ETV Bharat / bharat

ಕೃಷಿ ಮಸೂದೆಗಳು ರೈತರಿಗೆ 'ರಕ್ಷಣಾ ಕವಚ' ಇದ್ದಂತೆ: ಪ್ರಧಾನಿ ಮೋದಿ ಸಮರ್ಥನೆ - ಕೃಷಿ ಮಸೂದೆಗಳು ರೈತರಿಗೆ ರಕ್ಷಣಾ ಗುರಾಣಿ ಇದ್ದಂತೆ

ಲೋಕಸಭೆಯಲ್ಲಿ ಅಂಗೀಕರಿಸಿದ ಕೃಷಿ ಸುಧಾರಣಾ ಮಸೂದೆಗಳು ರೈತರಿಗೆ ರಕ್ಷಣಾ ಕವಚವಾಗಿದ್ದು, ಇವು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Agri bills 'protection shield' for farmers
ಪ್ರಧಾನಿ ನರೇಂದ್ರ ಮೋದಿ
author img

By

Published : Sep 19, 2020, 7:58 AM IST

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣಾ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಮರ್ಥಿಸಿಕೊಂಡಿದ್ದು, ಇವುಗಳು ರೈತರಿಗೆ 'ರಕ್ಷಣಾ ಕವಚವಾಗಿ' ಕಾರ್ಯನಿರ್ವಹಿಸಲಿವೆ. ಮಧ್ಯವರ್ತಿಗಳ ಜೊತೆ ನಿಲ್ಲುವವರು, 'ಮೋಸ' ಮತ್ತು 'ಸುಳ್ಳು' ಬೆಂಬಲಿಸುವವರು ಈ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಮೂರು ಐತಿಹಾಸಿಕ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸುವುದರೊಂದಿಗೆ ರೈತರಿಗೆ ಕೃಷಿಯಲ್ಲಿ ಹೊಸ ಸ್ವಾತಂತ್ರ್ಯ ನೀಡಲಾಗಿದೆ. ಮಸೂದೆಗಳ ಅಂಗೀಕಾರವನ್ನು ಅಭಿನಂದಿಸುವಾಗ ರೈತರಿಗೆ ಈಗ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳು ಮತ್ತು ಅವಕಾಶಗಳಿವೆ ಎಂದಿದ್ದಾರೆ.

ವಿರೋಧ ಪಕ್ಷಗಳ ಆಕ್ರೋಶದ ನಡುವೆಯೇ ಮಸೂದೆಗಳನ್ನು ಲೋಕಸಭೆ ಅಂಗೀಕರಿಸಿದ್ದು, ಈಗ ರಾಜ್ಯಸಭೆಯಲ್ಲಿ ಮಂಡಿಸಲಿದೆ. ಇವು 'ರೈತ ವಿರೋಧಿ' ಎಂದು ಬಿಜೆಪಿ ಮಿತ್ರರಾಷ್ಟ್ರ ಶಿರೋಮಣಿ ಅಕಾಲಿ ದಳ ಪ್ರತಿಭಟಿಸಿದ್ದು, ಸಚಿವರು ರಾಜೀನಾಮೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಈ ಟೀಕೆಗಳನ್ನು ನಿರಾಕರಿಸಿದ್ದಾರೆ. ಈ ಕಾನೂನುಗಳು ಉತ್ತಮ ಬೆಲೆಗೆ ಮಾತುಕತೆ ನಡೆಸುವ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಅನುಮತಿಸುತ್ತವೆ ಎಂದಿದ್ದಾರೆ.

ಸರ್ಕಾರದಿಂದ ಕೃಷಿ ಉತ್ಪನ್ನಗಳ ಖರೀದಿ ಹಾಗೇ ಉಳಿಯುತ್ತದೆ. ಕನಿಷ್ಠ ಬೆಂಬಲ ಬೆಲೆಯ ಕಾರ್ಯವಿಧಾನವು ಯಾವಾಗಲೂ ಇರುವ ರೀತಿಯಲ್ಲಿಯೇ ಮುಂದುವರೆಯುತ್ತದೆ ಎಂದಿದ್ದಾರೆ.

ಎಂಎಸ್​ಪಿ ಮೂಲಕ ರೈತರಿಗೆ ಸೂಕ್ತ ಬೆಲೆ ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಮೋದಿ, 2014ರಿಂದ ಅಧಿಕಾರ ವಹಿಸಿಕೊಂಡ ಆರು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟದಂತೆ ಯಾವುದೇ ಸರ್ಕಾರವು ಕೃಷಿ ಸಮುದಾಯಕ್ಕೆ ನಮ್ಮಷ್ಟು ಕೆಲಸ ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣಾ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಮರ್ಥಿಸಿಕೊಂಡಿದ್ದು, ಇವುಗಳು ರೈತರಿಗೆ 'ರಕ್ಷಣಾ ಕವಚವಾಗಿ' ಕಾರ್ಯನಿರ್ವಹಿಸಲಿವೆ. ಮಧ್ಯವರ್ತಿಗಳ ಜೊತೆ ನಿಲ್ಲುವವರು, 'ಮೋಸ' ಮತ್ತು 'ಸುಳ್ಳು' ಬೆಂಬಲಿಸುವವರು ಈ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಮೂರು ಐತಿಹಾಸಿಕ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸುವುದರೊಂದಿಗೆ ರೈತರಿಗೆ ಕೃಷಿಯಲ್ಲಿ ಹೊಸ ಸ್ವಾತಂತ್ರ್ಯ ನೀಡಲಾಗಿದೆ. ಮಸೂದೆಗಳ ಅಂಗೀಕಾರವನ್ನು ಅಭಿನಂದಿಸುವಾಗ ರೈತರಿಗೆ ಈಗ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳು ಮತ್ತು ಅವಕಾಶಗಳಿವೆ ಎಂದಿದ್ದಾರೆ.

ವಿರೋಧ ಪಕ್ಷಗಳ ಆಕ್ರೋಶದ ನಡುವೆಯೇ ಮಸೂದೆಗಳನ್ನು ಲೋಕಸಭೆ ಅಂಗೀಕರಿಸಿದ್ದು, ಈಗ ರಾಜ್ಯಸಭೆಯಲ್ಲಿ ಮಂಡಿಸಲಿದೆ. ಇವು 'ರೈತ ವಿರೋಧಿ' ಎಂದು ಬಿಜೆಪಿ ಮಿತ್ರರಾಷ್ಟ್ರ ಶಿರೋಮಣಿ ಅಕಾಲಿ ದಳ ಪ್ರತಿಭಟಿಸಿದ್ದು, ಸಚಿವರು ರಾಜೀನಾಮೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಈ ಟೀಕೆಗಳನ್ನು ನಿರಾಕರಿಸಿದ್ದಾರೆ. ಈ ಕಾನೂನುಗಳು ಉತ್ತಮ ಬೆಲೆಗೆ ಮಾತುಕತೆ ನಡೆಸುವ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಅನುಮತಿಸುತ್ತವೆ ಎಂದಿದ್ದಾರೆ.

ಸರ್ಕಾರದಿಂದ ಕೃಷಿ ಉತ್ಪನ್ನಗಳ ಖರೀದಿ ಹಾಗೇ ಉಳಿಯುತ್ತದೆ. ಕನಿಷ್ಠ ಬೆಂಬಲ ಬೆಲೆಯ ಕಾರ್ಯವಿಧಾನವು ಯಾವಾಗಲೂ ಇರುವ ರೀತಿಯಲ್ಲಿಯೇ ಮುಂದುವರೆಯುತ್ತದೆ ಎಂದಿದ್ದಾರೆ.

ಎಂಎಸ್​ಪಿ ಮೂಲಕ ರೈತರಿಗೆ ಸೂಕ್ತ ಬೆಲೆ ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಮೋದಿ, 2014ರಿಂದ ಅಧಿಕಾರ ವಹಿಸಿಕೊಂಡ ಆರು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟದಂತೆ ಯಾವುದೇ ಸರ್ಕಾರವು ಕೃಷಿ ಸಮುದಾಯಕ್ಕೆ ನಮ್ಮಷ್ಟು ಕೆಲಸ ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.