ETV Bharat / bharat

ಮಹಿಳೆ ಮೇಲೆ ಅತ್ಯಾಚಾರವೆಸಗಲು ಐವರು ಕಾಮುಕರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ!

author img

By

Published : Nov 28, 2019, 11:54 PM IST

ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ನಾ ಮುಂದು ತಾ ಮುಂದು ಎಂದು ಕಾಮುಕರಲ್ಲೇ ಜಗಳ ಪ್ರಾರಂಭವಾಗಿದೆ. ಈ ಜಗಳ ಅವರ ಸಹಚರರಲ್ಲೇ ಒಬ್ಬನನ್ನು ಹೊಡೆದು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ. ಪ್ರಕರಣ ಸಂಬಂಧ ನಾಲ್ಕು ಜನರನ್ನು ತಮಿಳುನಾಡಿನ ಕಡಲೂರು ಪೊಲೀಸರು ಬಂಧಿಸಿದ್ದಾರೆ.

gang rape
ನಾಲ್ವರು ಅರೆಸ್ಟ್​​

ಕಡಲೂರು: 32 ವರ್ಷದ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಜೊತೆಗೆ ತಮ್ಮ ಸಹಚರನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕಡಲೂರು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 23ರಂದು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ಕಡಲೂರು ಜಿಲ್ಲೆಯ ವಡಲೂರಿನಿಂದ ನೈವೇಲಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತನ್ನ ಸ್ನೇಹಿತನೊಂದಿಗೆ ಹೋಗುತ್ತಿದ್ದ ಮಹಿಳೆಯನ್ನು ಐದು ಜನರ ಕಿಡಿಗೇಡಿಗಳ ಗುಂಪೊಂದು ಹಿಂಬಾಲಿಸಿದೆ. ಮಹಿಳೆಯ ಸ್ನೇಹಿತನನ್ನು ಸ್ಥಳದಿಂದ ಓಡಿಸಿದ್ದಾರೆ. ಬಳಿಕ ಮಹಿಳೆ ಮೇಲೆ ಅತ್ಯಾಚಾರ ಎಸಗಲು ನಾ ಮುಂದು ತಾ ಮುಂದು ಎಂದು ಕಾಮುಕರಲ್ಲೇ ಜಗಳ ಪ್ರಾರಂಭವಾಗಿದೆ. ಈ ಜಗಳ ಅವರ ಸಹಚರರಲ್ಲೇ ಒಬ್ಬನನ್ನು ಹೊಡೆದು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

gang rape
ಎಂ.ಪ್ರಕಾಶ್, ಕೊಲೆಯಾದ ಯುವಕ

ತನ್ನೊಂದಿಗೆ ಯಾವಾಗಲೂ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಬರುತ್ತಿದ್ದ ಸ್ನೇಹಿತನಿಗೆ ಕಿಡಿಗೇಡಿಗಳ ಗುಂಪನ್ನು ಎದುರಿಸಲು ಸಾಧ್ಯವಾಗದೇ ತನ್ನ ಪ್ರಾಣ ರಕ್ಷಣೆಗಾಗಿ ಓಡಿ ಹೋಗಿದ್ದಾನೆ ಎಂದು ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಶಂಕಿತ ಆರೋಪಿಗಳನ್ನು ಎಸ್.ಕಾರ್ತಿಕ್ (23), ಎಂ.ಸತೀಶ್ ಕುಮಾರ್(23), ಸಿ.ರಾಜದುರೈ( 25) ಮತ್ತು ಎ.ಶಿವಾಬಾಲನ್ (22) ಎಂದು ಗುರುತಿಸಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಐವರು ಕಾಮುಕರ ಗುಂಪಲ್ಲಿ ಗಲಾಟೆಯಲ್ಲಿ ಮೃತನಾದ ಎಂ.ಪ್ರಕಾಶ್​​ ಕೂಡ ಹೌದು.

ಬಂಧಿತ ನಾಲ್ವರನ್ನು ಥೆಮ್ರಾಲ್ ಠಾಣಾ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಇನ್ನು ಈ ಕುರಿತು ತನಿಖೆ ಮುಂದುವರೆದಿದೆ.

ಕಡಲೂರು: 32 ವರ್ಷದ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಜೊತೆಗೆ ತಮ್ಮ ಸಹಚರನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕಡಲೂರು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 23ರಂದು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ಕಡಲೂರು ಜಿಲ್ಲೆಯ ವಡಲೂರಿನಿಂದ ನೈವೇಲಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತನ್ನ ಸ್ನೇಹಿತನೊಂದಿಗೆ ಹೋಗುತ್ತಿದ್ದ ಮಹಿಳೆಯನ್ನು ಐದು ಜನರ ಕಿಡಿಗೇಡಿಗಳ ಗುಂಪೊಂದು ಹಿಂಬಾಲಿಸಿದೆ. ಮಹಿಳೆಯ ಸ್ನೇಹಿತನನ್ನು ಸ್ಥಳದಿಂದ ಓಡಿಸಿದ್ದಾರೆ. ಬಳಿಕ ಮಹಿಳೆ ಮೇಲೆ ಅತ್ಯಾಚಾರ ಎಸಗಲು ನಾ ಮುಂದು ತಾ ಮುಂದು ಎಂದು ಕಾಮುಕರಲ್ಲೇ ಜಗಳ ಪ್ರಾರಂಭವಾಗಿದೆ. ಈ ಜಗಳ ಅವರ ಸಹಚರರಲ್ಲೇ ಒಬ್ಬನನ್ನು ಹೊಡೆದು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

gang rape
ಎಂ.ಪ್ರಕಾಶ್, ಕೊಲೆಯಾದ ಯುವಕ

ತನ್ನೊಂದಿಗೆ ಯಾವಾಗಲೂ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಬರುತ್ತಿದ್ದ ಸ್ನೇಹಿತನಿಗೆ ಕಿಡಿಗೇಡಿಗಳ ಗುಂಪನ್ನು ಎದುರಿಸಲು ಸಾಧ್ಯವಾಗದೇ ತನ್ನ ಪ್ರಾಣ ರಕ್ಷಣೆಗಾಗಿ ಓಡಿ ಹೋಗಿದ್ದಾನೆ ಎಂದು ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಶಂಕಿತ ಆರೋಪಿಗಳನ್ನು ಎಸ್.ಕಾರ್ತಿಕ್ (23), ಎಂ.ಸತೀಶ್ ಕುಮಾರ್(23), ಸಿ.ರಾಜದುರೈ( 25) ಮತ್ತು ಎ.ಶಿವಾಬಾಲನ್ (22) ಎಂದು ಗುರುತಿಸಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಐವರು ಕಾಮುಕರ ಗುಂಪಲ್ಲಿ ಗಲಾಟೆಯಲ್ಲಿ ಮೃತನಾದ ಎಂ.ಪ್ರಕಾಶ್​​ ಕೂಡ ಹೌದು.

ಬಂಧಿತ ನಾಲ್ವರನ್ನು ಥೆಮ್ರಾಲ್ ಠಾಣಾ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಇನ್ನು ಈ ಕುರಿತು ತನಿಖೆ ಮುಂದುವರೆದಿದೆ.

Intro:Body:

gfb


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.