ETV Bharat / assembly-elections

ಕಾಂಗ್ರೆಸ್​ ಬಿಜೆಪಿ ನಡುವೆ ನೇರ ಪೈಪೋಟಿ, ಜೆಡಿಎಸ್​ನಿಂದಲೂ ಹೋರಾಟ.. ಯಾರಾಗ್ತಾರೆ ವಿಜಯನಗರದ ವೀರಪುತ್ರ?

author img

By

Published : Mar 22, 2023, 3:04 PM IST

ಅಭಿವೃದ್ಧಿಯಿಂದ ಗುರುತಿಸಿಕೊಂಡಿರುವ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಮೂರು ಬಾರಿ ಗೆಲುವು ಸಾಧಿಸಿದೆ. ಬಿಜೆಪಿಯೂ ವಿಶೇಷ ಆಸಕ್ತಿ ವಹಿಸಿದ್ದು, ಈ ಬಾರಿಯೂ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ​ ಕಂಡುಬರುತ್ತಿದೆ.

ವಿಜಯನಗರದಲ್ಲಿ ವಿಜಯದ ನಗಾರಿ ಬಾರಿಸುತ್ತಾ ಬಿಜೆಪಿ
ವಿಜಯನಗರದಲ್ಲಿ ವಿಜಯದ ನಗಾರಿ ಬಾರಿಸುತ್ತಾ ಬಿಜೆಪಿ

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ವಿಜಯನಗರ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರದೇಶಗಳು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಂದ ಕೂಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಬಿಜೆಪಿಯ ಕಾರ್ಪೊರೇಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೂ ಕ್ಷೇತ್ರ ಮಾತ್ರ ಕಾಂಗ್ರೆಸ್​ನ ಹಿಡಿತದಲ್ಲಿದೆ.

ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ ವಾರ್ಡ್, ಬಾಪೂಜಿನಗರ, ಗಾಳಿ ಆಂಜನೇಯ ವಾರ್ಡ್, ದೀಪಾಂಜಲಿನಗರ ವಾರ್ಡ್​ಗಳು ಈ ಕ್ಷೇತ್ರದಲ್ಲಿ ಬರುತ್ತವೆ.

2008 ರಿಂದ ವಿಜಯನಗರ ಕ್ಷೇತ್ರ ಕಾಂಗ್ರೆಸ್​ನ ಗಟ್ಟಿ ನೆಲೆಯಾಗಿದೆ. 2008, 2013, 2018 ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಎಂ. ಕೃಷ್ಣಪ್ಪ ಅವರು ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಕೃಷ್ಣಪ್ಪ ಅವರೇ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆತಂದು ಹವಾ ಸೃಷ್ಟಿಸಿದ್ದಾರೆ.

2008 ರಲ್ಲಿ ಕಾಂಗ್ರೆಸ್​ನ ಕೃಷ್ಣಪ್ಪ ಅವರು 53,297 ಮತಗಳನ್ನು ಪಡೆದರೆ, ಬಿಜೆಪಿ 28,935, ಜೆಡಿಎಸ್ 19,155 ಮತ ಪಡೆದಿತ್ತು. 2013 ರಲ್ಲಿ ಕಾಂಗ್ರೆಸ್ ಕೃಷ್ಟಪ್ಪ 76,891 ಮತ ಪಡೆದರೆ ಬಿಜೆಪಿಯ ಸೋಮಣ್ಣ ಅವರು 44,249 ಮತ, ಜೆಡಿಎಸ್ ಕೇವಲ 4,253 ಮತ ಪಡೆದಿತ್ತು. 2018 ರಲ್ಲಿ ಕಾಂಗ್ರೆಸ್ 73,353 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಹೆಚ್. ರವೀಂದ್ರ ಅವರು 70,578 ಮತ 3 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹಾಗಾಗಿ ಈ ಬಾರಿ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಬಾರಿಯ ಪರಾಜಿತ ಅಭ್ಯರ್ಥಿ ಹೆಚ್. ರವೀಂದ್ರ, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ, ಮಾಜಿ ಎಂಎಲ್​ಸಿ ಅಶ್ವತ್ಥನಾರಾಯಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ವಿಜಯನಗರ ಕ್ಷೇತ್ರದ ಮಾಹಿತಿ
ವಿಜಯನಗರ ಕ್ಷೇತ್ರದ ಮಾಹಿತಿ

ಇನ್ನು ಜೆಡಿಎಸ್​ಗೆ ವಿಜಯನಗರ ಕ್ಷೇತ್ರದಲ್ಲಿ ಇನ್ನು ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.ಅದರಲ್ಲಿಯೂ ಕಳೆದ ಎರಡು ಚುನಾವಣೆಯಲ್ಲಿ ಸಂಪೂರ್ಣ ನೆಲ ಕಚ್ಚಿರುವ ಜೆಡಿಎಸ್ 4 ಸಾವಿರ, 8 ಸಾವಿರ ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಈ ಬಾರಿ ಬಾರಿ ಪೈಪೋಟಿ ನಿರೀಕ್ಷಿಸುವುದು ಕಷ್ಟ ಎನ್ನಲಾಗುತ್ತಿದೆ.

ಅಭಿವೃದ್ಧಿ ಹೊಂದಿದ್ದರೂ ಇವೆ ಸಮಸ್ಯೆಗಳು: ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸಾಕಷ್ಟು ಆಗಿದ್ದರೂ, ರಸ್ತೆ, ಕುಡಿಯುವ ನೀರಿನ ಪೂರೈಕೆಯಂತಹ ಸಮಸ್ಯೆ ಈಡೇರಿಲ್ಲ. ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಂತರವೂ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಕೃಷ್ಣಪ್ಪ ಇಲ್ಲಿ ಚಿರಪರಿಚಿತರೂ ಹೌದು.

ಬಿಜೆಪಿಯ ರವೀಂದ್ರ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಪಕ್ಕದ ಕ್ಷೇತ್ರ ಗೋವಿಂದರಾಜನಗರದ ಶಾಸಕ, ಸಚಿವ ಸೋಮಣ್ಣ ಅವರ ನೆರವಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿಸಿದ್ದಾರೆ. ಸೋಮಣ್ಣ ಕೂಡ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ತೋರಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಟೋಟಿ ಖಚಿತ ಎನ್ನಲಾಗುತ್ತಿದೆ.

ಮತದಾರರ ವಿವರ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,05,386 ಮತದಾರರಿದ್ದಾರೆ. ಇದರಲ್ಲಿ 1,60,151 ಪುರುಷ ಮತದಾರರು, 1,45,099 ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಪ್ರಾಬಲ್ಯವಿದೆ. ಇವರೇ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇವತ್ತು ಡೌಟ್, ಎರಡ್ಮೂರು ದಿನ ವಿಳಂಬ: ಡಿಕೆಶಿ

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ವಿಜಯನಗರ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರದೇಶಗಳು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಂದ ಕೂಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಬಿಜೆಪಿಯ ಕಾರ್ಪೊರೇಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೂ ಕ್ಷೇತ್ರ ಮಾತ್ರ ಕಾಂಗ್ರೆಸ್​ನ ಹಿಡಿತದಲ್ಲಿದೆ.

ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ ವಾರ್ಡ್, ಬಾಪೂಜಿನಗರ, ಗಾಳಿ ಆಂಜನೇಯ ವಾರ್ಡ್, ದೀಪಾಂಜಲಿನಗರ ವಾರ್ಡ್​ಗಳು ಈ ಕ್ಷೇತ್ರದಲ್ಲಿ ಬರುತ್ತವೆ.

2008 ರಿಂದ ವಿಜಯನಗರ ಕ್ಷೇತ್ರ ಕಾಂಗ್ರೆಸ್​ನ ಗಟ್ಟಿ ನೆಲೆಯಾಗಿದೆ. 2008, 2013, 2018 ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಎಂ. ಕೃಷ್ಣಪ್ಪ ಅವರು ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಕೃಷ್ಣಪ್ಪ ಅವರೇ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆತಂದು ಹವಾ ಸೃಷ್ಟಿಸಿದ್ದಾರೆ.

2008 ರಲ್ಲಿ ಕಾಂಗ್ರೆಸ್​ನ ಕೃಷ್ಣಪ್ಪ ಅವರು 53,297 ಮತಗಳನ್ನು ಪಡೆದರೆ, ಬಿಜೆಪಿ 28,935, ಜೆಡಿಎಸ್ 19,155 ಮತ ಪಡೆದಿತ್ತು. 2013 ರಲ್ಲಿ ಕಾಂಗ್ರೆಸ್ ಕೃಷ್ಟಪ್ಪ 76,891 ಮತ ಪಡೆದರೆ ಬಿಜೆಪಿಯ ಸೋಮಣ್ಣ ಅವರು 44,249 ಮತ, ಜೆಡಿಎಸ್ ಕೇವಲ 4,253 ಮತ ಪಡೆದಿತ್ತು. 2018 ರಲ್ಲಿ ಕಾಂಗ್ರೆಸ್ 73,353 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಹೆಚ್. ರವೀಂದ್ರ ಅವರು 70,578 ಮತ 3 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹಾಗಾಗಿ ಈ ಬಾರಿ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಬಾರಿಯ ಪರಾಜಿತ ಅಭ್ಯರ್ಥಿ ಹೆಚ್. ರವೀಂದ್ರ, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ, ಮಾಜಿ ಎಂಎಲ್​ಸಿ ಅಶ್ವತ್ಥನಾರಾಯಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ವಿಜಯನಗರ ಕ್ಷೇತ್ರದ ಮಾಹಿತಿ
ವಿಜಯನಗರ ಕ್ಷೇತ್ರದ ಮಾಹಿತಿ

ಇನ್ನು ಜೆಡಿಎಸ್​ಗೆ ವಿಜಯನಗರ ಕ್ಷೇತ್ರದಲ್ಲಿ ಇನ್ನು ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.ಅದರಲ್ಲಿಯೂ ಕಳೆದ ಎರಡು ಚುನಾವಣೆಯಲ್ಲಿ ಸಂಪೂರ್ಣ ನೆಲ ಕಚ್ಚಿರುವ ಜೆಡಿಎಸ್ 4 ಸಾವಿರ, 8 ಸಾವಿರ ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಈ ಬಾರಿ ಬಾರಿ ಪೈಪೋಟಿ ನಿರೀಕ್ಷಿಸುವುದು ಕಷ್ಟ ಎನ್ನಲಾಗುತ್ತಿದೆ.

ಅಭಿವೃದ್ಧಿ ಹೊಂದಿದ್ದರೂ ಇವೆ ಸಮಸ್ಯೆಗಳು: ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸಾಕಷ್ಟು ಆಗಿದ್ದರೂ, ರಸ್ತೆ, ಕುಡಿಯುವ ನೀರಿನ ಪೂರೈಕೆಯಂತಹ ಸಮಸ್ಯೆ ಈಡೇರಿಲ್ಲ. ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಂತರವೂ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಕೃಷ್ಣಪ್ಪ ಇಲ್ಲಿ ಚಿರಪರಿಚಿತರೂ ಹೌದು.

ಬಿಜೆಪಿಯ ರವೀಂದ್ರ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಪಕ್ಕದ ಕ್ಷೇತ್ರ ಗೋವಿಂದರಾಜನಗರದ ಶಾಸಕ, ಸಚಿವ ಸೋಮಣ್ಣ ಅವರ ನೆರವಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿಸಿದ್ದಾರೆ. ಸೋಮಣ್ಣ ಕೂಡ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ತೋರಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಟೋಟಿ ಖಚಿತ ಎನ್ನಲಾಗುತ್ತಿದೆ.

ಮತದಾರರ ವಿವರ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,05,386 ಮತದಾರರಿದ್ದಾರೆ. ಇದರಲ್ಲಿ 1,60,151 ಪುರುಷ ಮತದಾರರು, 1,45,099 ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಪ್ರಾಬಲ್ಯವಿದೆ. ಇವರೇ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇವತ್ತು ಡೌಟ್, ಎರಡ್ಮೂರು ದಿನ ವಿಳಂಬ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.