಈ ಹಿಂದೆ ಛತ್ತೀಸ್​ಘಡದ ಬಾಲೋಡ್ ಜಿಲ್ಲೆಯಲ್ಲಿ ಮೃತಪಟ್ಟ ಕಾಡು ಪಕ್ಷಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಸಕಾರಾತ್ಮಕ ವರದಿ ಬಂದಿಲ್ಲ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹರಿಯಾಣದ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಹಕ್ಕಿಜ್ವರ ದೃಢವಾದ ನಂತರ ರಾಜ್ಯ ಸರ್ಕಾರವು ಒಂಭತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಿದೆ. ಇವು ತಮ್ಮ ಕಾರ್ಯವನ್ನು ಮುಂದುವರೆಸಿವೆ.

bird-flu-confirmed-in-7-states-test-results-of-delhi-maharashtra-samples-awaited
ಹಕ್ಕಿಜ್ವರ

ಗುಜರಾತ್‌ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕಾಗೆ / ಕಾಡು ಪಕ್ಷಿಗಳ ಮಾದರಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢವಾಗಿದೆ. ಇದಲ್ಲದೆ ಕಾಂಗ್ರಾ ಜಿಲ್ಲೆಯಿಂದ (ಹಿಮಾಚಲ ಪ್ರದೇಶ) 86 ಕಾಗೆಗಳ ಅಸಾಮಾನ್ಯ ಸಾವಿನ ವರದಿಗಳು ಬಂದಿವೆ ಎಂದು ತಿಳಿಸಿದೆ.

ಕಾಡು ಪಕ್ಷಿಗಳ ಅಸಾಮಾನ್ಯ ಸಾವಿನ ವರದಿಗಳನ್ನು ನಹನ್, ಬಿಲಾಸ್ಪುರ್ ಮತ್ತು ಮಂಡಿ (ಹಿಮಾಚಲ ಪ್ರದೇಶ)ದಿಂದಲೂ ಸ್ವೀಕರಿಸಲಾಗಿದೆ ಮತ್ತು ಈಗಾಗಲೇ ಮೃತ ಪಕ್ಷಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಗೊತ್ತುಪಡಿಸಿದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಓದಿ: ಹಕ್ಕಿ ಜ್ವರದ ಭೀತಿ.. ತೀವ್ರ ಕುಸಿತ ಕಂಡ ಕೋಳಿ ಬೆಲೆ, ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು!

ಈ ನಡುವೆ, ದೇಶದ ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರಚಿಸಲಾದ ಕೇಂದ್ರ ತಂಡಗಳು ನಿಯೋಜಿತ ಸ್ಥಳಗಳಿಗೆ ಭೇಟಿ ನೀಡುತ್ತಿವೆ. ಕೇಂದ್ರ ತಂಡಗಳಲ್ಲಿ ಈಗಾಗಲೇ ಒಂದು ತಂಡ ಜನವರಿ 9ರಂದು ಕೇರಳ ತಲುಪಿದೆ. ಇದು ಈಗಾಗಲೇ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ಪ್ರಸ್ತುತ ಕೇಂದ್ರ ಬಿಂದುಗಳ ಸ್ಥಳಗಳ ಮೇಲೆ ನಿಗಾ ವಹಿಸುತ್ತಿದೆ ಮತ್ತು ಸಾಂಕ್ರಾಮಿಕ ರೋಗಗಳ ತನಿಖೆ ನಡೆಸುತ್ತಿದೆ. ಮತ್ತೊಂದು ಕೇಂದ್ರ ತಂಡ ಜನವರಿ 10ರಂದು ಹಿಮಾಚಲ ಪ್ರದೇಶ ತಲುಪಿದ್ದು, ಸಮೀಕ್ಷೆ ನಡೆಸುತ್ತಿದೆ.

ಭಂಡಾರಿಬಾಗ್​ನಲ್ಲಿ ಸುಮಾರು 121 ಕಾಗೆಗಳು ಮೃತ:

ಉತ್ತರಾಖಂಡ್​ನ ಭಂಡಾರಿಬಾಗ್​ನಲ್ಲಿಯೂ ಸುಮಾರು 121 ಕಾಗೆಗಳು ಹಕ್ಕಿ ಜ್ವರಕ್ಕೆ ತುತ್ತಾಗಿವೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿಲ್ಲ ಹಕ್ಕಿ ಜ್ವರದ ಭೀತಿ!

ದೇಶದ ಸುಮಾರು 7 ರಾಜ್ಯಗಳಲ್ಲಿ ಹಕ್ಕಿ ಜ್ವರದ ಸೋಂಕು ದೃಢಪಟ್ಟಿರುವ ನಡುವೆ ಕರ್ನಾಟಕದಲ್ಲಿ ಇಂತಹ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಆವರಿಸಿದ್ದು, ಇದಕ್ಕೆ ಸೂಕ್ತ ಉದಾಹರಣೆಯಂತೆ ಈಗಾಗಲೇ ( ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ)ಗಳಲ್ಲಿ ಕಾಯಿಲೆ ಹರಡುತ್ತಿರುವುದು ದೃಢವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮೃತಪಟ್ಟ ಹಕ್ಕಿಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ.

ಈ ಹಿಂದೆ ಛತ್ತೀಸ್​ಘಡದ ಬಾಲೋಡ್ ಜಿಲ್ಲೆಯಲ್ಲಿ ಮೃತಪಟ್ಟ ಕಾಡು ಪಕ್ಷಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಸಕಾರಾತ್ಮಕ ವರದಿ ಬಂದಿಲ್ಲ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹರಿಯಾಣದ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಹಕ್ಕಿಜ್ವರ ದೃಢವಾದ ನಂತರ ರಾಜ್ಯ ಸರ್ಕಾರವು ಒಂಭತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಿದೆ. ಇವು ತಮ್ಮ ಕಾರ್ಯವನ್ನು ಮುಂದುವರೆಸಿವೆ.

bird-flu-confirmed-in-7-states-test-results-of-delhi-maharashtra-samples-awaited
ಹಕ್ಕಿಜ್ವರ

ಗುಜರಾತ್‌ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕಾಗೆ / ಕಾಡು ಪಕ್ಷಿಗಳ ಮಾದರಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢವಾಗಿದೆ. ಇದಲ್ಲದೆ ಕಾಂಗ್ರಾ ಜಿಲ್ಲೆಯಿಂದ (ಹಿಮಾಚಲ ಪ್ರದೇಶ) 86 ಕಾಗೆಗಳ ಅಸಾಮಾನ್ಯ ಸಾವಿನ ವರದಿಗಳು ಬಂದಿವೆ ಎಂದು ತಿಳಿಸಿದೆ.

ಕಾಡು ಪಕ್ಷಿಗಳ ಅಸಾಮಾನ್ಯ ಸಾವಿನ ವರದಿಗಳನ್ನು ನಹನ್, ಬಿಲಾಸ್ಪುರ್ ಮತ್ತು ಮಂಡಿ (ಹಿಮಾಚಲ ಪ್ರದೇಶ)ದಿಂದಲೂ ಸ್ವೀಕರಿಸಲಾಗಿದೆ ಮತ್ತು ಈಗಾಗಲೇ ಮೃತ ಪಕ್ಷಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಗೊತ್ತುಪಡಿಸಿದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಓದಿ: ಹಕ್ಕಿ ಜ್ವರದ ಭೀತಿ.. ತೀವ್ರ ಕುಸಿತ ಕಂಡ ಕೋಳಿ ಬೆಲೆ, ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು!

ಈ ನಡುವೆ, ದೇಶದ ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರಚಿಸಲಾದ ಕೇಂದ್ರ ತಂಡಗಳು ನಿಯೋಜಿತ ಸ್ಥಳಗಳಿಗೆ ಭೇಟಿ ನೀಡುತ್ತಿವೆ. ಕೇಂದ್ರ ತಂಡಗಳಲ್ಲಿ ಈಗಾಗಲೇ ಒಂದು ತಂಡ ಜನವರಿ 9ರಂದು ಕೇರಳ ತಲುಪಿದೆ. ಇದು ಈಗಾಗಲೇ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ಪ್ರಸ್ತುತ ಕೇಂದ್ರ ಬಿಂದುಗಳ ಸ್ಥಳಗಳ ಮೇಲೆ ನಿಗಾ ವಹಿಸುತ್ತಿದೆ ಮತ್ತು ಸಾಂಕ್ರಾಮಿಕ ರೋಗಗಳ ತನಿಖೆ ನಡೆಸುತ್ತಿದೆ. ಮತ್ತೊಂದು ಕೇಂದ್ರ ತಂಡ ಜನವರಿ 10ರಂದು ಹಿಮಾಚಲ ಪ್ರದೇಶ ತಲುಪಿದ್ದು, ಸಮೀಕ್ಷೆ ನಡೆಸುತ್ತಿದೆ.

ಭಂಡಾರಿಬಾಗ್​ನಲ್ಲಿ ಸುಮಾರು 121 ಕಾಗೆಗಳು ಮೃತ:

ಉತ್ತರಾಖಂಡ್​ನ ಭಂಡಾರಿಬಾಗ್​ನಲ್ಲಿಯೂ ಸುಮಾರು 121 ಕಾಗೆಗಳು ಹಕ್ಕಿ ಜ್ವರಕ್ಕೆ ತುತ್ತಾಗಿವೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿಲ್ಲ ಹಕ್ಕಿ ಜ್ವರದ ಭೀತಿ!

ದೇಶದ ಸುಮಾರು 7 ರಾಜ್ಯಗಳಲ್ಲಿ ಹಕ್ಕಿ ಜ್ವರದ ಸೋಂಕು ದೃಢಪಟ್ಟಿರುವ ನಡುವೆ ಕರ್ನಾಟಕದಲ್ಲಿ ಇಂತಹ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಸ್ಪಷ್ಟಪಡಿಸಿದ್ದಾರೆ.

Last Updated : Jan 10, 2021, 9:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.