ETV Bharat / bharat

ಆಯತಪ್ಪಿ ಬಾವಿಗೆ ಬಿದ್ದ ಮರಿಯಾನೆ.. ರಕ್ಷಣೆ ಮಾಡಿದ ಅರಣ್ಯ ಇಲಾಖೆ

author img

By

Published : May 3, 2021, 5:05 PM IST

ತಡರಾತ್ರಿ ಆಯತಪ್ಪಿ ಬಾವಿಗೆ ಬಿದ್ದಿದ್ದ ಮರಿಯಾನೆ ಯೊಂದನ್ನ ಅರಣ್ಯ ಸಿಬ್ಬಂದಿ ಇಲಾಖೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

elephant
elephant

ಬಾಗೋದರ್​​(ಜಾರ್ಖಂಡ್​): ಕಳೆದ ಕೆಲ ದಿನಗಳಿಂದ ಕಾಡಾನೆ ಹಿಂಡೊಂದು ಬಾಗೋದರ್​ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿತ್ತು. ಇದರಲ್ಲಿ ಮರಿಯಾನೆಯೊಂದು ನಿನ್ನೆ ರಾತ್ರಿ ಬಾವಿಗೆ ಬಿದ್ದಿದೆ. ಈ ಮಾಹಿತಿ ತಿಳಿದು ಸ್ಥಳಕ್ಕಾಗಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತಲುಪಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಆಯತಪ್ಪಿ ಬಾವಿಗೆ ಬಿದ್ದ ಮರಿಯಾನೆ

ಬಾವಿಯಲ್ಲಿ ಬಿದ್ದ ಮರಿಯಾನೆ ಹೊರತೆಗೆಯಲು ಅರಣ್ಯ ಸಿಬ್ಬಂದಿ ಸುಮಾರು 6-7 ಗಂಟೆ ಕಾರ್ಯಾಚರಣೆ ನಡೆಸಿದ್ದರು. ಮೂರು ಜೆಸಿಬಿ ಯಂತ್ರಗಳ ಸಹಾಯದಿಂದ ಅದನ್ನ ಹೊರತೆಗೆಯಲಾಗಿದ್ದು, ಸುರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನೋಡಲು ಗ್ರಾಮದ ನೂರಾರು ಜನರು ಸ್ಥಳಕ್ಕಾಗಮಿಸಿದ್ದಾರೆ.

ಇದನ್ನೂ ಓದಿ: ಮುನ್ಸಿಪಲ್​ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಹಣ್ಣು ಮಾರಾಟಗಾರ.. ವಿಡಿಯೋ

ಇನ್ನು ನಾಲ್ಕು ದಿನಗಳ ಹಿಂದೆ ಪುಂಡಾನೆಗಳು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಆತನ ಕುಟುಂಬಕ್ಕೆ 70 ಸಾವಿರ ರೂ. ನಗದು ಪರಿಹಾರ ನೀಡಲಾಗಿದೆ.

ಬಾಗೋದರ್​​(ಜಾರ್ಖಂಡ್​): ಕಳೆದ ಕೆಲ ದಿನಗಳಿಂದ ಕಾಡಾನೆ ಹಿಂಡೊಂದು ಬಾಗೋದರ್​ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿತ್ತು. ಇದರಲ್ಲಿ ಮರಿಯಾನೆಯೊಂದು ನಿನ್ನೆ ರಾತ್ರಿ ಬಾವಿಗೆ ಬಿದ್ದಿದೆ. ಈ ಮಾಹಿತಿ ತಿಳಿದು ಸ್ಥಳಕ್ಕಾಗಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತಲುಪಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಆಯತಪ್ಪಿ ಬಾವಿಗೆ ಬಿದ್ದ ಮರಿಯಾನೆ

ಬಾವಿಯಲ್ಲಿ ಬಿದ್ದ ಮರಿಯಾನೆ ಹೊರತೆಗೆಯಲು ಅರಣ್ಯ ಸಿಬ್ಬಂದಿ ಸುಮಾರು 6-7 ಗಂಟೆ ಕಾರ್ಯಾಚರಣೆ ನಡೆಸಿದ್ದರು. ಮೂರು ಜೆಸಿಬಿ ಯಂತ್ರಗಳ ಸಹಾಯದಿಂದ ಅದನ್ನ ಹೊರತೆಗೆಯಲಾಗಿದ್ದು, ಸುರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನೋಡಲು ಗ್ರಾಮದ ನೂರಾರು ಜನರು ಸ್ಥಳಕ್ಕಾಗಮಿಸಿದ್ದಾರೆ.

ಇದನ್ನೂ ಓದಿ: ಮುನ್ಸಿಪಲ್​ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಹಣ್ಣು ಮಾರಾಟಗಾರ.. ವಿಡಿಯೋ

ಇನ್ನು ನಾಲ್ಕು ದಿನಗಳ ಹಿಂದೆ ಪುಂಡಾನೆಗಳು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಆತನ ಕುಟುಂಬಕ್ಕೆ 70 ಸಾವಿರ ರೂ. ನಗದು ಪರಿಹಾರ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.