ಕರ್ನಾಟಕ

karnataka

By

Published : Jan 1, 2021, 7:59 PM IST

ETV Bharat / videos

ಕ್ಷಯರೋಗಿಗಳೊಂದಿಗೆ ಗವಿಸಿದ್ದೇಶ್ವರ ಸ್ವಾಮೀಜಿ ಹೊಸ ವರ್ಷಾಚರಣೆ

ಕೊಪ್ಪಳ: ಹೊಸ ವರ್ಷವನ್ನು ನಗರದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕ್ಷಯರೋಗಿಗಳೊಂದಿಗೆ ಆಚರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಎರಡು ವರ್ಷದಿಂದ ಕ್ಷಯರೋಗಿಗಳೊಂದಿಗೆ ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಇಂದು ನಗರದ ಗಾಂಧಿ ಸ್ಮಾರಕ ಸರ್ಕಾರಿ ಶಾಲೆಯ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಕ್ಷಯರೋಗಿಗಳು ಹಾಗೂ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ABOUT THE AUTHOR

...view details