ಕೊರೊನಾ ವಾರಿಯರ್ಸ್ಗೆ ದಾಸೋಹ ವ್ಯವಸ್ಥೆ: ಕಾಲು ತೊಳೆದು ಬರಮಾಡಿಕೊಂಡ ಸಮಿತಿ
ಕುಣಿಗಲ್ ಪಟ್ಟಣದಲ್ಲಿ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಸಮಿತಿ ವತಿಯಿಂದ ಕೊರೊನಾ ವಾರಿಯರ್ಸ್ಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕ ದಿನಾಚರಣೆ ಅಂಗವಾಗಿ ಸಮಿತಿ ವತಿಯಿಂದ ಕೊರೊನಾ ವಾರಿಯರ್ಸ್ ಕಾಲು ತೊಳೆದು, ಹೂಮಳೆ ಸುರಿಸಲಾಯ್ತು. ಬಳಿಕ ಗುಲಾಬಿ ಹೂಗಳನ್ನು ನೀಡಿ ಆತ್ಮೀಯವಾಗಿ ಸೇವೆಯನ್ನು ಶ್ಲಾಘಿಸಲಾಗಿದೆ.