ಮಂಕಾಚಾರ್(ಅಸ್ಸೋಂ): ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಸ್ಸೋಂಗೆ ಭೇಟಿ ನೀಡಿದ್ದು, ಮೂರು ದಿನಗಳ ಪ್ರವಾಸದಲ್ಲಿರಲಿದ್ದಾರೆ. ಈ ವೇಳೆ ಅವರು ಭಾರತ-ಬಾಂಗ್ಲಾದೇಶದ ಗಡಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ಬಾಂಗ್ಲಾದೇಶದ ಗಡಿಯಲ್ಲಿರುವ ಮಂಕಾಚಾರ್ನ ಬಿಎಸ್ಎಫ್ ಯೋಧರ ಗಡಿಯ ಹೊರಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸಹ ಸಾಥ್ ನೀಡಿದರು. 24X7 ಸೇವೆ ಸಲ್ಲಿಸುತ್ತಿರುವ ಬಿಎಸ್ಎಫ್ ಯೋಧರನ್ನ ಶ್ಲಾಘಿಸಿದ ಅವರು, ನಿಮ್ಮಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕರು ಸುರಕ್ಷಿತರಾಗಿದ್ದಾರೆಂದು ತಿಳಿಸಿದರು.

ಗಡಿ ಭೇಟಿ ವೇಳೆ ಭದ್ರತಾ ಪರಿಸ್ಥಿತಿ, ತಮ್ಮ ಮುಂದಿರುವ ಸವಾಲು ಹಾಗೂ ಅವುಗಳನ್ನ ಎದುರಿಸಲು ಕೈಗೊಂಡಿರುವ ಕಾರ್ಯತಂತ್ರದ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಲಾಯಿತು. ಈ ವೇಳೆ, ಬಿಎಸ್ಎಫ್ ಪಡೆ ಜೊತೆ ಅಮಿತ್ ಶಾ ಚರ್ಚೆ ಸಹ ನಡೆಸಿದರು.
ಇದನ್ನೂ ಓದಿ: ವಿಧಾನಸಭೆ ಗೇಟ್ನಲ್ಲಿ ಖಲಿಸ್ತಾನ್ ಧ್ವಜ ಹಾರಿಸಿದ್ದು ನಾವೇ: ಒಪ್ಪಿಕೊಂಡ SFJಯಿಂದ ವಿಡಿಯೋ!
13 ನಕ್ಸಲರು ಶರಣಾಗತಿ: ಅಮಿತ್ ಶಾ ಅಸ್ಸೋಂನ ಮಂಕಾಚಾರ್ಗೆ ಭೇಟಿ ನೀಡುವುದಕ್ಕೂ ಸ್ವಲ್ಪ ಸಮಯ ಮುಂಚಿತವಾಗಿ ಇಲ್ಲಿನ ಮಾವೋವಾದಿ ಸಂಘಟನೆ ನ್ಯಾಷನಲ್ ಲಿಬರೇಷನ್ನ 13 ಮಾವೋವಾದಿಗಳು ಭದ್ರತಾ ಪಡೆ ಎದುರು ಶರಣಾದರು.