ಕರ್ನಾಟಕ

karnataka

ETV Bharat / videos

ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ: ಮುಂಬೈನಲ್ಲಿ ಅತೃಪ್ತ ಶಾಸಕರ ಹೇಳಿಕೆ

By

Published : Jul 12, 2019, 3:33 PM IST

ಮುಂಬೈ ರೆಸಾರ್ಟ್​ನಲ್ಲಿರುವ ಅತೃಪ್ತ ಶಾಸಕರು ಇಂದು ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿದ್ರು. ಈ ವೇಳೆ ಸುಪ್ರೀಂಕೋರ್ಟ್​ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ರು. ಶಾಸಕ ಬಿ.ಸಿ. ಪಾಟೀಲ್ ಮಾತನಾಡಿ, ನಾವು ಸುಪ್ರೀಂಕೋರ್ಟ್​ ಆದೇಶವನ್ನು ಗೌರವಿಸುತ್ತೇವೆ. ನಿನ್ನೆ ನಾವು ಸ್ಪೀಕರ್​ ಭೇಟಿಯಾಗಿ ರಾಜೀನಾಮೆ ಸಲ್ಲಿಸಿ ಮುಂಬೈಗೆ ವಾಪಸ್ಸಾಗಿದ್ದೇವೆ. ಸುಪ್ರೀಂಕೋರ್ಟ್​ ಆದೇಶಕ್ಕಾಗಿ ಕಾದಿದ್ದೆವು. ಆದ್ರೆ ಕೋರ್ಟ್​ ವಿಚಾರಣೆಯನ್ನು ಮುಂದೂಡಿದೆ. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ ಅಂದ್ರು. ನಾವು ತೆಗೆದುಕೊಂಡಿರುವ ನಿರ್ಧಾರವೇ ಅಂತಿಮ ಎಂದ್ರು. ನಂತರ ಮಾತನಾಡಿದ ಶಾಸಕ ಬೈರತಿ ಬಸವರಾಜು ನಾವೆಲ್ಲರೂ ಒಟ್ಟಾಗಿದ್ದೇವೆ,ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದ್ರು.

For All Latest Updates

ABOUT THE AUTHOR

...view details