ಕರ್ನಾಟಕ

karnataka

21 ಸಾವಿರ ಕಳುವಾದ ಮೊಬೈಲ್ ಫೋನ್​ ಪತ್ತೆ ಮಾಡಿದ ತೆಲಂಗಾಣ ಪೊಲೀಸರು - stolen mobile devices recovery

By ETV Bharat Karnataka Team

Published : Jul 28, 2024, 7:01 PM IST

ಈ ವರ್ಷದ ಜುಲೈವರೆಗೆ ತೆಲಂಗಾಣ ಪೊಲೀಸರು 21 ಸಾವಿರ ಕಳುವಾದ ಮೊಬೈಲ್​ ಫೋನ್​ಗಳನ್ನು ಪತ್ತೆ ಮಾಡಿದ್ದಾರೆ.

ಪೊಲೀಸರು ಪತ್ತೆ ಮಾಡಿದ ಕಳುವಾದ ಮೊಬೈಲ್ ಪೋನ್​ಗಳು
ಪೊಲೀಸರು ಪತ್ತೆ ಮಾಡಿದ ಕಳುವಾದ ಮೊಬೈಲ್ ಪೋನ್​ಗಳು (IANS)

ಹೈದರಾಬಾದ್ :ಪ್ರಸಕ್ತ ವರ್ಷದ ಜುಲೈ 25ರವರೆಗೆ ತೆಲಂಗಾಣ ಪೊಲೀಸರು 21,193 ಕದ್ದ ಅಥವಾ ಕಳೆದುಹೋದ ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಜಿತೇಂದರ್ ಭಾನುವಾರ ತಿಳಿಸಿದ್ದಾರೆ. ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ಪೊಲೀಸರು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅವರು ಹೇಳಿದರು.

"ತೆಲಂಗಾಣದ ಎಲ್ಲಾ 780 ಪೊಲೀಸ್ ಠಾಣೆಗಳಲ್ಲಿ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಐಇಆರ್) ಪೋರ್ಟಲ್ ಅನ್ನು ನಿರ್ವಹಿಸಲಾಗುತ್ತಿದೆ. 2024 ರಲ್ಲಿ 206 ದಿನಗಳ ಅವಧಿಯಲ್ಲಿ ಒಟ್ಟು 21,193 ಕಳೆದುಹೋದ ಅಥವಾ ಕದ್ದ ಮೊಬೈಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 1000 ಮೊಬೈಲ್​ ಫೋನ್​ಗಳನ್ನು ಕಳೆದ ಎಂಟು ದಿನಗಳಲ್ಲಿಯೇ ವಶಪಡಿಸಿಕೊಳ್ಳಲಾಗಿದೆ ಮತ್ತು ದೂರುದಾರರಿಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ದಿನಕ್ಕೆ ಸರಾಸರಿ 82 ಇಂಥ ಮೊಬೈಲ್​ಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಪ್ರಮಾಣ ಏಪ್ರಿಲ್ 2024 ರಲ್ಲಿ ದಿನಕ್ಕೆ 73 ಆಗಿತ್ತು" ಎಂದು ಅವರು ಮಾಹಿತಿ ನೀಡಿದರು.

ಮೊಬೈಲ್ ಕಳ್ಳತನ ಮತ್ತು ನಕಲಿ ಮೊಬೈಲ್ ಸಾಧನಗಳ ಹಾವಳಿಯನ್ನು ತಡೆಯಲು ದೂರಸಂಪರ್ಕ ಇಲಾಖೆ (ಡಿಒಟಿ) ಸಿಐಇಆರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಅನ್ನು ಅಧಿಕೃತವಾಗಿ ಮೇ 17, 2023 ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು ಮತ್ತು ಏಪ್ರಿಲ್ 19, 2023 ರಂದು ತೆಲಂಗಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾಯಿತು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಶಿಖಾ ಗೋಯೆಲ್ ಅವರನ್ನು ಸಿಇಐಆರ್ ಪೋರ್ಟಲ್​ನ ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. 189 ದಿನಗಳಲ್ಲಿ 10,000, 291 ದಿನಗಳಲ್ಲಿ 20,000, 395 ದಿನಗಳಲ್ಲಿ 30,000 ಮತ್ತು 459 ದಿನಗಳಲ್ಲಿ 37,000 ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಹೈದರಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅತ್ಯಧಿಕ 3808 ಮೊಬೈಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಚಕೊಂಡ ಕಮಿಷನರೇಟ್ 2,174 ಮತ್ತು ಸೈಬರಾಬಾದ್ ಕಮಿಷನರೇಟ್ 2,030 ಮೊಬೈಲ್ ಸಾಧನಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಕಳೆದುಹೋದ ಅಥವಾ ಕಳುವಾದ ಮೊಬೈಲ್ ಸಾಧನಗಳ ಬಗ್ಗೆ ದೂರು ನೀಡುವ ಮೂಲಕ ನಾಗರಿಕರು ಟಿಜಿ ಪೊಲೀಸ್ ಸಿಟಿಜನ್ ಪೋರ್ಟಲ್ - www.tspolice.gov.in ಅಥವಾ www.ceir.gov.in ನಲ್ಲಿ ಈ ಸೇವೆಯನ್ನು ಬಳಸುವಂತೆ ಪೊಲೀಸರು ವಿನಂತಿಸಿದ್ದಾರೆ. ಪ್ರಾರಂಭದಿಂದಲೂ, ಸಿಇಐಆರ್ ಪೋರ್ಟಲ್ ತೆಲಂಗಾಣ ಪೊಲೀಸರ ಅತ್ಯಂತ ನಾಗರಿಕ ಸ್ನೇಹಿ ಉಪಕ್ರಮಗಳಲ್ಲಿ ಒಂದಾಗಿದೆ. ಮೊಬೈಲ್ ಸಾಧನಗಳನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಇದು ಭರವಸೆಯ ದೀಪವಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಜಿತೇಂದರ್ ಹೇಳಿದರು.

ಇದನ್ನೂ ಓದಿ :'ಯುಪಿಎಸ್​ಸಿ ಆಕಾಂಕ್ಷಿಗಳ ಕೊಲೆ': ದೆಹಲಿ ಸರ್ಕಾರದ ವಿರುದ್ಧ ಆಪ್ ಸಂಸದೆ ಮಲಿವಾಲ್ ಆಕ್ರೋಶ - Swati Maliwal

ABOUT THE AUTHOR

...view details